ಈ ದಿನ ಸಂಪಾದಕೀಯ | ಯುಪಿಎಸ್‌ಸಿ ಪರೀಕ್ಷೆ; ಹೆಣ್ಣುಮಕ್ಕಳೇ ಟಾಪರ್ಸ್‌, ಮಹತ್ವದ ಹುದ್ದೆಗಳು ಮಾತ್ರ ಪುರುಷರಿಗೇ ಮೀಸಲು!

Date:

ಎಷ್ಟೇ ಕ್ಲಿಷ್ಟಕರ ಪರೀಕ್ಷೆಗಳನ್ನು ಪಾಸು ಮಾಡಿರಲಿ, ಯಾವುದೇ ಸಮುದಾಯದಿಂದ ಬಂದಿರಲಿ, ಸರ್ಕಾರದ ನೀತಿ ನಿರೂಪಣೆಯ ಮಹತ್ವದ ಜವಾಬ್ದಾರಿ ಇರುವ ಹುದ್ದೆಗಳಿಂದ ಮಹಿಳೆಯರನ್ನು ದೂರವೇ ಇಡಲಾಗುತ್ತಿದೆ

ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2022ನೇ ಸಾಲಿನ ನಾಗರಿಕ ಸೇವೆ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ಮೊದಲ ನಾಲ್ಕು ರ‍್ಯಾಂಕ್‌ಗಳು ಹೆಣ್ಣುಮಕ್ಕಳ ಪಾಲಾಗಿವೆ. ಇಷಿತಾ ಕಿಶೋರ್‌, ಗರಿಮಾ ಲೋಹಿಯಾ, ಉಮಾ ಹರತಿ, ಸ್ಮೃತಿ ಮಿಶ್ರಾ ಆ ನಾಲ್ವರು ಸಾಧಕಿಯರು. 2018ರಲ್ಲಿ ಐಎಎಸ್‌/ ಐಪಿಎಸ್‌ ನಂತಹ ಉನ್ನತ ಹುದ್ದೆಗಳಿಗೆ ಆಯ್ಕೆಯಾಗುವ ಹೆಣ್ಣುಮಕ್ಕಳ ಪ್ರಮಾಣ 24% ಇತ್ತು. ಈಗ ಅದು 34% ಕ್ಕೆ ಏರಿಕೆಯಾಗಿದೆ. ಲಿಂಗ ಸಮಾನತೆಯ ದೃಷ್ಟಿಯಿಂದ ಇದು ಆಶಾದಾಯಕ ಬೆಳವಣಿಗೆ.

ನಾಗರಿಕ ಸೇವಾ ವಲಯದಲ್ಲಿ ಹೆಚ್ಚು ಹೆಚ್ಚು ಹೆಣ್ಣುಮಕ್ಕಳು ಅಧಿಕಾರಿಗಳಾಗಿ ಕೆಲಸ ಮಾಡುವುದು ಸ್ವಸ್ಥ ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದೇ. ಹೆಣ್ಣುಮಕ್ಕಳು ಅಧಿಕಾರಿಗಳಾಗಿರುವ ಕಚೇರಿಗಳಲ್ಲಿ ಶಿಸ್ತು, ಸಮಯ ಪಾಲನೆಗೆ ಆದ್ಯತೆ ಇರುತ್ತದೆ. ಜನರ ಕಷ್ಟಗಳನ್ನು ಆಲಿಸುವ ಮಾತೃಹೃದಯದ ಜೊತೆಗೆ ಭ್ರಷ್ಟಾಚಾರರಹಿತ ಆಡಳಿತ ನೀಡುವ ದೃಷ್ಟಿಯಿಂದ ಮಹಿಳೆಯರ ಸಂಖ್ಯೆ ಸರ್ಕಾರಿ ಕಚೇರಿಗಳಲ್ಲಿ ಹೆಚ್ಚಬೇಕು. ಮಹಿಳಾ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾದ ಉದಾಹರಣೆಗಳು ಇಲ್ಲವೇ ಇಲ್ಲ ಎಂದೇನಲ್ಲ. ಆದರೆ ಆ ಪ್ರಮಾಣ ಕಡಿಮೆ ಇದೆ ಎಂಬುದಂತು ನಿಜ.

ಎಷ್ಟೇ ಕ್ಲಿಷ್ಟಕರ ಪರೀಕ್ಷೆಗಳನ್ನು ಪಾಸು ಮಾಡಿರಲಿ, ಯಾವುದೇ ಸಮುದಾಯದಿಂದ ಬಂದಿರಲಿ, ಸರ್ಕಾರದ ನೀತಿ ನಿರೂಪಣೆಯ ಮಹತ್ವದ ಜವಾಬ್ದಾರಿ ಇರುವ ಹುದ್ದೆಗಳಿಂದ ಮಹಿಳೆಯರನ್ನು ದೂರವೇ ಇಡಲಾಗುತ್ತಿದೆ. ಕೆಲವೊಮ್ಮೆ ಅರ್ಹತೆ, ಹಿರಿತನ ಇದ್ದರೂ ಅಂತಹ ಹುದ್ದೆಗಳನ್ನು ನೀಡಲಾಗುತ್ತಿಲ್ಲ ಎಂಬ ದೂರುಗಳಿವೆ. ಅದಕ್ಕಾಗಿ ಕೋರ್ಟ್‌ ಮೆಟ್ಟಿಲೇರಿ ದಕ್ಕಿಸಿಕೊಳ್ಳಬೇಕಾದ ಹೀನಾಯ ಪರಿಸ್ಥಿತಿ ಮಹಿಳಾ ಅಧಿಕಾರಿಗಳದ್ದು. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಲಿಂಗ ತಾರತಮ್ಯ ಎಲ್ಲ ಕ್ಷೇತ್ರಗಳಲ್ಲಿಯೂ ಢಾಳಾಗಿ ಕಾಣಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

70 ವರ್ಷಗಳ ಇತಿಹಾಸದಲ್ಲಿ ಭಾರತ ಒಬ್ಬರೇ ಒಬ್ಬರು ಮಹಿಳಾ ಸಂಸದೀಯ ಕಾರ್ಯದರ್ಶಿಯನ್ನು ಹೊಂದಿರಲಿಲ್ಲ. ಮಹಿಳೆಯೊಬ್ಬರು ಸುದೀರ್ಘ ಕಾಲ ಪ್ರಧಾನಿಯಾಗಿದ್ದರೂ ಮಹಿಳಾ ಅಧಿಕಾರಿಗಳು ನಿರ್ಣಾಯಕ ಸ್ಥಾನಕ್ಕೇರಲು 21ನೇ ಶತಮಾನಕ್ಕೆ ಕಾಯಬೇಕಾಯಿತು. 2001ರಲ್ಲಿ ಚೋಕಿಲಾ ಅಯ್ಯರ್ ಎಂಬ ಮಹಿಳಾ ಅಧಿಕಾರಿ ಮೊದಲ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕವಾಗುವ ಮೂಲಕ. ನಂತರ 2011ರಲ್ಲಿ ಹಣಕಾಸು ಕಾರ್ಯದರ್ಶಿಯಾಗಿ ಸುಷ್ಮಾ ನಾಥ್‌ ನೇಮಕವಾಗಿದ್ದರು.

2011ರ ಯುಎನ್‌ಡಿಪಿ (United Nations Development Programme) ಜಾಗತಿಕ ವರದಿಯ ಪ್ರಕಾರ ಭಾರತದ ಸಾರ್ವಜನಿಕ ಆಡಳಿತದಲ್ಲಿ ಮಹಿಳೆಯರ ಅಧಿಕಾರ ಹಂಚಿಕೆಯ ಪ್ರಮಾಣ ಕೇವಲ 12% ಇದೆ. ಸಿಂಗಾಪುರದಂತಹ ಪುಟ್ಟ ದೇಶದಲ್ಲಿ ಈ ಪ್ರಮಾಣ 29% ಇದೆ!

ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದರೂ ಸರ್ಕಾರದ ವಿವಿಧ ಇಲಾಖೆಗಳ ನಿರ್ಣಾಯಕ ಸ್ಥಾನಗಳಿಗೆ ಹೋಗುವುದಕ್ಕೆ ಈ ರ‍್ಯಾಂಕ್‌ಗಳು ಉಪಯೋಗಕ್ಕೆ ಬರುವುದಿಲ್ಲ. ಅಲ್ಲಿ ಪುರುಷಾಧಿಪತ್ಯವೇ ಮೇಲುಗೈ ಸಾಧಿಸುತ್ತದೆ. ಕೆಲವರಿಗೆ ಜಾತಿ ಬಲ, ರಾಜಕೀಯ ಕುಟುಂಬದ ಬೆಂಬಲ ಮುಂತಾದ ಕೆಲವು ʼವಿಶೇಷ ಅರ್ಹತೆʼಗಳು ಅನುಕೂಲ ಮಾಡಬಹುದು. ಆದರೆ ಅರ್ಹತೆ ಅಥವಾ ಸಾಮರ್ಥ್ಯವನ್ನು ಪರಿಗಣಿಸಿ ಉನ್ನತ ಜವಾಬ್ದಾರಿ ನೀಡುವ ಮನಸ್ಥಿತಿ ಪುರುಷಪ್ರಧಾನ ವ್ಯವಸ್ಥೆಯೊಳಗೆ ಇನ್ನು ಚಿಗುರಿಲ್ಲ ಎಂಬುದು ವಿಷಾದದ ಸಂಗತಿ.

ಉನ್ನತ ಹುದ್ದೆಗಳ ಪರೀಕ್ಷೆಗಳಲ್ಲಿ ಹೆಚ್ಚು ಹೆಚ್ಚು ಹೆಣ್ಣುಮಕ್ಕಳು ಉತ್ತಮ ರ‍್ಯಾಂಕ್‌ನೊಂದಿಗೆ ಪಾಸಾಗುತ್ತಿದ್ದಾರೆ. ಐಎಎಸ್‌/ ಐಪಿಎಸ್‌ ಅಧಿಕಾರಿಗಳಾಗಿ ನೇಮಕವಾಗುತ್ತಿದ್ದಾರೆ. ಆದರೆ, ಈಗಲೂ ನಿರ್ಣಾಯಕ ಸ್ಥಾನಗಳಲ್ಲಿ ಮಹಿಳೆಯರನ್ನು ಕಡೆಗಣಿಸಲಾಗುತ್ತಿದೆ. ಯಾಂತ್ರಿಕವಾಗಿ ಕಾರ್ಯ ನಿರ್ವಹಿಸುವ ಕೆಲವು ಇಲಾಖೆಗಳ ಹುದ್ದೆಗಳು ಮಹಿಳೆಯರಿಗೆ ಮೀಸಲು ಎಂಬಂತಾಗಿದೆ. ಬೇಕಾಬಿಟ್ಟಿ ಹಣ ಲೂಟಿ ಹೊಡೆಯುವ ಭ್ರಷ್ಟ ರಾಜಕಾರಣಿಗಳಿಗೆ ಅಂತಹ ಆಯಕಟ್ಟಿನ ಜಾಗಗಳಲ್ಲಿ ಭ್ರಷ್ಟ ಪುರುಷ ಅಧಿಕಾರಿಗಳೇ ಬೇಕು. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ಮಹಿಳಾ ಅಧಿಕಾರಿಗಳ ಧ್ವನಿಯನ್ನು ಪ್ರಭುತ್ವ ಬಹಳ ನಿರ್ದಾಕ್ಷಿಣ್ಯವಾಗಿ ಅಡಗಿಸಿಬಿಡುತ್ತದೆ.

ರಾಜಕಾರಣದಲ್ಲಿ ಮಹಿಳಾ ಪಾತಿನಿಧ್ಯ ಹೆಚ್ಚಬೇಕು. ಮಹಿಳೆಯರೇ ನಿರ್ಣಾಯಕರಾಗಬೇಕು. ಅದು ಕೇವಲ ಮತದಾನದ ವಿಷಯದಲ್ಲಿ ಮಾತ್ರವಲ್ಲ. ಅಧಿಕಾರ ಹಿಡಿಯುವ ವಿಚಾರದಲ್ಲಿಯೂ ಆಗಬೇಕು. ಎಲ್ಲಿಯವರೆಗೆ ರಾಜಕೀಯ ಅಧಿಕಾರ, ಪ್ರಭುತ್ವ ಪುರುಷರ ಕೈಯಲ್ಲಿ ಭದ್ರವಾಗಿರುತ್ತದೆಯೋ ಅಲ್ಲಿಯವರೆಗೆ ಈ ತಾರತಮ್ಯ ಇದ್ದೇ ಇರುತ್ತದೆ. ಹೊಸದಾಗಿ ನೇಮಕವಾಗುವ ಐಎಎಸ್‌, ಐಪಿಎಸ್‌ ಅಧಿಕಾರಿಗಳು ವ್ಯವಸ್ಥೆಯ ಈ ತಾರತಮ್ಯದ ಬಗ್ಗೆ ಧ್ವನಿ ಎತ್ತುವಂತಾಗಬೇಕು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....