ಸುಮ್ಮನಿದ್ದರೆ ಐನ್‌ಸ್ಟೈನ್‌ ಪಠ್ಯವನ್ನೂ ಕಿತ್ತೆಸೆಯುತ್ತಾರೆ ; ʼಎನ್‌ಸಿಆರ್‌ಟಿʼ ನಡೆಗೆ ನಾಸೀರುದ್ದೀನ್‌ ಶಾ ಆಕ್ರೋಶ

Date:

10ನೇ ತರಗತಿಯ ಪಠ್ಯಕ್ರಮದಿಂದ ಪ್ರಮುಖ ವಿಷಯಗಳನ್ನು ತೆಗೆದು ಹಾಕಿರುವ ಕೇಂದ್ರ ಸರ್ಕಾರದ ನಡೆಯನ್ನು ಬಾಲಿವುಡ್‌ನ ಹಿರಿಯ ನಟ ನಾಸೀರುದ್ದೀನ್‌ ಶಾ ವಿರೋಧಿಸಿದ್ದಾರೆ. ಜೊತೆಗೆ ʼಇಸ್ರೋʼ ಮುಖ್ಯಸ್ಥರ ಮೇಲೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ನಾಸೀರುದ್ದೀನ್‌ ಶಾ, “ದಿನ ಕಳೆಯುತ್ತಾ ನಮ್ಮ ದೇಶದ ಜನರಲ್ಲಿ ವಿಜ್ಞಾನದ ಕುರಿತ ಕುತೂಹಲ ಕ್ಷೀಣಿಸುತ್ತಿದೆ. ಜನ ವಿಜ್ಞಾನದಿಂದ ವಿಮುಖರಾಗಿ ಮೂಡನಂಬಿಕೆಯತ್ತ ವಾಲಿಕೊಳ್ಳುತ್ತಿದ್ದಾರೆ. 10ನೇ ತರಗತಿಯ ಪಠ್ಯಪುಸ್ತಕದಿಂದ ವಿಜ್ಞಾನಿ ಚಾರ್ಲ್ಸ್‌ ಡಾರ್ವಿನ್‌ ಅವರ ʼದಿ ಎವಲ್ಯೂಷನ್‌ ಥಿಯರಿʼ ವಿಷಯವನ್ನು ತೆಗೆದು ಹಾಕಲಾಗಿದೆ. ಹಾಗೇ ಬಿಟ್ಟರೆ ಅಲ್ಬರ್ಟ್‌ ಐನ್‌ಸ್ಟೈನ್‌ ಕುರಿತ ವಿಷಯಗಳನ್ನು ಕಿತ್ತೆಸೆಯುತ್ತಾರೆ. ಇಂತಹ ಮಹಾನ್‌ ಚೇತನಗಳ ವಿಚಾರಗಳಿಲ್ಲದ ನಮ್ಮ ಪಠ್ಯಪುಸ್ತಕಗಳು ಹೇಗಿರಲಿವೆ ಎಂದು ಊಹಿಸಿದ್ದೀರಾ” ಎಂದು ಸಾರ್ವಜನಿಕರಿಗೆ ಪ್ರಶ್ನೆ ಹಾಕಿದ್ದಾರೆ.

ಇದೇ ವೇಳೆ ಇಸ್ರೋ ಮುಖ್ಯಸ್ಥರ ಬಗ್ಗೆ ಕೂಡ ನಾಸೀರುದ್ದೀನ್‌ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇಸ್ರೋ ಮುಖ್ಯಸ್ಥೆ ಬಹುಶಃ ಮಹಿಳೆ ಎಂದುಕೊಳ್ಳುತ್ತೇನೆ. ಆಕೆ, ʼಎಲ್ಲ ವೈಜ್ಞಾನಿಕ ಆವಿಶ್ಕಾರಗಳು ಪುರಾಣಗಳಲ್ಲಿವೆ. ಪುರಾಣದಲ್ಲಿ ಹಿಂದೆಯೇ ದಾಖಲಾಗಿದ್ದ ಆವಿಶ್ಕಾರಗಳನ್ನು ತಮ್ಮದು ಎನ್ನುವಂತೆ ಯುರೋಪಿಯನ್ನರು ಬಿಂಬಿಸುತ್ತಿದ್ದಾರೆʼ ಎಂದು ತಪ್ಪು ಹೇಳಿಕೆ ನೀಡಿದ್ದಾರೆ. ಈ ರೀತಿ ಮಾತನಾಡುವವರ ಜೊತೆಗೆ ವಾದ ಮಾಡಿಯಾದರೂ ಏನು ಪ್ರಯೋಜನ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಇಳಯರಾಜ ಜನುಮದಿನ | ಸಂಗೀತ ಮಾಂತ್ರಿಕನ ಹೆಜ್ಜೆ ಗುರುತುಗಳು

ಮಕ್ಕಳ ವಿದ್ಯಾಭ್ಯಾಸಕ್ಕೆ ಹೊರೆಯಾಗಲಿವೆ ಎಂಬ ಕಾರಣ ನೀಡಿ 10ನೇ ತರಗತಿಯ ಪಠ್ಯಕ್ರಮದಿಂದ ʼಪೀರಿಯಾಡಿಕ್‌ ಟೇಬಲ್‌ʼ, ʼದಿ ಎವಲ್ಯೂಷನ್‌ ಥಿಯರಿʼ ಸೇರಿದಂತೆ 6 ಪ್ರಮುಖ ವಿಷಯಗಳನ್ನು ʼಎನ್‌ಸಿಇಆರ್‌ಟಿʼ ಇತ್ತೀಚೆಗಷ್ಟೇ ತೆಗೆದು ಹಾಕಿತ್ತು. ಸಂಸ್ಥೆಯ ಈ ನಡೆಗೆ ದೇಶವ್ಯಾಪಿಯಾಗಿ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು.

f1fabf4f0e4ab96da4f5d26f3bc2b89e
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!

ವಲಸೆಯಂತಹ ಜ್ವಲಂತ ಸಮಸ್ಯೆಯನ್ನು ಹೇಳುವ ರಾಜಕೀಯ ಚಿತ್ರವೆನಿಸಿದರೂ; ಕ್ರಾಂತಿಕಾರಿ ಚಟುವಟಿಕೆಗಳ ಕುರಿತು...

“ತಾಯಿನೇ ಎಲ್ಲಾ” ಎಂದಿದ್ದ ಪ್ರೇಮ್, ಈಗ “ಸರ್ಸೆ ನಿನ್ನ ಸೆರಗ” ಅಂತಾರೆ!; ಭಾರೀ ಟೀಕೆಗೆ ಗುರಿಯಾದ ʼಕೆಡಿ ದಿ ಡೆವಿಲ್‌ʼ ಹಾಡು

ಪ್ರೇಮ್‌ ನಿರ್ದೇಶನದ "ಕೆಡಿ ದಿ ಡೆವಿಲ್‌" ಸಿನಿಮಾ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ...

ಆಸ್ಕರ್ 2026​ ಪ್ರಶಸ್ತಿ | ಅತ್ಯುತ್ತಮ ನಟ ಮೈಕೆಲ್ ಬಿ, ನಟಿ ಜೆಸ್ಸಿ ಬಕ್ಲಿ: ಸಂಪೂರ್ಣ ವಿಜೇತರ ಪಟ್ಟಿ

ಆಸ್ಕರ್ 2026 ಪ್ರಶಸ್ತಿ ಸಮಾರಂಭವು ಮಾರ್ಚ್ 15ರಂದು ಲಾಸ್ ಏಂಜಲಿಸ್‌ನ ಡಾಲ್ಬಿ...