ಈ ದಿನ ಸಂಪಾದಕೀಯ | ಸೋಲಿನ ಭಯದಿಂದ ಸಿನಿಮಾ ತಾರೆಯರ ಹಿಂದೆ ಬಿದ್ದಿದೆಯೇ ಬಿಜೆಪಿ?

Date:

ನಟ, ಕ್ರೀಡಾಕಾರ, ರಾಜಕಾರಣಿ ಯಾರೇ ಆಗಿರಲಿ; ಸಾರ್ವಜನಿಕ ಜೀವನದಲ್ಲಿ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೆಲವು ನಿಷ್ಠುರ ನಿಲುವುಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅವರ ವೈಯಕ್ತಿಕ ಬದುಕು ಮತ್ತು ರಾಜಕೀಯ ನಡೆಗಳ ನಡುವೆ ಸ್ಪಷ್ಟ ಹಾಗೂ ಖಚಿತ ಗೆರೆ ಇರಬೇಕಾಗುತ್ತದೆ.

‘ಕಿಚ್ಚ’ ಎಂದು ಚಿತ್ರ ಪ್ರೇಮಿಗಳ ನಡುವೆ ಖ್ಯಾತರಾಗಿರುವ ನಟ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಘೋಷಿಸಿದ್ದಾರೆ. ‘ನನ್ನ ಬೆಂಬಲ ಪಕ್ಷಕ್ಕಲ್ಲ, ವ್ಯಕ್ತಿಗೆ’ ಎಂದು ಸುದೀಪ್ ವಿಚಿತ್ರ ಸಮಜಾಯಿಷಿ ನೀಡಿದರೆ, ‘ನಾನು ಹೇಳಿದ ಕಡೆ ಸುದೀಪ್ ಪ್ರಚಾರ ಮಾಡುತ್ತಾರೆ’ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ವಾಲ್ಮೀಕಿ ಸಮುದಾಯದವರಾದ ಸುದೀಪ್ ಮೂಲಕ ಆ ಸಮುದಾಯದ ಮತ ಗಳಿಸುವ ತಂತ್ರ ಬಿಜೆಪಿಯ ನಡೆಯ ಹಿಂದಿದೆ. ಹಾಗೆಯೇ ತಮ್ಮ ಸಿನಿಮಾಗಳ ಮೂಲಕ ಅವರು ಗಳಿಸಿರುವ ಅಭಿಮಾನಿಗಳನ್ನು ತಮ್ಮ ಪಕ್ಷದೆಡೆಗೆ ಸೆಳೆದುಕೊಳ್ಳುವುದು ಕೇಸರಿ ಪಕ್ಷದ ಕಾರ್ಯತಂತ್ರವಾಗಿದೆ.

‘ನನಗೆ ಹಿಂದೆ ಬೊಮ್ಮಾಯಿ ಅವರು ಸಹಾಯ ಮಾಡಿದ್ದಾರೆ. ಹಾಗಾಗಿ ನಾನು ಇಂದು ಅವರ ಪರ ನಿಂತಿದ್ದೇನೆ’ ಎಂದು ಬಿಜೆಪಿ ತಾರಾ ಪ್ರಚಾರಕರಾದ ಸುದೀಪ್ ಹೇಳಿದ್ದಾರೆ. ಸುದೀಪ್ ಅವರಿಗೆ ಬೊಮ್ಮಾಯಿ ಅವರು ಮಾಡಿರುವ ಸಹಾಯ ವೈಯಕ್ತಿಕವಾದದ್ದು. ಆದರೆ, ಸುದೀಪ್ ಚುನಾವಣಾ ಪ್ರಚಾರ ಮಾಡಲು ಹೊರಟಿರುವುದು ಕೇವಲ ಬೊಮ್ಮಾಯಿ ಪರ ಅಲ್ಲ; ಅವರ ಬಿಜೆಪಿ ಪರ. ಅದು ಬೊಮ್ಮಾಯಿ ಅವರ ವೈಯಕ್ತಿಕ ವಿಚಾರವಾಗಿ ಉಳಿಯುವುದಿಲ್ಲ. ಅದು ಒಂದು ನಾಡಿನ ಭವಿಷ್ಯದ ಪ್ರಶ್ನೆ. ಐದು ವರ್ಷಗಳ ಕಾಲ ಯಾರು ಆಡಳಿತ ನಡೆಸಬೇಕು ಎಂಬುದನ್ನು ನಿರ್ಧರಿಸುವ; ನೀತಿ ನಿರೂಪಣೆ, ಅಭಿವೃದ್ಧಿ ಕೆಲಸಗಳ ಮೂಲಕ ಜನರ ಬದುಕನ್ನು ಹಸನುಗೊಳಿಸುವ ಮಹತ್ತರ ಜವಾಬ್ದಾರಿ ಹೊರಬೇಕಾದವರನ್ನು ಆರಿಸುವ ಪ್ರಕ್ರಿಯೆ.

ನಟ, ಕ್ರೀಡಾಕಾರ, ರಾಜಕಾರಣಿ ಯಾರೇ ಆಗಿರಲಿ; ಸಾರ್ವಜನಿಕ ಜೀವನದಲ್ಲಿ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೆಲವು ನಿಷ್ಠುರ ನಿಲುವುಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅವರ ವೈಯಕ್ತಿಕ ಬದುಕು ಮತ್ತು ರಾಜಕೀಯ ನಡೆಗಳ ನಡುವೆ ಸ್ಪಷ್ಟ ಹಾಗೂ ಖಚಿತ ಗೆರೆ ಇರಬೇಕಾಗುತ್ತದೆ. ಬುದ್ಧಿವಂತರಂತೆ ಮಾತನಾಡುವ ಸುದೀಪ್‌ಗೆ ಇದು ತಿಳಿಯದಿರುವುದು ವಿಚಿತ್ರವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವರನಟ ರಾಜ್‌ಕುಮಾರ್ ಅವರಿಗೆ ಸಾರೇಕೊಪ್ಪ ಬಂಗಾರಪ್ಪ ಬೀಗರಾಗಿದ್ದರು. ಆದರೆ, ರಾಜ್‌ಕುಮಾರ್ ಎಂದೂ ಸಂಬಂಧದ ನೆಪ ಹೇಳಿಕೊಂಡು ಬಂಗಾರಪ್ಪ ಅವರ ಪರವಾಗಲಿ, ಅವರ ಪಕ್ಷದ ಪರವಾಗಲಿ ಚುನಾವಣಾ ಪ್ರಚಾರಕ್ಕೆ ಬರಲಿಲ್ಲ. ನಾಳೆ ಅವರ ಪಕ್ಷ ಏನೇ ತಪ್ಪು ಮಾಡಿದರೂ ಅದಕ್ಕೆ ತಾನೂ ಜವಾಬ್ದಾರನಾಗಬೇಕಾಗುತ್ತದೆ ಎನ್ನುವ ನೈತಿಕ ಎಚ್ಚರ ರಾಜ್‌ಕುಮಾರ್ ಅವರಲ್ಲಿತ್ತು. ಅದೇ ಅವರನ್ನು ರಾಜಕಾರಣಕ್ಕೆ ಬರದಂತೆ ತಡೆದಿತ್ತು. ಅದರ ಬಗ್ಗೆ ರಾಜ್‌ಕುಮಾರ್ ತಮ್ಮ ಎಂದಿನ ವಿನಯದಿಂದ ‘ರಾಜಕಾರಣ ನನಗೆ ಅರ್ಥವಾಗುವುದಿಲ್ಲ; ಅದು ನನ್ನ ಕ್ಷೇತ್ರವಲ್ಲ’ ಎಂದಿದ್ದರು. ಕೇವಲ ನಾಲ್ಕನೇ ತರಗತಿಯವರೆಗೆ ಓದಿದ್ದ ಅಣ್ಣಾವ್ರಿಗೆ ಇದ್ದ ವಿವೇಕ ಇಂಜಿನಿಯರಿಂಗ್ ಓದಿದ ಸುದೀಪ್‌ರಂಥವರಿಗೆ ಇಲ್ಲದಿರುವುದು ಖೇದಕರ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ಹಸ್ತಗಳಿಗೆ ಮೆತ್ತಿದೆ ಇದ್ರೀಸ್ ನೆತ್ತರು

ಸುದೀಪ್ ಒಬ್ಬರೇ ಅಲ್ಲ; ದರ್ಶನ್, ರಿಷಬ್ ಶೆಟ್ಟಿ, ಯಶ್ ಮುಂತಾದವರನ್ನೂ ಬಿಜೆಪಿ ಸೆಳೆಯಲು ಯತ್ನಿಸುತ್ತಿದೆ. ಆಡಳಿತ ವಿರೋಧಿ ಅಲೆಯಿಂದ ಬಿಜೆಪಿಗೆ ಆತಂಕ ಶುರುವಾಗಿದೆ. ಇಲ್ಲಿಯವರೆಗೆ ಧರ್ಮ, ಹಿಂದುತ್ವ ಎಂದು ಜನರ ಸಮಸ್ಯೆಗಳನ್ನು ಕೊಂಚವೂ ಲಕ್ಷಿಸದೇ ಆಡಳಿತ ನಡೆಸಿದ, ಬಡವರ ಬದುಕನ್ನು ಪಾತಾಳಕ್ಕೆ ತುಳಿದ ಬಿಜೆಪಿ, ಈಗ ಚುನಾವಣೆಯಲ್ಲಿ ಸೋಲುವ ಆತಂಕದಿಂದ ಸಿನಿಮಾ ತಾರೆಯರ ಬೆನ್ನು ಬಿದ್ದಿದೆ. ಅದರ ಭಾಗವಾಗಿ ಹಿಂದುತ್ವದ ಅಜೆಂಡಾಗೆ ಹೊಂದುವಂಥ ಚಿತ್ರಗಳ ಮೇಲೆ, ನಟ ನಟಿಯರ ಮೇಲೆ ಬಿಜೆಪಿ ವಿಶೇಷವಾಗಿ ಕಣ್ಣು ಇಟ್ಟಿದೆ. ಉತ್ತರದಲ್ಲಿ ಇದೇ ರೀತಿ ‘ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ವಿಶೇಷ ಮುತುವರ್ಜಿಯಿಂದ ಪ್ರಚಾರ ಮಾಡಿತ್ತು. ಕನ್ನಡದಲ್ಲಿ ಇತ್ತೀಚಿನ ಚಿತ್ರಗಳ ಪೈಕಿ ಅವರ ನೆಚ್ಚಿನ ಚಿತ್ರ ‘ಕಾಂತಾರ’. ಅಮಿತ್ ಶಾ ಸೇರಿದಂತೆ ಅನೇಕ ಬಿಜೆಪಿ ನಾಯಕರು ‘ಕಾಂತಾರ’ ಸಿನಿಮಾ ನೋಡಿ ಕೊಂಡಾಡಿದ್ದರು. ಮೋದಿ ಕರ್ನಾಟಕಕ್ಕೆ ಬಂದಿದ್ದ ವೇಳೆ ‘ಕಾಂತಾರ’ ಚಿತ್ರ ನಿರ್ಮಿಸಿದ ‘ಹೊಂಬಾಳೆ’ಯ ವಿಜಯ್ ಕಿರಗಂದೂರು, ರಿಷಬ್ ಶೆಟ್ಟಿ, ಯಶ್ ಮುಂತಾದವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು.

ಕರಾವಳಿ ಮೂಲದ ನಟ ರಿಷಬ್ ಶೆಟ್ಟಿ ಹಿಂದಿನಿಂದಲೂ ತಾನು ಬಿಜೆಪಿ ಪರ ಎಂದು ಪ್ರರೋಕ್ಷವಾಗಿ ಸೂಚಿಸುತ್ತಲೇ ಬರುತ್ತಿದ್ದಾರೆ. ‘ಹೊಂಬಾಳೆ’ಯ ವಿಜಯ್ ಕಿರಗಂದೂರು ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಅವರ ಸಂಬಂಧಿ. ಇನ್ನು ನಟ ದರ್ಶನ್, ಯಶ್, ಸುಮಲತಾ ಮುಂತಾದವರದ್ದು ಒಂದು ಗುಂಪು ಎನ್ನಬಹುದಾದರೆ, ಆ ಗುಂಪಿನ ಮುಂದಾಳುಗಳು ರಾಕ್‌ಲೈನ್ ವೆಂಕಟೇಶ್ ಮತ್ತು ಶಾಸಕ, ಚಿತ್ರ ನಿರ್ಮಾಪಕ ಮುನಿರತ್ನ. ಇವರ ಮೂಲಕ ಕನ್ನಡ ಚಿತ್ರೋದ್ಯಮವನ್ನು ಬಿಜೆಪಿ ತನ್ನ ತೆಕ್ಕೆಗೆ ಎಳೆದುಕೊಂಡು, ತನ್ನ ಲಾಭಕ್ಕೆ ಬಳಸಿಕೊಳ್ಳಲು ಹೊರಟಿದೆ ಎನ್ನುವ ಮಾತುಗಳಿವೆ.

ಧರ್ಮದ ಜೊತೆ ರಾಜಕಾರಣ ಸೇರಿದರೆ ಹಿಂಸೆ ಹುಟ್ಟುತ್ತದೆ ಎನ್ನುವ ಮಾತಿದೆ. ಅದೇ ರಾಜಕೀಯದ ಜೊತೆ ಸಿನಿಮಾ ಸೇರಿದರೆ ಅನೀತಿ ಹುಟ್ಟುತ್ತದೆ. ಇಂಥವುಗಳನ್ನು ಪ್ರೋತ್ಸಾಹಿಸುವ, ಇಂಥವರನ್ನು ಅನುಸರಿಸುವ ನಾಡಿಗೆ ಮತ್ತು ಜನತೆಗೆ ದುರಂತ ಕಾದಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....