‘ಈ ದಿನ’ ಸಂಪಾದಕೀಯ | ಒಡಿಶಾ ಎದುರಿಸುತ್ತಿರುವ ಮಾಸಾಶನ ಸಮಸ್ಯೆ ಕರ್ನಾಟಕವನ್ನು ಕಾಡದಿರಲಿ

Date:

ತಾನು ಚುನಾವಣೆ ವೇಳೆ ನೀಡಿದ ‘ಗ್ಯಾರಂಟಿ’ಗಳನ್ನು ಈಡೇರಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗುತ್ತಿರುವ ಈ ಹೊತ್ತಿನಲ್ಲಿ, ಇಂತಹ ಪ್ರಾಥಮಿಕ ಸಂಗತಿಗಳನ್ನು ಸಮಗ್ರವಾಗಿ ಪರಿಶೀಲಿಸಿ ಸರಿಪಡಿಸಬೇಕಾದ್ದು ಅನಿವಾರ್ಯ. ಇಲ್ಲದಿದ್ದಲ್ಲಿ, ಅಸಹಾಯಕರು ಪರದಾಡಬೇಕಾದೀತು

ಎಪ್ಪತ್ತು ವರ್ಷ ವಯಸ್ಸಿನ ಹೆಳವ ಮಹಿಳೆಯೊಬ್ಬರು ಮಾಸಾಶನ ಪಡೆಯಲು ಬರಿಗಾಲಿನಲ್ಲಿ ಹಲವು ಕಿಲೋಮೀಟರು ಸಾಗುವ ಸಂಕಟಮಯ ವಿಡಿಯೊವೊಂದು ಒಡಿಶಾದಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು. ಇದಾದ ಕೆಲವೇ ದಿನಗಳಲ್ಲಿ ಅಲ್ಲಿನ ಸರ್ಕಾರ, ಮಾಸಾಶನದ ಹಣವನ್ನು ಆಯಾ ಗ್ರಾಮ ಪಂಚಾಯತ್ ಕಚೇರಿಗಳಲ್ಲೇ ನಗದು ರೂಪದಲ್ಲಿ ವಿತರಿಸುವ ನಿರ್ಧಾರ ಕೈಗೊಂಡಿದೆ. ‘ಡಿಜಿಟಲ್ ಯುಗ’ ಎಂದೇ ಕರೆಯಲ್ಪಡುವ ಈ ಕಾಲಮಾನದಲ್ಲಿ ಇಂಥದ್ದೊಂದು ನಿರ್ಧಾರ ಮಾಡಿದ ಒಡಿಶಾ ಸರ್ಕಾರ ಸಹಜವಾಗಿಯೇ ಟೀಕೆಗೆ ತುತ್ತಾಗಿದೆ. ಆದರೆ, ಕೇವಲ ಮಾತಿನಲ್ಲಿ ಡಿಜಿಟಲೀಕರಣದ ತುತ್ತೂರಿ ಊದುತ್ತ, ಅದರಿಂದ ಸಮಸ್ಯೆಗೆ ಸಿಲುಕಬಹುದಾದ ಜನಸಾಮಾನ್ಯರ ಅಳಲು ಆಲಿಸಲು ಮರೆತವರಿಗೆ ಈ ಬೆಳವಣಿಗೆ ಸೂಕ್ತ ಗುಣಪಾಠವೇ ಸರಿ.

ಮಾಸಾಶನವನ್ನು ನಗದು ರೂಪದಲ್ಲಿ ಕೊಟ್ಟರೆ ಮಧ್ಯವರ್ತಿಗಳ ಕಾಟ ಶುರುವಾಗುತ್ತದೆ. ಅಲ್ಲದೆ, ಅನಿಯಂತ್ರಿತ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ ಎಂಬುದು ವಾಸ್ತವ. ಇದೇ ಸಂಗತಿಯನ್ನು ಮುಂದು ಮಾಡಿ, ಒಕ್ಕೂಟ ಸರ್ಕಾರದ ಸಚಿವ ಧರ್ಮೇಂದ್ರ ಪ್ರಧಾನ್, ಒಡಿಶಾ ಸರ್ಕಾರದ ಕ್ರಮವನ್ನು ‘ಭ್ರಷ್ಟಾಚಾರ ಮುಕ್ತ ಆಡಳಿತದಿಂದ ಹಿಂದಕ್ಕಿಟ್ಟ ಹೆಜ್ಜೆ’ ಎಂದು ಟೀಕಿಸಿದ್ದಾರೆ. ಆದರೆ, ನವೀನ್ ಪಟ್ನಾಯಕ್ ನೇತೃತ್ವದ ಒಡಿಶಾ ಸರ್ಕಾರ ಈ ವಿಷಯದಲ್ಲಿ ಎದುರಿಸುತ್ತಿರುವ ಸಮಸ್ಯೆ ಬೇರೆಯೇ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಈ ಸಂಪಾದಕೀಯ ಓದಿದ್ದೀರಾ?: ಬೆಂಗಳೂರು: ಅಂಡರ್‌ಪಾಸ್, ಫ್ಲೈಓವರ್, ರಸ್ತೆ ಗುಂಡಿ; ಹೆಜ್ಜೆ ಹೆಜ್ಜೆಗೂ ಕಾಡುವ ಸಾವು!

ಅಸಲಿಗೆ, ಒಡಿಶಾದ 6,798 ಗ್ರಾಮ ಪಂಚಾಯತ್‌ಗಳ ಪೈಕಿ, ಬರೋಬ್ಬರಿ ಅರ್ಧದಷ್ಟು ಪಂಚಾಯತ್‌ ವ್ಯಾಪ್ತಿಯಲ್ಲಿ ಬ್ಯಾಂಕುಗಳೇ ಇಲ್ಲ. ಹೀಗಾಗಿ, ಮಾಸಾಶನದ ಹಣವನ್ನು ಬ್ಯಾಂಕುಗಳಿಂದ ಪಡೆಯಬೇಕೆಂದರೆ ಜನ ಕಾಲು ಸವೆಸಲೇಬೇಕಾದ ಅನಿವಾರ್ಯತೆ ಇದೆ. ಗ್ರಾಮೀಣ ಬ್ಯಾಂಕಿಂಗ್ ವ್ಯವಸ್ಥೆ ಸುಧಾರಿಸಲು ಸಮಯ ತಗುಲುವುದರಿಂದ, ಅದುವರೆಗೂ ಮಾಸಾಶನದಿಂದ ಯಾರೂ ವಂಚಿತರಾಗಬಾರದು ಎಂಬುದು ಒಡಿಶಾ ಸರ್ಕಾರದ ಕಾಳಜಿ ಎಂಬಂತೆ ಬಿಂಬಿಸಲಾಗಿದೆ. ಸದ್ಯಕ್ಕೆ ‘ಮಧು ಬಾಬು ಮಾಸಾಶನ ಯೋಜನೆ’ಗೆ ಮಾತ್ರ ಅನ್ವಯವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ. ಒಕ್ಕೂಟ ಸರ್ಕಾರದ ವತಿಯಿಂದ ‘ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ (ಎನ್‌ಎಸ್‌ಎಪಿ)’ ಯೋಜನೆಯಡಿ ಕೊಡಮಾಡುತ್ತಿರುವ ಮಾಸಾಶನ ಮಾತ್ರ ಎಂದಿನಂತೆ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಆಗುತ್ತಿದೆ. ಇದರರ್ಥ – ಬ್ಯಾಂಕ್ ಖಾತೆಗಳೇ ಇಲ್ಲದ ಒಡಿಶಾದ ಅರ್ಧ ಭಾಗಕ್ಕೆ ಒಕ್ಕೂಟ ಸರ್ಕಾರದ ಮಾಸಾಶನ ಯೋಜನೆ ತಲುಪುತ್ತಿಲ್ಲ. ಇದೇ ಕಾರಣಕ್ಕೆ ಸಚಿವ ಧರ್ಮೇಂದ್ರ ಪ್ರಧಾನ್ ಒಡಿಶಾ ಸರ್ಕಾರದ ಮೇಲೆ ಗರಂ ಆಗಿರುವುದು ಮೇಲ್ನೋಟಕ್ಕೇ ಕಾಣಿಸುತ್ತಿದೆ. ಆದರೆ, ಇದನ್ನು ನೇರವಾಗಿ ಹೇಳಿಕೊಂಡಿಲ್ಲವಷ್ಟೆ.

ಒಕ್ಕೂಟ ಸರ್ಕಾರದ ಸಚಿವರಿಗಾಗಲೀ ಅಥವಾ ಒಡಿಶಾ ಸರ್ಕಾರಕ್ಕಾಗಲೀ, ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ಇಚ್ಛೆ ಇದ್ದಂತಿಲ್ಲ. ತನ್ನ ಯೋಜನೆಯ ಅಸಲಿಯತ್ತು ಎಲ್ಲರಿಗೂ ಗೊತ್ತಾಗಿಬಿಡುತ್ತದೆ ಎಂಬ ಕಾರಣಕ್ಕೆ ಒಕ್ಕೂಟ ಸರ್ಕಾರವು ಡಿಜಿಟಲೀಕರಣದ (ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ) ಪರ ನಿಂತರೆ; ಗ್ರಾಮೀಣ ಪ್ರದೇಶದಲ್ಲಿನ ಬ್ಯಾಂಕಿಂಗ್ ಸೇವಾ ಕೊರತೆಯನ್ನು ಮರೆಮಾಚುವ ಕ್ರಮವಾಗಿ ನವೀನ್ ಪಟ್ನಾಯಕ್ ಸರ್ಕಾರ ನಗದು ಮಾಸಾಶನ ವಿತರಣೆಗೆ ಮುಂದಾಗಿದೆ.

ಈ ಸಂಪಾದಕೀಯ ಓದಿದ್ದೀರಾ?: ₹2000 ನೋಟು ರದ್ದತಿಯು ಮತ್ತೊಂದು ದುರಂತ ಪ್ರಹಸನಕ್ಕೆ ನಾಂದಿ ಆಗದಿರಲಿ

ಕರ್ನಾಟಕದ ವಿಷಯಕ್ಕೆ ಬಂದರೆ, ಮಾಸಾಶನ ವಿತರಣೆಯಲ್ಲಿ ಬ್ಯಾಂಕಿಂಗ್ ಸೇವೆಯ ಸಮಸ್ಯೆಗಿಂತ, ನಕಲಿ ಫಲಾನುಭವಿಗಳ ಕಾಟ ತಾರಕಕ್ಕೇರಿದೆ. ಕಂದಾಯ ಇಲಾಖೆ ಅಂಕಿ-ಅಂಶಗಳ ಪ್ರಕಾರ, 2019ರಿಂದ 2022ರ ಆಗಸ್ಟ್‌ವರೆಗೆ 7.07 ಲಕ್ಷ ನಕಲಿ ಫಲಾನುಭವಿಗಳ ಅರ್ಜಿ ತಿರಸ್ಕರಿಸಲಾಗಿದೆ. ಸಾಮಾಜಿಕ ನೆರವಿನ ಯೋಜನೆಗಳು ಹಳ್ಳ ಹಿಡಿಯಲು ಇಷ್ಟು ಸಾಕಲ್ಲವೇ? ತಾನು ಚುನಾವಣೆ ವೇಳೆ ನೀಡಿದ ‘ಗ್ಯಾರಂಟಿ’ಗಳನ್ನು ಈಡೇರಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗುತ್ತಿರುವ ಈ ಹೊತ್ತಿನಲ್ಲಿ, ಇಂತಹ ಪ್ರಾಥಮಿಕ ಸಂಗತಿಗಳನ್ನು ಸಮಗ್ರವಾಗಿ ಪರಿಶೀಲಿಸಿ ಸರಿಪಡಿಸಬೇಕಾದ್ದು ಅನಿವಾರ್ಯ. ಇಲ್ಲದಿದ್ದಲ್ಲಿ, ನಿಜವಾಗಿಯೂ ಅವಶ್ಯಕತೆ ಇದ್ದ ಅಸಹಾಯಕರು ಪರದಾಡಬೇಕಾದ ಸನ್ನಿವೇಶ ಕರ್ನಾಟಕದಲ್ಲೂ ನಿರ್ಮಾಣವಾಗುವುದು ನಿಶ್ಚಿತ.

ಚಿತ್ರ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....