ಈ ದಿನ ಸಂಪಾದಕೀಯ | ಪತ್ರಿಕಾ ಸ್ವಾತಂತ್ರ್ಯವನ್ನು ನೇಣಿಗೇರಿಸಲು ಮೋದಿ ಸರ್ಕಾರ ಹೊಸೆಯುತ್ತಿರುವ ಹೊಸ ಕುಣಿಕೆ ‘ಬ್ರಾಡ್‌ಕಾಸ್ಟ್ ಬಿಲ್’

Date:

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿರುವುದರಲ್ಲಿ ಸ್ವತಂತ್ರ ಪತ್ರಕರ್ತರ ಹನಿ ಪಾಲೂ ಇದೆ. ಅದೀಗ ಮೋದಿ ಬಳಗಕ್ಕೆ ದುಃಸ್ವಪ್ನವಾಗಿ ಕಾಡುತ್ತಿರುವ ಸಂಗತಿ. ಹೀಗಾಗಿ ‘ಪ್ರಸಾರ ಸೇವೆಗಳ (ನಿಯಂತ್ರಣ) ಕಾಯ್ದೆ’ ತಂದು ಸ್ವತಂತ್ರ ಪತ್ರಿಕೋದ್ಯಮಕ್ಕೆ ಮರಣ ಶಾಸನ ಬರೆಯಲು ಹೊರಟಂತಿದೆ.

ವಿವಾದಿತ ʼಪ್ರಸಾರ ಸೇವೆಗಳ (ನಿಯಂತ್ರಣ) ಕಾಯ್ದೆ, 2023′ ಜಾರಿಗೆ ತರಲು ಮೋದಿ ಸರ್ಕಾರ ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿಯಿದೆ. ಮುಚ್ಚಿದ ಕದಗಳ ಹಿಂದೆ ಆಯ್ದ ಕೆಲವರೊಂದಿಗೆ ಮಾತ್ರ ರಹಸ್ಯಮಯ ಸಮಾಲೋಚನೆ ನಡೆಸುತ್ತಿರುವ ನಡೆ ಹಲವು ಗುಮಾನಿಗಳಿಗೆ ಎಡೆ ಮಾಡಿದೆ. ಕಾಯ್ದೆಯ ಕರಡು ಮಸೂದೆಯ ಆಯ್ದ ಕೆಲ ಭಾಗಗಳನ್ನು ಕೆಲವೇ ಕೆಲವು ಮಾಧ್ಯಮ ಸಂಸ್ಥೆಗಳ ಸಂಪಾದಕರು, ಮುಖ್ಯಸ್ಥರಿಗೆ ನೀಡಿ ಅಭಿಪ್ರಾಯ ಕೇಳಲಾಗಿತ್ತು ಎಂಬ ಆರೋಪ ಕಳೆದ ವರ್ಷ ಕೇಳಿ ಬಂದಿತ್ತು. ಈಗ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಗುಪ್ತ ಸಭೆ ನಡೆಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದು ತಮ್ಮ ತಾಳಕ್ಕೆ ಸರಿಯಾಗಿ ಕುಣಿಯದ, ಅಧಿಕಾರಶಾಹಿಯ ವಿರುದ್ಧವಿರುವ ಮೀಡಿಯಾಗಳ ಕತ್ತು ಹಿಸುಕುವ ವ್ಯವಸ್ಥಿತ ಹುನ್ನಾರ.

ದೇಶದ ನಾಗರಿಕರ ಮೇಲೆ ಪ್ರಭಾವ ಬೀರುವ ಯಾವುದೇ ಕಾನೂನು ರೂಪಿಸುವ ಮುನ್ನ ಸಾರ್ವಜನಿಕರ ಅಭಿಪ್ರಾಯ ಕೇಳುವುದು ಬಹಳ ಮುಖ್ಯ ಎಂದು 2014ರ ಶಾಸನ ಪೂರ್ವ ಸಮಾಲೋಚನಾ ನೀತಿ (Pre-Legislative Consultation Policy) ಹೇಳುತ್ತದೆ. ಇದು ಸರ್ಕಾರವೇ ಒಪ್ಪಿಕೊಂಡಿರುವ ನೀತಿ. ಆದರೆ, ಪ್ರಸಾರ ಸೇವೆಗಳ ನಿಯಂತ್ರಣ ಕಾಯ್ದೆಯ ಕರಡನ್ನು ಮೋದಿ ಸರ್ಕಾರ ಸಾರ್ವಜನಿಕಗೊಳಿಸದೇ ಆಯ್ದ ಕೆಲವು ಮಾಧ್ಯಮ ಸ್ನೇಹಿತರಿಗೆ ಮಾತ್ರ ನೀಡಿ ಕಾಯ್ದೆ ಜಾರಿಗೆ ತಯಾರಿ ನಡೆಸಿರುವುದು ಮಾಧ್ಯಮ ಸ್ವಾತಂತ್ರ್ಯದ ಕತ್ತು ಹಿಸುಕುವ ಎಂದಿನ ಚಾಳಿ ಮುಂದುವರಿಕೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರಧಾನಿ ನರೇಂದ್ರ ಮೋದಿ ತಮ್ಮ ಹತ್ತು ವರ್ಷಗಳ ಏಕಚಕ್ರಾಧಿಪತ್ಯದಲ್ಲಿ ಮಾಧ್ಯಮಗಳ ಮೇಲೆ ಉಕ್ಕಿನ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಧಿಕಾರ ಸಿಕ್ಕ ತಕ್ಷಣ ಮಾಡಿದ್ದೇ ಮಾಧ್ಯಮಗಳನ್ನು ಒಲಿಸಿಕೊಳ್ಳುವ ಕೆಲಸ. ಪ್ರಮುಖ ಮಾಧ್ಯಮ ಸಂಸ್ಥೆಗಳನ್ನು ಸ್ನೇಹಿತ ಉದ್ಯಮಿಗಳಾದ ಅಂಬಾನಿ, ಅದಾನಿ ಖರೀದಿಸುವಂತೆ ಮಾಡಿದ್ದಾರೆ. ದೇಶದ ಪ್ರಮುಖ ಸುದ್ದಿ ಮಾಧ್ಯಮಗಳು ಈಗ ಈ ಇಬ್ಬರ ಬಿಗಿ ಮುಷ್ಟಿಯಲ್ಲಿವೆ. ಮೋದಿ ಭಜನೆಯಷ್ಟೇ ಅಲ್ಲಿನ ಪತ್ರಕರ್ತರ ಕೆಲಸ. ಸುಳ್ಳು ಸುದ್ದಿ ಹಬ್ಬಿಸುವುದು, ಕೋಮು ಗಲಭೆಗಳಿಗೆ ಪ್ರಚೋದನೆ ನೀಡುವುದು ನಿತ್ಯದ ಕಾಯಕ.

ಆದರೆ, ಸರ್ಕಾರದ ಈ ನಡವಳಿಕೆಯೇ ಸಾವಿರಾರು ಸ್ವತಂತ್ರ ಮಾಧ್ಯಮಗಳ ಹುಟ್ಟಿಗೆ ಕಾರಣವಾಗಿದೆ. ಈ ಎರಡು -ಮೂರು ವರ್ಷಗಳಲ್ಲಿ ಭಕ್ತರ ‘ವಿಶ್ವಗುರು’ ಮೋದಿಯವರ ಸುಳ್ಳು, ಭಂಡತನ, ದಮನಕಾರಿ ನೀತಿ, ದಿವಾಳಿಯತ್ತ ಸಾಗುತ್ತಿರುವ ಆರ್ಥಿಕತೆ, ಭ್ರಷ್ಟಾಚಾರ, ಮೋದಿ ಅಲೆಯ ನಿಜಬಣ್ಣ ಬಯಲು ಮಾಡಿದ್ದು ನೂರಾರು ಯೂಟ್ಯೂಬರ್‌ಗಳು, ಫ್ಯಾಕ್ಟ್‌ ಚೆಕರ್‌ಗಳು, ತನಿಖಾ ವರದಿಗಳನ್ನು ಮಾಡುತ್ತಿರುವ ರವೀಶ್‌ ಕುಮಾರ್‌ ತರಹದ ಪ್ರಾಮಾಣಿಕ ಪತ್ರಕರ್ತರು. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದರಲ್ಲಿ ಸ್ವತಂತ್ರ ಪತ್ರಕರ್ತರ ಹನಿ ಪಾಲೂ ಇದೆ. ಅದೀಗ ಮೋದಿ ಬಳಗಕ್ಕೆ ದುಃಸ್ವಪ್ನವಾಗಿ ಕಾಡುತ್ತಿರುವ ಸಂಗತಿ. ಹೀಗಾಗಿ ಪ್ರಸಾರ ಸೇವೆಗಳ ನಿಯಂತ್ರಣ ಕಾಯ್ದೆ ತಂದು ಸ್ವತಂತ್ರ ಪತ್ರಿಕೋದ್ಯಮಕ್ಕೆ ಮರಣ ಶಾಸನ ಬರೆಯಲು ಹೊರಟಂತಿದೆ.

ಮಾಧ್ಯಮಗಳಿಗೆ ಹೆದರುವಷ್ಟು ಮತ್ಯಾರಿಗೂ ಮೋದಿ ಎಂಬ ಪೊಳ್ಳು ಮನುಷ್ಯ ಹೆದರುತ್ತಿಲ್ಲ. ಅದಕ್ಕಾಗಿಯೇ ಹತ್ತು ವರ್ಷಗಳಲ್ಲಿ ಒಂದೇ ಒಂದು ಪ್ರೆಸ್‌ಮೀಟ್‌ ಮಾಡಿಲ್ಲ. ವಿದೇಶಕ್ಕೆ ಹೋದಾಗಲೂ, ವಿದೇಶಿ ನಾಯಕರು ಭಾರತಕ್ಕೆ ಬಂದಾಗಲೂ ಜಂಟಿ ಪತ್ರಿಕಾಗೋಷ್ಠಿಗೆ ಮೋದಿ ಸಿದ್ದರಿಲ್ಲ. ದೇಶದಲ್ಲಿ ನಡೆಯಬಾರದ ದುರಂತ ನಡೆದಾಗ, ಹೊಸ ಯೋಜನೆ ಘೋಷಿಸುವಾಗ, ದೇಶಕ್ಕೇ ಬೀಗ ಹಾಕುವ ಲಾಕ್‌ಡೌನ್‌ ನಿರ್ಧಾರ ಪ್ರಕಟಿಸುವಾಗ, ನೋಟ್‌ ಬ್ಯಾನ್‌ ಮಾಡುವಾಗ ಮೋದಿ ಪತ್ರಿಕಾಗೋಷ್ಠಿ ಕರೆಯುವ ತಾಕತ್ತು ಪ್ರದರ್ಶಿಸಿಲ್ಲ. ಪುಲ್ವಾಮಾ ದಾಳಿಯಾದಾಗಲೂ ಮಾಧ್ಯಮಗಳ ಮುಂದೆ ಬರುವ ಧೈರ್ಯ ತೋರಿಲ್ಲ. ಚುನಾವಣೆ ಘೋಷಣೆಯಾದಾಗ, ಗೆದ್ದು ಬೀಗಿದಾಗ, ಹೊಸ ಸಂಪುಟ ರಚನೆಯಾದಾಗ ಪತ್ರಿಕಾಗೋಷ್ಠಿ ನಡೆಸುವ ಸೌಜನ್ಯ ತೋರಿಲ್ಲ.

ಚುನಾವಣಾ ಸಭೆಗಳಲ್ಲಿ ಟೆಲಿಪ್ರಾಂಪ್ಟರ್‌ ನೋಡಿ ಗಂಟೆಗಟ್ಟಲೆ ಭಾಷಣ ಮಾಡಿ, ವಿಷ ಕಾರುವ ಪ್ರಧಾನಿಗೆ ಮಾಧ್ಯಮಗಳ ಮೇಲೆ ಯಾಕಿಷ್ಟು ಸಿಟ್ಟು, ಭಯ? ಚುನಾವಣೆಯ ಸಮಯದಲ್ಲಿ ಆಯ್ದ ಗೋದಿ ಮಾಧ್ಯಮಗಳ ಪತ್ರಕರ್ತರಿಗೆ ಸ್ಕ್ರಿಪ್ಟೆಡ್‌ ಸಂದರ್ಶನ ನೀಡುವ ಮೋದಿಯವರು ಈಗ ಯಾರನ್ನು ಮಟ್ಟ ಹಾಕಲು ಹೊಂಚು ಹಾಕುತ್ತಿದ್ದಾರೆ? ಬಹುಸಂಸ್ಕೃತಿಯ ಮೇಲಿನ ದಾಳಿ, ದೇಶದ ಮೂಲ ಸತ್ವವಾದ ಕೋಮು ಸೌಹಾರ್ದತೆಯ ಮೇಲಿನ ದಾಳಿಯನ್ನು ವಿರೋಧಿಸುತ್ತಾ, ದೀನ ದಲಿತರ ಧ್ವನಿಯಾಗಿರುವ ಮಾಧ್ಯಮಗಳ ಸದ್ದಡಗಿಸುವ ಈ ನಡೆ ಮೋದಿ ಸರ್ಕಾರಕ್ಕೆ ದುಬಾರಿಯಾದೀತು.

ಈ ಕರಡು ಮಸೂದೆಯ ಬಗ್ಗೆ ಈಗಾಗಲೇ ಅಪಸ್ವರ ಎದ್ದಿದೆ. ಸರ್ಕಾರ ತನ್ನ ವ್ಯಾಪ್ತಿಯನ್ನು ಮೀರಿ ಮಾಧ್ಯಮಗಳನ್ನು ನಿಯಂತ್ರಿಸಲು ಯತ್ನಿಸುತ್ತಿದೆ. ಇದರಿಂದ ಸುದ್ದಿಮಾಧ್ಯಮ ಮಾತ್ರವಲ್ಲ ಮನರಂಜನಾ ವಾಹಿನಿಗಳ ಮುಕ್ತ ಅಭಿವ್ಯಕ್ತಿಗೂ ತಡೆಯೊಡ್ಡುತ್ತದೆ. ಅರ್ಥಪೂರ್ಣ ಸಾರ್ವಜನಿಕ ಸಮಾಲೋಚನೆ ನಡೆಸದೇ ಸರ್ಕಾರದ ಪ್ರತಿನಿಧಿಗಳು ಕಾನೂನು ರೂಪಿಸುವುದು ತಮ್ಮ ಹಿತಾಸಕ್ತಿ, ಧೋರಣೆಯನ್ನು ಹೇರುವ ತಂತ್ರವಾಗಿದೆ. ಮಾಧ್ಯಮಗಳ ಮೇಲೆ ಕಾನೂನಿನ ಕಡಿವಾಣ ಹಾಕುವುದರಿಂದ ದೊಡ್ಡ ಕಾರ್ಪೊರೇಟ್‌ ಕುಳಗಳಿಗೆ ಸಮಸ್ಯೆಯಾಗದು. ಆದರೆ, ಅದು ಸಣ್ಣಪುಟ್ಟ ಮಾಧ್ಯಮಗಳು, ಸಾಮಾಜಿಕ ಮಾಧ್ಯಮ ಬಳಕೆದಾರರು, ಸ್ವತಂತ್ರ ಪತ್ರಕರ್ತರಿಗೆ ಮರಣ ಶಾಸನವಾಗಲಿದೆ ಎಂಬ ಆತಂಕ ಉಂಟಾಗಿದೆ.

ಬೃಹತ್ ಕಾರ್ಪೊರೇಟ್ ಮಾಧ್ಯಮಗಳ ಹಿತಾಸಕ್ತಿಗಳು ಬೇರೆ, ಸಣ್ಣ ಜನಪರ ಮಾಧ್ಯಮಗಳ‌ ಕಾಳಜಿಗಳೇ ಬೇರೆ. ಎರಡನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಅವಿವೇಕ ಮತ್ತು ಅನ್ಯಾಯದ, ಜನವಿರೋಧಿ ನಡೆ. ಜನಪರ ಮಾಧ್ಯಮಗಳ ಬಾಯಿ ಬಡಿಯುವ ಸರ್ವಾಧಿಕಾರಿ ನಡೆ. ಸಣ್ಣ ಮತ್ತು ಜನಪರ ಮಾಧ್ಯಮಗಳ ಅಭಿಮತವನ್ನೂ ಸರ್ಕಾರ ಆಹ್ವಾನಿಸಬೇಕು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....