ಚುನಾವಣೆಯ ಹೊತ್ತಲ್ಲೇ ಮಹತ್ವದ ಸಮೀಕ್ಷೆ; ಟಿವಿ ಚಾನೆಲ್‌ಗಳನ್ನು ಕನ್ನಡಿಗರು ತಿರಸ್ಕರಿಸುತ್ತಿದ್ದಾರೆ : ಇಲ್ಲಿದೆ ನೋಡಿ ಅಂಕಿ-ಅಂಶ, ಭಾಗ 1

Date:

ಹಲವರಿಗೆ ಇದು ಆಶ್ಚರ್ಯಕರ ಸಂಗತಿ. ಹಾಗಾಗಿ ಮೇಲಿನ ಶೀರ್ಷಿಕೆಯನ್ನಷ್ಟೇ ನೋಡಿ ಅಭಿಪ್ರಾಯಕ್ಕೆ ಬರುವ ಮೊದಲು ಕೆಲವು ಅಂಕಿ-ಅಂಶಗಳನ್ನು ಗಮನಿಸಿ. ಪ್ರತೀ ವಾರ ಬಿಎಆರ್‌ಸಿ [ಬ್ರಾಡ್‌ಕಾಸ್ಟ್ ಆಡಿಯೆನ್ಸ್ ರಿಸರ್ಚ್‌ ಕೌನ್ಸಿಲ್]ನವರು ಅಧಿಕೃತವಾಗಿ ಟಿಆರ್‍‌ಪಿಯ ವಿವರವನ್ನು ಬಿಡುಗಡೆ ಮಾಡುತ್ತಾರೆ. ವರ್ಷದ ಮೊದಲ ವಾರದಿಂದ ಆರಂಭಿಸಿ ಕಡೆಯ 52ನೇಯ ವಾರದವರೆಗಿನ ವಿವರವನ್ನು ಬಿಡುಗಡೆ ಮಾಡುತ್ತಾರೆ. ಅಂದರೆ ಶುಕ್ರವಾರದಿಂದ ಗುರುವಾರದವರೆಗಿನ ವಿವರವನ್ನು ಅದರ ಮುಂದಿನ ವಾರ ಬಿಡುಗಡೆ ಮಾಡುತ್ತಾರೆ.

ಈಗ ವರ್ಷದ 17ನೇ ವಾರದ ವಿವರಗಳು ಇಂದು ಹೊರಬಂದಿವೆ. ಅದನ್ನು ಆಧರಿಸಿ ನಿಮ್ಮ ಮುಂದಿಡಲಾಗುತ್ತಿರುವ ವಾಸ್ತವ ಇದು. ಯಾವ ಚಾನೆಲ್ ಅನ್ನು ಯಾವ ಜನರು (ಪ್ರದೇಶವಾರು) ಎಷ್ಟು ಸಮಯ ನೋಡಿದ್ದಾರೆ ಎಂಬುದನ್ನು ಬಿಎಆರ್‌ ಸಿ ಅತ್ಯಂತ ವಿವರವಾಗಿ ಮುಂದಿಡುತ್ತದೆ. ಈ ಲೇಖನದಲ್ಲಿ ಮತ್ತು ಈ ಸರಣಿಯ ಮುಂದಿನ ಲೇಖನಗಳಲ್ಲಿ ಅದನ್ನು ಇಲ್ಲಿ ಬಿಚ್ಚಿಡುತ್ತೇವೆ.

ಆ ವಿವರ ಹೇಳುತ್ತಿರುವ ಸಂಗತಿ ಏನೆಂದರೆ, ಕರ್ನಾಟಕದ ಜನರು ಟಿವಿ ಚಾನೆಲ್‌ಗಳನ್ನು ಖಚಿತವಾಗಿ ತಿರಸ್ಕರಿಸುತ್ತಿದ್ದಾರೆ. ಟಿವಿ ಚಾನೆಲ್‌ಗಳು, ಅದರಲ್ಲೂ ನ್ಯೂಸ್‌ ಚಾನೆಲ್‌ಗಳನ್ನು ಜನರು ನೋಡುತ್ತಿರುವುದು ಕಡಿಮೆಯಾಗುತ್ತಿದೆ ಎನ್ನುವುದು ಜಾಗತಿಕ ವಿದ್ಯಮಾನ. ಆದರೆ, ಕರ್ನಾಟಕದಲ್ಲಿ ಚುನಾವಣೆಯ ಬಿಸಿ ಒಂದೇ ಸಮನೆ ಏರುತ್ತಿರುವಾಗ ಟಿಆರ್‌ ಪಿ ಮತ್ತು ಜಿ ಆರ್‌ ಪಿ ಇಳಿದಿರುವುದು ಆಶ್ಚರ್ಯಕರ, ಆದರೆ ನಿಜ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಂಕಿ-ಅಂಶಗಳನ್ನು ಹಿಂದಿನ ಅವಧಿಗೆ ಹೋಲಿಸಿ ನೋಡಬೇಕು. ಹೋಲಿಕೆಗೆ ಗೊತ್ತಾಗಲಿ ಎಂದು ಜನವರಿ ಕಡೆಯ ವಾರದ್ದನ್ನು (ನಾಲ್ಕನೇ ವಾರ) ಏಪ್ರಿಲ್‌ ಕಡೆಯ ವಾರದ ಜೊತೆಗೆ ಹೋಲಿಸಲಾಗಿದೆ ಮತ್ತುಈ ಕಡೆಯ ವಾರವನ್ನು (17ನೇ ವಾರ) ಅದರ ಹಿಂದಿನ ವಾರ ಅಂದರೆ 16ನೇ ವಾರದ ಜೊತೆಗೆ ಹೋಲಿಸಿ ಇಲ್ಲಿ ಕೊಡಲಾಗಿದೆ.

ಗಮನಿಸಿ, ಇದು ಬಿಜೆಪಿಯ ಅಬ್ಬರದ ಪ್ರಚಾರ ಮತ್ತು ಮೋದಿಯವರ ಪ್ರಚಾರ ಶುರುವಾಗಿ, ಟಿವಿ ಚಾನೆಲ್ಲುಗಳು ಪೂರ್ಣ ಅದರ ಮೇಲೆಯೇ ಕೇಂದ್ರೀಕರಿಸಿದ್ದ ಅವಧಿ. ಹಾಗೆ ನೋಡಿದರೆ ಚುನಾವಣಾ ಸಮಯದಲ್ಲಿ ನ್ಯೂಸ್‌ ಚಾನೆಲ್‌ಗಳ ಟಿಆರ್‌ ಪಿ ಒಂದೂವರೆ ಪಟ್ಟು ಹೆಚ್ಚಾಗಬೇಕು. ನರೇಂದ್ರ ಮೋದಿಯವರ ಕಾರ್ಯಕ್ರಮವನ್ನು ಜನರು ಇಷ್ಟಪಟ್ಟು ನೋಡುವುದಾದರೆ, ಇನ್ನೂ ಹೆಚ್ಚಾಗಬೇಕು. ಆದರೆ ವಾಸ್ತವದಲ್ಲಿ ಕಡಿಮೆಯಾಗಿದೆ. ಎಷ್ಟು ಕಡಿಮೆಯಾಗಿದೆ?

ರಾಜ್ಯದ ಎಲ್ಲ ಟಿವಿಗಳ ಜಿಅರ್‌ಪಿ ಜನವರಿ ಕಡೆಯ ವಾರಕ್ಕೆ ಹೋಲಿಸಿದರೆ ಶೇ.28.55 ರಷ್ಟು ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಶೇ.76.15 ಕಡಿಮೆಯಾಗಿದೆ. ಗ್ರಾಮೀಣ ಕರ್ನಾಟಕದಲ್ಲಿ ಶೇ.9ರಷ್ಟು, ಬೆಂಗಳೂರು ಹೊರತುಪಡಿಸಿ ನಗರ ಪ್ರದೇಶದಲ್ಲಿ ಶೇ.52.73ರಷ್ಟು ಕಡಿಮೆಯಾಗಿದೆ.

ಕನ್ನಡ ನ್ಯೂಸ್‌ ಚಾನೆಲ್ಲುಗಳ ಟಿಆರ್‍‌ಪಿ ಕಡಿಮೆಯಾಗುತ್ತಿರುವುದು ಫೀಲ್ಡಿನಲ್ಲಿರುವ ಎಲ್ಲರಿಗೂ ಗೊತ್ತಿರುವ ಹಳೆಯ ಸುದ್ದಿ. ಆದರೆ, ನಿರ್ದಿಷ್ಟವಾಗಿ ಕೆಲವು ರಾಜಕೀಯ ಕಾರ್ಯಕ್ರಮಗಳಿಂದ ಜನರು ದೂರ ಸರಿಯುತ್ತಿದ್ದಾರೆ ಮತ್ತು ಅವು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳೇ ಆಗಿವೆ.

ನಮಗೆ ಲಭ್ಯವಾಗಿರುವ ಮಾಹಿತಿಯನ್ನು ಆಧರಿಸಿ ಹೇಳುವುದಾದರೆ ನ್ಯೂಸ್ ಚಾನೆಲ್‌ಗಳ ವೀಕ್ಷಕರ ವರ್ತನೆ ನೋಡಿದರೆ

1. ಮೋದಿ, ಅಮಿತ್ ಶಾ, ಯೋಗಿ ಮುಂತಾದವರ ಕಾರ್ಯಕ್ರಮಗಳನ್ನು ನೋಡಲು ಜನರು ಇಷ್ಟಪಡುತ್ತಿಲ್ಲ.

2. ರಾಜ್ಯದ ಬಿಜೆಪಿ ನಾಯಕರ ಕಾರ್ಯಕ್ರಮಗಳಿಗೂ ಇದು ಅನ್ವಯಿಸುತ್ತದೆ.

3. ಬಹುತೇಕ ಬಿಜೆಪಿಯ ಪರವಾಗಿಯೇ ಕಾರ್ಯಕ್ರಮಗಳನ್ನು ನಡೆಸುವ ನ್ಯೂಸ್ ಚಾನೆಲ್‌ಗಳಿಗೂ ಇದು ಅನ್ವಯಿಸುತ್ತದೆ.

4. ಜನರು ಮೋದಿಯವರ ರ‌್ಯಾಲಿಗಳನ್ನು ನೋಡುತ್ತಿಲ್ಲ. ಅಂದರೆ ಆಡಳಿತ ವಿರೋಧಿ ಅಲೆ ಮತ್ತು ನ್ಯೂಸ್‌ ಚಾನೆಲ್‌ ವಿರೋಧಿ ಅಲೆಗಳೆರಡೂ ಇಲ್ಲಿ ಒಟ್ಟೊಟ್ಟಿಗೆ ಕೆಲಸ ಮಾಡಿದಂತಿದೆ.

ಕರ್ನಾಟಕದ ಬಿಜೆಪಿಯವರು ಮೋದಿಯವರ ರ‌್ಯಾಲಿಗಳಿಗೆ ಮಿಕ್ಕೆಲ್ಲಕ್ಕಿಂತ ಅತಿ ಹೆಚ್ಚು ಖರ್ಚು ಮಾಡುತ್ತಿರುವುದು ಎದ್ದು ಕಾಣುತ್ತದೆ. ಒಂದಕ್ಕೆ ನಾಲ್ಕು ಪಟ್ಟು ಹೆಚ್ಚು ಹಣ ನೀಡಿ ಜನರನ್ನು ಸೇರಿಸಲು ಯತ್ನಿಸುತ್ತಿರುವುದು ಈಗಾಗಲೇ ವರದಿಯಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಸಭೆಗೆ ಬರುವವರಿಗೆ ಒಂದು ಸಾವಿರ ರೂಪಾಯಿ (ಮಿಕ್ಕ ಪಕ್ಷಗಳು ಐನೂರು ರೂಪಾಯಿ ಕೊಡುತ್ತಾರೆ) ಕೊಡುತ್ತೇವೆಂದು ಹೇಳಿ ಕರೆತಂದು ಅಷ್ಟು ಕೊಡದೇ ಇದ್ದುದಕ್ಕೆ ದೊಡ್ಡ ಗಲಾಟೆಯಾಗಿರುವುದು ಈಗಾಗಲೇ ವರದಿಯಾಗಿದೆ. ಮೊದಮೊದಲು ಈ ಕಾರ್ಯಕ್ರಮಗಳಿಗೂ ಅಷ್ಟು ಜನ ಸೇರಲಿಲ್ಲ. ಆದರೆ ಈ ಕಡೆಯ ಹಂತದಲ್ಲಿ ಸೇರಿಸಲು ಸಾಕಷ್ಟು ಪ್ರಯತ್ನ ನಡೆದಿದೆ. ಆದರೆ, ಮೋದಿಯವರ ಭಾಷಣ ಜನರ ಭಾವನೆಗಳೊಂದಿಗೆ ಕನೆಕ್ಟ್‌ ಆಗುತ್ತಿಲ್ಲ; ಸಪ್ಪೆ ಹೊಡೆಯುತ್ತಿದೆ ಎಂಬುದನ್ನು ರಾಜಕೀಯ ವಿಶ್ಲೇಷಕರು ಗಮನಿಸಿದ್ದಾರೆ.

ಬಿಜೆಪಿಯೊಳಗೂ ಹಲವರಿಗೆ ಅದು ಅರಿವಿಗೆ ಬಂದಿದೆ. ಆದರೆ, ಟಿವಿಯಲ್ಲಿ ಅಬ್ಬರ ಕಾಣುತ್ತದೆ. ಆದರೆ ಜನರು ಬಿಜೆಪಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಟಿವಿಯಲ್ಲೂ ನೋಡಲು ಬಯಸುತ್ತಿಲ್ಲ. ಇದು ಹೇಗೆ ಗೊತ್ತಾಗುತ್ತದೆ?

ಬಾರ್ಕ್‌ ಬಿಡುಗಡೆ ಮಾಡಿರುವ, ಪ್ರತಿ ಕಾರ್ಯಕ್ರಮ ಪ್ರಸಾರವಾದಾಗಲೂ ಜನರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬ ಮಾಹಿತಿಯನ್ನು ನೋಡಿದರೆ ಅದು ಗೊತ್ತಾಗುತ್ತದೆ. ಜನರು ಮೋದಿ, ಯೋಗಿ ಆದಿತ್ಯನಾಥ್‌ ಮತ್ತು ಬೊಮ್ಮಾಯಿಯವರ ಕಾರ್ಯಕ್ರಮ ಬರುವ ಚಾನೆಲ್‌ ಆನ್‌ ಮಾಡಿದರೆ, ಅಷ್ಟೇ ವೇಗವಾಗಿ ಅದರಿಂದ ಹೊರಹೋಗುತ್ತಿದ್ದಾರೆ.

ಎರಡು ಉದಾಹರಣೆಗಳ ಮೂಲಕ ಇದನ್ನು ವಿವರಿಸಬಹುದು. 23-4-2023ರಂದು ಮುಖ್ಯಮಂತ್ರಿಗಳು ಮಾಡಿದ ರೋಡ್ ಶೋ ಅನ್ನು ಸುವರ್ಣ ಟಿವಿ ಪ್ರಸಾರ ಮಾಡಿದೆ. ಅದನ್ನು ಒಟ್ಟಾರೆ ಟಿವಿ ವೀಕ್ಷಕರಲ್ಲಿ ಶೇ.0.1ರಷ್ಟು ಜನ ಕೆಲವೇ ಸೆಕೆಂಡು ನೋಡಿ ಚಾನೆಲ್ ಬದಲಾಯಿಸಿದ್ದಾರೆ.

BAARC 2

27-4-2023ರಂದು ಮೋದಿಯವರು ನಡೆಸಿದ ಕಾರ್ಯಕರ್ತರೊಂದಿಗಿನ ಸಂವಾದ ಕಾರ್ಯಕ್ರಮವನ್ನು ಒಟ್ಟಾರೆ ಟಿ ವಿ ವೀಕ್ಷಕರಲ್ಲಿ ಶೇ.0.1ರಷ್ಟು ಜನ ಮಾತ್ರ ನೋಡಿದ್ದಾರೆ. ಅದನ್ನು ಜನರು ಸುವರ್ಣ ಚಾನೆಲ್‌ನಲ್ಲಿ ನೋಡಿದ ಸರಾಸರಿ ಸಮಯ 2 ಸೆಕೆಂಡ್‌ಗಳು ಮಾತ್ರ. ಟಿವಿ9 ಚಾನೆಲ್‌ನಲ್ಲಿ ಶೇ. 0.3ರಷ್ಟು ಜನ ಸರಾಸರಿ 6 ಸೆಕೆಂಡ್ ನೋಡಿದ್ದಾರೆ.

ಸುವರ್ಣ, ಟಿವಿ 9 ಮತ್ತು ಪಬ್ಲಿಕ್ ಟಿವಿಗಳ ಪ್ರೈಮ್ ಟೈಮ್ ಕಾರ್ಯಕ್ರಮಗಳನ್ನು ಶೇ.0.4ರಿಂದ ಶೇ.0.7ರಷ್ಟು ಜನ ಮಾತ್ರ ನೋಡಿದ್ದಾರೆ. ಈ ಕಾರ್ಯಕ್ರಮಗಳ ಗರಿಷ್ಠ ವೀಕ್ಷಣೆಯ ಅವಧಿ 9 ನಿಮಿಷ ಮಾತ್ರ. ಈ ಚಾನೆಲ್‌ಗಳ ಅನೇಕ ಕಾರ್ಯಕ್ರಮಗಳನ್ನು ಜನ ಕೆಲವೇ ಸೆಕೆಂಡುಗಳಷ್ಟು ನೋಡಿ ಮುಂದಕ್ಕೆ ಹೋಗುತ್ತಿದ್ದಾರೆಂದು ಅಂಕಿ-ಅಂಶಗಳು ಹೇಳುತ್ತಿವೆ.

ಕಾರ್ಯಕ್ರಮವಾರು ವೀಕ್ಷಕರ ಪ್ರತಿಕ್ರಿಯೆಯನ್ನು ನಂತರ ಮುಂದಿಡುತ್ತೇವೆ.

ಇದರೊಂದಿಗೆ, ಬಾರ್ಕ್‌ ಬಿಡುಗಡೆ ಮಾಡಿರುವ ಬೆಂಗಳೂರು, ಕರ್ನಾಟಕ, ಬೆಂಗಳೂರನ್ನು ಹೊರತುಪಡಿಸಿದ ದೊಡ್ಡ ನಗರ, ಪಟ್ಟಣಗಳು ಮತ್ತು ಗ್ರಾಮೀಣ ಭಾಗದ ಅಂಕಿ-ಅಂಶಗಳು ಇಲ್ಲಿವೆ. ಮುಂದಿನ ಲೇಖನದಲ್ಲಿ ಇನ್ನಷ್ಟು ಕಾರ್ಯಕ್ರಮವಾರು ವಿವರಗಳನ್ನು ನೀಡಲಾಗುವುದು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...