‘ಈ ದಿನ’ ಸಂಪಾದಕೀಯ | ಮಾನ್ಯ ಸಭಾಧ್ಯಕ್ಷ ಖಾದರ್ ಅವರು ನೂತನ ಶಾಸಕರಿಗೆ ಯಾವ ದಿಕ್ಕು ತೋರಿಸುತ್ತಿದ್ದಾರೆ?

Date:

ಅಷ್ಟಕ್ಕೂ, ಇಂತಹ ಆಧ್ಯಾತ್ಮಿಕ ವ್ಯಕ್ತಿಗಳ ಪ್ರವಚನಗಳು ಈ ತರಬೇತಿ ಕಾರ್ಯಕ್ರಮದಿಂದಾಚೆಗೆ ಶಾಸಕರಿಗೆ ಸಿಗುವುದೇ ಇಲ್ಲವೇ? ಒಂದು ವೇಳೆ, ತಮಗೆ ಅಂತಹ ಪ್ರವಚನಗಳು ಅವಶ್ಯ ಎನಿಸಿದರೆ ವೈಯಕ್ತಿಕ ನೆಲೆಯಲ್ಲಿ ಅದನ್ನು ಪಡೆದುಕೊಳ್ಳಲು ಶಾಸಕರು ಸ್ವತಂತ್ರರಲ್ಲವೇ?

ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 70 ಮಂದಿ ಅಭ್ಯರ್ಥಿಗಳು ನೂತನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಧಿವೇಶನ, ಬಜೆಟ್, ನೀತಿ-ನಿಯಮಾವಳಿಗಳು, ಕ್ಷೇತ್ರದ ಅಭಿವೃದ್ಧಿ, ಅನುದಾನ ಸದ್ಬಳಕೆ, ಶಾಸಕರ ಹಕ್ಕುಗಳು… ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ನೂತನ ಶಾಸಕರಿಗೆ ತರಬೇತಿ ಕೊಡುವುದು ವಾಡಿಕೆ. ಅದರಂತೆ, ಈ ಬಾರಿ ಜೂನ್ 26ರಿಂದ ಮೂರು ದಿನಗಳ ಕಾಲ ರಾಜ್ಯದ ಹಿರಿಯ ರಾಜಕಾರಣಿಗಳಿಂದ ತರಬೇತಿ ಕಾರ್ಯಕ್ರಮ ನಿಗದಿಯಾಗಿದೆ. ಆದರೆ, ಅದೇ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ವ್ಯಕ್ತಿಗಳಿಂದ ‘ವಿಶೇಷ ತರಗತಿ’ಗಳನ್ನೂ ಆಯೋಜಿಸಲಾಗಿದೆ. ಈ ವಿಶೇಷ ತರಗತಿಗಳ ಕುರಿತು ಸಾರ್ವಜನಿಕ ವಲಯದಿಂದ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ, ವಿಧಾನಸಭಾ ಅಧ್ಯಕ್ಷ ಯು ಟಿ ಖಾದರ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಖಂಡಿತ ಇದು ಒಳ್ಳೆಯ ಬೆಳವಣಿಗೆಯಲ್ಲ.

2016ರಲ್ಲಿ ಹರ್ಯಾಣ ವಿಧಾನಸಭೆಯಲ್ಲಿ ತರುಣ್ ಸಾಗರ್ ಅವರ ಭಾಷಣ ಏರ್ಪಾಡಾದಾಗ, ಇತ್ತೀಚೆಗಷ್ಟೇ ನೂತನ ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾಧು-ಸಂತರ ದಂಡು ನೆರೆದಾಗ, ತಮ್ಮ ಪಕ್ಷ ಹೇಗೆ ಪ್ರತಿಕ್ರಿಯಿಸಿತ್ತು ಎಂಬುದನ್ನು ರಾಜ್ಯದ ಕಾಂಗ್ರೆಸ್ ನಾಯಕರು ಒಮ್ಮೆ ನೆನಪು ಮಾಡಿಕೊಳ್ಳಬೇಕಿದೆ. “ಅದು ಪಕ್ಷದ ಮಾತಾಯಿತು, ಇದು ಅಧಿಕೃತವಾಗಿ ಸರ್ಕಾರದ ಕಾರ್ಯಕ್ರಮ. ಹಾಗಾಗಿ ಅದಕ್ಕೂ ಇದಕ್ಕೂ ಸಂಬಂಧವಿಲ್ಲ,” ಎಂಬ ವಾದವನ್ನು ಮಾನ್ಯ ಸಭಾಧ್ಯಕ್ಷರು ಮಂಡಿಸಬಹುದು. ಆದರೆ, ಭಾರತೀಯ ಸಂವಿಧಾನ ಹೇಳುವ ಮೌಲ್ಯಗಳಿಗೂ ಮತ್ತು ಆಧ್ಯಾತ್ಮಿಕ ವ್ಯಕ್ತಿಗಳ ಭಾಷಣಗಳಿಗೂ ಎತ್ತಣ ಸಂಬಂಧವಿದೆ ಎಂದು ಹೇಳಬಹುದೇ? ಆಧ್ಯಾತ್ಮಿಕ ವ್ಯಕ್ತಿಗಳಿಂದ ಶಾಸಕರಿಗೆ ಪ್ರವಚನ ಕೊಡಿಸುವ ಕಾರ್ಯಕ್ರಮವನ್ನು ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಸಭಾಧ್ಯಕ್ಷರು ಇಳಿಯುತ್ತಾರೆಂದರೆ, ತಾವು ಅಲಂಕರಿಸಿರುವುದು ಸಾಂವಿಧಾನಿಕ ಹುದ್ದೆ ಎಂಬುದನ್ನು ಅವರು ಮರೆತಿದ್ದಾರೆ ಎಂದೇ ಅರ್ಥ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸಂಪಾದಕೀಯ ಓದಿದ್ದೀರಾ?: ಈ ದಿನ ಸಂಪಾದಕೀಯ | ಸರ್ಕಾರಿ ಆಸ್ಪತ್ರೆಗಳು ಜನಸ್ನೇಹಿಯಾಗುವುದು ಯಾವಾಗ?

ಹರ್ಯಾಣ ವಿಧಾನಸಭೆಗೆ ಬಂದಿದ್ದ ತರುಣ್ ಸಾಗರ್ ಎಂಬ ಆಧ್ಯಾತ್ಮಿಕ ವ್ಯಕ್ತಿ, “ಧರ್ಮ ಎಂಬುದು ಗಂಡನಿದ್ದಂತೆ, ರಾಜಕಾರಣ ಎಂಬುದು ಹೆಂಡತಿ. ಗಂಡನ ನೀತಿಗಳನ್ನು ಹೆಂಡತಿ ಒಪ್ಪಿ ನಡೆಯಬೇಕು,” ಎಂಬ ಮಹಾನ್ ಹಿತವಚನವನ್ನು ಶಾಸಕರ ಕಿವಿಗೆ ತುಂಬಿದ್ದರು. ಆ ಸಂದರ್ಭದಲ್ಲಿ, ಭಾರತೀಯ ಸಂವಿಧಾನದ ಮೌಲ್ಯಗಳನ್ನು ನಿಜಾರ್ಥದಲ್ಲಿ ಗೌರವಿಸುವ ಕೆಲವರಷ್ಟೇ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಬಹುತೇಕ ಮಂದಿಗೆ ತರುಣ್ ಸಾಗರ್ ಅವರ ಮಾತು ನಿಜವೆನ್ನಿಸಿದ್ದು ಅಚ್ಚರಿಯೇನಲ್ಲ. ಏಕೆಂದರೆ, ಆಧ್ಯಾತ್ಮಿಕ ವ್ಯಕ್ತಿಗಳನ್ನು ಹುಡುಕಿಕೊಂಡು ಹೋಗಿ ಕಾಲಿಗೆರಗಿ ಬರುವ, ಅವರು ಹೇಳಿದ್ದನ್ನೆಲ್ಲ ಚಾಚೂ ತಪ್ಪದೆ ಪಾಲಿಸುವ ದುರ್ಬಲ ಮನಸ್ಥಿತಿಯ ಜನಪ್ರತಿನಿಧಿಗಳಿರುವ ದೇಶ ನಮ್ಮದು. ಹಾಗೆ ಕಾಲಿಗೆರಗುವ ಮುನ್ನ ತಾನು ಜನಪ್ರತಿನಿಧಿ, ಸಂವಿಧಾನ ಮಾತ್ರವೇ ತಾನು ಪಾಲಿಸಬೇಕಿರುವ ಧರ್ಮ ಎಂಬ ಯಾವುದೇ ಎಚ್ಚರವೂ ರಾಜಕೀಯ ನಾಯಕರುಗಳಿಗೆ ಇಲ್ಲದಿರುವುದು ದುರಂತ. ಆಧ್ಯಾತ್ಮಿಕ ವ್ಯಕ್ತಿಗಳಿಂದ ಶಾಸಕರಿಗೆ ಪ್ರವಚನ ಏರ್ಪಡಿಸುವ ಮೂಲಕ ಮಾನ್ಯ ಸಭಾಧ್ಯಕ್ಷರು ಕೂಡ, ಧಾರ್ಮಿಕ ಮತ್ತು ಆಧ್ಯಾತ್ಮಿಕ ವ್ಯಕ್ತಿಗಳ ಮಾತನ್ನು ಜನಪ್ರತಿನಿಧಿಗಳು ಆಲಿಸಬೇಕು ಮತ್ತು ಪಾಲಿಸಬೇಕು ಎಂಬ ಸಂದೇಶ ಸಾರಲು ಮುಂದಾಗಿರುವಂತಿದೆ. ಮುಖ್ಯಮಂತ್ರಿ ಯಾರಾಗಬೇಕು, ಉಪ ಮುಖ್ಯಮಂತ್ರಿ ಯಾರಾಗಬೇಕು, ತಮ್ಮ ಜಾತಿಯವ ಮಂತ್ರಿಯಾಗಬೇಕು ಎಂದೆಲ್ಲ ಆಧ್ಯಾತ್ಮಿಕ ವ್ಯಕ್ತಿಗಳು ವಶೀಲಿಬಾಜಿ ಮಾಡುವ ಮಟ್ಟಕ್ಕೆ ರಾಜಕಾರಣ ಕಲುಷಿತಗೊಂಡಾಗಿದೆ. ಈಗ ಆಯೋಜಿಸಿರುವ ‘ಪ್ರವಚನ’ ಕಾರ್ಯಕ್ರಮ ಇದರ ಮುಂದುವರಿದ ಭಾಗವಷ್ಟೇ. ಅಷ್ಟಕ್ಕೂ, ಇಂತಹ ಆಧ್ಯಾತ್ಮಿಕ ವ್ಯಕ್ತಿಗಳ ಪ್ರವಚನಗಳು ಈ ತರಬೇತಿ ಕಾರ್ಯಕ್ರಮದಿಂದಾಚೆಗೆ ಶಾಸಕರಿಗೆ ಸಿಗುವುದೇ ಇಲ್ಲವೇ? ಒಂದು ವೇಳೆ, ತಮಗೆ ಅಂತಹ ಪ್ರವಚನಗಳು ಅವಶ್ಯ ಎನಿಸಿದರೆ ವೈಯಕ್ತಿಕ ನೆಲೆಯಲ್ಲಿ ಅದನ್ನು ಪಡೆದುಕೊಳ್ಳಲು ಶಾಸಕರು ಸ್ವತಂತ್ರರಲ್ಲವೇ?

ಕಾಲ ಮಿಂಚಿಲ್ಲ… ಮಾನ್ಯ ಸಭಾಧ್ಯಕ್ಷರು ತಮ್ಮ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕು. ಈ ನೆಲದಲ್ಲಿ ಸಂವಿಧಾನವೇ ಅಗ್ರಗಣ್ಯ, ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನರ ಮಾತನ್ನಷ್ಟೇ ಆಲಿಸಬೇಕು ಮತ್ತು ಸಂವಿಧಾನದ ಮೌಲ್ಯಗಳನ್ನಷ್ಟೇ ಪಾಲಿಸಿದರೆ ಸಾಕು ಎಂಬುದನ್ನು ನೂತನ ಶಾಸಕರಿಗೆ ಮನದಟ್ಟು ಮಾಡಿಕೊಡಬೇಕು. ಇದು ಸಾಧ್ಯವಾಗದಿದ್ದರೆ, ಕೆಟ್ಟದೊಂದು ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ.

ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....