‘ಎನ್ಇಪಿ ಅಧಿಕೃತವಾಗಿ ರದ್ದಾಗಿದೆಯೇ?’ ಬಗೆಹರಿಯದ ಬಿಕ್ಕಟ್ಟುಗಳು

Date:

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರು ‘ನಾವು ಎನ್‌ಇಪಿ 2020ಯನ್ನು ತಿರಸ್ಕರಿಸಿದ್ದೇವೆ. ಹೀಗಾಗಿ ಎನ್‌ಸಿಎಫ್ 2023ಯನ್ನು ಅನುಸರಿಸುವ ಅಗತ್ಯವಿಲ್ಲ, ಎನ್‌ಸಿಎಫ್ 2005ನ್ನು ಅನುಸರಿಸುತ್ತೇವೆ’ ಎಂದು ಹೇಳಿದ್ದಾರೆ.

ಈಗಿರುವ ಪ್ರಶ್ನೆ ಎಂದರೆ ಎನ್ಇಪಿ 2020 ಅಧಿಕೃತವಾಗಿ ರದ್ದಾಗಿದೆಯೇ ಎಂಬುದರ ಜೊತೆಗೆ, ರಾಜ್ಯ ಶಿಕ್ಷಣ ನೀತಿ ರೂಪಿಸಲು ತುರ್ತಾಗಿ ತೆಗೆದುಕೊಳ್ಳಬೇಕಾದ ಕ್ರಮಗಳತ್ತ ಒಂದು ನೋಟ.

  1. ಕರ್ನಾಟಕ ಸರಕಾರ ಎನ್‌ಇಪಿ 2020ಯನ್ನು ರದ್ದುಗೊಳಿಸಿ ಅಧಿಕೃತ ಆದೇಶ ಹೊರಡಿಸಿಲ್ಲ. ಅದು ಗೆಜೆಟ್ ನೋಟಿಫಿಕೇಶನ್ ಆಗಲಿಲ್ಲ. ವಿಧಾನ ಮಂಡಲದಲ್ಲಿಯೂ ಪ್ರಕಟವಾಗಿಲ್ಲ. ಮುಖ್ಯಮಂತ್ರಿಗಳು ಮತ್ತು ಸಚಿವರ ಹೇಳಿಕೆ ಆಧರಿಸಿ ಎನ್‌ಇಪಿ ರದ್ದು ಅಂತ ಹೇಳಿದರೆ ಇದು ರದ್ದಾದಂತಲ್ಲ.

ಇಂದಿಗೂ ಎನ್‌ಸಿಎಫ್ 2023ಯ ಮಾರ್ಗಸೂಚಿಯ ಅನುಸಾರ ತಯಾರಾದ 26 ಪೊಸಿಷನ್ ಪೇಪರ್ಸ್ ಶಿಕ್ಷಣ ಇಲಾಖೆಯ ಅಂತರ್ಜಾಲ ತಾಣದಲ್ಲಿ ದೊರಕುತ್ತದೆ. ಈ ಪೇಪರ್ ಗಳನ್ನು ಅಧಿಕೃತವಾಗಿ ತಿರಸ್ಕರಿಸದೇ ಇರುವವರೆಗೂ ಎನ್‌ಸಿಎಫ್ 2023 ಅನ್ವಯವಾಗುತ್ತದೆ. ಎನ್‌ಸಿಎಫ್ 2005 ಅನ್ವಯವಾಗುವುದಿಲ್ಲ. ಇದು ಆರ್‍‌ಎಸ್ಎಸ್ ಸಿದ್ಧಾಂತಗಳ ದಸ್ತಾವೇಜು. ಇದನ್ನು ತಿರಸ್ಕರಿಸದೇ ಎನ್‌ಇಪಿ ರದ್ದು ಮಾಡಲು ಸಾಧ್ಯವಿಲ್ಲ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
  1. ಉನ್ನತ ಶಿಕ್ಷಣದಲ್ಲಿ ಎಲ್‌ಎಂಎಸ್ ವ್ಯವಸ್ಥೆಯನ್ನು ಕೂಡಲೆ ರದ್ದುಗೊಳಿಸಬೇಕು. ಇದು ಬಹುಕೋಟಿ ಹಗರಣ ಮಾತ್ರವಲ್ಲ, ಅನಗತ್ಯವಾಗಿ ಇಡೀ ಪದವಿ ಶಿಕ್ಷಣವನ್ನು ಆನ್‌ಲೈನ್ ವ್ಯವಸ್ಥೆಗೆ ಬದಲಾಯಿಸುವ ಉದ್ದೇಶವಿದೆ. ಆದರೆ ಇದರ ಒಟ್ಟಾರೆ ರೂಪುರೇಷೆಗಳು ಸಹ ಕಳಪೆಯಾಗಿವೆ. ಉದಾಹರಣೆಗೆ ಆ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡುವ ಪಠ್ಯಗಳ ಗುಣಮಟ್ಟವನ್ನು ಯಾರು ಪರಿಶೀಲಿಸುತ್ತಾರೆ? ಯಾರು ಅನುಮೋದಿಸುತ್ತಾರೆ? ಇದಕ್ಕೆ ಅಧಿಕೃತತೆಯ ಮಾನ್ಯತೆ ಇದೆಯೇ? ಇದಕ್ಕೆ ಅಗತ್ಯವಾದ ನಿರಂತರ ಅಂತರ್ಜಾಲ ಮತ್ತು ವಿದ್ಯುತ್ ಸೌಲಭ್ಯವನ್ನು ಯಾರು ಒದಗಿಸುತ್ತಾರೆ? ಇನ್ನೂ ಹಲವಾರು ಕಾರಣಗಳಿಂದ ಎಲ್‌ಎಂಎಸ್ ಒಂದು ಮರೆಮೋಸವಾಗಿದೆ. ಇದು ಚಾಲ್ತಿಯಲ್ಲಿರುವವರೆಗೂ ಎನ್‌ಇಪಿ ತಿರಸ್ಕರಿಸಲು ಸಾಧ್ಯವಿಲ್ಲ.
  2. ಶಾಲಾ ಶಿಕ್ಷಣದಲ್ಲಿ ಎನ್‌ಇಪಿ ಜಾರಿಗೊಳಿಸಲು ಹಿಂದಿನ ಬಿಜೆಪಿ ಸರಕಾರವು ಮದನ್ ಗೋಪಾಲ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಈಗ ಆ ಸಮಿತಿಯ ಸ್ಟೇಟಸ್ ಏನು? ಅದು ತನ್ನ ಶಿಫಾರಸ್ಸುಗಳನ್ನು ಕೊಟ್ಟಿದೆಯೇ? ಈ ಕುರಿತು ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುವವರೆಗೂ ಎನ್‌ಇಪಿ ರದ್ದುಗೊಳಿಸುವುದು ಕಷ್ಟ.
  3. ಈಗ ಬಹುಶಿಸ್ತೀಯ ವ್ಯಾಸಂಗದ ಕುರಿತು ಅನಿವಾರ್ಯತೆ ಸೃಷ್ಟಿಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಹೆಜ್ಜೆಗಳನ್ನು ಇಡಬೇಕು.
  4. ಮುಖ್ಯವಾಗಿ ಎನ್‌ಇಪಿ ಅಡಿಯಲ್ಲಿ ಒಂದು ಬ್ಯಾಚ್ ಈಗಾಗಲೇ ಎರಡನೇ ವರ್ಷದ ನಾಲ್ಕನೇ ಸೆಮಿಸ್ಟರ್ ನಲ್ಲಿದ್ದಾರೆ. ಅವರ ಭವಿಷ್ಯವೇನು? ಅವರು ನಾಲ್ಕು ವರ್ಷ ಓದಬೇಕೆ? ಬೇಡವೇ?
    ಈ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಬೇಕು. ಮತ್ತು ತೀರ್ಮಾನ ತಡವಾಗದಂತೆ ಎಚ್ಚರ ವಹಿಸಲು ಈ ಕೂಡಲೇ ಒಂದು ಸಮಿತಿಯನ್ನು ರಚಿಸಿ ಈ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದಂತೆ ಹದಿನೈದು ದಿನಗಳ ಯೋಜನೆಯ ನೀಲನಕ್ಷೆ ಕೊಡಲು ಸೂಚಿಸಬೇಕು.
  5. ಕನಿಷ್ಠ ಒಂದು ಪಠ್ಯಕ್ರಮ ಚೌಕಟ್ಟಿನ ಅಗತ್ಯವಿದೆ. ಎನ್‌ಸಿಎಫ್ 2023 ತಿರಸ್ಕರಿಸಿದರೆ ಕೂಡಲೆ ಸಮರೋಪಾದಿಯಲ್ಲಿ ಎಸ್‌ಸಿಎಫ್ 2023 (ರಾಜ್ಯ ಪಠ್ಯ ಕ್ರಮ ಚೌಕಟ್ಟು) ರೂಪಿಸಿ ಪ್ರಕಟಿಸಿ ಜಾರಿಗೊಳಿಸಬೇಕು. ಅಲ್ಲಿಯವರೆಗೂ ಎನ್‌ಸಿಎಫ್ 2023 (ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು) ಅನ್ವಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಅದು ಹೇಗೆ ಈಗ ವಿಸರ್ಜನೆಗೊಂಡಿರುವ ಎನ್‌ಸಿಎಫ್ 2005ನ್ನು ಅನುಸರಿಸುತ್ತಾರೆ?
    ನಾಳೆ ಕೇಂದ್ರ ಸರಕಾರ ತಾನು ವಿಸರ್ಜಸಿದ ಎನ್‌ಸಿಎಫ್ 2005 ಅಡಿಯಲ್ಲಿ ರೂಪುಗೊಂಡ ಪಠ್ಯಪುಸ್ತಕಗಳಿಗೆ ಮಾನ್ಯತೆ ನೀಡದೇ ಹೋದರೆ? ಮತ್ತೊಂದೆಡೆ ಕೇಂದ್ರ ಶಿಕ್ಷಣ ಇಲಾಖೆ ಮತ್ತು ಯುಜಿಸಿ ಎನ್‌ಇಪಿ ಶಿಫಾರಸ್ಸಿನ ಅಡಿಯಲ್ಲಿ ದಿನನಿತ್ಯ ಹೊಸ ದಸ್ತಾವೇಜುಗಳನ್ನು, ಯೋಜನೆಗಳನ್ನು ಪ್ರಕಟಿಸುತ್ತಿದೆ. ಈಗ ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಏನು ಮಾಡಬೇಕು? ಅದನ್ನು ಅಳವಡಿಸಿಕೊಳ್ಳಬೇಕೇ? ಒಂದು ವೇಳೆ ಒಪ್ಪಿಕೊಂಡರೆ ಎನ್‌ಇಪಿ ರದ್ದು ಮಾಡಲು ಸಾಧ್ಯವಿಲ್ಲ. ಹಾಗಿದ್ದರೆ ಬದಲಿ ಯೋಜನೆಗಳೇನು? ರಾಜ್ಯ ಸರಕಾರ ಯೋಚಿಸಿದಂತಿಲ್ಲ. ಇದು ಹೀಗೆ ಮುಂದುವರೆದರೆ ಶೈಕ್ಷಣಿಕ ಬಿಕ್ಕಟ್ಟು ಉಂಟಾಗುತ್ತದೆ.
  6. ರಾಜ್ಯ ಶಿಕ್ಷಣ ನೀತಿ ರೂಪಿಸಲು ‘ರಾಜ್ಯ ಶಿಕ್ಷಣ ನೀತಿ ಆಯೋಗ’ ರಚಿಸಬೇಕು. ಇದಕ್ಕೆ ಶಾಸನಬದ್ಧ ಅಧಿಕಾರ ಕೊಡಬೇಕು. ಮತ್ತು ಈ ಆಯೋಗವು 2024ರ ಮೇ ತಿಂಗಳ ಒಳಗೆ ತನ್ನ ವರದಿ ಮಂಡಿಸಬೇಕು.

ಇಷ್ಟೊಂದು ಜವಾಬ್ದಾರಿಗಳನ್ನು ಮುಂದಿಟ್ಟುಕೊಂಡು ಕೇವಲ ಬಾಯಿ ಮಾತಿನಲ್ಲಿ ಎನ್‌ಇಪಿ ರದ್ದುಗೊಳಿಸಲು ಸಾಧ್ಯವೇ ಇಲ್ಲ. ಈ ಕರೆಗಂಟೆ ಸರ್ಕಾರಕ್ಕೆ ಕೇಳಿಸುತ್ತಿದೆಯೇ?

bhut sir
ಬಿ. ಶ್ರೀಪಾದ ಭಟ್
+ posts

ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...