ಈ ದಿನ ಸಂಪಾದಕೀಯ | ಅಪಾಯಕಾರಿ ಸುಳ್ಳು ಆರೋಪ: ತಪ್ಪು ಯತ್ನಾಳರದ್ದೋ, ಕಾಂಗ್ರೆಸ್ಸಿನವರದ್ದೋ?

Date:

ಆರೋಪ ಬಂದಿರುವುದು ಈ ರಾಜ್ಯದ ಮುಖ್ಯಮಂತ್ರಿಯ ಮೇಲೆ. ರಾಜ್ಯದ ಮುಖ್ಯಮಂತ್ರಿ ಭಯೋತ್ಪಾದಕ ಸಂಘಟನೆಗಳ ಜೊತೆಗಿರುವ ವ್ಯಕ್ತಿಯ ಹತ್ತಿರದ ಸಂಪರ್ಕದಲ್ಲಿರುವ ಆರೋಪವೆಂದರೆ ಅಷ್ಟೊಂದು ಸಲೀಸಾಗಿ ತೆಗೆದುಕೊಳ್ಳಬಹುದೇ? ಅಂತಹ ನಾಯಕ ಯಾವ ರೀತಿಯ ಭರವಸೆಯನ್ನು ರಾಜ್ಯದ ಜನರಿಗೆ ಕೊಡಬಹುದು ಎಂಬ ಪ್ರಶ್ನೆ ಸಲೀಸಾಗಿ ಏಳುತ್ತದೆ. ಯತ್ನಾಳರಂಥವರು ಸೃಷ್ಟಿಯಾಗಿರುವುದು ಬಿಜೆಪಿಯಂತಹ ಪಕ್ಷದ ಅಜೆಂಡಾದ ಕಾರಣದಿಂದ ಮಾತ್ರವಲ್ಲ, ಕಾಂಗ್ರೆಸ್ಸಿನಂತಹ ಪಕ್ಷದ ವೈಫಲ್ಯದಿಂದ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ರಾಜ್ಯದ ವಿರೋಧ ಪಕ್ಷದ ನಾಯಕ ಅಥವಾ ಅದರ ರಾಜ್ಯಾಧ್ಯಕ್ಷನಾಗಬಯಸಿದ್ದ ಕೇಂದ್ರ ಸರ್ಕಾರದ ಮಾಜಿ ಸಚಿವರೊಬ್ಬರು ಅತ್ಯಂತ ಕ್ಷುಲ್ಲಕ ರೀತಿಯಲ್ಲಿ ಅಪಾಯಕಾರಿ ಆರೋಪವೊಂದನ್ನು ಮಾಡಿದ್ದಾರೆ.

ಮೇಲ್ನೋಟಕ್ಕೇ ಸುಳ್ಳೆಂದು ಗೊತ್ತಾಗುತ್ತಿದ್ದ ಆ ಆರೋಪದ ಅಸಲೀಯತ್ತನ್ನು ಪರಿಶೀಲಿಸಲು ಈದಿನ.ಕಾಮ್‌ ಮುಂದಾಯಿತು. ಆಗ ಕಂಡುಬಂದಿದ್ದೆಂದರೆ ಯಾವ ವ್ಯಕ್ತಿ ‘ಐಸಿಸ್‌ ಉಗ್ರರ ಜೊತೆಗೆ ಸಂಬಂಧ ಹೊಂದಿದ್ದು’ ಅವರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವೇದಿಕೆ ಹಂಚಿಕೊಂಡಿದ್ದಾರೆಂದು ಆರೋಪ ಮಾಡಲಾಗಿತ್ತೋ, ಅದೇ ವ್ಯಕ್ತಿಯ ಜೊತೆಗೆ ಕೇಂದ್ರ ಮಂತ್ರಿ ನಿತಿನ್‌ ಗಡ್ಕರಿ, ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೂ ಕಾಣಿಸಿಕೊಂಡಿದ್ದರು.

ಇಂತಹ ಆರೋಪಕ್ಕೂ ಕನ್ನಡದ ಮಾಧ್ಯಮಗಳು ಪ್ರಚಾರ ಕೊಡುತ್ತವೆ; ಆರೋಪ ಹಸೀ ಸುಳ್ಳು ಎಂದು ಬಟಾಬಯಲಾದ ನಂತರವೂ, ಆರೋಪ ಮಾಡಿದ ಯತ್ನಾಳ್‌ ‘ಅದರ ಕುರಿತು ತನಿಖೆ ನಡೆಸಿ’ ಎಂದು ಸವಾಲೆಸೆಯುತ್ತಾರೆ. ಅದನ್ನೂ ಕನ್ನಡದ ಮಾಧ್ಯಮಗಳು ಪ್ರಸಾರ ಮಾಡುತ್ತವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಯತ್ನಾಳ್‌ ಅವರು ಕ್ರಿಮಿನಲ್‌ ಕೃತ್ಯವೆಸಗಿದ್ದಾರೆ; ಅದು ದೇಶದ ಭಾವೈಕ್ಯತೆಗೆ ಧಕ್ಕೆ ತರುವ ಕೆಲಸ. ಅವರು ಸಂವಿಧಾನದ ಮೇಲೆ ಆಣೆಯಿಟ್ಟು ಪ್ರಮಾಣವಚನ ತೆಗೆದುಕೊಂಡಿದ್ದಾರೆ. ವಾಸ್ತವದಲ್ಲಿ ಒಂದು ಕ್ಷಣವೂ ವಿಧಾನಸಭಾ ಸದಸ್ಯರಾಗಿ ಮುಂದುವರೆಯುವ ಅರ್ಹತೆ ಅವರಿಗಿಲ್ಲ. ಅದು ಕಾನೂನು ಮತ್ತು ಸಂವಿಧಾನದ ತತ್ವ. ನೈತಿಕತೆ ಹಾಗೂ ಮಾನವೀಯತೆ ದೃಷ್ಟಿಯಿಂದಲೂ ಇದು ಅತ್ಯಂತ ಖಂಡನಾರ್ಹ ಕೆಲಸ. ಕಾನೂನು, ಸಂವಿಧಾನಗಳು ಜಾರಿಯಲ್ಲಿದ್ದರೆ ಇಷ್ಟು ಹೊತ್ತಿಗೆ ಅವರು ಜೈಲಿನಲ್ಲಿರಬೇಕಿತ್ತು. ನೈತಿಕತೆ, ಮಾನವೀಯತೆಗಳು ಜಾರಿಯಲ್ಲಿದ್ದರೆ ಇಷ್ಟು ಹೊತ್ತಿಗೆ ಬಿಜೆಪಿಯು ಅವರನ್ನು ಉಚ್ಛಾಟನೆ ಮಾಡಿ, ರಾಜ್ಯದ ಜನತೆಯ ಕ್ಷಮೆ ಕೇಳಬೇಕಿತ್ತು. ಆ ರೀತಿಯಲ್ಲಿ ಒಂದು ಸುಳ್ಳನ್ನು ಬಹಿರಂಗವಾಗಿ ಮತ್ತೆ ಮತ್ತೆ ಹೇಳಿದ್ದಾರೆ.

ಆ ಸುಳ್ಳು ದುರುದ್ದೇಶಪೂರ್ವಕವಾದುದು; ಏಕೆಂದರೆ ಆಕಸ್ಮಿಕವಾಗಿ ಯಾರೋ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿರುವುದೂ ಅಲ್ಲ. ಸದರಿ ಮುಸ್ಲಿಂ ಧಾರ್ಮಿಕ ಗುರು ಸ್ವತಃ ಯತ್ನಾಳ್‌ ಅವರಿಗೆ ಪರಿಚಯವಿರುವ, ಅವರ ನೆರೆಹೊರೆಯವರು. ಪರಸ್ಪರ ಜೊತೆಯಾಗಿ ಓಡಾಡಿದ್ದಾರೆ; ರಾಜಕೀಯವಾಗಿ, ಸಾಮಾಜಿಕವಾಗಿ ಕಾದಾಡಿಯೂ ಇದ್ದಾರೆ. ಅಂದ ಮೇಲೆ ಇದು ಉದ್ದೇಶಪೂರ್ವಕವಾಗಿ ಸಮುದಾಯಗಳ ಮಧ್ಯೆ ದ್ವೇಷ ತಂದಿಡುವ, ಒಂದಿಡೀ ಸಮುದಾಯವನ್ನು ಖಳಗೊಳಿಸುವ ಮತ್ತು ರಾಜ್ಯದ ಮುಖ್ಯಮಂತ್ರಿಯ ಮೇಲೆ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಜೊತೆಗೆ ತಳುಕು ಹಾಕುವ ಆರೋಪ.

ಆದರೆ, ಬಿಜೆಪಿಯಿಂದ ಅಂತಹ ಯಾವ ನೈತಿಕತೆಗಳನ್ನು ನಿರೀಕ್ಷಿಸುವ ಹಾಗೆಯೇ ಇಲ್ಲ. ಅಲ್ಲಿ ಬಹುಶಃ ಅಮಾನವೀಯತೆ ಮತ್ತು ಅನೈತಿಕತೆಗಳೇ ಅರ್ಹತೆ. ಹಾಗಿರುವುದರಿಂದಲೇ ಈ ಯತ್ನಾಳ್‌ ಏನು ಮಾತಾಡಿದರೂ ಅವರ ಮೇಲೆ ಯಾವ ಕ್ರಮವೂ ಇಲ್ಲ. ಬದಲಿಗೆ ಮತ್ತೆ ಟಿಕೆಟ್‌ ನೀಡಿ ಪುರಸ್ಕಾರ ಮಾಡಲಾಗಿದೆ.

ಇಲ್ಲಿ ಪ್ರಶ್ನೆ ಏಳುವುದು ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ಸಿನ ಕುರಿತು. ಅವರಿಗೆ ತಮ್ಮ ಮೇಲೆ ಆಗುತ್ತಿರುವ ರಾಜಕೀಯ ದಾಳಿಯ ಕುರಿತು ಆಸಕ್ತಿ ಇರದಿದ್ದರೆ ಅದು ಅವರ ಪಾಡು. ಈಗಾಗಲೇ ತಮ್ಮ ಪಕ್ಷದ ದಿವಂಗತ ನಾಯಕ ಪಂಡಿತ್‌ ನೆಹರೂ ಅವರ ಮೇಲೆ ಆದ ನಿರಂತರ ಅಪಪ್ರಚಾರವು ಅದಕ್ಕೆ ಮಾಡಿರುವ ಅಪಾಯದ ಬಗ್ಗೆಯಾಗಲೀ, ಸ್ವತಃ ಅದರ ಈಗಿನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಮೇಲೆ ನಡೆದ ವ್ಯವಸ್ಥಿತ ಅಪಪ್ರಚಾರದ ಬಗ್ಗೆಯಾಗಲೀ ಅವರು ಅಷ್ಟು ತಲೆ ಕೆಡಿಸಿಕೊಂಡಂತಿಲ್ಲ. ತಮ್ಮ ಪಕ್ಷವು ಹೀಗೆಯೇ ನಶಿಸಿ ಹೋಗಬೇಕೆಂದು ಅವರು ತೀರ್ಮಾನಿಸಿಕೊಂಡಿದ್ದರೆ ಅವರಿಗೆ ಆ ಸ್ವಾತಂತ್ರ್ಯವಿದೆ.

ಆದರೆ, ಯತ್ನಾಳರ ಈ ಹೇಳಿಕೆಯು ಎರಡು ಅಪಾಯಗಳನ್ನು ತಂದೊಡ್ಡಿದೆ. ರಾಜ್ಯದ ದೊಡ್ಡ ಧಾರ್ಮಿಕ ಮುಖಂಡರಲ್ಲೊಬ್ಬರೂ, ಮುಸ್ಲಿಂ ಸಂಘಟನೆಯೊಂದರ ರಾಜ್ಯಾಧ್ಯಕ್ಷರೂ ಆದ ವ್ಯಕ್ತಿಯ ಕುರಿತು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯ ಜೊತೆಗೆ ಸಂಪರ್ಕವಿದೆ ಎಂಬ ಸುಳ್ಳು ಆರೋಪ ಜನರ ಮನಸ್ಸಿನಲ್ಲಿ ಯಾವ ಭಾವನೆಯನ್ನು ಮೂಡಿಸಬಹುದು. ಬಿಜೆಪಿ ಹಾಗೂ ಅದರ ಕೂಟದ ವಿವಿಧ ಸಂಘಟನೆಗಳ ಪ್ರಬಲ ಮಾಧ್ಯಮ ಯಂತ್ರಾಂಗವು ನಿಧಾನಕ್ಕೆ ಇಂತಹ ಸುಳ್ಳನ್ನು ಸಾಮಾನ್ಯ ಜ್ಞಾನವಾಗಿ ಪರಿವರ್ತಿಸುವುದರಿಂದ ಅದರಿಂದ ಉಂಟಾಗುವ ಪರಿಣಾಮವೇನು? ಇದನ್ನು ತಡೆಯುವುದು ಈ ರಾಜ್ಯದಲ್ಲಿ ಅಧಿಕಾರ ಹೊಂದಿರುವ ಆಡಳಿತ ಪಕ್ಷವಾಗಿ ಅದರ ಜವಾಬ್ದಾರಿ. ಅಷ್ಟೇ ಅಲ್ಲದೇ ತಮ್ಮ ಪ್ರಣಾಳಿಕೆಯಲ್ಲಿ ಈ ರಾಜ್ಯವನ್ನು ʼಸರ್ವಜನಾಂಗದ ಶಾಂತಿಯ ತೋಟʼವಾಗಿಸುವ ಭರವಸೆಯನ್ನೂ ಅವರು ನೀಡಿದ್ದರು! ಅದನ್ನು ಈಡೇರಿಸುವ ಕರ್ತವ್ಯ ಅವರದ್ದಲ್ಲವೇ?

ಎರಡನೆಯ ಅಪಾಯ: ಆರೋಪ ಬಂದಿರುವುದು ಈ ರಾಜ್ಯದ ಮುಖ್ಯಮಂತ್ರಿಯ ಮೇಲೆ. ಅದಕ್ಕೆ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ಒಂದು ಟ್ವೀಟ್‌ ಮತ್ತು ಒಂದು ಫೇಸ್‌ ಬುಕ್‌ ಪೋಸ್ಟ್‌ ಅಷ್ಟೇನಾ? ರಾಜ್ಯದ ಮುಖ್ಯಮಂತ್ರಿ ಭಯೋತ್ಪಾದಕ ಸಂಘಟನೆಗಳ ಜೊತೆಗಿರುವ ವ್ಯಕ್ತಿಯ ಹತ್ತಿರದ ಸಂಪರ್ಕದಲ್ಲಿರುವ ಆರೋಪವೆಂದರೆ ಅಷ್ಟೊಂದು ಸಲೀಸಾಗಿ ತೆಗೆದುಕೊಳ್ಳಬಹುದೇ? ಅಂತಹ ನಾಯಕ ಯಾವ ರೀತಿಯ ಭರವಸೆಯನ್ನು ರಾಜ್ಯದ ಜನರಿಗೆ ಕೊಡಬಹುದು ಎಂಬ ಪ್ರಶ್ನೆ ಸಲೀಸಾಗಿ ಏಳುತ್ತದೆ.

ಯತ್ನಾಳರಂಥವರು ಸೃಷ್ಟಿಯಾಗಿರುವುದು ಬಿಜೆಪಿಯಂತಹ ಪಕ್ಷದ ಅಜೆಂಡಾದ ಕಾರಣದಿಂದ ಮಾತ್ರವಲ್ಲ, ಕಾಂಗ್ರೆಸ್ಸಿನಂತಹ ಪಕ್ಷದ ವೈಫಲ್ಯದಿಂದ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....