ಈ ದಿನ ಸಂಪಾದಕೀಯ | ಪೋಕ್ಸೊ ಕಾಯ್ದೆ ಬಂದರೂ ತಗ್ಗದ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ

Date:

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕರಿಗೆ ಪೋಕ್ಸೊ ಕಾಯ್ದೆಯಡಿ ಶಿಕ್ಷೆ ಆಗಬಹುದು. ಆದರೆ ಮಕ್ಕಳ ಮೇಲಾಗುವ ಮಾನಸಿಕ ಆಘಾತ, ಹೆತ್ತವರು ನಿರಂತರ ಅನುಭವಿಸುವ ಸಂಕಟಕ್ಕೆ ಮದ್ದು ಯಾವುದಿದೆ. ತನ್ನ ದೈಹಿಕ ರಚನೆ, ಅಂಗಾಂಗಗಳ ಬಗ್ಗೆ, ಸೆಕ್ಸ್‌ ಬಗ್ಗೆ ಅರಿವೇ ಇಲ್ಲ ಮಕ್ಕಳ ಮೇಲೆ ಬಲಾತ್ಕಾರದ ಲೈಂಗಿಕ ಕ್ರಿಯೆಯಿಂದ ಆಗುವ ದೈಹಿಕ, ಮಾನಸಿಕ ಗಾಯವನ್ನು ಅಪರಾಧಿಯ ಶಿಕ್ಷೆ ಗುಣಪಡಿಸುವುದೇ?

ಆಗಸ್ಟ್‌ 3ರಂದು ಬೆಂಗಳೂರಿನ ಖಾಸಗಿ ಶಾಲೆಯ ಹತ್ತು ವರ್ಷದ ಮಗುವಿನ ಮೇಲೆ ಅದೇ ಶಾಲೆಯ ಮುಖ್ಯಸ್ಥನೇ ಅತ್ಯಾಚಾರ ಮಾಡಿರುವ ಸುದ್ದಿ ಬಂದಿದೆ. ಅದೂ Dyslexia ಎಂಬ ನರದೌರ್ಬಲ್ಯ ಇರುವ ಮಗು. ಶಾಲಾ ವಾತಾವರಣದಲ್ಲಿ ನೂರಾರು ಮಕ್ಕಳು, ಸಿಬ್ಬಂದಿ ಇರುವ ಕಡೆಯೂ ಹೆಣ್ಣು ಮಗು ಸುರಕ್ಷಿತವಾಗಿಲ್ಲ ಎಂಬುದು ಮನುಷ್ಯನ ಕೀಳು ಕಾಮವಾಂಛೆಯ ಗಂಭೀರತೆಯನ್ನು ತೋರಿಸುತ್ತದೆ. ಇದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರ ಅಷ್ಟೇ ಅಲ್ಲ ನಾಚಿಕೆಪಡಬೇಕಾದ ವಿಚಾರ.

ಬೆಳಿಗ್ಗೆ ಶಾಲೆಗೆ ಬಂದ ಮಗುವನ್ನು ಶಾಲಾ ಮುಖ್ಯಸ್ಥ ಮತ್ತು ಪ್ರಾಂಶುಪಾಲ ಖಾಲಿಯಾಗಿದ್ದ ಕೊಠಡಿಯೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಮನೆಗೆ ಬಂದ ಬಳಿಕ ಮಗು ನೋವು ತಾಳಲಾರದೆ ಒದ್ದಾಡಿದೆ. ಪೋಷಕರು ಮಗಳ ಬಳಿ ವಿಚಾರಿಸಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಮಗುವನ್ನು ಸ್ನಾನ ಮಾಡಿಸುವಾಗ ಅಮ್ಮನಿಗೆ ರಕ್ತದ ಕಲೆಗಳು ಕಂಡುಬಂದಿವೆ. ಯಾವ ಹೆತ್ತ ತಾಯಿಯೂ ಕಾಣಲಾರದ ಕಲೆಗಳವು.

ಶಾಲೆಗೆ ಹೋಗುವ ಎಳೆ ಮಗು ಬೆಳಿಗ್ಗೆಯಿಂದ ಸಂಜೆಯವರೆಗೂ ಅಪ್ಪ ಅಮ್ಮನಿಂದ ಪ್ರತ್ಯೇಕವಾಗಿರುವಾಗ ಭದ್ರತೆಯ ಭಾವ ಮೂಡಿಸಬೇಕಾದ, ಇಡೀ ದಿನ ಒಡನಾಟದಲ್ಲಿರುವ ಪ್ರೀತಿಯ ಮಾಮ, ಅಣ್ಣ, ಅಂಕಲ್‌, ಸರ್‌ ಗಳು ಹೀಗೆ ಮುಕ್ಕಿ ತಿಂದರೆ ನಾವು ಬದುಕುತ್ತಿರುವುದು ಎಂತಹ ಸಮಾಜ? ಹಾಲುಗಲ್ಲದ ಹಸುಳೆಗಳನ್ನು ಕಂಡಾಗಲೂ ಉದ್ರೇಕಗೊಳ್ಳುವ ಮನುಷ್ಯರು ಇರುವ ಈ ಸಮಾಜದಲ್ಲಿ ಯಾವ ಕ್ರಾಂತಿ ಮಾಡಿದರೇನು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳುತ್ತಾರೆ, ಮನೆಗೆ ತಲುಪಿಸುತ್ತಾರೆ ಎಂದು ಆಟೋ ಅಂಕಲ್‌, ಬಸ್‌ ಡ್ರೈವರ್‌ ಮಾಮ, ಸೆಕ್ಯುರಿಟಿ ಅಣ್ಣ, ಸಾರ್‌ಗಳನ್ನು ನಂಬಿ ಹೆತ್ತವರೂ ತಮ್ಮ ಮಕ್ಕಳನ್ನು ಕಳಿಸಿಕೊಡುತ್ತಾರಲ್ಲಾ, ಅವರಿಗೇನು ಗೊತ್ತು ಅವರಲ್ಲೊಬ್ಬ ಶಿಶುಕಾಮಿ, ಅತ್ಯಾಚಾರಿ ಇರುತ್ತಾನೆಂದು? ಹಾಗೆ ಎಲ್ಲರನ್ನೂ ಅನುಮಾನದಿಂದ ನೋಡುತ್ತ ಜೀವನ ನಡೆಸಲು ಸಾಧ್ಯವೇ?

ಶಾಲೆಗಳಲ್ಲಿ ಶಿಕ್ಷಕರು, ಶಾಲಾ ವಾಹನಗಳ ಸಿಬ್ಬಂದಿಗಳಿಂದ ಪುಟ್ಟ ಹೆಣ್ಣುಮಕ್ಕಳು ಲೈಂಗಿಕ ಕಿರುಕುಳ ಅನುಭವಿಸುತ್ತಿರುವುದು ಹೊಸದೇನಲ್ಲ. ಕೆಲ ವರ್ಷಗಳ ಹಿಂದೆ ಇದೇ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಎಲ್‌ಕೆಜಿ ಓದುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರವಾಗಿರುವ ಸುದ್ದಿ ನಗರವನ್ನು ತಲ್ಲಣಗೊಳಿಸಿತ್ತು. ಅದಾದ ನಂತರ ಸರಣಿಯಂತೆ ಕೆಲವು ಅಂತಹದ್ದೇ ಸುದ್ದಿಗಳು ಶಾಲೆಯ ಪಡಸಾಲೆಯಿಂದ ಬಂದಿದ್ದವು. ಈಗಲೂ ಸುದ್ದಿಯಾಗುತ್ತಿರುವುದು ಬೆರಳೆಣಿಕೆಯಷ್ಟು, ಆಗದೇ ಇರುವುದು ಅದೆಷ್ಟಿದೆಯೋ.

ದಕ್ಷಿಣ ಕನ್ನಡ ವಿಟ್ಲದಲ್ಲಿ ಸತತ ಎರಡು ವರ್ಷಗಳಿಂದ ಒಬ್ಬರಾದ ಮೇಲೊಬ್ಬರಂತೆ ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ವಾರದ ಹಿಂದಷ್ಟೇ ಬೆಳಕಿಗೆ ಬಂದಿತ್ತು. ಕೇಸರಿ ಶಾಲು ಹಾಕಿಕೊಂಡು ಧರ್ಮರಕ್ಷಣೆ, ಹಿಂದೂ ಹೆಣ್ಣುಮಕ್ಕಳ ರಕ್ಷಣೆ, ಲವ್‌ ಜಿಹಾದ್‌ ಎಂದೆಲ್ಲ ಬೊಗಳೆ ಬಿಡುವ ಸಂಘಟನೆಗೆ ಸೇರಿದ ಹುಡುಗರು ತಾವೇ ಅತ್ಯಾಚಾರ ಪ್ರಕರಣದ ಆರೋಪಿಗಳು. ಸಹಪಾಠಿಗಳು, ಸ್ನೇಹಿತರು, ತಮಗಿಂತ ಚಿಕ್ಕವಯಸ್ಸಿನ ಹುಡುಗರು, ಅಪ್ರಾಪ್ತ ಹುಡುಗರಿಂದ ಹೀಗೆ ಎಗ್ಗಿಲ್ಲದೇ ಹೆಣ್ಣುಮಕ್ಕಳ ಮೇಲೆ ಎಲ್ಲೆಂದರಲ್ಲಿ, ಧರ್ಮ ಜಾತಿಗಳ ಗಡಿಗಳಿಲ್ಲದೇ ಲೈಂಗಿಕ ಕಿರುಕುಳ ನಡೆಯುತ್ತಿದೆ.

2012ರಲ್ಲಿ ಮನಮೋಹನ್‌ ಸಿಂಗ್‌ ನೇತೃತ್ವದ ಒಕ್ಕೂಟ ಸರ್ಕಾರ ಮಹತ್ವದ ಕಾಯ್ದೆಯೊಂದನ್ನು ಜಾರಿಗೆ ತಂದಿತ್ತು. POCSO (Protection of Children from Sexual Offences Act, 2012). ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸುವ ಮಾನವೀಯ ಕಾಳಜಿಯಿರುವ ಕಾಯ್ದೆಯದು. ಈ ಕಾಯ್ದೆಯಡಿ ನೂರಾರು ಅಪ್ರಾಪ್ತಮಕ್ಕಳ ಬಾಕರು ಜೈಲಿಗೆ ಹೋಗಿದ್ದಾರೆ. ಎಷ್ಟೇ ಪ್ರಭಾವಿಗಳಾಗಿದ್ದರೂ ಸೂಕ್ತ ಸಾಕ್ಷ್ಯಾಧಾರ ಇದ್ದರೆ ಅವರು ಜೈಲೂಟ ಮಾಡಲೇಬೇಕು. ಪೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆಯಾಗದಿರುವ ಪ್ರಕರಣ ಬಹಳ ಕಡಿಮೆ. ಕಳೆದ ವರ್ಷ ದೇಶದಲ್ಲೇ ಸುದ್ದಿಯಾದ ಚಿತ್ರದುರ್ಗದ ಮುರುಘಾಮಠದ ಪೀಠಾಧ್ಯಕ್ಷ ಶಿವಮೂರ್ತಿ ಸ್ವಾಮಿ ತಾನೇ ನಡೆಸುತ್ತಿದ್ದ ಶಿಕ್ಷಣ ಸಂಸ್ಥೆಯ ಬಡ ಅಪ್ರಾಪ್ತ ಬಾಲಕಿಯರನ್ನು ತನ್ನ ಕಾಮತೃಷೆಗೆ ಬಳಸಿಕೊಂಡ ಪ್ರಕರಣದಲ್ಲಿ ಬಂಧನವಾಗಿರುವುದು ಪೋಕ್ಸೊ ಕಾಯ್ದೆಯ ತಾಕತ್ತು. ದೇಶದಲ್ಲಿಯೇ ಬಲು ಪ್ರಭಾವಶಾಲಿ ಮಠದ ಸ್ವಾಮಿ ಆಗಿದ್ದರೂ ಬಂಧನವಾಗಿ ಹತ್ತು ತಿಂಗಳಾದರೂ ಆತನಿಗೆ ಜಾಮೀನು ಸಿಗದಿರುವುದು ಕಾಯ್ದೆಯ ಉರುಳು ಎಷ್ಟು ಬಿಗಿಯಾಗಿದೆ ಎಂಬುದಕ್ಕೆ ಸಾಕ್ಷಿ.

ಕಾಯ್ದೆಯೇನೋ ಅಪರಾಧಿಗಳಿಗೆ ಶಿಕ್ಷೆ ನೀಡುವಲ್ಲಿ ಯಶಸ್ವಿಯಾಗಿದೆ. ಆದರೆ ಏನೂ ಅರಿಯದ ಕಂದಮ್ಮಗಳ ಮೇಲಿನ ಕಾಮುಕರ ದಾಳಿ ಕಡಿಮೆಯಾಗಿದೆಯಾ? ಇಲ್ಲ. ಹಾಗೆ ನೋಡಿದರೆ ಯಾವ ಕಾಯ್ದೆಗಳು ಮನುಷ್ಯರಲ್ಲಿ ಭಯ ಹುಟ್ಟಿಸಿ ಅಪರಾಧ ಮಾಡದಂತೆ ತಡೆದಿದೆ? ವರದಕ್ಷಿಣೆ ಕಿರುಕುಳ, ಜಾತಿನಿಂದನೆ, ದಲಿತರ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ, ಅತ್ಯಾಚಾರ, ಕೊಲೆ… ಎಲ್ಲವನ್ನೂ ತಡೆಯಲು ಕಾಯ್ದೆಗಳಿವೆ. ಆದರೆ ಅದರ ಭಯ ಮಾತ್ರ ಯಾರಿಗೂ ಇಲ್ಲ.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕರಿಗೆ ಪೋಕ್ಸೊ ಕಾಯ್ದೆಯಡಿ ಶಿಕ್ಷೆ ಆಗಬಹುದು. ಆದರೆ ಮಕ್ಕಳ ಮೇಲಾಗುವ ಮಾನಸಿಕ ಆಘಾತ, ಹೆತ್ತವರು ನಿರಂತರ ಅನುಭವಿಸುವ ಸಂಕಟಕ್ಕೆ ಮದ್ದು ಯಾವುದಿದೆ. ತನ್ನ ದೈಹಿಕ ರಚನೆ, ಅಂಗಾಂಗಗಳ ಬಗ್ಗೆ, ಸೆಕ್ಸ್‌ ಬಗ್ಗೆ ಅರಿವೇ ಇಲ್ಲ ಮಕ್ಕಳ ಮೇಲೆ ಬಲಾತ್ಕಾರದ ಲೈಂಗಿಕ ಕ್ರಿಯೆಯಿಂದ ಆಗುವ ದೈಹಿಕ, ಮಾನಸಿಕ ಗಾಯವನ್ನು ಅಪರಾಧಿಯ ಶಿಕ್ಷೆ ಗುಣಪಡಿಸುವುದೇ?

ಕನಿಷ್ಠ ಶಾಲೆ, ಕಾಲೇಜು, ಕಚೇರಿ, ದುಡಿಯುವ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ಕಿರುಕುಳ ನಡೆಯದಂತೆ ನೋಡಿಕೊಳ್ಳುವುದು ಅಂತಹ ಸವಾಲಿನ ಕೆಲಸವೇನಲ್ಲ. ಆದರೆ, ಶಾಲಾ ಮುಖ್ಯಸ್ಥರೇ ಅಂತಹ ಕಾಮುಕರಾದಾಗ ಅವರ ಮೇಲೆ ಕಣ್ಣಿಡುವವರು ಯಾರು. ಇಂತಹ ಪ್ರಕರಣಗಳ ತುರ್ತು ವಿಚಾರಣೆ ನಡೆದು ಅಪರಾಧಿಗಳಿಗೆ ಕಠಿಣ ಶಿಕ್ಷೆಯಾದರೆ ಸ್ವಲ್ಪ ಮಟ್ಟಿಗೆ ಕೆಲವರಿಗಾದರೂ ಕಾನೂನಿನ ಭಯ ಹುಟ್ಟಬಹುದು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....