ಈ ದಿನ ಸಂಪಾದಕೀಯ | ಮೋದಿ ಮಧ್ಯಪ್ರವೇಶಿಸಲಿ- ಕಾವೇರಿ ಬಿಕ್ಕಟ್ಟು ಬಗೆಹರಿಸಲಿ

Date:

ಸದ್ಯಕ್ಕೆ ಪ್ರಧಾನಮಂತ್ರಿಯವರು ಮಧ್ಯಪ್ರವೇಶಿಸಿ ನೆಲಮಟ್ಟದ ವಾಸ್ತವಗಳನ್ನು ಅರಿತು ಸುಪ್ರೀಮ್ ಕೋರ್ಟಿಗೆ ಮರುಪರಿಶೀಲನಾ ಮನವಿಯನ್ನು ಸಲ್ಲಿಸುವಂತೆ ಕೇಂದ್ರ ಜಲಸಂಪನ್ಮೂಲ ಮಂತ್ರಾಲಯಕ್ಕೆ ನಿರ್ದೇಶನ ನೀಡಬೇಕು. ಜೊತೆ ಜೊತೆಗೆ ಐವರು ತಟಸ್ಥ ತಜ್ಞರ ಸಮಿತಿಯನ್ನು ರಚಿಸಬೇಕು

ಮಳೆಗಾಲ ಕೈಕೊಟ್ಟು ಕರ್ನಾಟಕದ ಜಲಾಶಯಗಳ ಸಂಗ್ರಹ ಕುಸಿಯುತ್ತಿದೆ. ತಮಿಳುನಾಡಿನೊಂದಿಗೆ ನೀರು ಹಂಚಿಕೊಳ್ಳಬೇಕಿರುವ ಕಾವೇರೀ ಜಲಾಶಯಗಳೂ ಈ ಮಾತಿಗೆ ಹೊರತಲ್ಲ. ಮುಂಬರುವ ಎರಡು ತಿಂಗಳುಗಳಲ್ಲಿ ಮಳೆಯ ಪರಿಸ್ಥಿತಿ ಸುಧಾರಿಸದೆ ಹೋದರೆ ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರಿನ ಬಿಕ್ಕಟ್ಟು ತಪ್ಪದು. ಬೆಂಗಳೂರಿನ ಅಂತರ್ಜಲ ಮಟ್ಟ ತಳ ಮುಟ್ಟತೊಡಗಿದ್ದು ಕೊಳವೆ ಬಾವಿಗಳು ಖಾಲಿಯಾಗತೊಡಗಿವೆ. ಆನಂತರ ಕಾವೇರೀ ನೀರೇ ಗತಿ. 

ಕಾವೇರೀ ನೀರು ನಿರ್ವಹಣ ಪ್ರಾಧಿಕಾರದ ಆದೇಶದ ಪ್ರಕಾರ ಕರ್ನಾಟಕ ಇದೇ ಸೆಪ್ಟಂಬರ್ 27ರ ತನಕ ತಮಿಳುನಾಡಿಗೆ ನಿತ್ಯ ಸೆಕೆಂಡಿಗೆ ಐದು ಸಾವಿರ ಘನ ಅಡಿಗಳಷ್ಟು ನೀರನ್ನು ಬಿಡುಗಡೆ ಮಾಡುತ್ತಿದೆ. 27ರ ನಂತರ ಬಿಡುಗಡೆಗೆ ತಡೆ ಬಿದ್ದರೆ ರಾಜ್ಯದ ಕಾವೇರಿ ಜಲಾಶಯಗಳಲ್ಲಿ 57 ಸಾವಿರ ದಶಲಕ್ಷ ಘನ ಅಡಿಗಳಷ್ಟು (ಟಿ.ಎಂ.ಸಿ.ಎಫ್ಟಿ) ನೀರು ಉಳಿಯಲಿದೆ. ಬೆಂಗಳೂರೊಂದಕ್ಕೇ ತಿಂಗಳಿಗೆ 1.6 ಟಿ.ಎಂ.ಸಿ.ಅಡಿಗಳಷ್ಟು ನೀರಿನ ಅಗತ್ಯವಿದೆ. ಜೊತೆಗೆ ಬೆಂಗಳೂರಿನ ಸುತ್ತಮುತ್ತಲ 110 ಗ್ರಾಮಗಳಿಗೆ ನೀರು ಪೂರೈಕೆಯಾಗಬೇಕಿದೆ. ಮುಂದಿನ ಏಪ್ರಿಲ್ ತನಕ ಬೆಂಗಳೂರೊಂದರ ಕನಿಷ್ಠ ಅಗತ್ಯವೇ 9.6 ಸಾವಿರ ದಶಲಕ್ಷ ಘನ ಅಡಿಗಳಷ್ಟು. ಕೆ.ಆರ್.ಎಸ್., ಕಬಿನಿ, ಹಾರಂಗಿ, ಹೇಮಾವತೀ ಜಲಾಶಯಗಳು ಅವುಗಳ ಬದಿಯ ಪೇಟೆ ಪಟ್ಟಣ ಗ್ರಾಮಗಳ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲೇಬೇಕು. ಹೀಗಾಗಿ ಸಂಗ್ರಹದಲ್ಲಿ ಬೆಂಗಳೂರಿನ ಅಗತ್ಯ ಪೂರೈಕೆ ಅನುಮಾನ ಎನ್ನುತ್ತಾರೆ ಸರ್ಕಾರಿ ಅಧಿಕಾರಿಗಳು. ಮುಂದಿನ ಎರಡು ತಿಂಗಳಲ್ಲಿ ಮಳೆ ಬಿದ್ದರೆ ಪರಿಸ್ಥಿತಿ ಸುಧಾರಿಸೀತು, ಇಲ್ಲವಾದರೆ ಹದಗೆಡುವುದು ನಿಶ್ಚಿತ. ಇದೇ ಸೆಪ್ಟಂಬರ್ 27ರ ನಂತರವೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕೆಂಬ ಆದೇಶ ಮುಂದುವರೆದರೆ ಪರಿಸ್ಥಿತಿ ತೀರಾ ಬಿಗಡಾಯಿಸಲಿದೆ.

ಈ ವರ್ಷ ಕಾವೇರೀ ಜಲಾನಯನದಲ್ಲಿ ಮಳೆಯ ಅಭಾವದಿಂದಾಗಿ ಒಳಹರಿವಿನಲ್ಲಿ ಶೇ.53ರಷ್ಟು ಖೋತಾ ಎದುರಿಸುತ್ತಿದೆ ಕರ್ನಾಟಕ. ಹೀಗಾಗಿ ನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಬಿಡುಗಡೆ 15 ದಿನಗಳ ಕಾಲ ಸಾಧ್ಯವಿಲ್ಲ ಎಂಬುದು ಕರ್ನಾಟಕದ ಅಹವಾಲು. ಸುಪ್ರೀಮ್ ಕೋರ್ಟು ಈ ಮನವಿಯನ್ನು ಪುರಸ್ಕರಿಸಲಿಲ್ಲ, ಬದಲಾಗಿ ಕಾವೇರೀ ನಿರ್ವಹಣಾ ಪ್ರಾಧಿಕಾರವೇ ಈ ಬಗೆಗೆ ತಜ್ಞ ಮಾಹಿತಿ ಹೊಂದಿದ್ದು ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಸಾರಿತು. ನ್ಯಾಯಾಂಗ ನಿಂದನೆಗೆ ಅಂಜಿದ ಕರ್ನಾಟಕ ನಿತ್ಯ ಐದು ಸಾವಿರ ಕ್ಯೂಸೆಕ್ ಬಿಡುಗಡೆ ಆದೇಶವನ್ನು ಪಾಲಿಸಿದೆ. ಎಲ್ಲ ಪಕ್ಷಗಳೂ ಅಧಿಕಾರದಲ್ಲಿದ್ದಾಗ ನ್ಯಾಯಾಲಯದ ಆದೇಶಗಳನ್ನು ಪಾಲಿಸಿ ನೀರನ್ನು ಬಿಡುಗಡೆ ಮಾಡಿದ್ದಾರೆ. ಎಲ್ಲ ಪಕ್ಷಗಳೂ ಪ್ರತಿಪಕ್ಷಗಳಾಗಿದ್ದಾಗ ನೀರು ಬಿಡುಗಡೆಯನ್ನು ವಿರೋಧಿಸಿದ್ದಾರೆ ಮತ್ತು ಬಂದ್ ಆಚರಣೆಗೆ ಕೈ ಜೋಡಿಸಿದ್ದಾರೆ. ಅನೂಚಾನವಾಗಿ ನಡೆದುಕೊಂಡು ಬಂದಿರುವ ರಾಜಕಾರಣವಿದು. ಐದು ಸಾವಿರ ಕ್ಯೂಸೆಕ್ ಬಿಡುಗಡೆಯ ಆದೇಶ ನಾಳೆಗೆ ಕೊನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ನಡೆಯ ಕುರಿತು ಕಾವೇರೀ ನೀರು ನಿಯಂತ್ರಣ ಸಮಿತಿಯ ಸಭೆ ನೀರು ಬಿಡುಗಡೆಯ ಪ್ರಮಾಣವನ್ನು ನಿತ್ಯ ಐದು ಸಾವಿರದಿಂದ ಮೂರು ಸಾವಿರ ಕ್ಯೂಸೆಕ್ ಗೆ ಇಳಿಸಿದೆ. ಈಗಿನ ಸ್ಥಿತಿಯಲ್ಲಿ ಇದು ದೊಡ್ಡ ರಿಯಾಯಿತಿ ಯೇನೂ ಅಲ್ಲ. ರಾಜ್ಯದ ಕಾವೇರೀ ಕಣಿವೆಯ ರೈತರು ಮತ್ತು ರಾಜ್ಯದ ಕುಡಿಯುವ ನೀರಿನ ಅಗತ್ಯಗಳನ್ನು ನಿಯಂತ್ರಣ ಸಮಿತಿಯು ನಿರ್ಲಕ್ಷಿಸಿದಂತಿದೆ. ಕಣಿವೆಯ ಕೆಳಗಿರುವ ಫಲಾನುಭವಿ ರಾಜ್ಯಕ್ಕೆ ನೀರು ಬಿಡುಗಡೆ ಮಾಡುವ ನೀರುಗಂಟಿಯ ಕೆಲಸವನ್ನಷ್ಟೇ ಕರ್ನಾಟಕಕ್ಕೆ ವಹಿಸಿಕೊಟ್ಟಂತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಾವೇರೀ ಸಮಸ್ಯೆ ತಲೆದೋರುವುದು ಆಗಾಗ್ಗೆ ಉಂಟಾಗುವ ಮಳೆಯ ಅಭಾವದ ವರ್ಷಗಳಲ್ಲಿ. ಕಾವೇರೀ ಜಲವಿವಾದ ನ್ಯಾಯಾಧಿಕರಣದ ಅಂತಿಮ ಐತೀರ್ಪಿನ್ನು ಜಾರಿಗೊಳಿಸುವುದು ಕರ್ನಾಟಕದ ಪಾಲಿಗೆ ದುಸ್ಸಾಧ್ಯವಾಗಿ ಪರಿಣಮಿಸುತ್ತದೆ. ಮಳೆಯ ಅಭಾವದ ವರ್ಷಗಳಲ್ಲಿ ಉಂಟಾಗುವ ಕೊರತೆಯನ್ನು ಸಮನಾಗಿ ಹಂಚಿಕೊಳ್ಳುವ ಸೂತ್ರವನ್ನು ಕಾವೇರೀ ನ್ಯಾಯಾಧಿಕರಣದ ಅಂತಿಮ ಐತೀರ್ಪು ಕೂಡ ರಚಿಸದೆ ಹೋದದ್ದು ಈ ಸಮಸ್ಯೆ ಅದೆಷ್ಟು ಜಟಿಲ ಎಂಬುದನ್ನು ಸೂಚಿಸುತ್ತದೆ. ನಿರ್ದಿಷ್ಟ ಜಲವರ್ಷದಲ್ಲಿ ಉಂಟಾಗುವ ಕೊರತೆಯನ್ನು ಅಂದಾಜು ಮಾಡುವ ಸರ್ವಸಮ್ಮತ ಸೂತ್ರ ಇನ್ನಾದರೂ ರೂಪು ತಳೆಯಬೇಕಿದೆ.

ಸದ್ಯಕ್ಕೆ ಪ್ರಧಾನಮಂತ್ರಿಯವರು ಮಧ್ಯಪ್ರವೇಶಿಸಿ ನೆಲಮಟ್ಟದ ವಾಸ್ತವಗಳನ್ನು ಅರಿತು ಸುಪ್ರೀಮ್ ಕೋರ್ಟಿಗೆ ಮರುಪರಿಶೀಲನಾ ಮನವಿಯನ್ನು ಸಲ್ಲಿಸುವಂತೆ ಕೇಂದ್ರ ಜಲಸಂಪನ್ಮೂಲ ಮಂತ್ರಾಲಯಕ್ಕೆ ನಿರ್ದೇಶನ ನೀಡಬೇಕು. ಜೊತೆ ಜೊತೆಗೆ ಐವರು ತಟಸ್ಥ ತಜ್ಞರ ಸಮಿತಿಯನ್ನು ರಚಿಸಬೇಕು. ಈ ಸಮಿತಿಯ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಎಲ್ಲ ಕಾವೇರೀ ಜಲಾಶಯಗಳ ಸಂಗ್ರಹಣೆಯನ್ನು ಪರಿಶೀಲಿಸಿ ಕರ್ನಾಟಕದಿಂದ ತಮಿಳುನಾಡಿಗೆ ಮತ್ತಷ್ಟು ನೀರು ಬಿಡುಗಡೆ ಮಾಡುವುದು ಸಾಧ್ಯವೇ ಎಂಬ ಸಂಗತಿಯ ಕುರಿತು ವರದಿ ನೀಡಲಿ ಎಂಬುದಾಗಿ ಮಾಜಿ ಪ್ರಧಾನಿ ಮತ್ತು ಖುದ್ದು ಕಾವೇರೀ ಜಲವಿವಾದ ತಜ್ಞರೂ ಆಗಿರುವ ಎಚ್.ಡಿ.ದೇವೇಗೌಡ ಅವರ ಸಲಹೆ ಅತ್ಯಂತ ಸೂಕ್ತ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮೋದಿಯವರ ಮಧ್ಯಪ್ರವೇಶ ಕೋರಿದ್ದಾರೆ. ಎರಡೂ ರಾಜ್ಯಗಳ ಸಭೆ ಕರೆಯುವಂತೆ ಆಗ್ರಹಿಸಿದ್ದಾರೆ. ಭಾರತವು ರಾಜ್ಯಗಳ ಒಕ್ಕೂಟ ವ್ಯವಸ್ಥೆ. ಪ್ರಧಾನಮಂತ್ರಿಯವರು ಒಕ್ಕೂಟದ ಮುಖ್ಯಸ್ಥರು. ಕೇವಲ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಭಾಷಣಗಳನ್ನು ಮಾಡುವುದು, ರೋಡ್ ಶೋಗಳನ್ನು ನಡೆಸುವುದು, ಹಿಂದೂ-ಮುಸ್ಲಿಮ್ ಧೃವೀಕರಣ ಕಾರ್ಯಸೂಚಿಯನ್ನು ಮುಂದೆ ತಂದು ಸಮಾಜವನ್ನು ಒಡೆದು ತಮ್ಮ ಮತಬ್ಯಾಂಕುಗಳನ್ನು ತುಂಬಿಸಿಕೊಳ್ಳುವುದು ಮಾತ್ರವೇ ಪ್ರಧಾನಿಯವರ ಕೆಲಸವಲ್ಲ, ತಮ್ಮ ಹುದ್ದೆಯು ಹೊಂದಿರುವ ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸುವುದು ಅವರ ಆದ್ಯ ಕರ್ತವ್ಯ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....