ಸಾಹಿತ್ಯ ಸಮ್ಮೇಳನ | ಈ ಬಾರಿ ಅಲ್ಪಸಂಖ್ಯಾತ ಸಾಹಿತಿ ಅಧ್ಯಕ್ಷರಾಗಲಿ

Date:

ಇದುವರೆಗೆ ಒಟ್ಟು ನಾಲ್ವರು ಮಹಿಳೆಯರು ಅಧ್ಯಕ್ಷರಾಗಿದ್ದಾರೆ. 2022ರ ತನಕ ಅಧ್ಯಕ್ಷರಾದವರಲ್ಲಿ ಪರಿಶಿಷ್ಟ ಜಾತಿ, ಕ್ರೈಸ್ತ ಮತ್ತು ಮುಸ್ಲಿಂ ಸಮುದಾಯದಿಂದ ಅಧ್ಯಕ್ಷರಾಗಿದ್ದು ತಲಾ ಒಬ್ಬರು. ಈ ಅಸಮಾನತೆ ಬಹಳ ಅಪಾಯಕಾರಿ.

ನಾಲ್ವಡಿ ಕೃಷ್ಣರಾಜ ಒಡೆಯರ್ ರಿಂದ ಸ್ಥಾಪಿಸಲ್ಪಟ್ಟ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ನಮ್ಮ ಮಂಡ್ಯ ಜಿಲ್ಲೆಯಲ್ಲಿ ನಡೆಯಲಿದೆ. ಈ ಸಮ್ಮೇಳನವು ಕನ್ನಡದ ಏಕೀಕರಣ, ಸಾಹಿತ್ಯ, ಸಂಸ್ಕೃತಿ, ಭಾಷೆ ಇವುಗಳ ಉಳಿವಿಗಾಗಿ ಮತ್ತು ಏಳಿಗೆಗಾಗಿ ಹೋರಾಡುವ ಉದ್ದೇಶವನ್ನು ಹೊಂದಿದೆ. ಇಲ್ಲಿ ಕನ್ನಡದ ಕವಿಗಳು, ಸಾಹಿತಿಗಳು, ಕಲಾವಿದರಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ದೊರೆತಂತಾಗುತ್ತದೆ. ಪುಸ್ತಕ ಪ್ರೇಮಿಗಳಿಗಂತೂ ಬಯಸಿದ ಪುಸ್ತಕ ದೊರಕುವ ಒಳ್ಳೆಯ ಅವಕಾಶ. ಒಟ್ಟಾರೆ ಸಾಹಿತ್ಯ ಪ್ರೇಮಿಗಳ ದೊಡ್ಡದೊಂದು ಹಬ್ಬ ಇದಾಗಿದೆ.

ಯಾವುದೇ ಕ್ಷೇತ್ರದ ಕಾರ್ಯಕ್ರಮವಿರಲಿ ಅದರ ಅಧ್ಯಕ್ಷತೆ ವಹಿಸುವವರು ಆ ಕ್ಷೇತ್ರದಲ್ಲಿ ಪರಿಣಿತರು ಇರಲೇಬೇಕು. ಹಾಗಾದರೆ ಮಾತ್ರ ಈ ಕ್ಷೇತ್ರದ ಉದ್ದಾರ ಸಾಧ್ಯವಾಗುವುದು ಮತ್ತು ಆ ಸ್ಥಾನದ ಗೌರವ ಹೆಚ್ಚಾಗುವುದು. ಕನ್ನಡ ಭಾಷೆ, ಸಾಹಿತ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುವವರಿಗೆ ಸಾಹಿತ್ಯದ ಜ್ಞಾನವಿರಬೇಕು ಮತ್ತು ಅದರ ಬಗೆಗೆ ಅಪಾರ ಕಾಳಜಿ ಇರಬೇಕು. ಅದಕ್ಕಾಗಿ ಸಾಹಿತಿಗಳೇ ಸಮ್ಮೇಳನದ ಅಧ್ಯಕ್ಷರಾಗಬೇಕೇ ಹೊರತು ಮಠದ ಸ್ವಾಮಿಗಳಾಗಲಿ, ರಾಜಕೀಯ ವ್ಯಕ್ತಿಗಳಾಗಲಿ ಆಸ್ಥಾನಕ್ಕೆ ಅರ್ಹರಲ್ಲ. ಅದು ಮಾತ್ರವಲ್ಲದೆ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಆಗುವವರು ದೂರ ದೃಷ್ಟಿಯುಳ್ಳವರಾಗಿರಬೇಕು‌. ಪ್ರಗತಿಪರ ಆಲೋಚನೆ ಉಳ್ಳವರು ಮಾತ್ರವಲ್ಲ ಜಾತೀವಾದ, ಕೋಮುವಾದಗಳಿಂದ ಹೊರತಾಗಿ ಇರುವವರು ಆಗಿರಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಂಡ್ಯದಲ್ಲಿ ಇದು ಮೂರನೇ ಸಮ್ಮೇಳನ. 1915ರಲ್ಲಿ ನಡೆದ ಮೊದಲ ಸಮ್ಮೇಳನದಿಂದ 1974ರಲ್ಲಿ ಮಂಡ್ಯದಲ್ಲಿ ನಡೆದ 48ನೇ ಸಮ್ಮೇಳನದ ತನಕ ಒಬ್ಬರೇ ಒಬ್ಬರು ಮಹಿಳಾ ಸಾಹಿತಿಯನ್ನು ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಕಸಾಪವು ಪರಿಗಣಿಸಿರಲಿಲ್ಲ. ಜಯದೇವಿತಾಯಿ ಲಿಗಾಡೆ ಮೊದಲ ಅಧ್ಯಕ್ಷೆಯಾದರು. ಇದುವರೆಗೆ ಒಟ್ಟು ನಾಲ್ವರು ಮಹಿಳೆಯರು ಅಧ್ಯಕ್ಷರಾಗಿದ್ದಾರೆ. 2022ರ ತನಕ ಅಧ್ಯಕ್ಷರಾದವರಲ್ಲಿ ಡಾ ಸಿದ್ದಲಿಂಗಯ್ಯ ಒಬ್ಬರೇ ಪರಿಶಿಷ್ಟ ಜಾತಿಯವರು! ಕ್ರೈಸ್ತ ಮತ್ತು ಮುಸ್ಲಿಂ ಸಮುದಾಯದಿಂದ ಅಧ್ಯಕ್ಷರಾಗಿದ್ದು ತಲಾ ಒಬ್ಬರು (ನಾ ಡಿಸೋಜಾ ಮತ್ತು ನಿಸಾರ್‌ ಅಹಮದ್). ಈ ಅಸಮಾನತೆ ಬಹಳ ಅಪಾಯಕಾರಿ. ಕಸಾಪ ಎಲ್ಲರನ್ನೂ ಸಮಾನವಾಗಿ ಕಾಣಬೇಕಿದೆ.

ಕನ್ನಡ ಸಾಹಿತ್ಯದ ಏಳಿಗೆಗಾಗಿ ಅನೇಕರು ಸೇವೆ ಸಲ್ಲಿಸಿದ್ದಾರೆ. ಸಮ್ಮೇಳನದ ಅಧ್ಯಕ್ಷತೆ ಎಂಬುದು ಒಂದು ದೊಡ್ಡ ಜವಾಬ್ದಾರಿ. ಅದು ಒಂದು ಧರ್ಮ, ಜಾತಿ, ಲಿಂಗಕ್ಕೆ ಸೀಮಿತವಾದುದಲ್ಲ. ಅನೇಕ ಮುಸ್ಲಿಂ ಬರಹಗಾರ್ತಿಯರು ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಛಾಪು ಉಳಿಸಿದ್ದಾರೆ. ಮುಸ್ಲಿಂ ಸಮುದಾಯದಿಂದ ನಿಸಾರ್ ಅಹಮದ್ ಒಬ್ಬರೇ ಆ ಗೌರವ ಪಡೆದಿದ್ದಾರೆ. ಸಾರಾ ಅಬೂಬಕ್ಕರ್ ಆ‌ ಸ್ಥಾನಕ್ಕೆ ಅರ್ಹರಾಗಿದ್ದರೂ ಅವಕಾಶ ದೊರೆಯಲಿಲ್ಲ. ಕಳೆದ ವರ್ಷ ಅವರು ತೀರಿಕೊಂಡರು. ಈಗ ಮುಸ್ಲಿಂ ಸಮುದಾಯದ ಹಿರಿಯ ಬರಹಗಾರ್ತಿಯರಾದ ಬಾನು ಮುಷ್ತಾಕ್, ಕೆ ಷರೀಫ ಮುಂತಾದವರಿದ್ದಾರೆ. ಸಮಿತಿಯು ಪುರುಷ ಸಾಹಿತಿಗಳನ್ನು ಪರಿಗಣಿಸುವುದಿದ್ದರೂ ಮುಸ್ಲಿಂ ಸಮುದಾಯದ ಬೊಳುವಾರು ಮಹಮ್ಮದ್ ಕುಂಞಿ, ರಂಜಾನ್ ದರ್ಗಾ, ಡಾ ರಹಮತ್ ತರೀಕೆರೆ ಇವರೆಲ್ಲರೂ ಅಧ್ಯಕ್ಷ ಸ್ಥಾನಕ್ಕೆ ಅರ್ಹರಾಗಿದ್ದಾರೆ.

ಮಂಡ್ಯ ಸಮ್ಮೇಳನ ಕುರಿತ ವಿಶೇಷ ಲೇಖನಗಳು ಈ ಲಿಂಕ್‌ನಲ್ಲಿ ಸಿಗುತ್ತವೆ. https://eedina.com/tag/mandya-sahitya-sammelana/

WhatsApp Image 2025 11 17 at 3.32.24 PM
ಕಿರಣ ಪಾಲ್ತಾಡಿ, ಮಳವಳ್ಳಿ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅತ್ಯಾಚಾರಿಗಳಿಗೆ ರಾಜಕೀಯ ರಕ್ಷೆ: ಇದು ಯಾವ ಭಾರತ? ನಾಲಿಗೆ ಸತ್ತ ಭಾರತವೇ?

ಭಾರತದ ರಸ್ತೆಗಳು, ನಗರಗಳು ಮತ್ತು ಗ್ರಾಮಗಳು ಯಾವಾಗಲೂ ಅನ್ಯಾಯದ ವಿರುದ್ಧದ ಪ್ರತಿಭಟನೆಗಳಿಗೆ...

‘ಸಂಸ್ಕಾರಿ’ ಅತ್ಯಾಚಾರಿಗಳಿಗೆ ರಾಜಕೀಯ ರಕ್ಷಾಕವಚ: ಆಸಾರಾಮ ಬಾಪೂ ಆಟ ಮತ್ತು ಅಧಿಕಾರಸ್ಥರ ಬೆತ್ತಲೆ ಹಗರಣ

ಒಬ್ಬ ಸಾಮಾನ್ಯ ಕೈದಿಗೆ ಸಿಗದ ಸವಲತ್ತುಗಳು, ಅತ್ಯಾಚಾರ ಮತ್ತು ಕೊಲೆ ಬೆದರಿಕೆಯಂತಹ...

ಉನ್ನಾಂವ್ ಅತ್ಯಾಚಾರ ಹಗರಣ: ಕುಲದೀಪ್ ಸೆಂಗರ್‌ನ ಹೀನಕೃತ್ಯ; ಬಿಜೆಪಿ ನೈತಿಕ ದಿವಾಳಿತನ

ಅತ್ಯಾಚಾರದ ಆರೋಪಿಗೆ ಸರ್ಕಾರದಲ್ಲಿ ಮಂತ್ರಿಗಿರಿ ಕೊಡುವುದು, ಅತ್ಯಾಚಾರದ ಆರೋಪ ಹೊತ್ತು ಜೈಲಿಗೆ...

ಸಮಗ್ರ ವರದಿ | ವಕ್ಫ್ ಬಗ್ಗೆ ಬಿಜೆಪಿ ಬಿತ್ತಿದ ಭಯಾನಕ ಸುಳ್ಳುಗಳು!

ಬಿಜೆಪಿ ನಾಯಕರು ಬಿತ್ತಿದ ಸರಣಿ ಸುಳ್ಳುಗಳನ್ನು ತೆರೆದಿಡುವ ಮತ್ತು ವಾಸ್ತವಗಳನ್ನು ತಿಳಿಸುವ...