ಈ ದಿನ ಸಂಪಾದಕೀಯ | ಬಿಜೆಪಿಯ ಹಾದಿ ಹಿಡಿದರೆ ಕಾಂಗ್ರೆಸ್‌ನ ಸೊಂಟವನ್ನೂ ಮುರಿದೀತು ಜನಶಕ್ತಿ!

Date:

ಕಾಂಗ್ರೆಸ್ಸಿಗರು ಅಧಿಕಾರದ ಕಚ್ಚಾಟದಲ್ಲೇ ಕಾಲ ಕಳೆಯಕೂಡದು. ಕನ್ನಡ ಜನ ತಮ್ಮ ಮೇಲೆ ಇರಿಸಿರುವ ನಂಬಿಕೆಗೆ ಭಂಗ ತರಕೂಡದು. ಹಾಗೇನಾದರೂ ಮಾಡಿದರೆ ಸುಲಭದಲ್ಲಿ ಅವರಿಗೆ ಕ್ಷಮೆ ಸಿಗುವುದಿಲ್ಲ.

ಬಿಜೆಪಿಯ ವಿರುದ್ಧ ನಿರ್ಣಾಯಕ ಜನಾದೇಶ ಪಡೆದ ಕಾಂಗ್ರೆಸ್ ಪಕ್ಷ ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿಯುವ ಗಳಿಗೆಗಳು ಸಮೀಪಿಸುತ್ತಿವೆ.

ನಾಲ್ಕು ದಿನಗಳ ಕಾಲ ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ ಜರುಗಿದ ತುರುಸಿನ ಪೈಪೋಟಿಯ ನಂತರ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪರಸ್ಪರರನ್ನು ಆಲಿಂಗಿಸಿ ಅಭಿನಂದಿಸಿದ್ದಾರೆ.

ಒಗ್ಗಟ್ಟಿನಿಂದ ಜನಸೇವೆಗೆ ತೊಡಗುವುದಾಗಿ ಸಾರಿದ್ದಾರೆ. ಶಿವಕುಮಾರ್ ಬಂಡಾಯದ ಬಾವುಟ ಹಾರಿಸುತ್ತಾರೆ, ಕಾಂಗ್ರೆಸ್ ಪಕ್ಷಕ್ಕೆ ದೊರೆತ ಜನಾದೇಶ ಛಿದ್ರವಾಗುತ್ತದೆ ಅಥವಾ ಶಿವಕುಮಾರ್ ಹಟ ಹಿಡಿದು ತಾವೇ ಮುಖ್ಯಮಂತ್ರಿಯಾಗುತ್ತಾರೆ. ಕೇಸುಗಳನ್ನು ಬಡಿದೆಬ್ಬಿಸಿ ಅವರನ್ನೂ, ಕಾಂಗ್ರೆಸ್ ಪಕ್ಷವನ್ನೂ ಹಣಿದು ಮುಜುಗರಕ್ಕೆ ಒಡ್ಡಬಹುದು ಎಂಬೆಲ್ಲ ನಿರೀಕ್ಷೆಗಳ ಮೇಲೆ ತಣ್ಣೀರು ಬಿದ್ದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಾಜಕೀಯ ಪಕ್ಷಗಳಲ್ಲಿ ಹುದ್ದೆಗಳಿಗಾಗಿ ಅಧಿಕಾರಕ್ಕಾಗಿ ಆಂತರಿಕ ಪೈಪೋಟಿ ಸ್ವಾಭಾವಿಕ. ಆದರೆ ಅದು ಪಕ್ಷವನ್ನು ಒಡೆಯುವ ಹಂತ ತಲುಪಿದರೆ ಅನಾರೋಗ್ಯಕರ. ಮುಖ್ಯಮಂತ್ರಿ ಹುದ್ದೆ ತಮಗೇ ಸಿಗಬೇಕೆಂಬ ಶಿವಕುಮಾರ್ ಬಯಕೆ ತಪ್ಪೇನೂ ಅಲ್ಲ.

ಐದು ವರ್ಷಗಳ ಅವಧಿಯನ್ನು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಹಂಚಿಕೊಳ್ಳಬೇಕೆಂಬ ಸೂತ್ರವೇನಾದರೂ ಇದ್ದಲ್ಲಿ, ಅದೂ ನ್ಯಾಯಸಮ್ಮತವೇ. ಕಾಂಗ್ರೆಸ್ ಪಕ್ಷದಲ್ಲಿ ಅದನ್ನು ದನಿಯೆತ್ತಿ ವಿರೋಧಿಸುವವರು ಯಾರೂ ಇರಲಿಲ್ಲ.

ಅಧಿಕಾರ ಸಂಘರ್ಷ ಇಲ್ಲದ ರಾಜಕಾರಣ ಅಥವಾ ರಾಜಕೀಯ ಪಕ್ಷ ಯಾವುದಾದರೂ ಇದೆಯೆಂಬ ಮಾತು ಸತ್ಯದೂರ. ಕಡೆಯ ನಿಮಿಷದ ತನಕ ಚೌಕಾಶಿ ನಡೆಸಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಕಡೆಗೂ ತಮ್ಮ ವರಿಷ್ಠರ ಮಾತಿಗೆ ತಲೆಬಾಗಿದ್ದಾರೆ.

ತಮ್ಮ ಮೇಲಿನ ಕೇಸುಗಳ ಕುರಿತು ಮತ್ತು ಅವುಗಳ ನೆವದಲ್ಲಿ ತಮ್ಮನ್ನು ಹಣಿಯಲು ಸಜ್ಜಾಗಿರುವ ಶಕ್ತಿಗಳ ಕುರಿತು ಶಿವಕುಮಾರ್ ಚೆನ್ನಾಗಿ ಬಲ್ಲರು. ಪ್ರಾಯಶಃ ಎರಡನೆಯ ಅವಧಿಗೆ ತಮ್ಮನ್ನು ಮುಖ್ಯಮಂತ್ರಿ ಮಾಡುತ್ತಾರೆಂಬ ಗಟ್ಟಿ ಆಶ್ವಾಸನೆಯನ್ನು ವರಿಷ್ಠರಿಂದ ಪಡೆಯಲೋಸುಗ ಅವರು ಕಠಿಣ ಚೌಕಾಶಿಯಲ್ಲಿ ತೊಡಗಿದ್ದಿರಬಹುದು. ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಐದು ಗ್ಯಾರಂಟಿಗಳನ್ನು ಮತದಾರರಿಗೆ ನೀಡಿರುವ ಶಿವಕುಮಾರ್, ತಮ್ಮ ವರಿಷ್ಠರಿಂದ ತಾವೂ ಒಂದು ‘ಗ್ಯಾರಂಟಿ’ಯನ್ನು ಪಡೆದುಕೊಂಡಂತಿದೆ. ಇಂತಹ ಗ್ಯಾರಂಟಿಯನ್ನು ಕೊಟ್ಟವರಾಗಲಿ, ಪಡೆದುಕೊಂಡವರಾಗಲಿ ಅದನ್ನು ಹೊರಜಗತ್ತಿಗೆ ತಿಳಿಸಲಾರರು. ಪ್ರಾಯಶಃ ಈಡೇರಿಕೆಯ ಹಂತದಲ್ಲಿ ಬಿಕ್ಕಳಿಕೆಗಳು ಶುರುವಾದರೆ ಆಗ ವಿವರಗಳು ಬಟಾಬಯಲಾಗುತ್ತವೆ.

ಸಿದ್ದರಾಮಯ್ಯ ಅವರ ಜನಪ್ರಿಯತೆ ಮತ್ತು ಡಿ.ಕೆ.ಶಿವಕುಮಾರ್ ಅವರ ಸಂಪನ್ಮೂಲ ಮತ್ತು ಸಂಘಟನಾ ಸಾಮರ್ಥ್ಯಗಳು ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿನ ಹಿಂದೆ ಸಾಕಷ್ಟು ಮಟ್ಟಿಗೆ ಕೆಲಸ ಮಾಡಿರಬಹುದು. ಆದರೆ ಇಡೀ ಗೆಲುವು ಕೇವಲ ಇವರಿಬ್ಬರ ಗೆಲುವಲ್ಲ. ಕರ್ನಾಟಕದ ದೀನದುರ್ಬಲರ, ಜಾತ್ಯತೀತರ ಗೆಲುವು. ದಲಿತ ಸಂಘಟನೆಗಳ ಬಲ, ಬಹುತ್ವ ಕರ್ನಾಟಕ, ಎದ್ದೇಳು ಕರ್ನಾಟಕದಂತಹ ನಾಗರಿಕ ಸಂಘಟನೆಗಳ ಶ್ರಮ, ಹಿಂದುಳಿದ ವರ್ಗಗಳು ಮತ್ತು ಲಿಂಗಾಯತ ಸಮಾಜದ ಬೆಂಬಲದ ಜೊತೆಗೆ, ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯೂ ತುಸುಮಟ್ಟಿಗೆ ಪಾತ್ರವಹಿಸಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ದುರಾಡಳಿತದ ವಿರುದ್ಧ ಭುಗಿಲೆದ್ದ ಆಡಳಿತ ವಿರೋಧಿ ಆಕ್ರೋಶ ಬಿಜೆಪಿಯನ್ನು ನೆಲಕಚ್ಚಿಸಿದೆ. ಹೀಗಾಗಿ ಇದು ಸಮಷ್ಟಿಯ ಗೆಲುವು. ಈ ವಾಸ್ತವಾಂಶವನ್ನು ಇಬ್ಬರೂ ನಾಯಕರು ಅರಿಯುವುದು ಒಳಿತು.

ಅಧಿಕಾರದ ಪೈಪೋಟಿಯ ಒಂದು ಆರಂಭಿಕ ಅಧ್ಯಾಯ ಮುಗಿದಿದೆ. ಖಾತೆಗಳ ಹಂಚಿಕೆಯ ಮತ್ತೊಂದು ಪ್ರಮುಖ ಅಧ್ಯಾಯ ಇನ್ನೇನು ಸುರುಳಿ ಬಿಚ್ಚಲಿದೆ. ಕಾಂಗ್ರೆಸ್ ಪಕ್ಷಕ್ಕೆ ಲಭಿಸಿರುವ ದೊಡ್ಡ ಬಹುಮತ ಈ ಕೆಲಸವನ್ನು ಮತ್ತಷ್ಟು ಜಟಿಲಗೊಳಿಸಲಿದೆ. ಪ್ರದೇಶವಾರು, ಜಾತಿವಾರು, ಕೋಮುವಾರು ಹಂಚಿಕೆಯ ಕೆಲಸ ಹಗ್ಗದ ಮೇಲಿನ ನಡಿಗೆ. ಆಗ ಮತ್ತಷ್ಟು ಅಸಮಾಧಾನ, ಆಕ್ರೋಶ ಭುಗಿಲೇಳುವುದನ್ನು ಈಗಲೇ ನಿರೀಕ್ಷಿಸಬಹುದಾಗಿದೆ.

ಆದರೆ ಕಾಂಗ್ರೆಸ್ಸಿಗರು ಅಧಿಕಾರದ ಕಚ್ಚಾಟದಲ್ಲೇ ಕಾಲ ಕಳೆಯಕೂಡದು. ಕನ್ನಡ ಜನ ತಮ್ಮ ಮೇಲೆ ಇರಿಸಿರುವ ನಂಬಿಕೆಗೆ ಭಂಗ ತರಕೂಡದು. ಹಾಗೇನಾದರೂ ಮಾಡಿದರೆ ಸುಲಭದಲ್ಲಿ ಅವರಿಗೆ ಕ್ಷಮೆ ಸಿಗುವುದಿಲ್ಲ. ವರ್ಷದೊಪ್ಪತ್ತಿನಲ್ಲೇ ಲೋಕಸಭಾ ಚುನಾವಣೆ ನಡೆಯಲಿದೆ. ಭಾರೀ ಬಹುಮತದ ಬಹುಮಾನ ನೀಡಿರುವ ಇದೇ ಮತದಾರರು, ಮಾತು ತಪ್ಪಿ ನಡೆಯುವವರನ್ನು ಕಠಿಣವಾಗಿ ಶಿಕ್ಷಿಸಲೂ ಬಲ್ಲರು ಎಂಬುದು ನೆನಪಿರಲಿ.

ಶೇ.40ರ ಬಿಜೆಪಿ ಭ್ರಷ್ಟಾಚಾರವನ್ನು ಚುನಾವಣೆಯ ಅಸ್ತ್ರವನ್ನಾಗಿಸಿ ಬಳಸಿಕೊಂಡಿದ್ದರು ಕಾಂಗ್ರೆಸ್ಸಿಗರು. ಅಧಿಕಾರ ಕೈಗೆ ಬಂದೊಡನೆ ಈ ಅಂಶ ಮರೆತು ತಾವೂ ಇಂತಹುದೇ ಭ್ರಷ್ಟಾಚಾರದಲ್ಲಿ ಮುಳುಗುವುದು, ಬೆಲೆ ಏರಿಕೆಯ ಬೇಗೆಯಲ್ಲಿ ಬೆಂದವರಿಗೆ ಆಸರೆಯಾಗದೆ, ಹಿಂದಿನ ಸರ್ಕಾರ ನಿರ್ಮಿಸಿರುವ ಕೋಮುವಾದಿ ಕೆಂಡದ ಹೊಂಡಗಳನ್ನು ನಂದಿಸದೆ, ಅಧಿಕಾರದ ಅಮಲಿನಲ್ಲಿ ಮುಳುಗಿ ತೇಲಿದರೆ ವಿನಾಶ ನಿಶ್ಚಿತ.

ಆಂತರಿಕ ಭಿನ್ನಾಭಿಪ್ರಾಯಗಳು, ಭಿನ್ನಮತಗಳು ಸ್ವಾಭಾವಿಕ. ಅವುಗಳನ್ನು ಚುರುಕಾಗಿ ಬಗೆಹರಿಸಿಕೊಂಡು ಜನಸೇವೆಗೆ ಟೊಂಕ ಕಟ್ಟಬೇಕು. ಇಲ್ಲವಾದರೆ ಕಾಂಗ್ರೆಸ್ಸಿನ ಸೊಂಟವನ್ನೂ ಮುರಿದೀತು ಜನಶಕ್ತಿ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....