‘ಈ ದಿನ’ ಸಂಪಾದಕೀಯ | ಪೌರಕಾರ್ಮಿಕರು ಪರಮಶೋಷಿತರು; ಸರ್ಕಾರ, ನಾವು-ನೀವು, ಎಲ್ಲರೂ ಕಾರಣ

Date:

ಬಡತನ, ಜಾತಿ ವ್ಯವಸ್ಥೆಯ ನಿರಂತರ ಕಿರುಕುಳಗಳಿಂದ ಪಾರಾಗಿ ಬದುಕು ಕಟ್ಟಲು ಹವಣಿಸುವ ಪೌರಕಾರ್ಮಿಕರನ್ನು, ಸರ್ಕಾರಗಳು, ಸ್ಥಳೀಯಾಡಳಿತ ಸಂಸ್ಥೆಗಳು, ಗುತ್ತಿಗೆದಾರರು, ಜನಸಾಮಾನ್ಯರು ಯಾವ ಪರಿ ಹಿಂಸಿಸುತ್ತಿದ್ದಾರೆಂದರೆ, ದೇಶದ ಜನರ ಸರಾಸರಿ ಜೀವಿತಾವಧಿ 70 ವರ್ಷವಾದರೆ, ಇದೇ ದೇಶದ ಪೌರಕಾರ್ಮಿಕರ ಸರಾಸರಿ ಜೀವಿತಾವಧಿ 40 ವರ್ಷ

‘ಮ್ಯಾನ್‌ಹೋಲ್‌ಗಿಳಿದು ಇಬ್ಬರ ಪೌರಕಾರ್ಮಿಕರ ಸಾವು,’ ‘ಮೂರು ತಿಂಗಳಿಂದ ಸಿಗದ ವೇತನ; ಪೌರಕಾರ್ಮಿಕರ ಪ್ರತಿಭಟನೆ,’ ‘ಪೌರಕಾರ್ಮಿಕರ ಸೇವೆ ಕಾಯಂಗೊಳಿಸಲು ಆಗ್ರಹಿಸಿ ಧರಣಿ,’ ‘ಬಾಕಿ ವೇತನಕ್ಕೆ ಆಗ್ರಹಿಸಿ ಮೈ ಮೇಲೆ ಮಲ ಸುರಿದುಕೊಂಡ ಪೌರಕಾರ್ಮಿಕರು,’ ‘ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರಕಾರ್ಮಿರಿಂದ ಅನಿರ್ದಿಷ್ಟಾವಧಿ ಮುಷ್ಕರ…’ ಇಂತಹ ಸುದ್ದಿಗಳು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳದ ದಿನವೇ ಇಲ್ಲ. ಆದರೂ, ಬೇಜವಾಬ್ದಾರಿಯ, ನಾಚಿಕೆಗೆಟ್ಟ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು, ಪ್ರತಿ ವರ್ಷದ ಸೆಪ್ಟೆಂಬರ್ 23ರಂದು ‘ಪೌರಕಾರ್ಮಿಕರ ದಿನಾಚರಣೆ’ಯ ನೀಚ ನಾಟಕ ಆಡುತ್ತ ಬಂದಿವೆ. ಈ ದಿನ ಮಾತ್ರ, ಪೌರಕಾರ್ಮಿಕರನ್ನು ಎಲ್ಲರೂ ಗೌರವಿಸಬೇಕೆಂದೂ, ಅವರನ್ನೂ ಮನುಷ್ಯರಂತೆ ನೋಡಬೇಕೆಂದೂ, ಅದೇ ಪೌರಕಾರ್ಮಿಕರನ್ನಷ್ಟೇ ಎದುರು ಕೂರಿಸಿಕೊಂಡು ದೊಡ್ಡ-ದೊಡ್ಡವರು ಭಾಷಣ ಮಾಡುತ್ತಾರೆ. ಆದರೆ ಪೌರಕಾರ್ಮಿಕರ ದುಸ್ಥಿತಿ ಮಗ್ಗುಲು ಬದಲಿಸುವುದೇ ಇಲ್ಲ.

ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೊ ವರದಿಯ (2020) ಪ್ರಕಾರ, ದೇಶದಲ್ಲಿ ನಿತ್ಯ ಸರಾಸರಿ ಇಬ್ಬರು ಪೌರಕಾರ್ಮಿಕರನ್ನು ಮ್ಯಾನ್‌ಹೋಲ್ ಅಥವಾ ಮಲದ ಗುಂಡಿಗೆ ಇಳಿಸಿ ಅವರ ಪ್ರಾಣಬಲಿ ಪಡೆಯಲಾಗುತ್ತಿದೆ. 2015ರಿಂದ 2020ರವರೆಗಿನ ಇಂತಹ ಸಾವುಗಳ ಸಂಖ್ಯೆ 5,393. ಹೀಗೆ ಮ್ಯಾನ್‌ಹೋಲ್ ಅಥವಾ ಮಲದ ಗುಂಡಿಗಿಳಿದು, ಸಾವಿನಿಂದ ಬಚಾವಾಗಿ ಬಂದವರು ಕೇವಲ 175 ಮಂದಿ; ಆದರೆ, ಗಾಯಗೊಂಡು ಮೊದಲಿನಂತೆ ಕೆಲಸ ಮಾಡಲಾಗದ ಕಾರಣಕ್ಕೆ ಬಹುತೇಕರನ್ನು ಕೆಲಸದಿಂದಲೇ ತೆಗೆದುಹಾಕಿ ಅಮಾನವೀಯತೆ ಮೆರೆಯಲಾಗಿದೆ. ಇತ್ತೀಚಿನ ಮ್ಯಾನ್‌ಹೋಲ್ ದುರಂತಗಳನ್ನು ಗಮನಿಸಿದರೆ, ಮೃತಪಟ್ಟ ಮತ್ತು ಗಾಯಗೊಂಡ ಪೌರಕಾರ್ಮಿಕರ ಸಂಖ್ಯೆ ಏರುತ್ತಲೇ ಸಾಗಿದೆ. ಆದರೂ, ಆಗಾಗ ಕೆಲವು ನ್ಯಾಯಾಲಯಗಳು ಸ್ವಯಂಪ್ರೇರಿತವಾಗಿ ಕನಿಕರ ವ್ಯಕ್ತಪಡಿಸಿರುವುದನ್ನು ಬಿಟ್ಟರೆ ಪೌರಕಾರ್ಮಿಕರ ಬದುಕುಗಳು ಮಲದ ಗುಂಡಿಗಳಿಂದ ಮೇಲಕ್ಕೆ ಎದ್ದಿಲ್ಲ. ಈ ಸಾವುಗಳನ್ನು ಪೊಲೀಸರು ‘ಆಕಸ್ಮಿಕ ಸಾವು’ (ಆಕ್ಸಿಡೆಂಟಲ್ ಡೆತ್) ಎಂದೇ ಪರಿಗಣಿಸುವುದರಿಂದ, ಗುತ್ತಿಗೆದಾರರು ಅಥವಾ ಸಂಬಂಧಿಸಿದ ಅಧಿಕಾರಿಗಳನ್ನು ಬಂಧಿಸುವುದೆಲ್ಲ ಜನರ ಕಣ್ಣಿಗೆ ಮಣ್ಣೆರಚುವ ನಾಟಕವಷ್ಟೇ.

ಇನ್ನು, ಪರೋಕ್ಷವಾಗಿ ಪೌರಕಾರ್ಮಿಕರ ಪ್ರಾಣ ಹಿಂಡುತ್ತಿರುವ ಸಂಗತಿಗಳು ಸಾಕಷ್ಟಿವೆ. ಇವುಗಳಲ್ಲಿ ವೇತನ ಸಮಸ್ಯೆಯು ನಿತ್ಯ ನಿರಂತರ. ಗುತ್ತಿಗೆ ನೌಕರರು, ಹೊರ ಗುತ್ತಿಗೆ ನೌಕರರು, ಕಾಯಂ ನೌಕರರು… ಹೀಗೆ ಹಂಚಿಹೋಗಿರುವ ಕಾರಣ ಪೌರಕಾರ್ಮಿಕರು ಈ ವಿಷಯದಲ್ಲಿ ಮೊದಲಿನಂತೆ ಒಗ್ಗಟ್ಟು ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ, ಮೂರು ತಿಂಗಳುಗಟ್ಟಲೆ ವೇತನ ಬಾಕಿ ಉಳಿದ ಪ್ರಕರಣಗಳಿವೆ. ಇತ್ತೀಚೆಗೆ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಎದುರೇ, ಬಾಕಿ ವೇತನ ಪಾವತಿಗೆ ಆಗ್ರಹಿಸಿ ಇಬ್ಬರು ಕಾರ್ಮಿಕರು ಮೈ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಿದ ಘಟನೆ ಕನಕಪುರದಲ್ಲಿ ನಡೆದಿತ್ತು. ಜೀವನೋಪಾಯಕ್ಕಾಗಿ ಇದೊಂದೇ ಕೆಲಸ ಮಾಡುವ ಪೌರಕಾರ್ಮಿಕರು, ತಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಏನೆಲ್ಲ ಅಸಹಾಯಕ ಮತ್ತು ಅವಮಾನಕರ ದಾರಿಗಳನ್ನು ಹಿಡಿಯಬೇಕಾಗುತ್ತದೆ ಎಂಬುದಕ್ಕೆ ಇದೊಂದು ಪುಟ್ಟ ನಿದರ್ಶನವಷ್ಟೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪೌರಕಾರ್ಮಿಕ ಮಹಿಳೆಯರ ಸ್ಥಿತಿಯಂತೂ ಬಾಂಡಲೆಯಿಂದ ಬೆಂಕಿಗೆ ಹಾಕಿದಂತಿದೆ. ಮೂತ್ರ ವಿಸರ್ಜನೆಗೆ ಶೌಚಾಲಯ ವ್ಯವಸ್ಥೆಯಿಲ್ಲ ಎಂಬ ಕಾರಣಕ್ಕೆ ಬಹುತೇಕ ಮಹಿಳಾ ಪೌರಕಾರ್ಮಿಕರು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನೀರನ್ನೇ ಕುಡಿಯದೆ ಕೆಲಸ ಮಾಡುವುದುಂಟು. ಇನ್ನು, ಅನಿವಾರ್ಯ ಕಾರಣಗಳಿಗೆ ರಜೆ ಹಾಕಿದರೆ, ಸಂಬಳಕ್ಕೆ ಕತ್ತರಿ ಹಾಕುವ ದುಷ್ಟ ವ್ಯವಸ್ಥೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಇತ್ತೀಚೆಗೆ, ಪೌರಕಾರ್ಮಿಕರು ಪುಟ್ಟ ವಿಶ್ರಾಂತಿ ಪಡೆಯಲು, ಬಟ್ಟೆ ಬದಲಿಸಿಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ಯೋಜನೆ ವಿಶೇಷವಾಗಿ ಮಹಿಳಾ ಕಾರ್ಮಿಕರಿಗೆ ತುಸುವಾದರೂ ನೆಮ್ಮದಿ ನೀಡಲಿದೆ. ಹಾಗಾಗಿ, ಇಂತಹ ಯೋಜನೆಗಳು ಬಿಬಿಎಂಪಿ ಸೇರಿದಂತೆ ರಾಜ್ಯದ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲೂ ತಪ್ಪದೆ ಜಾರಿಯಾಗಬೇಕಿದೆ. ನಮ್ಮ ನಿಮ್ಮ ಹೊಲಸನ್ನು ಗುಡಿಸಿ ಸಾಗಿಸಿ ಸ್ವಚ್ಛಗೊಳಿಸುವ ಕಾಯಕಜೀವಿಗಳ ಬದುಕುಗಳಿಗೆ ಘನತೆ ನೀಡದೆ ಹೋದರೆ ಚಂದ್ರಯಾನ, ಸೂರ್ಯಯಾನ, ಮಂಗಳಯಾನಗಳನ್ನು ‘ಸಾಧನೆ’ಯೆಂದು ಯಾವ ಬಾಯಿಯಲ್ಲಿ ಕರೆಯುತ್ತೀರಿ? ಆತ್ಮಶೋಧನೆ ಮಾಡಿಕೊಳ್ಳಿ.

ಬಡತನ, ಜಾತಿ ವ್ಯವಸ್ಥೆಯ ನಿರಂತರ ಕಿರುಕುಳಗಳಿಂದ ಪಾರಾಗಿ ಬದುಕು ಕಟ್ಟಲು ಹವಣಿಸುವ ಪೌರಕಾರ್ಮಿಕರನ್ನು, ಸರ್ಕಾರಗಳು, ಸ್ಥಳೀಯಾಡಳಿತ ಸಂಸ್ಥೆಗಳು, ಗುತ್ತಿಗೆದಾರರು, ಜನಸಾಮಾನ್ಯರು ಯಾವ ಪರಿ ಹಿಂಸಿಸುತ್ತಿದ್ದಾರೆಂದರೆ, ದೇಶದ ಸಾಮಾನ್ಯ ಜನರ ಜೀವಿತಾವಧಿ 70 ವರ್ಷವಾದರೆ, ಇದೇ ದೇಶದ ಪೌರಕಾರ್ಮಿಕರ ಜೀವಿತಾವಧಿ 40 ವರ್ಷ. ಆರೋಗ್ಯ ಸೌಲಭ್ಯಗಳ ಅಲಭ್ಯತೆ, ಸುರಕ್ಷತೆ ವಿಷಯದಲ್ಲಿನ ನಿರ್ಲಕ್ಷ್ಯ, ವೇತನ ಸಮಸ್ಯೆ, ನೌಕರಿಯ ಅನಿಶ್ಚಿತತೆ, ಎಲ್ಲಕ್ಕೂ ಮಿಗಿಲಾಗಿ  ನೈರ್ಮಲ್ಯದಂಥ ಕೆಲಸ ಮಾಡಿದರೂ ಸಿಗದ ಕನಿಷ್ಠ ಗೌರವ, ಘನತೆಯ ಬದುಕು ಕಟ್ಟಿಕೊಳ್ಳಲಾಗದ ಅಸಹಾಯಕತೆ… ಈ ಎಲ್ಲವೂ ಸೇರಿ ಪೌರಕಾರ್ಮಿಕರ ಜೀವ ಹಿಂಡುತ್ತಿವೆ. ಇನ್ನು ಮೇಲಾದರೂ, ದಿನಾಚರಣೆ, ಘೋರ ಭಾಷಣಗಳ ಆಡಂಬರ ಬಿಟ್ಟು, ಪೌರಕಾರ್ಮಿಕರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಪರಿಹರಿಸುವತ್ತ ಸರ್ಕಾರಗಳು, ಸ್ಥಳೀಯಾಡಳಿತ ಸಂಸ್ಥೆಗಳು ಗಮನ ಹರಿಸಬೇಕು. ಇದು ಸಾಧ್ಯವಾಗುವಂತೆ ಜನಸಾಮಾನ್ಯರು ಸರ್ಕಾರಗಳು, ಸ್ಥಳೀಯಾಡಳಿತ ಸಂಸ್ಥೆಗಳ ಮೇಲೆ ಒತ್ತಡ ಹೇರಬೇಕು.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ: ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....