ಶೆಟ್ಟರ್-ಸವದಿ ಜೋಡಿ ಹಣಿಯುವ ಹೊಣೆ ಬಿಎಸ್‌ವೈ ಹೆಗಲಿಗೆ; ಫಲ ನೀಡಬಹುದೇ ಬಿಜೆಪಿ ತಂತ್ರ?

Date:

  • ಶೆಟ್ಟರ್- ಸವದಿ ಜೋಡಿ ಹಣಿಯುವ ಹೊಣೆ ಬಿಎಸ್ ವೈ ಹೆಗಲಿಗೇರಿಸಿದ ವಿಘ್ನ ಸಂತೋಷಿ
  • ಮಾತು ತಪ್ಪಿದ ಪಕ್ಷದ ವಿರುದ್ಧ ಗೆದ್ದು ಬೀಗುವರೇ ಜಗದೀಶ್ ಶೆಟ್ಟರ್- ಲಕ್ಷ್ಮಣ ಸವದಿ

ಬಿಜೆಪಿಯ ‘ವಿಘ್ನ ಸಂತೋಷಿ’ಗಳ ರಣತಂತ್ರದೊಳಗೆ ಸಿಲುಕಿರುವ ಬಿ ಎಸ್ ಯಡಿಯೂರಪ್ಪನವರಿಗೆ ಇದೀಗ ಮರ ಮತ್ತು ಕೊಡಲಿ ಹಿಡಿಕೆಯ ಸಂಬಂಧ ಸನ್ನಿವೇಶ ಎದುರಾಗಿದೆ.

ವೃಕ್ಷ ಸಂಕುಲಕ್ಕೆ ಕೊಡಲಿ ಕಾವೇ ಕಂಟಕವಾದಂತೆ ಲಿಂಗಾಯತ ಸಮುದಾಯದ ಶೆಟ್ಟರ್ –ಸವದಿ ಜೋಡಿ ಹಣಿಯಲು ಬಿ ಎಲ್ ಸಂತೋಷ್ ಬಳಗ ಲಿಂಗಾಯತ ಸಮುದಾಯದ ಪ್ರಬಲ ನಾಯಕ ಬಿಎಎಸ್ವೈ ಅವರನ್ನು ಮುಂದೆ ಬಿಟ್ಟಿದೆ.

ಒಂದು ಕಾಲಕ್ಕೆ ತಾನೇ ಬದಿಗೆ ಸರಿಸಿದ್ದ ಯಡಿಯೂರಪ್ಪ ಅವರನ್ನು ಮತ್ತೆ ಮುನ್ನೆಲೆ ಸಂತೋಷ್ ಬಳಗ ಕರೆತಂದಿದ್ದು ಇದೇ ಲಿಂಗಾಯತ ರಾಜಕಾರಣದ ಬೇಳೆ ಬೇಯಿಸಿಕೊಳ್ಳಲು ಎನ್ನುವುದು ಈಗ ಜಗಜ್ಜಾಹೀರಾಗಿರುವ ಸತ್ಯ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಗ ವಿಜಯೇಂದ್ರರ ರಾಜಕೀಯ ಭವಿಷ್ಯ ಭದ್ರಗೊಳಿಸಲು ತಾನೇ ತ್ಯಾಗಕ್ಕೆ ಸಿದ್ದನಾಗಿ, ವರುಣಾದ ಬಲಿಪೀಠದಿಂದ ಅವರನ್ನು ರಕ್ಷಿಸಿ ಶಿಕಾರಿಪುರದಲ್ಲಿ ಸೇಫ್ ಮಾಡಲು ತೆಗೆದುಕೊಂಡ ಸಹಾಯಕ್ಕಾಗಿ ಈಗ ಯಡಿಯೂರಪ್ಪ ಬಿಜೆಪಿ ಮತ್ತು ಸಂತೋಷ್ ಪಾಲಿಗೆ ಜೀ ಹುಜೂರ್ ಪಾಲಕ.

ಈ ಲಾಭದ ಲೆಕ್ಕಾಚಾರವನ್ನೇ ತಮ್ಮ ದಾಳವಾಗಿಸಿಕೊಂಡಿರುವ ಸಂತೋಷ್ ಮತ್ತವರ ಬಳಗ, ಪಕ್ಷ ಬಿಟ್ಟ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿಯವರನ್ನು ಮಟ್ಟ ಹಾಕಲು ಬಳಸಿಕೊಳ್ಳುತ್ತಿದೆ.

ಲಿಂಗಾಯತರನ್ನು ಹಣಿಯಲು ಲಿಂಗಾಯರತನ್ನೇ ಮುಂದೆ ಬಿಡುವ ರಣತಂತ್ರ ಇವರದ್ದು. ಅಂದರೆ ಇದರ ಲಾಭ ನಷ್ಟದ ಹೊಣೆ ಎರಡೂ ಬಿಜೆಪಿಯ ಹಿರಿಯ ಲಿಂಗಾಯತ ನಾಯಕ ಯಡಿಯೂರಪ್ಪ ಹೆಗಲಿಗೆ ಹೋಗುವಂತೆ ಮಾಡುವುದು ಅವರ ಸ್ಪಷ್ಟ ಉದ್ದೇಶ.

ಈ ಪ್ರತಿಷ್ಠೆಯ ಹೋರಾಟದಲ್ಲಿ ಗೆದ್ದು ಬಂದರೆ ನಾವು ತೆಗೆದುಕೊಂಡ ನಿರ್ಧಾರಕ್ಕೆ ಸಿಕ್ಕ ಜಯ ಎನ್ನುವುದು, ಸೋತರೆ ಜಾತಿ ಪ್ರೇಮಕ್ಕೆ ಕಟ್ಟು ಬಿದ್ದು ಯಡಿಯೂರಪ್ಪನವರೇ ಪಕ್ಷಕ್ಕೆ ಕಳಂಕ ತಂದರು ಎಂದು ಹೇಳಿ ಮರಳಿ ಅವರನ್ನು ಪಕ್ಷದಿಂದ ದೂರ ಸರಿಸುವುದು ಸಂತೋಷ ಕೂಟದ ಲೆಕ್ಕಾಚಾರ.

ಹೀಗಾಗಿ ಪಕ್ಷ ಬಿಟ್ಟ ಇಬ್ಬರು ಲಿಂಗಾಯತ ನಾಯಕರನ್ನು ಕಟ್ಟಿ ಹಾಕಲು ಬಿಜೆಪಿ ಈಗ ಪ್ರತ್ಯೇಕ ಪಡೆಯೊಂದನ್ನು ರೂಪಿಸಿ ರಣಕಣದಲ್ಲಿ ಅವರನ್ನು ಕಟ್ಟಿ ಹಾಕಲು ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಸಾಲು ಸಾಲು ಸಭೆ ನಡೆಸಲು ಆದೇಶ ನೀಡಿರುವ ಸಂತೋಷ ಪಡೆ ಸಿಕ್ಕಸಿಕ್ಕಲ್ಲಿ ಈ ಇಬ್ಬರೂ ನಾಯಕರ ವಿರುದ್ದ ವಾಗ್ದಾಳಿ ನಡೆಸುವಂತೆ ಸೂಚಿಸಿದೆ. ಜೊತೆಗೆ ಈ ಜವಾಬ್ದಾರಿಯನ್ನು ಪಕ್ಷದ ಲಿಂಗಾಯತ ಹಾಗೂ ರಾಷ್ಟ್ರೀಯ ನಾಯಕರ ಹೆಗಲಿಗೇರಿಸಿದೆ.

ಕಳೆದೆರಡು ದಿನಗಳಿಂದ ಸವದಿ ಹಾಗೂ ಶೆಟ್ಟರ್ ಕ್ಷೇತ್ರಗಳಲ್ಲಿ ಸರಣಿ ಸಭೆ ನಡೆಸಿರುವ ಬಿಜೆಪಿ, ಅಲ್ಲಿನ ಲಿಂಗಾಯತ ಸಮುದಾಯವನ್ನೇ ಗುರಿಯಾಗಿಸಿಕೊಂಡು ಪಕ್ಷಕ್ಕೆ ಶೆಟ್ಟರ್ -ಸವದಿ ಜೋಡಿ ಮಾಡಿರುವ ದ್ರೋಹದ ಬಗ್ಗೆ ತಿಳಿವಳಿಕೆ ಮೂಡಿಸಿ ಅವರನ್ನು ಎತ್ತಿಕಟ್ಟುತ್ತಿದೆ.

ಹಾಗೆಯೇ ಈ ನಾಯಕರಿಬ್ಬರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ತಮ್ಮ ಮೇಲೆ ಬರುವ ಆರೋಪಗಳಿಗೆ ಉತ್ತರ ಕೊಡುವುದರಲ್ಲೇ ಕಾಲಹರಣ ಮಾಡುವಂತೆ ಮಾಡುವ ಪ್ರಯೋಗವನ್ನೂ ಸಂತೋಷ ಪಡೆ ಮಾಡಿದೆ.

ಇವಿಷ್ಟು ಸಾಲದು ಎನ್ನುವಂತೆ ಯಡಿಯೂರಪ್ಪನವರ ಬಾಯಿಯಿಂದಲೇ ಶೆಟ್ಟರ್ ಸೋಲಿಸುವ ಜವಾಬ್ದಾರಿ ನನ್ನದು ಎಂದು ಹೇಳಿಸಿದೆ. ಇದಿಷ್ಟೂ ಸಾಲದು ಎನ್ನುವಂತೆ ಇವರಿಬ್ಬರ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇದ್ದ ಕಾರಣದಿಂದ ಅವರಿಗೆ ಟಿಕೆಟ್ ಕೊಡಲಿಲ್ಲ. ಇವರು ಕ್ಷೇತ್ರವನ್ನು ಸರಿಯಾಗ ನೋಡಿಕೊಳ್ಳಲಿಲ್ಲ ಎಂದು ಬಿಂಬಿಸುವ ಪ್ರಯತ್ನವನ್ನೂ ಬಿಜೆಪಿ ಮಾಡುತ್ತಿದೆ.

ಈ ಸುದ್ದಿ ಓದಿದ್ದೀರಾ? :ಜಗದೀಶ್ ಶೆಟ್ಟರ್ ಗೆಲ್ಲುವುದು ಶತಸಿದ್ಧ : ರಕ್ತದಲ್ಲಿ ಪತ್ರ…

ಇದರ ಜೊತೆಜೊತೆಗೆ ದೆಹಲಿ ನಾಯಕರಿಂದಲೂ ಇಬ್ಬರ ಬಗ್ಗೆ ವಾಗ್ದಾಳಿ ನಡೆಸುವ ಹೇಳಿಕೆಗಳನ್ನು ಕೊಡಿಸಿ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಸುಶೀಲಕುಮಾರ ಮೋದಿ ಇವರಿಬ್ಬರ ವಿರುದ್ಧ ಕಿಡಿಕಾರಿದ್ದಾರೆ.

‘ವರಿಷ್ಠರ ಮಾತು ಧಿಕ್ಕರಿಸಿ ಇವರಿಬ್ಬರೂ ಕಾಂಗ್ರೆಸ್‌ಗೆ ಹೋಗಿದ್ದಾರೆ. ಬಿಜೆಪಿಯಿಂದ ಬಂಡಾಯವೆದ್ದು ಹೊರಹೋದವರು ಯಾರೂ ಗೆದ್ದಿಲ್ಲ. ಬೇರೆಯವರ ಮುಂದೆ ಇವರು ನೀರಿನಿಂದ ಹೊರತೆಗೆದ ಮೀನಿನಂತಾಗುತ್ತಾರೆ. ನೋಡಿ’ ಎಂದು ಹೇಳಿದ್ದಾರೆ.

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನವ ಬಿಜೆಪಿ ಮತ್ತು ಸಂತೋಷ ಕೂಟದ ತಂತ್ರ ಹೇಗೆ ವರ್ಕ್ ಆಗುತ್ತದೆ? ಮತ್ತು ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಈ ತಂತ್ರಗಳಿಗೆ ಪ್ರತಿತಂತ್ರ ಹೆಣೆದು, ಹೇಗೆ ಗೆದ್ದು ತೋರಿಸುತ್ತಾರೆ ಎಂಬುದು ಸದ್ಯದ ಕುತೂಹಲ.

e761f9abfdc9ef87e6de54ca37fd3aa1e8b74659897c34d58aff74e9b6c9aa14?s=150&d=mp&r=g
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...