ಚಿಕ್ಕಮಗಳೂರು | ಜಾತಿ ವಿನಾಶ ಅಂಬೇಡ್ಕರ್ ಅವರ ವಾದವಾಗಿತ್ತು : ಚಿಂತಕ ಶಿವಸುಂದರ್

Date:

ಚಿಕ್ಕಮಗಳೂರಿನ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ಎದ್ದೇಳು ಕರ್ನಾಟಕ ಜಿಲ್ಲಾ ಸಮಿತಿಯಿಂದ ‘ ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿಂತನೆ ಹಾಗೂ ಸಂವಿಧಾನದ ಆಶಯ ಮತ್ತು ಮುಂದಿನ ನಡೆ ‘ ಕುರಿತಾಗಿ ನಡೆದ ವಿಚಾರ ಸಂಕೀರಣದಲ್ಲಿ ಚಿಂತಕ, ಲೇಖಕರಾದ ಶಿವಸುಂದರ್ ಮಾತನಾಡಿ ಜಾತಿ ವಿನಾಶ ಅಂಬೇಡ್ಕರ್ ಅವರ ಪ್ರಬಲವಾದ ವಾದವಾಗಿತ್ತು ಎಂದರು.

ರಾಜ್ಯದಲ್ಲಿ ಬದಲಾವಣೆ ನಿರೀಕ್ಷಿಸಿ ಜನ ಹಿತ ಕಾಯುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರವನ್ನು ತರಲಾಯಿತು. ಆದರೆ, ಈ ಸರ್ಕಾರವು ಸಹ ಬಿಜೆಪಿಗೆ ಹೊರತಾಗಿಲ್ಲ. ಕೇಂದ್ರ ಸರ್ಕಾರ ತಂದ ರೈತ ವಿರೋಧಿ ಕಾಯ್ದೆಗಳನ್ನು ರಾಜ್ಯದಲ್ಲಿ ಕಾಂಗ್ರೆಸ್ ಹಿಂದಕ್ಕೆ ಪಡೆಯಲಿಲ್ಲ ಇದು ನಿಜಕ್ಕೂ ವಿಪರ್ಯಾಸ.

ರಾಜ್ಯ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಎಲ್ಲರೂ ಬಂಡವಾಳ ಶಾಹಿಗಳಿಗೆ ಮಣೆ ಹಾಕುವವರೇ ಬಿಜೆಪಿ, ಜೆಡಿಎಸ್, ಈಗಿನ ಕಾಂಗ್ರೆಸ್ ಆಗಲಿ ಎಲ್ಲವೂ ಸಹ ಜನವಿರೋಧಿಗಳೇ. ಇಡೀ ದೇಶವೇ ಬ್ರಾಹ್ಮಣ ಶಾಹಿಗಳ ಕಪಿಮುಷ್ಟಿಯಲ್ಲಿ ಸಿಲುಕಿದೆ. ಅದರ ಹಿಡಿತದಲ್ಲಿಯೇ ವ್ಯವಸ್ಥೆ ಸಾಗುತ್ತಿದೆ. ಜಾತಿ, ಧರ್ಮ ಬಡತನದ ವ್ಯವಸ್ಥೆಗೆ ನೇರ ಕಾರಣ ಬ್ರಾಹ್ಮಣ ವ್ಯವಸ್ಥೆ. ಅಸಮಾನತೆ ಆಧಾರದಲ್ಲಿಯೇ ಇವತ್ತಿಗೂ ದೇಶ ನಲುಗಿದೆ. ಸಮಾನತೆ ಇಲ್ಲವೇ ಇಲ್ಲ ಎಂದು ವಿಷಾಧಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

‘ಉಪನಿಷತ್, ವೇಧ, ಪುರಾಣ ಯಾವುದೇ ಆಗಲಿ ಸಮಾನತೆ ಹೇಳಿಲ್ಲ. ಎಲ್ಲವೂ ಪುರುಷ ಪ್ರಧಾನವೇ. ತನ್ನ ಹಿಡಿತ ಸಾದಿಸಿದ್ದೆ ಹೆಚ್ಚು. ಅದರ ಜೊತೆಗೆ ಅಧಿಕಾರವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ.’ ಎಂತಹ ದುರ್ದೈವ ಎಂದರೆ ದೇಶದಲ್ಲಿ ಮತದಾನದ ಹಕ್ಕಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಸ್ವರಾಜ್ಯ ನಮ್ಮ ಹಕ್ಕು ಎಂದಿದ್ದ ಬಾಲ ಗಂಗಾಧರನಾಥ ತಿಲಕರು ಸಾರ್ವತ್ರಿಕ ಮತದಾನವನ್ನು ವಿರೋಧಿಸಿದ್ದರು.ಸ್ವಾತಂತ್ರ್ಯ ನಂತರ ಮತದಾನದ ಹಕ್ಕು ಬಂದಿದೆ.

ಸಂವಿಧಾನದಡಿ ನಾವೆಲ್ಲರೂ ಸಮಾನರು ಆದರೆ, ಇವತ್ತಿಗೂ ನಾವೆಲ್ಲಾ ಅಧಿಕಾರ ವಂಚಿತರು. ಸಾಮಾಜಿಕ ಹಾಗೂ ಆರ್ಥಿಕತೆ ಸಮಾಜದ ವ್ಯವಸ್ಥೆಗೆ ಬಹಳ ಮುಖ್ಯವಾದದ್ದು ಎನ್ನುವುದು ಅಂಬೇಡ್ಕರ್ ಅವರ ಪ್ರತಿಪಾದನೆಯಾಗಿತ್ತು.

” ರಾಜಕೀಯ ಪ್ರಜಾತಂತ್ರ ನಾಶವಾಗಿದೆ. ಅಂಬೇಡ್ಕರ್ ಅವರು ಬರೆದ ಸಂವಿಧಾನದ ಮೇಲು ದಾಳಿಯಾಗುತ್ತಿದೆ.
ರಾಜಕೀಯವಾಗಿ ಬಾಲಾಡ್ಯರಾದರು ಆರ್ಥಿಕ, ಸಾಮಾಜಿಕ ಅಸಮತೋಲನ ವ್ಯವಸ್ಥೆಯಿಂದ ಈಗಲೂ ಅಸಮಾನರೆ. ಜಾತಿ ವಿನಾಶದಿಂದ ಸಮಾಜ ಸುಧಾರಣೆ ಸಾಧ್ಯ ಎಂಬುದು ಅಂಬೇಡ್ಕರ್ ಅವರ ಪ್ರಬಲ ಪ್ರತಿಪಾದನೆ ಆಗಿತ್ತು. ಆ ನಿಟ್ಟಿನಲ್ಲಿ ಪುಸ್ತಕವನ್ನು ಸಹ ಹೊರ ತಂದಿದ್ದಾರೆ. ವಿಶೇಷ ಅಂದರೆ ನಡೆಯದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರು ಮಾಡಿದ ಭಾಷಣ.”

ಜಾತಿಯ ಮೂಲ ಇರುವುದು ಹಿಂದೂ ಧರ್ಮದಿಂದ. ಜಾತಿ ವಿನಾಶ ಸಾಧ್ಯ ಇರುವುದು ಸಂವಿಧಾನದಿಂದ. ‘ ಅಂಬೇಡ್ಕರ್ ಬರೆದ ಸಂವಿಧಾನ. ಆದರೆ, ಅಂಬೇಡ್ಕರ್ ಬಯಸಿದ ಸಂವಿಧಾನವೇ ‘ ಪ್ರಶ್ನಿಸಿಕೊಳ್ಳಬೇಕಾದ ಪರಿಸ್ಥಿತಿ.

ಅಂದು ಅಂಬೇಡ್ಕರ್ ಅವರು ಈ ಸಮಾಜದಲ್ಲಿ ದಲಿತ ಎನ್ನುವ ಕಾರಣಕ್ಕೆ ಅನುಭವಿಸಿದ ಯಾತನೆ ಏನಿತ್ತು ಅದು ಇವತ್ತಿಗೂ ಮುಂದುವರಿದಿದೆ. ಪಟ್ಟಣ ಪ್ರದೇಶಗಳಲ್ಲಿ ಜಾತಿ ಹೇಳಿಕೊಳ್ಳಲು ಆಗದ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ.

ಭೂಮಿ (ಸಂಪತ್ತು) ರಾಷ್ಟ್ರೀಕರಣಗೊಳ್ಳಬೇಕು ಎನ್ನುವುದು ಅಂಬೇಡ್ಕರ್ ಅವರ ವಾದ. ಎಲ್ಲರಿಗೂ ಸಮಾನ ಹಂಚಿಕೆಯಾಗಬೇಕು. ಇಲ್ಲಿ ಎಲ್ಲರೂ ಒಂದೇ, ಸಮಾನರು ಎನ್ನುವುದು. ಆದರೆ. ಇದುವರಿಗೆ ಅಂತಹ ಬದಲಾವಣೆ ದೇಶದಲ್ಲಿ ಕಾಣಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಮಂಡ್ಯ | ಮಾದಿಗರ ಕಿವಿಗೆ ಸರ್ಕಾರ ಹೂ ಮುಡಿಸಿದೆ : ಭಾಸ್ಕರ್ ಪ್ರಸಾದ್ ಕಿಡಿ

ವಿಚಾರ ಸಂಕೀರಣದಲ್ಲಿ ಗೌಸ್ ಮೋಹಿದ್ದಿನ್, ಗೌಸ್ ಮುನೀರ್, ಅತೀಕ್, ಗಡಿಕಲ್ ಸುರೇಶ್, ರೀತು, ಮುನ್ನ, ಕೆವಿಎಸ್ ಸಂಘಟನೆ, ಎದ್ದೇಳು ಕರ್ನಾಟಕ ಸಂಘಟನೆ ಕಾರ್ಯಕರ್ತರು ಸೇರಿದಂತೆ ಇನ್ನಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಕಾಂಗ್ರೆಸ್‌ಗೆ ಮತ ಹಾಕಿ ಎಂದ ಜೆಡಿಎಸ್‌ ಬೋಜೆಗೌಡ; ವಿಡಿಯೋ ವೈರಲ್‌

ಜೆಡಿಎಸ್‌ಗೆ ಮುಜುಗರ ತರಿಸಿದ ಎಂಎಲ್‌ಸಿ ಬೋಜೆಗೌಡ ಹೇಳಿಕೆ ಜೆಡಿಎಸ್‌ ತೊರೆದು ಕಾಂಗ್ರೇಸ್ ಸೇರಿದ್ದ...

ಚಿಕ್ಕಮಗಳೂರು | ತಪ್ಪಿದ ಕೈ ಟಿಕೆಟ್‌; ಬಂಡಾಯ ಅಭ್ಯರ್ಥಿಯಾಗಿ ಗೋಪಿಕೃಷ್ಣ ಕಣಕ್ಕೆ

ಟಿಕೆಟ್‌ ತಪ್ಪಲು ಸಿದ್ದರಾಮಯ್ಯ ಕಾರಣ; ಗೋಪಿಕೃಷ್ಣ ಆರೋಪ ಮಡಿವಾಳ ಸಮುದಾಯಕ್ಕೆ ಟಿಕೆಟ್ ನೀಡುವುದಾಗಿ...

ಚಿಕ್ಕಮಗಳೂರು | ಶಾಸಕ ಉಡುಗೊರೆಯಾಗಿ ನೀಡಿದ್ದ ಕುಕ್ಕರ್‌ ಸ್ಫೋಟ; ಗ್ರಾಮಸ್ಥರ ಆಕ್ರೋಶ

ಕೊಪ್ಪ ತಾಲೂಕಿನ ಶಾನುವಳ್ಳಿಯ ದೇವರಾಜ್ ಮನೆಯಲ್ಲಿ ಘಟನೆ ₹450 ಬೆಲೆಯ ಕುಕ್ಕರ್‌ ಮೇಲೆ...

ಚಿಕ್ಕಮಗಳೂರು | ಅಕ್ರಮ ಮದ್ಯಕ್ಕೆ ನಾಲ್ಕನೇ ಬಲಿ; ರಸ್ತೆಯಲ್ಲಿ ಶವವಿಟ್ಟು ಪ್ರತಿಭಟಿಸಿದ ಗ್ರಾಮಸ್ಥರು

ಅಧಿಕಾರಿಗಳು ಗ್ರಾಮಕ್ಕೆ ಬಂದು ಅಕ್ರಮ ಮದ್ಯ ಮಾರಾಟ ತಡೆಯುವಂತೆ ಆಗ್ರಹ ಮದ್ಯ ಸೇವನೆಯಿಂದ...