ವಚನ ಚಳವಳಿಯಿಂದ ಸೌಜನ್ಯ ಹೋರಾಟದವರೆಗಿನ ಎಲ್ಲ ಹಾಡುಗಳು ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿವೆ: ಪಿಚ್ಚಳ್ಳಿ ಶ್ರೀನಿವಾಸ್

Date:

“12ನೇ ಶತಮಾನದ ವಚನ ಚಳುವಳಿಯಿಂದ, ಇಂದು ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಸೌಜನ್ಯ ಹೋರಾಟದ ತನಕವೂ ಸೃಷ್ಟಿಯಾದ ಅಷ್ಟು ಹೋರಾಟದ ಹಾಡುಗಳು ಕನ್ನಡ ಸಾಹಿತ್ಯ ಲೋಕಕ್ಕೆ ಸಂಬಂಧಿಸಿವೆ. ಈ ಹೋರಾಟದ ಹಾಡುಗಳು, ಜನರ ಬದುಕು-ಬವಣೆ, ಸುಖ-ದುಖ‌ಃ ಗಳಿಗೆ ಸಮಾಜ ಸ್ಪಂದಿಸಿದ ಬಗೆಯನ್ನು ಹೇಳುತ್ತದೆ. ಜೊತೆಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಬದಲಾಗುವ ಎಲ್ಲ ಕಾಲವನ್ನು ಈ ಹಾಡುಗಳು ಕಟ್ಟಿಕೊಡುತ್ತವೆ. ಈ ನೆಲೆಕ್ಕೆ ಬೇಕಿರುವುದು ಹೋರಾಟದ ಸಾಹಿತ್ಯವೇ ಹೊರತು ಬೇರಾವುದು ಅಲ್ಲ” ಎಂದು ಹಿರಿಯ ಹೋರಾಟಗಾರರಾದ ಪಿಚ್ಚಳ್ಳಿ ಶ್ರೀನಿವಾಸ್ ಹೇಳಿದರು.

ಭಾನುವಾರ ಬೆಂಗಳೂರು ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ನಡೆದ ಸಮಾಜಮುಖಿ ಸಾಹಿತ್ಯ ಸಮ್ಮೇಳನದಲ್ಲಿ “ಕನ್ನಡದಲ್ಲಿ ಹೋರಾಟದ ಸಾಹಿತ್ಯ ಏಕಿಲ್ಲ..?” ಎಂಬ ಗೋಷ್ಠಿಯಲ್ಲಿ ಮಾತನಾಡಿದ ಅವರು “ಕರ್ನಾಟಕದಲ್ಲಿ ಮೊದಲು ವಚನ ಚಳುವಳಿಯಿಂದ ಮೊದಲುಗೊಂಡು, ಇಲ್ಲಿಯ ತನಕ ನಡೆದಿರುವ ದಲಿತ, ರೈತ, ಕಾರ್ಮಿಕ, ಮಹಿಳಾ ಚಳುವಳಿಗಳಲ್ಲಿ ಅನೇಕ ಸಾಹಿತ್ಯ ಸೃಷ್ಟಿಯಾಗಿ ಬಂದಿದೆ. ಈ ಗೋಷ್ಠಿಗೆ ನೀಡಿದ ಶೀರ್ಷಿಕೆಯೆ ( ಶೀರ್ಷಿಕೆ : ಕನ್ನಡದಲ್ಲಿ ಹೋರಾಟದ ಸಾಹಿತ್ಯ ಏಕಿಲ್ಲ..?) ತಪ್ಪು. ಕನ್ನಡ ಸಾಹಿತ್ಯದಲ್ಲಿ ಅನೇಕ ಚಳುವಳಿಗಳಲ್ಲಿ ಹಾಡಿನ ಮೂಲಕವೇ ಸಾಹಿತ್ಯ ಹುಟ್ಟಿದೆ” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇದನ್ನು ಓದಿದ್ದೀರಾ? : ಪ್ರತಿಭಟನೆಯೇ ದೇಶದ್ರೋಹವಾಗುವ ದೇಶದಲ್ಲಿ ಪ್ರಜಾತಂತ್ರ ಬಿಕ್ಕಟ್ಟಿನ ಹಾದಿಯಲ್ಲಿರುತ್ತದೆ: ಎ ನಾರಾಯಣ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ವಿದ್ವಾಂಸರಾದ ಹಿ.ಶಿ.ರಾಮಚಂದ್ರೇಗೌಡ  “ವಚನ ಚಳುವಳಿಯಿಂದ ಮೊದಲುಗೊಂಡು ಇಲ್ಲಿಯ ತನಕವು ನಮ್ಮಲ್ಲಿ ಹೋರಾಟದ ಸಾಹಿತ್ಯ ಬಂದಿದೆ. ಅದು ಚಳುವಳಿಗಳ ಮುಖಾಂತರ ಬಂದಿದೆ. ಎಲ್ಲ ಚಳುವಳಿಗೆ ಮುನ್ನುಡಿಯಂತೆ ವಚನ ಚಳುವಳಿ ಬಂದಿದೆ. ಅನೇಕ ಚಳುವಳಿಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ದೂರದರ್ಶಕವಾಗಿ ಜೊತೆಗೆ ನಾಯಕತ್ವದ ಗುಣವು ಇದ್ದಿದ್ದರಿಂದ ಸಾಹಿತ್ಯ ಜೊತೆಜೊತೆಗೆ ಬಂದಿದೆ” ಎಂದರು.

Screenshot 2025 11 09 at 6.12.00

“ರೈತ ಚಳುವಳಿ ಆರಂಭವಾದಾಗ ಅನೇಕ ಹಾಡುಗಳು ಹುಟ್ಟಿವೆ. ಅದರಲ್ಲಿ ಬಂಡಾಯ ಸಾಹಿತ್ಯ ಇದೆ. ಅದರಲ್ಲಿ ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಚರ್ಚೆಗಳನ್ನು ನಡೆಸಿದ್ದೆವೆ. ಇವೆಲ್ಲದಕ್ಕೂ ಸಾಹಿತಿಗಳು ಸ್ಪಂದಿಸಿದ್ದಾರೆಯೇ ಹೊರತು ಜನಸಾಮಾನ್ಯರು ಸ್ಪಂದಿಸಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ದಲಿತ ಚಳುವಳಿಗಳು ನಮ್ಮಲ್ಲಿ ಸಮಗ್ರವಾಗಿ ನಡೆದವು. ದೇವನೂರು ಮಹಾದೇವ, ಪ್ರೊ.ಬಿ.ಕೃಷ್ಣಪ್ಪ ಅವರ ನೇತೃತ್ವದಲ್ಲಿ ದಲಿತ ಚಳುವಳಿಗೆ ಒಳ್ಳೆಯ ನಾಯಕತ್ವ ಸಿಕ್ಕಿತು. ಇವರ ನೇತೃತ್ವದಲ್ಲಿ ಯಾವುದಾದರೂ ಚಳುವಳಿ ನಡೆದರೆ ಅನೇಕ ಜನ ಸೇರುತ್ತಿದ್ದರು. ಜೊತೆಗೆ ಅನೇಕ ಹಾಡುಗಳು ಸಹ ಸೃಷ್ಟಿಯಾದವು. ಈ ಹಾಡುಗಳು ಜನಪರವಾಗಿದ್ದರಿಂದ, ಅನೇಕ ಜನರನ್ನು ಸೆಳೆಯುತ್ತಿದ್ದವು. ಓದದವರಿಗಾಗಿ ಬರೆದ ಸಾಹಿತ್ಯ ಎಂದರೆ ಅದು ಚಳುವಳಿಗಳಲ್ಲಿ ಹುಟ್ಟಿದ ಹಾಡುಗಳು. ಅವುಗಳು ಜನಪರವಾಗಿದ್ದವು” ಎಂದರು.

“ರೈತ ಚಳುವಳಿ ಕನ್ನಡ ನಾಡಿನಲ್ಲಿ ಬಹಳ ಮುಖ್ಯವಾಗುತ್ತದೆ. ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಅನೇಕ ಹೋರಾಟಗಳು ಜನಪರವಾಗಿದ್ದವು. ರೈತ ಚಳುವಳಿಯು ಜಾತ್ಯಾತೀತ ತತ್ವವನ್ನು, ಅಂತರಜಾತಿ ವಿವಾಹವನ್ನು ಮಾಡಿಸುವ ಮೂಲಕ ದೊಡ್ಡ ನಾಯಕತ್ವದ ಗುಣವನ್ನು ಕರ್ನಾಟಕಕ್ಕೆ ಪರಿಚಯಿಸಿತು” ಎಂದು ಹೇಳಿದರು.

“ವಿಶೇಷವಾಗಿ ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ಕರ್ನಾಟಕದಲ್ಲಿ ಹುಟ್ಟಿದ ಎಲ್ಲ ಚಳುವಳಿಗಳು ಶೂದ್ರರ ಪರವಾಗಿಯೇ ಹುಟ್ಟಿದವು. ಶೂದ್ರರು ಅಸಂಘಟಿತ ವರ್ಗ, ಸಂಘಟಿತವಾಗಿ ಯಾವುದು ತಮ್ಮ ಸಂಸ್ಕೃತಿ ಎಂಬುದು ಇದುವರೆಗೂ ಕಂಡುಕೊಳ್ಳಲು ಸೋಲುತ್ತಿದ್ದಾರೆ. ಇಂದಿಗೂ ಮೇಲ್ವರ್ಗದ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

“ನಮ್ಮ ಶತ್ರು ಎಂದಿಗೂ ಒಂಟಿಯಲ್ಲ. ಇವರುಗಳು ಸ್ಥಳೀಯ, ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ಇದ್ದಾರೆ. ಇವರುಗಳೇ ಕಾರ್ಪೋರೇಟರ್ಗಳು. ಇವರೆಲ್ಲರೂ ರಾಜಕಾರಣಿಗಳನ್ನು ಸಾಕು ನಾಯಿಗಳ ತರ ಸಾಕುತ್ತಿದ್ದಾರೆ. ಅದರ ವಿರುದ್ಧವಾಗಿಯೇ ರೈತ ಚಳವಳಿ ದೊಡ್ಡ ಮಟ್ಟದ್ದಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ನೇತೃತ್ವದಲ್ಲಿ ನಡೆದ ಹೋರಾಟದ ದಿನ”ಗಳನ್ನು ನೆನೆಸಿಕೊಂಡರು.

Screenshot 2025 11 09 at 6.13.58

ಈ ಗೋಷ್ಠಿಯಲ್ಲಿ ಮಾತನಾಡಿದ, ರೈತ ನಾಯಕಿ ಸುನಂದ ಜಯರಾಮ್ “ರೈತ ಚಳುವಳಿ ಕರ್ನಾಟಕದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಲೋಹಿಯಾ, ಅಂಬೇಡ್ಕರ್ ವಿಚಾರದಾರೆಗಲನ್ನು ಒಳಗೊಂಡಿತ್ತು. ಅದರ ಜೊತೆಗೆ ಕರ್ನಾಟಕದಲ್ಲಿ ನಡೆದ ಅನೇಕ ಕಾರ್ಮಿಕ, ದಲಿತ, ಮಹಿಳಾ ಚಳುವಳಿಗಳಲ್ಲಿ ದೊಡ್ಡ ಮಟ್ಟದಲ್ಲಿಯೇ ಸಾಹಿತ್ಯ ಸೃಷ್ಟಿಯಾಗಿದೆ. ಕನ್ನಡದಲ್ಲಿ ಹೊರಾಟದ ಸಾಹಿತ್ಯ ಇಲ್ಲ ಎನ್ನುವುದೇ ತಪ್ಪು” ಎಂದರು.

ಈ ಗೋಷ್ಠಿಯ ಸಮನ್ವಯತೆಯನ್ನು ಟಿ.ಹೆಚ್.ಲವಕುಮಾರ್ ಅವರು ವಹಿಸಿಕೊಂಡಿದ್ದರು.

Screenshot 2025 11 09 at 5.11.13 1
WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರತಿಭಟನೆಯೇ ದೇಶದ್ರೋಹವಾಗುವ ದೇಶದಲ್ಲಿ ಪ್ರಜಾತಂತ್ರ ಬಿಕ್ಕಟ್ಟಿನ ಹಾದಿಯಲ್ಲಿರುತ್ತದೆ: ಎ ನಾರಾಯಣ

"ಯಾವ ದೇಶದಲ್ಲಿ ಅಧಿಕಾರದಲ್ಲಿರುವವರಿಗೆ ವಿಶ್ವವಿದ್ಯಾನಿಲಯಗಳು ಕಂಡಾಗ, ಬೀದಿಯಲ್ಲಿ ನಡೆಯುವ ಪ್ರತಿಭಟನೆಗಳನ್ನು ಕಂಡಾಗ...

ಸಾಹಿತ್ಯ-ಸಿನಿಮಾ ಎರಡಕ್ಕೂ ಅನುಭವ ಲೋಕ ಬಹಳ ಮುಖ್ಯ : ಗಿರೀಶ್ ಕಾಸರವಳ್ಳಿ

ಸಿನಿಮಾ ಎಂಬುದೆ ಒಂದು ಅನುಭವ ಲೋಕ. ಅದರೊಳಗೆ ತಮ್ಮ ಅನುಭವವನ್ನು ಬಳಸಿ,...

ಬೆಂಗಳೂರು | ಫ್ರೀಡಂ ಪಾರ್ಕ್ ಸಮಗ್ರ ಅಭಿವೃದ್ಧಿಗೆ ಬಿಬಿಎಂಪಿ ಆಯುಕ್ತ ರಾಜೇಂದ್ರ ಚೋಳನ್ ಸೂಚನೆ

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸ್ವಾತಂತ್ರ್ಯ ಉದ್ಯಾನವನ (ಫ್ರೀಡಂ ಪಾರ್ಕ್)...