ಬೇತಮಂಗಲ: ಇಲ್ಲಿನ ಬಸ್ ನಿಲ್ದಾಣದ ಅಂಬೇಡ್ಕರ್ ಪುತ್ಥಳಿ ಮುಂಭಾಗದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಯುವ ವೇದಿಕೆ ಕರ್ನಾಟಕ ಸಂಘಟನೆ ಆಶ್ರಯದಲ್ಲಿ ಅಂತರ್ಜಾತಿ ವಿವಾಹವು ಕನ್ನಡ ರಾಜ್ಯೋತ್ಸವ ದಿನದಂದು ನಡೆಯಿತು.
ಪಟ್ಟಣದ ಅಂಬೇಡ್ಕರ್ ಪ್ರತಿಮೆಗೆ ನವ ವಿವಾಹಿತರು ಮಾಲಾರ್ಪಣೆ ಮಾಡುವ ಮೂಲಕ ನೂತನ ಜೀವನಕ್ಕೆ ಕಾಲಿಟ್ಟರು, ಒಬ್ಬರನ್ನೊಬ್ಬರು ಹಲವು ವರ್ಷಗಳಿಂದ ಪ್ರೀತ್ಸುತ್ತಿದ್ದ ಯುವಕ ವೆಂಕಟೇಶ್ ಹಾಗೂ ಯುವತಿ ಅಮೂಲ್ಯ ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಹಾಸನ ಜಿಲ್ಲೆಯ ಅಮೂಲ್ಯ, ಬೇತಂಮಗಲ ಹೋಬಳಿಯ ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯತಿಯ ತಿಮ್ಮಸಂದ್ರ ಗ್ರಾಮದ ವೆಂಕಟೇಶ್ ಪೋಷಕರ ಸಮ್ಮುಖದಲ್ಲಿ ವಿವಾಹವಾದರು.
ಈ ವೇಳೆ ಎವೈವಿಕೆ ಸಂಘಟನೆ ಅಧ್ಯಕ್ಷ ಜೈಭೀಮ್ ಶ್ರೀನಿವಾಸ್ ಮಾತನಾಡಿ, ಹಾಸನ ಮೂಲದ ಅಮೂಲ್ಯ ಹಾಗೂ ಕೆಜಿಎಫ್ ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದ ಯುವಕ ವೆಂಕಟೇಶ್ ಪರಸ್ಪರ ಹಲುವು ವರ್ಷಗಳಿಂದ ಪ್ರೀತಿಸುತ್ತಿದ್ದೂ ಯುವಕ ಪರಿಶಿಷ್ಟ ಜಾತಿಗೆ ಸೇರಿರುತ್ತಾನೆ ಯುವಕಿ ಒಕ್ಕಲಿಗ ಜಾತಿಗೆ ಸೇರಿರುತ್ತಾಳೆ ಆದರೆ ಇವರ ವಿವಾಹಕ್ಕೆ ಯುವಕೀಯ ಮನೆಯಲ್ಲಿ ಒಪ್ಪದ ಕಾರಣ ಡಾ ಬಿ ಆರ್ ಅಂಬೇಡ್ಕರ್ ಯುವ ವೇದಿಕೆ ಕರ್ನಾಟಕ ಸಂಘಟನೆಯ ನೆರುವು ಕೇಳಿದಾಗ ಸಂಘಟನೆ ಪದಾಧಿಕಾರಿಗಳ ಆಶ್ರಯದಲ್ಲಿ ಬೇತಮಂಗಲದ ಅಂಬೇಡ್ಕರ್ ಪ್ರತಿಮೆ ಎದುರು ಅಂತರ್ಜಾತಿ ವಿವಾಹ ಮಾಡಲಾಯಿತು ಎಂದು ತಿಳಿಸಿದರು.
ಇದನ್ನು ಓದಿದ್ದೀರಾ..? ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ಪದವೀಧರರು ನೋಂದಣಿ ಮಾಡಿಕೊಳ್ಳಲು ತೋಪಲ್ಲಿ ಚೌಡರೆಡ್ಡಿ ಮನವಿ
ಈ ಸಂದರ್ಭದಲ್ಲಿ ರಾಜ್ಶಾಧ್ಶಕ್ಷರು ಜೈಭೀಮ್ ಶ್ರೀನಿವಾಸ್ˌ ರಾಜ್ಶ ಯುವ ಘಟಕ ಉಪಾಧ್ಶಕ್ಷರು ಕೃಷ್ಣಮೂರ್ತಿˌ ಜಿಲ್ಲಾಧ್ಶಕ್ಷರು ಗೋವಿಂದಪ್ಪˌ ತಾಲ್ಲೂಕು ಅಧ್ಶಕ್ಷರು ಕಣ್ಣೂರು ರಾಜೇಶ್ˌ ಹೋಬಳಿ ಅಧ್ಶಕ್ಷರು ಸಂಜು ಹಾಗೂ ಯುವ ಮುಖಂಡ ಕಿಶೋರ್ ಹಲವಾರು ಯುವಕರು ಇದ್ದರು





