ದೇಶವನ್ನ ರಾಜ್ಯ ಮುಕ್ತವಾಗಿ ಮಾಡಬೇಕು ಎಂಬುದು ಬಿಜೆಪಿ ಉದ್ದೇಶ: ಎ ನಾರಾಯಣ

Date:

‘ಒಂದು ದೇಶ – ಒಂದು ಚುನಾವಣೆ’ಯನ್ನ ತರಲು ಹೊರಟಿರುವ ಬಿಜೆಪಿ ಸರ್ಕಾರಕ್ಕೆ ಸಂವಿಧಾನದಲ್ಲಿರುವ ಒಂದು ಅಂಶ ಇಷ್ಟ ಇಲ್ಲ. ಅವರಿಗೆ ಈ ದೇಶದಲ್ಲಿ ರಾಜ್ಯಗಳೇ ಇರಬಾರದು. ಒಂದು ದೇಶ ಅದು ಅಖಂಡ ದೇಶವಾಗಿರಬೇಕು. ಜನರು ತಲೆಬಾಗಿ ಅವರ ಅಧೀನ ಇರಬೇಕು. ಈ ದೇಶವನ್ನ ರಾಜ್ಯ ಮುಕ್ತವಾಗಿ ಮಾಡಬೇಕು ಎಂಬುದಾಗಿದೆ. ಕೇಂದ್ರದಲ್ಲಿ ಆಡಳಿತ ಮಾಡುತ್ತಿದ್ದೇವೆ‌. ರಾಜ್ಯವನ್ನ ನಮಗೆ ಕೊಟ್ಟುಬಿಡಿ ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂಬುದು ಅವರ ಬೆದರಿಕೆ ಆಗಿದೆ‌. ಆದರೆ, ನಮ್ಮ ರಾಜ್ಯದ ಜನ ಇದಕ್ಕೆ ಬಗಲಿಲ್ಲ. ಈ ಬಾರಿ ಚುನಾವಣೆಯಲ್ಲಿ ಜನಪರ ಸರ್ಕಾರವನ್ನ ತಂದಿದ್ದಾರೆ” ಎಂದು ಖ್ಯಾತ ಅಂಕಣಕಾರ ಎ, ನಾರಾಯಣ ಹೇಳಿದ್ದಾರೆ.

ಒಂದು ದೇಶ – ಒಂದು ಚುನಾವಣೆ ನಿರಂಕುಶ ಪ್ರಭುತ್ವದತ್ತ ಭಾರತ ರಾಜ್ಯ ಮಟ್ಟದ ವಿಚಾರಣ ಸಂಕಿರಣವನ್ನ ದಲಿತ ಸಂಘರ್ಷ ಸಮಿತಿ ಬುಧವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿತ್ತು. ಈ ವೇಳೆ ವಿಷಯ ಮಂಡನೆ ಮಾಡಿದ ಖ್ಯಾತ ಅಂಕಣಕಾರ ಎ, ನಾರಾಯಣ ಅವರು, “ಒಬ್ಬ ಕನ್ನಡಿಗನಾಗಿ ಈ ದೇಶದ ಸ್ವಾಯತ್ತ ಅಭಿಮಾನಿ‌ ಕನ್ನಡಿಗನಾಗಿ ಈ ವಿಷಯ ಮಂಡನೆ ಮಾಡುತ್ತೇನೆ. ಚುನಾವಣೆಯಲ್ಲಿ ವಿಧಾನಸಭೆಗೆ ಒಮ್ಮೆ, ಲೋಕಸಭೆಗೆ ಇನ್ನೊಮ್ಮೆ ಮಗದೊಮ್ಮೆ ಜಿಲ್ಲಾ ಪಂಚಾಯಿತಿಗೆ ಜನಪ್ರತಿನಿಧಿಗಳನ್ನ ಆಯ್ಕೆ ಮಾಡುತ್ತಿದ್ದೇವು. ಆದರೆ, ಇನ್ನುಮುಂದೆ ಲೋಕಸಭೆ, ವಿಧಾನಸಭೆ ಚುನಾವಣೆಗಳಿಗೆ ಜನಪ್ರತಿನಿಧಿಗಳನ್ನ ಒಮ್ಮೆಲೇ ಆಯ್ಕೆ ಮಾಡುವುದು ಬದಲಾವಣೆ ಆಗಿದೆ. ಸಕ್ಜರೆ ಲೇಪನ ಮಾಡಿ ಈ ಬದಲಾವಣೆ ಬೇಕೆ ಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ನಿಜವಾಗಲೂ ಇವರು ಮಾಡೋದಕ್ಕೆ ಹೊರಟ್ಟಿದ್ದೇನು. ಏಕಕಾಲದದಲ್ಲಿ ಚುನಾವಣೆ ನಡೆಸಿ ಜನರಿಗೆ ಒಳ್ಳೆಯದು ಮಾಡಬೇಕು ಎಂಬುದು ಇವರ ಉದ್ದೇಶವಲ್ಲ” ಎಂದಿದ್ದಾರೆ.

“ಸುಪ್ರೀಂಕೋರ್ಟ್ ತನಿಖಾ ಸಂಸ್ಥೆಗಳಿಗೆ ಹೇಳುತ್ತೆ ನೀವು ಪಂಜರದ ಗಿಳಿಯಾಗಬಾರದು ಎಂದೂ. ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ. ಒಂದು‌ ದೇಶ – ಒಂದು ಚುನಾವಣೆ ಲೋಕಸಭಾ ಚುನಾವಣೆ ರಾಜ್ಯ ವಿಧಾನಸಭಾ ಚುನಾವಣೆಗಳು ಏಕಕಾಲಕ್ಕೆ ನಡೆದಾಗ ಕೇಂದ್ರದಲ್ಲಿ ಯಾವ ಪಕ್ಷ ಬರುತ್ತದೋ, ರಾಜ್ಯದಲ್ಲಿಯೂ ಕೂಡ ಅದೇ ಪಕ್ಷ ಬರುವ ಸಾಧ್ಯತೆ‌ ಇದೆ ಎಂದು ಸ್ಟಾಟಿಕ್ಸ್ ಹೇಳಿದಾವೆ. ಆಪರೇಷನ್ ಕಮಲ, ಡಬಲ್ ಎಂಜಿನ್ ಸರ್ಕಾರ ಎಂಬುದನ್ನ ಹೇಳಿದಾಗ ಜನರ ಮುಂದೆ ಇದು ಎನು ನಡೆಯೋದಿಲ್ಲ ಎಂದು ತಿಳಿದಾಗ ಅದನ್ನ ಜನರಿಂದನೇ ಈ ಕೆಲಸ ಮಾಡಬಿಡಬೇಕು ಎಂಬುದು ಅವರ ಉದ್ದೇಶವಾಗಿದೆ‌” ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ರಾಜ್ಯಕ್ಕೆ ಚುನಾವಣೆ ಆಗುವಾಗ ರಾಜ್ಯದ ವಿಚಾರಗಳು ಮುನ್ನೆಲೆಗೆ ಬರುತ್ತವೆ. ಲೋಕಸಭಾ ಚುನಾವಣೆ ನಡೆಯುವಾಗ ದೇಶದ ವಿಚಾರಗಳು‌ ಮುಂದೆ ಬರುತ್ತವೆ. ಆದರೆ, ಒಂದು ದೇಶ – ಒಂದು ಚುನಾವಣೆಯಂತೆ ಚುನಾವಣೆಗಳು ನಡೆದರೆ ಪ್ರಶ್ನೇ ಮಾಡುವ ಹಕ್ಕನ್ನ ಜನರು ಕಳೆದುಕೊಳ್ಳುತ್ತಾರೆ. ಚುನಾವಣಾ ಸಮಯದಲ್ಲಿ ಪ್ರಶ್ನೆ ಮಾಡುವುದು ನಮ್ಮ ಮೂಲಭೂತ ಹಕ್ಕಾಗಿದೆ. ಭಾರತ ದೇಶ ಒಂದು ಸುಂದರ ಹುದೋಟ. ಈ ಹುದೋಟದಲ್ಲಿರುವ 29 ರಾಜ್ಯಗಳು ಸೇರಿ ದೇಶ ಆಗಬೇಕು ಎಂಬುದು ನಮ್ಮ ಸಂವಿಧಾನ ನಿರ್ಮಾತರ ಕನಸಾಗಿತ್ತು. ಬಹುತ್ವ ಒಡೆಯುವ ಕೆಲಸವೇ ಇದು ಒಂದು ದೇಶ ಒಂದು ಚುನಾವಣೆ, ಇದನ್ನ ನಾವು ಒಪ್ಪಿಕೊಳ್ಳಬಾರದು” ಎಂದಿದ್ದಾರೆ.

“ಈ ಒಂದು ದೇಶ – ಒಂದು ಚುನಾವಣೆ ಅಂದರೆ ನೋಟು ಅಮಾನ್ಯೀಕರಣ, ಇತ್ತೀಚೆಗೆ ಗುಡಿ ಕಟ್ಟಿರುವ ರೀತಿಯ ಯೋಜನೆ. ರಾಜ್ಯಗಳನ್ನ ದುರ್ಬಲಗೊಳಿಸಲು ಈ ಯೋಜನೆಯನ್ನ ತರಲಾಗುತ್ತಿದೆ. ಸಂವಿಧಾನವನ್ನ ಒಪ್ಪಿಕೊಳ್ಳದೇ ಒಂದು ಧರ್ಮಕ್ಕೆ, ಒಂದು ವರ್ಗಕ್ಕಾಗಿ ಒಂದು ದೇಶ – ಒಂದು ಚುನಾವಣೆ ತರಲು ಮುಂದಾಗಿದ್ದಾರೆ. ರಾಜ್ಯ ಮುಕ್ತ ದೇಶವನ್ನಾಗಿ ಮಾಡಬೇಕು. ಈ ದೇಶವನ್ನ ಒಂದು ವರ್ಗಕ್ಕೆ, ಒಂದು ಧರ್ಮಕ್ಕೆ ಸಿಮೀತಗೊಳಿಸಬೇಕು ಎಂಬುದು ಅವರ ಉದ್ದೇಶವಾಗಿದೆ. ಆದರೆ, ಇದಕ್ಕೆ ತೊಡಕಾಗಿರೋದು ರಾಜ್ಯಗಳು ಹಾಗಾಗಿ‌, ರಾಜ್ಯಗಳನ್ನೆ ಮುಚ್ಚಿ ಹಾಕಿ ಒಂದು ದೇಶವನ್ನ ಮುನ್ನೆಲೆಗೆ ತರುವುದು ಇವರ ಉದ್ದೇಶವಾಗಿದೆ. ರಾಜ್ಯಗಳನ್ನ ದುರ್ಬಲಗೊಳಿಸಿ ಅವರ ಬೆಳೆ ಬೇಯಿಸಿಕೊಳ್ಳುವುದು ಅವರ ಉದ್ದೇಶವಾಗಿದೆ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ‘ಒಂದು ದೇಶ – ಒಂದು ಚುನಾವಣೆ’ ಒಕ್ಕೂಟ ವ್ಯವಸ್ಥೆಗೆ ಅಪಾಯಕಾರಿ: ಜಸ್ಟಿಸ್ ನಾಗಮೋಹನ್ ದಾಸ್

“ಒಂದು ದೇಶ – ಒಂದು ಚುನಾವಣೆ ಮುನ್ನೆಲೆಗೆ ತರಲು ಅವರು ನೀಡುವ ಕಾರಣಗಳ ಪೈಕಿ ಒಂದು, ದೊಡ್ಡ ಮಟ್ಟದಲ್ಲಿ ಹಣ ಉಳಿತಾಯ ಆಗುತ್ತದೆ ಅನ್ನೋದು ಅವರ ವಾದ. ನಾವು ಎಲ್ಲಿ ಹಣ ಉಳಿಸಬೇಕೋ ಅಲ್ಲಿಯೇ ಹಣ ಉಳಿಸಬೇಕು. ಈ ಸಂವಿಧಾನ ಸಾರ್ಥಕತೆ ಆಗಬೇಕಾದರೆ ಚುನಾವಣೆ ಮಾಡಲೇಬೇಕು. ಅದಕ್ಕೆ ದುಡ್ಡು ಖರ್ಚು ಆಗಬೇಕಾದರೆ ಆಗಲಿ. ಚುನಾವಣೆಯ ಖರ್ಚು ಎಂದು ಹೇಳಬೇಡಿ. ಚುನಾವಣೆಯಲ್ಲಿ ಖರ್ಚಾಗುವ ಹಣವನ್ನ ಉಳಿಸಿ ದೇಶವನ್ನ ನಡೆಸುತ್ತೇವೆ ಎನ್ನುವುದು ಮೂರ್ಖತನ. ಇನ್ನೊಂದು ಅಭಿವೃದ್ಧಿ ಕುಂಠಿತ ಎನ್ನುವುದನ್ನ ಒಪ್ಪಿಕೊಳ್ಳೋಕೆ ಆಗುದಿಲ್ಲ. ಅಭಿವೃದ್ಧಿ ಎಂದರೆ ಏನು? ಬೇರೆ ರಾಜ್ಯಗಳಲ್ಲಿ ಚುನಾವಣೆ ನಡೆದರೇ ನಮ್ನ ರಾಜ್ಯದಲ್ಲಿ ಹೇಗೆ ಅಭಿವೃದ್ಧಿ ಕುಂಠಿತವಾಗುತ್ತದೆ. ಒಂದು ರೀತಿ ನೋಡಿದರೆ ಜನ ಬೇರೆ ಗುಂಗಲ್ಲಿ ಇರೋದಕ್ಕಿಂತ ಚುನಾವಣೆ ಗುಂಗಲ್ಲಿ‌ ಇರುವುದು ಲೇಸು” ಎಂದು ವಿವರಿಸಿದ್ದಾರೆ.

ಕಾಲಕಾಲಕ್ಕೆ ಚುನಾವಣೆ ನಡೆಸುವುದು ಕೂಡ ಅಭಿವೃದ್ಧಿ. ಬದಲಾಗಿ ರಸ್ತೆ ನಿರ್ಮಾಣ ಚರಂಡಿ ನಿರ್ಮಾಣದಲ್ಲಿ ಕಮಿಷನ ಪಡೆಯುವುದು ಅಭಿವೃದ್ದಿಯಲ್ಲ. ಸ್ವಾತಂತ್ರ್ಯಾನಂತರದಲ್ಲಿ ನಡೆದ ಚುನಾವಣೆಗಳು ಹೀಗೆ, ತಾನೆ ಎಂಬುದು ಅವರ ಮತ್ತೊಂದ ವಾದ. ಆಗ ಕಾಂಗ್ರೆಸ್ ಪಕ್ಷ ಒಂದೇ ಇತ್ತು. ಆಗ ತಾನೇ ದೇಶ ಸ್ವತಂತ್ರ್ಯಗೊಂಡಿತ್ತು. ಹಾಗಾಗಿ, ಚುನಾವಣೆ ನಡೆದಿತ್ತು. ಹಾಗಂತ ಇದೇ ಚುನಾವಣಾ ಮಾರ್ಗಗಳನ್ನ ಹಿಂದಿನ ರಾಜಕಾರಣಿಗಳು ಮುಂದುವರೆಸಿಕೊಂಡು ಬಂದಿಲ್ಲ. ಈಗ 47 ರಾಜಕೀಯ ಪಕ್ಷಗಳ ಪೈಕಿ 35 ರಾಜಕೀಯ ಪಕ್ಷಗಳು ಈ ರೀತಿ ಚುನಾವಣೆ ನಡೆಸಲು ತಮ್ಮ ಆಕ್ಷೇಪ ಇಲ್ಲ ಎಂದಿದ್ದಾರೆ. ಕೇವಲ 15 ಪಕ್ಷಗಳು ಮಾತ್ರ ಇದನ್ನ ವಿರೋಧಿಸಿವೆ. ಈ ಹಿಂದೆ ಈ 15 ಪಕ್ಷಗಳು ಕೂಡ ಇದರ ಬಗ್ಗೆ ಪರವಾಗಿ ಮಾತಾಡಿದ್ದವು. ಈಗ ಎಲ್ಲರೂ ಹಣಕ್ಕೆ ಪ್ರಾಮುಖ್ಯತೆ ಕೊಡತಾ ಇದಾರೆ. ದುಡ್ಡಿಗಾಗಿ ಎಂತಹ ಕೆಲಸ ಮಾಡೋದಕ್ಕೂ ಒಪ್ಪಿಗೆ ಸೂಚಿಸುವ ಜನಪ್ರತಿನಿಧಿಗಳನ್ನ ನಾವು ಎಲೆಕ್ಟ್‌ ಮಾಡಿದ್ದೇವೆ. ಸಂವಿಧಾನದ ಮೇಲೆ ನಡೆಸುತ್ತಿರುವ ಪ್ರಹಾರವನ್ನ ವಿರೋಧಿಸಬೇಕಾಗಿದೆ. ಜನಸಮೂಹ ಇದಕ್ಕೆ ಪ್ರತಿರೋಧ ಕೊಡಬೇಕಾಗಿದೆ” ಎಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

UAPA ದುರ್ಬಳಕೆ; ವಿಕಸಿತ ಭಾರತಕ್ಕೆ ಶೋಭೆ ತರಲ್ಲ: ಮೋಶಾ ಆಡಳಿತಕ್ಕೆ ಸುಪ್ರೀಂ ನ್ಯಾಯಮೂರ್ತಿ ತಪರಾಕಿ

"2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಮಾಡುವ ರಾಜಕೀಯ ಮುಖಂಡರ ಗುರಿಯಲ್ಲಿ...

ಕೇರಳ ಚುನಾವಣೆ | ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಮೇಲಿದೆ 242 ಕ್ರಿಮಿನಲ್ ಪ್ರಕರಣಗಳು

ಏಪ್ರಿಲ್ 9ರಂದು ಕೇರಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಅಭ್ಯರ್ಥಿಗಳು...

ಸರ್ಕಾರಿ ಅಧಿಕಾರಿಯ ಆತ್ಮಹತ್ಯೆ ಪ್ರಕರಣ: ಪಂಜಾಬ್ ಮಾಜಿ ಸಚಿವ ಲಾಲ್ಜಿತ್ ವಿರುದ್ಧ ಎಫ್‌ಐಆರ್

ಪಂಜಾಬ್ ರಾಜ್ಯ ಗೋದಾಮು ನಿಗಮದ (ಪಿಎಸ್‌ಡಬ್ಲ್ಯೂಸಿ) ಜಿಲ್ಲಾ ವ್ಯವಸ್ಥಾಪಕ ಗಗನ್‌ದೀಪ್ ಸಿಂಗ್...

ಕೇರಳ | ಭಿನ್ನಮತೀಯರಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮ ಆಗಲ್ಲ: ಸಿಪಿಐಎಂ

ಕೇರಳದಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿದೆ. ಈಗಾಗಲೇ ಎಲ್‌ಡಿಎಫ್, ಯುಡಿಎಫ್‌,...