ದ್ವಿತೀಯ ಪಿಯುಸಿ | ಫಲಿತಾಂಶ ಹೇಗೆ ಬರಲಿ ಸ್ವೀಕರಿಸುವ ಮನೋಭಾವವಿರಲಿ

Date:

ಶುಕ್ರವಾರ 11:00ಗಂಟೆಗೆ ಪ್ರಕಟವಾಗುತ್ತಿರುವ ದ್ವಿತೀಯ ಪಿಯುಸಿ ಫಲಿತಾಂಶ ನಿರೀಕ್ಷಿತ‌ವಾಗಿ ಬರಲಿ ಅಥವಾ ಬಾರದಿರಲಿ, ಎದೆಗುಂದಬೇಡಿ. ಪಿಯುಸಿಯಲ್ಲಿ ಪಾಸಾದರೂ, ಫೇಲಾದರೂ ಕಲಿಯಲು ಸಾವಿರಾರು ಕೋರ್ಸ್’ಗಳಿವೆ ಈ ಬಗ್ಗೆ ಗಮನ ಕೊಡಿ ಎಂದು ಶಿಕ್ಷಣ ಮಾರ್ಗದರ್ಶಕ ಉಮರ್ ಯು.ಹೆಚ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ.

2022–23ನೇ ಶೈಕ್ಷಣಿಕ ಸಾಲಿನಲ್ಲಿ 7,27,387ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ರಾಜ್ಯದ 1,109 ಕೇಂದ್ರಗಳಲ್ಲಿ ಮಾರ್ಚ್ 9ರಿಂದ 29ರವರೆಗೆ ಪರೀಕ್ಷೆಗಳು ನಡೆದಿದ್ದವು. ವಿಧಾನಸಭಾ ಚುನಾವಣಾ ಪ್ರಕ್ರಿಯೆಗಳ ಮಧ್ಯೆಯೇ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ಉಪನ್ಯಾಸಕರನ್ನು ಬಳಸಿಕೊಂಡು ಮೌಲ್ಯಮಾಪನ ಕಾರ್ಯ ಸುಸೂತ್ರವಾಗಿ ಪೂರ್ಣಗೊಂಡಿದೆ.

ಪರೀಕ್ಷೆಗಳ ಫಲಿತಾಂಶ ಪ್ರಕಟಣೆಯಾದ ನಂತರ ನೊಂದ ವಿದ್ಯಾರ್ಥಿಗಳು ಆತ್ಮಹತ್ಯಗೆ ಚಿಂತಿಸುವುದು, ಪೋಷಕರ ಒತ್ತಾಯಕ್ಕೆ ತಮಗೆ ಸರಿ ಅನಿಸದ ವಿಷಯಗಳ ಅಧ್ಯಯನಕ್ಕೆ ಸೇರಿಕೊಳ್ಳುವುದು ಸಾಮಾನ್ಯವಾಗಿದೆ. ಹೀಗಾಗಿ, ಪಿಯುಸಿ ನಂತರ ಮುಂದಿರುವ ಬಹಳಷ್ಟು ಅವಕಾಶಗಳ ಬಗ್ಗೆ ಶಿಕ್ಷಣ ಮಾರ್ಗದರ್ಶಕ ಉಮರ್ ಅವರು ಸಲಹೆ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ?: ಶುಕ್ರವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

“ಪಾಸಾಗಲಿ ಅಥವಾ ಫೇಲಾಗಲಿ ಫಲಿತಾಂಶವನ್ನು ಧೈರ್ಯವಾಗಿ ಸ್ವೀಕರಿಸಿ. ಶಾಲೆಯ‌ ಪರೀಕ್ಷೆಗಳಿಗಿಂತ ಬದುಕಿನ ಪರೀಕ್ಷೆಯಲ್ಲಿ ಪಾಸಾಗೋದು ಮುಖ್ಯ ಎಂಬುದು ತಿಳಿದಿರಲಿ. ಫಲಿತಾಂಶ ಪ್ರಕಟವಾದ ನಂತರ ಪೋಷಕರಿಂದ ಮತ್ತಿತ್ತರರಿಂದ ಒತ್ತಡಗಳು ಹೆಚ್ಚಾಗಬಹುದು ಅದನ್ನು ಜಾಣತನದಿಂದ ಎದುರಿಸಿ. ಮೂರ್ಖರಂತೆ ಎಂದೂ ತಪ್ಪು ತೀರ್ಮಾನ ಕೈಗೊಳ್ಳಬೀಡಿ, ಅಡ್ಡದಾರಿ ಹಿಡಿಯಬೇಡಿ. ಕಡಿಮೆ ಕಲಿತು ಅಥವಾ ಪಿಯುಸಿಯಲ್ಲಿ ಫೇಲಾಗಿ ಸಾಧನೆ ಮತ್ತು ದುಡ್ಡು ಸಂಪಾದನೆ ಮಾಡಿರುವ ಅನೇಕ ಸಾಧಕರು ಸುತ್ತಮುತ್ತಲೇ ಇರುತ್ತಾರೆ. ಅವರನ್ನು ಗಮನಿಸಿ. ಪ್ರತಿಭೆ, ಕೌಶಲ ಎಲ್ಲರಲ್ಲೂ ಇರುತ್ತದೆ. ಆತ್ಮವಿಶ್ವಾಸ ಒಂದಿರಬೇಕು”ಎಂದು ಆತ್ಮಸ್ಥೈರ್ಯ ತುಂಬಿದ್ದಾರೆ.

ಇಂದು ಪ್ರಕಟವಾದ ಫಲಿತಾಂಶವನ್ನು ಸ್ವೀಕರಿಸಿಲು ನೀವು ತಯಾರಿಲ್ಲ ಎಂದಾದರೆ, ನಿಮ್ಮ ಉತ್ತರ ಪತ್ರಿಕೆ ತರಿಸಿಕೊಳ್ಳಿ. ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿ. ಇಲ್ಲವಾದಲ್ಲಿ ಪೂರ್ತಿ ಫಲಿತಾಂಶವನ್ನೆ ದಿಕ್ಕರಿಸಿ ಮರು ಪರೀಕ್ಷೆ ಬರೆಯಿರಿ.

“ಪಿಯುಸಿಯಲ್ಲಿ ಪಾಸಾದರೂ, ಫೇಲಾದರೂ ಕಲಿಯಲು ಸಾವಿರಾರು ಕೋರ್ಸ್’ಗಳಿವೆ. ಗೂಗಲ್ ಸರ್ಚ್ ಮಾಡಿ, ಯೂಟ್ಯೂಬ್’ಲ್ಲಿ ಹುಡುಕಿ. ಅಥವಾ ತಿಳಿದವರಲ್ಲಿ ಅವುಗಳ ಮಾಹಿತಿ ಪಡೆಯಿರಿ.ಒತ್ತಡ, ಆಕರ್ಷಣೆ, ಅವಾಸ್ತವ ಭ್ರಮೆಗೆ ಒಳಗಾಗಿ ಕೋರ್ಸ್’ಗಳ ಆಯ್ಕೆ ಮಾಡಬೇಡಿ. ವೃತ್ತಿ ಜೀವನದ ಬಗ್ಗೆ ಯೋಜನೆ ರೂಪಿಸಿ. ಅದಕ್ಕೆ ಪೂರಕವಾದ ಕೋರ್ಸ್’ಗಳನ್ನ ಆಯ್ಕೆ ಮಾಡಿಕೊಳ್ಳಿ. ಸಾಧ್ಯವಾದರೆ ಕರಿಯರ್ ಕೌನ್ಸಿಲರ್ ಮಾರ್ಗದರ್ಶನ ಪಡೆಯಿರಿ” ಎಂದು ಸಲಹೆ ನೀಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

KCET | ಸಿಇಟಿ ಅರ್ಜಿ ಸಲ್ಲಿಕೆ, ಶುಲ್ಕ ಪಾವತಿ ದಿನಾಂಕ ವಿಸ್ತರಣೆ

ಸಿಇಟಿ 2026 (KCET) ಅರ್ಜಿ ಸಲ್ಲಿಕೆ, ಶುಲ್ಕ ಪಾವತಿ ಅವಧಿಯನ್ನು ಕರ್ನಾಟಕ...

ಕೆಪಿಎಸ್‌ ಶಾಲೆ ತೆರೆದು ಆರ್‌ಎಸ್‌ಎಸ್‌ಗೆ ಬಲ ಕೊಡಲು ಕಾಂಗ್ರೆಸ್‌ ಹೊರಟಿದೆ : ನಿರಂಜನಾರಾಧ್ಯ ಆಕ್ರೋಶ

“ಬಾಯಿಬಿಟ್ಟರೆ ಸಂವಿಧಾನವನ್ನು ಕಾಪಾಡುತ್ತೇವೆ ಅಂತ ಹೇಳುವ ಕಾಂಗ್ರೆಸ್‌ ಸರ್ಕಾರ, ಸಂವಿಧಾನ ವಿರೋಧಿಯಾಗಿ...

NEP ತಿರಸ್ಕರಿಸಿದ್ದೇವೆ ಎನ್ನುವ ರಾಜ್ಯ ಸರ್ಕಾರ ಇಲ್ಲಿ ಅದನ್ನೇ ಜಾರಿಗೊಳಿಸುತ್ತಿದೆ: ಪಿ ನಿರಂಜನಾರಾಧ್ಯ

ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತಂದವರೇ ಯುಪಿಎ ಸರ್ಕಾರ. ಇಂತಹ ಮಹತ್ವದ...