ತಮಿಳು ಚಿತ್ರರಸಿಕರು ಮೆಚ್ಚಿದ ‘ಕನ್ನಡತ್ತು ಪೈಂಕಿಳಿ’ ಬಿ. ಸರೋಜಾದೇವಿ

Date:

50ರ ದಶಕದಲ್ಲಿ, ಹಳೆಯ ರಂಗಭೂಮಿ ನಟಿಯರು ನೇಪಥ್ಯಕ್ಕೆ ಸರಿದು, ‘ಹರಿಣಿ’ ಪ್ರಯೋಗದಿಂದಾಗಿ ಎಳೆಯ ನವ ನಟಿಯರಿಗಾಗಿ ಹುಡುಕಾಟ ಆರಂಭವಾಯಿತು. ಅನ್ಯಭಾಷೆಯಲ್ಲಿ ಯಶಸ್ಸು ಪಡೆದ ನಟಿಯರನ್ನು ಕರೆತರುವ ಪರಿಪಾಟ ಮೊದಲಾಯಿತು. ಇಂಥ ಪ್ರಯೋಗಗಳ ಫಲವಾಗಿ ಅನ್ಯಭಾಷೆಯ ಪಿ. ಭಾನುಮತಿ (ಏಕೈಕ ಚಿತ್ರ, ನಳದಮಯಂತಿ-1957) ಕೃಷ್ಣಕುಮಾರಿ, ಸಾಹುಕಾರ್ ಜಾನಕಿ, ಜಮುನಾರಂಥವರನ್ನು ಕನ್ನಡಕ್ಕೆ ಕರೆತಂದರೆ, ನಮ್ಮವರೇ ಆದ ಬಿ. ಸರೋಜಾದೇವಿಯವರೂ ಅದೇ ಕಾಲಕ್ಕೆ ಈ ಹುಡುಕಾಟದಲ್ಲಿ ಬೆಳಕಿಗೆ ಬಂದರು.

ಹೊನ್ನಪ್ಪ ಭಾಗವತ‌ರ್ ಜೊತೆಯಲ್ಲಿ ಬಿ. ಸರೋಜಾದೇವಿಯವರು ನಟಿಸಿದ ಮೊದಲ ಚಿತ್ರ ‘ಮಹಾಕವಿ ಕಾಳಿದಾಸ’ (1955) ಆದರೂ ಅದಕ್ಕೂ ಮುನ್ನ ಅದೇ ವರ್ಷ ‘ಆಷಾಢಭೂತಿ’ ಬಿಡುಗಡೆಯಾಗಿತ್ತು. ಅವರು ನಿರ್ಮಾಪಕರಿಗೆ ಎಷ್ಟು ಪ್ರಿಯರಾದರೆಂದರೆ 1956ರಲ್ಲಿ ಬಿಡುಗಡೆಯಾದ ‘ಕಚದೇವಯಾನಿ’, ‘ಕೋಕಿಲವಾಣಿ’, ‘ಪಂಚರತ್ನ’ ಚಿತ್ರಗಳಲ್ಲಿ ಬಿ. ಸರೋಜಾದೇವಿ ನಾಯಕಿಯರಾಗಿದ್ದರು. ವರ್ಷಕ್ಕೆ ಎರಡು-ಮೂರು ಚಿತ್ರಗಳಲ್ಲಿ ನಟಿಸತೊಡಗಿದರು. ಆ ಬಳಿಕ ಎನ್‌ಟಿಆರ್‌ರವರ ಜೊತೆಯಲ್ಲಿ ‘ಪಾಂಡುರಂಗ ಮಹಾತ್ಮಂ’ (1957) ಚಿತ್ರದಲ್ಲಿ ನಾಯಕಿಯಾಗಿ ಅನ್ಯಭಾಷಾ ಚಿತ್ರಗಳಿಗೆ ಹೆಜ್ಜೆಯಿಟ್ಟರು.

ಇದನ್ನು ಓದಿದ್ದೀರಾ?: ಖ್ಯಾತ ನಟಿ ಬಿ ಸರೋಜಾ ದೇವಿ ನಿಧನ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತರುವಾಯ ಜೆಮಿನಿ ಗಣೇಶನ್ ನಾಯಕರಾಗಿದ್ದ ‘ತೇಡಿವಂದ ಸೆಲ್ವಂ’ (1958) ಮೂಲಕ ತಮಿಳು ಚಿತ್ರರಂಗಕ್ಕೆ ಬಂದರು. ಅನಂತರ ಎಂಜಿಆರ್‌ರವರ ‘ನಾಡೋಡಿ ಮನ್ನನ್’ (ನಿರ್ಮಾಣ, ನಿರ್ದೇಶನ- ಸ್ವತಃ ಎಂಜಿಆರ್) ಚಿತ್ರದಲ್ಲಿ ನಾಯಕಿಯರಲ್ಲಿ (ಮತ್ತೊಬ್ಬರು ಪಿ.ಭಾನುಮತಿ) ಒಬ್ಬರಾಗಿ ನಟಿಸಿದ ಅವರು ಹಿಂದೆ ತಿರುಗಿ ನೋಡಲಿಲ್ಲ. ಅವರ ವೃತ್ತಿ ಬದುಕಿನ ರೇಖೆ ಲಂಬವಾಗಿ ಮೇಲೇರಿತೇ ಹೊರತು ಕೆಳಗಿಳಿಯಲಿಲ್ಲ. ಎಂಜಿಆರ್, ಶಿವಾಜಿಗಣೇಶನ್, ಜೆಮಿನಿ ಗಣೇಶನ್, ಎನ್‌ಟಿಆರ್, ಎ.ನಾಗೇಶ್ವರರಾವ್ ಮುಂತಾದ ಹಿರಿಯ ನಟರಿಂದ ಹಿಡಿದು ಹಿಂದೀ ಚಿತ್ರಗಳಲ್ಲಿಯೂ ನಟಿಸಿದ ಬಿ.ಸರೋಜಾದೇವಿ ಕನ್ನಡದಿಂದ ವಲಸೆಹೋದ ನಾಯಕಿಯರಲ್ಲಿ ದಕ್ಷಿಣಭಾರತದ ಸಾಮ್ರಾಜ್ಞೆಯಾಗಿ ಆಳಿದವರು. ಚತುರ್ಭಾಷಾ ತಾರೆಯಾಗಿ ಮೆರೆದರು. ತಮಿಳು ಚಿತ್ರರಸಿಕರಿಗೆ ಅವರು ‘ಕನ್ನಡತ್ತು ಪೈಂಕಿಳಿ’ (ಕನ್ನಡದ ಅರಗಿಣಿ) ಎಂದೇ ಪರಿಚಿತರಾಗಿರುವವರು.

bs

ಬಿ. ಸರೋಜಾದೇವಿಯವರು 1959ರಲ್ಲಿ ಎಂಜಿಆರ್ ಜೊತೆ ನಟಿಸಿದ ‘ನಾಡೋಡಿ ಮನ್ನನ್’ ಬಿಡುಗಡೆಯಾದ ನಂತರ ಅವರ ವೃತ್ತಿ ರೇಖೆ ಉಜ್ವಲವಾಗಿ ಮೇಲೇರಿತು. ಕನ್ನಡಕ್ಕೆ ದುರ್ಲಭರಾದರೂ ಅವರ ವೃತ್ತಿ ಬದುಕಿನ ಅತ್ಯುತ್ತಮ ಚಿತ್ರಗಳೆನಿಸಿದ ‘ಅಣ್ಣತಂಗಿ’, ‘ಕಿತ್ತೂರು ಚೆನ್ನಮ್ಮ’ ಮತ್ತು ‘ಅಮರಶಿಲ್ಪಿ ಜಕಣಾಚಾರಿ’ (1964) ಚಿತ್ರಗಳಲ್ಲಿ ನಟಿಸಿದರು. ಎಪ್ಪತ್ತರ ಮಧ್ಯದಲ್ಲಿ ಮತ್ತೆ ಕನ್ನಡಕ್ಕೆ ಹಿಂದಿರುಗಿದ ಅವರು ‘ಚಿರಂಜೀವಿ’, ‘ನ್ಯಾಯವೇ ದೇವರು’, ‘ಬಬ್ರುವಾಹನ’, ‘ಭಾಗ್ಯವಂತರು’ ಮೊದಲಾದ ಚಿತ್ರಗಳಲ್ಲಿ ಪ್ರಬುದ್ಧ ಅಭಿನಯ ನೀಡಿದರು.

(ಕೃಪೆ: ಸಿನಿಮಾಯಾನ, ಲೇ: ಡಾ.ಕೆ. ಪುಟ್ಟಸ್ವಾಮಿ, ಪ್ರ: ಅಭಿನವ, ಸಂ: 94488 04905)

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...