ಬೇತಮಂಗಲ: ಸುಂದರಪಾಳ್ಯ ಗ್ರಾಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 20 ಲಕ್ಷದ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರೂಪಕಲಾ ಶಶಿಧರ್ ಶುಕ್ರವಾರ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಈ ವೇಳೆ ಶಾಸಕಿ ರೂಪಕಲಾ ಶಶಿಧರ್ ಮಾತನಾಡಿ, ಕೆಜಿಎಫ್ ತಾಲೂಕಿನಲ್ಲಿ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಒಟ್ಟು 5 ಕೋಟಿ ಅನುದಾನದಲ್ಲಿ ಅಲ್ಪಸಂಖ್ಯಾತರ ಕಾಲೋನಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮೊದಲ ಬಾರಿಗೆ 5 ಕೋಟಿ ಅನುದಾನವು ಸಿಕ್ಕಿದ್ದು ಗುಣಮಟ್ಟದ ಕಾಮಗಾರಿಯನ್ನು ನಡೆಸಲಾಗುತ್ತಿದೆ, ಅದೇ ರೀತಿ ಸುಂದರಪಾಳ್ಯ ಗ್ರಾಮದಲ್ಲಿ 20 ಲಕ್ಷ ಅನುದಾನದಲ್ಲಿ ಸಿಸಿ ರಸ್ತೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸ್ಥಳದಲ್ಲಿದ್ದು ಗುಣಮಟ್ಟದ ಕಾಮಗಾರಿಯನ್ನು ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ತಮ್ಮ ಹಲವು ಕುಂದು ಕೊರತೆಗಳನ್ನು ಶಾಸಕರಿಗೆ ತಿಳಿಸಿದರು. ರಸ್ತೆಯ ಮದ್ಯದಲ್ಲಿ ಇರುವ ವಿದ್ಯುತ್ ಕಂಬವನ್ನು ಸುಮಾರು ವರ್ಷಗಳಿಂದ ಸ್ಥಳಾಂತರಿಸಿರುವುದಿಲ್ಲ ಕಂಬವನ್ನು ಸ್ಥಳಂತಾರಿಸಲು ಕೋರಿದರು.
ಶಾಸಕರು ಕೂಡಲೇ ಸಂಬಂಧಪಟ್ಟ ಇಂಜಿನಿಯರ್ ರವರನ್ನು ಸ್ಥಳಕ್ಕೆ ಕರೆಸಿ ರಸ್ತೆ ಮದ್ಯದಲ್ಲಿರುವ ಕಂಬವನ್ನು ಸ್ಥಳಂತಾರಿಸಲು ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕಂಬವನ್ನು ಎಲ್ಲಿಗೆ ಸ್ಥಳಾಂತರಿಸಬೇಕು ಎಂದು ಅಲ್ಲಿ ವಾಸಿಸುವವರ ತೀರ್ಮಾನದಂತೆ ಪಿ.ಡಿ.ಒ. ಮುಖಾಂತರ ಮಹಜರ್ ಬರೆಯಿಸಿ ಕೂಡಲೆ ಕಂಬವನ್ನು ಸ್ಥಳಂತಾರಿಸಲು ಬೆಸ್ಕಾಂ ಇಂಜಿನಿಯರ್ ಶ್ರೀ ಶ್ರೀನಿವಾಸಗೌಡ ರವರಿಗೆ ಮಾನ್ಯ ಶಾಸಕರು ಸೂಚಿಸಿದರು.
ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ರಸ್ತೆ ಅಗೆದಿದ್ದು ರಸ್ತೆ ಮರು ನಿರ್ಮಾಣ ಮಾಡದೇ ಓಡಾಡಲು ತೀರಾ ಕಷ್ಟವಾಗುತ್ತಿದೆ ಎಂದು ಅಲ್ಲಿನ ನಿವಾಸಿಗಳು ಮಾನ್ಯ ಶಾಸಕರಿಗೆ ತಿಳಿಸಿದರು.
ಇಲಾಖೆಯ ಸಂಬಂಧಪಟ್ಟ ಅಧಿಕಾರಿಯನ್ನು ಮತ್ತು ಗುತ್ತಿಗೆದಾರರನ್ನು ಸ್ಥಳಕ್ಕೆ ಭೇಟಿ ನೀಡಲು ತಿಳಿಸಿ ಸಮಸ್ಯೆ ಬಗರಹರಿಸಲಾಗುವುದು ಎಂದು ಮಾನ್ಯ ಶಾಸಕರು ಭರವಸೆ ನೀಡಿದರು.
ಇದನ್ನು ಓದಿದ್ದೀರಾ…? ದೊಡ್ಡಬಳ್ಳಾಪುರ ಉಪವಿಭಾಗದ ನೂತನ ಡಿವೈಎಸ್ಪಿಯಾಗಿ ಪಾಂಡುರಂಗ ಎಸ್ ಅಧಿಕಾರ ಸ್ವೀಕಾರ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುವರ್ಣ ವೆಂಕಟರಾಮಪ್ಪ, ಮಾಜಿ ಅಧ್ಯಕ್ಷರಾದ ರಾಮಬಾಬು, ಕೆಎಂ ಕೃಷ್ಣಮೂರ್ತಿ, ಮುನಿಸ್ವಾಮಿ ರೆಡ್ಡಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಜಯರಾಮ್ ರೆಡ್ಡಿ, ವೆಂಕಟರಮಪ್ಪ, ಪಿಡಿಒ ಮಂಜುನಾಥ್, ಮುಖಂಡರಾದ ಶಿವಾರೆಡ್ಡಿ, ಕೋದಡರೆಡ್ಡಿ , ಕಾಂಗ್ರೆಸ್ ಕಾರ್ಮಿಕ ವಿಭಾಗದ ಬ್ಲಾಕ್ ಅಧ್ಯಕ್ಷ ಮಧು , ಶೇಕ್ ಅಪ್ರೋಜ್, ಅನ್ಸರ್ ಪಾಷಾ, ನರೇಂದ್ರಬಾಬು ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಇದ್ದರು.





