‘ಬಿಫೆಸ್‌’ ಸ್ಥಳಾಂತರ: ಲುಲು ಮಾಲ್‌ ಆಯ್ಕೆಗೆ ಸಿನಿಪ್ರಿಯರ ಆಕ್ಷೇಪ; ‘ಓರಿಯಾನ್‌’ ಬಿಟ್ಟಿದ್ದಕ್ಕೆ ಅಸಮಾಧಾನ

Date:

2026ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಬಿಫೆಸ್) ಪ್ರಮುಖ ಪ್ರದರ್ಶನ ಸ್ಥಳವನ್ನು ರಾಜಾಜಿನಗರದ ಓರಿಯಾನ್ ಮಾಲ್‌ನಿಂದ ಲುಲು ಮಾಲ್‌ಗೆ ಸ್ಥಳಾಂತರಿಸಿರುವುದು ಸಾಮಾನ್ಯ ಪ್ರತಿನಿಧಿಗಳು ಹಾಗೂ ಸಿನಿಪ್ರಿಯರ ಆತಂಕಕ್ಕೆ ಕಾರಣವಾಗಿದೆ.

​ಮುಖ್ಯಮಂತ್ರಿಗಳು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಜನವರಿ 29ರಿಂದ ಫೆಬ್ರವರಿ 6ರವರೆಗೆ ‘ಮಹಿಳಾ ಸಬಲೀಕರಣ’ ಎಂಬ ಆಶಯದೊಂದಿಗೆ ಚಿತ್ರೋತ್ಸವ ನಡೆಯಲಿದೆ ಎಂದು ಅಧಿಕೃತವಾಗಿ ಘೋಷಿಸಿದ್ದರು. ಉತ್ಸವದ ದಿನಾಂಕ ಮತ್ತು ಆಶಯವನ್ನು ಸ್ವಾಗತಿಸಿರುವ ‘ಸಿನಿಮಾ ಓದು ಗೆಳೆಯರ ಬಳಗ’, ಸ್ಥಳ ಬದಲಾವಣೆಯ ನಿರ್ಧಾರವು ಪ್ರತಿನಿಧಿಗಳಿಗೆ ಮಾರಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದೆ.

​ಸ್ವಂತ ಖರ್ಚಿನಲ್ಲಿ ನೋಂದಣಿ ಮಾಡಿಸಿಕೊಂಡು ಬರುವ ಸಾವಿರಾರು ಸಾಮಾನ್ಯ ಪ್ರತಿನಿಧಿಗಳೇ ಚಿತ್ರೋತ್ಸವದ ಜೀವಾಳ. ಆದರೆ, ಪ್ರಸ್ತುತ ಸ್ಥಳಾಂತರವು ಪ್ರತಿನಿಧಿಗಳಿಗೆ ಅತ್ಯಂತ ಪ್ರತಿಕೂಲಕರವಾಗಿದೆ ಎಂದು ಕೆ. ಫಣಿರಾಜ್, ರಮೇಶ್ ಶಿವಮೊಗ್ಗ ಸೇರಿದಂತೆ ಹಲವು ಗಣ್ಯರು ಸರಕಾರದ ಗಮನ ಸೆಳೆದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

​ಆಕ್ಷೇಪಕ್ಕೆ ಪ್ರಮುಖ ಕಾರಣಗಳೇನು?

​ಆಸನಗಳ ಕೊರತೆ: ಓರಿಯಾನ್ ಹಾಗೂ ಲುಲು ಮಾಲ್ ಎರಡರಲ್ಲೂ 11 ಪರದೆಗಳಿದ್ದರೂ, ಲುಲು ಮಾಲ್‌ನಲ್ಲಿ ಓರಿಯಾನ್‌ಗಿಂತ 600 ಆಸನಗಳು ಕಡಿಮೆಯಿವೆ. ಇದರಿಂದ ದಿನವೊಂದಕ್ಕೆ ಸುಮಾರು 3,000 ದಷ್ಟು ಸಿನೆಮಾ ವೀಕ್ಷಣಾ ಅವಕಾಶಗಳಿಂದ ಪ್ರತಿನಿಧಿಗಳು ವಂಚಿತರಾಗಲಿದ್ದಾರೆ.

ಇದನ್ನು ಒದಿದ್ದೀರಾ? ಈ ದಿನ ಸಂಪಾದಕೀಯ | ಭದ್ರಾ ಮೇಲ್ದಂಡೆಗೆ ನೆರವು ನಿರಾಕರಣೆ; ಹಸಿದು ಬಾಯಾರಿದ ಸೀಮೆಗಳಿಗೆ ಮೋಶಾ ಬಗೆದ ದ್ರೋಹ!

ಸಾರಿಗೆ ಸಂಪರ್ಕದ ಕೊರತೆ: ಓರಿಯಾನ್ ಮಾಲ್‌ಗೆ ಮೆಟ್ರೋ ಸೇರಿದಂತೆ ಎಲ್ಲ ಬಗೆಯ ಸಾರಿಗೆ ಸಂಪರ್ಕ ಸುಲಭವಾಗಿತ್ತು. ಆದರೆ, ಲುಲು ಮಾಲ್‌ಗೆ ಸಾರ್ವತ್ರಿಕ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲ. ಪ್ರತಿನಿಧಿಗಳು ಪ್ರದರ್ಶನ ಸ್ಥಳ ತಲುಪಲು 2-3 ಕಿ.ಮೀ ನಡೆಯಬೇಕಾದ ಪರಿಸ್ಥಿತಿ ಇದ್ದು, ಇದು ಉತ್ಸಾಹವನ್ನು ಕುಗ್ಗಿಸುತ್ತದೆ.

​ಊಟೋಪಚಾರದ ಸಮಸ್ಯೆ: ಮಾಲ್ ಒಳಗಿನ ದುಬಾರಿ ಹೋಟೆಲ್‌ಗಳಲ್ಲಿ ಊಟ ಮಾಡುವುದು ಸಾಮಾನ್ಯ ಪ್ರತಿನಿಧಿಗಳಿಗೆ ಹೊರೆಯಾಗುತ್ತದೆ. ಓರಿಯಾನ್ ಮಾಲ್ ಸುತ್ತಮುತ್ತ ಕಡಿಮೆ ದರದಲ್ಲಿ ಹತ್ತಾರು ಹೋಟೆಲ್‌ಗಳು ಲಭ್ಯವಿದ್ದವು. ಆದರೆ ಲುಲು ಮಾಲ್ ಸುತ್ತಮುತ್ತ ಇಂತಹ ವ್ಯವಸ್ಥೆಯಿಲ್ಲ. ಹಸಿವು ನೀಗಿಸಿಕೊಳ್ಳಲು ಪ್ರತಿನಿಧಿಗಳು ಕಿಲೋಮೀಟರ್‌ಗಟ್ಟಲೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ.

​ನೈಜ ಸಿನೆಮಾಸಕ್ತರ ಉತ್ಸಾಹ ಮತ್ತು ಅನುಕೂಲವನ್ನು ಪರಿಗಣಿಸಿ, ಮುಖ್ಯ ಪ್ರದರ್ಶನ ಸ್ಥಳವನ್ನು ಮರುಪರಿಶೀಲಿಸಬೇಕು ಎಂದು ಕೆ. ಫಣಿರಾಜ್, ರಮೇಶ್ ಶಿವಮೊಗ್ಗ, ನಾಗರಾಜ ಶೆಟ್ಟಿ, ಮುರಳಿಕೃಷ್ಣ, ಚಂದ್ರಪ್ರಭ ಕಠಾರಿ, ಕೃಷ್ಣಪ್ರಸಾದ್ ಹಾಗೂ ಸಿನಿಮಾ ಓದು ಗೆಳೆಯರ ಬಳಗ ಆಗ್ರಹಿಸಿದೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!

ವಲಸೆಯಂತಹ ಜ್ವಲಂತ ಸಮಸ್ಯೆಯನ್ನು ಹೇಳುವ ರಾಜಕೀಯ ಚಿತ್ರವೆನಿಸಿದರೂ; ಕ್ರಾಂತಿಕಾರಿ ಚಟುವಟಿಕೆಗಳ ಕುರಿತು...

“ತಾಯಿನೇ ಎಲ್ಲಾ” ಎಂದಿದ್ದ ಪ್ರೇಮ್, ಈಗ “ಸರ್ಸೆ ನಿನ್ನ ಸೆರಗ” ಅಂತಾರೆ!; ಭಾರೀ ಟೀಕೆಗೆ ಗುರಿಯಾದ ʼಕೆಡಿ ದಿ ಡೆವಿಲ್‌ʼ ಹಾಡು

ಪ್ರೇಮ್‌ ನಿರ್ದೇಶನದ "ಕೆಡಿ ದಿ ಡೆವಿಲ್‌" ಸಿನಿಮಾ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ...

ಆಸ್ಕರ್ 2026​ ಪ್ರಶಸ್ತಿ | ಅತ್ಯುತ್ತಮ ನಟ ಮೈಕೆಲ್ ಬಿ, ನಟಿ ಜೆಸ್ಸಿ ಬಕ್ಲಿ: ಸಂಪೂರ್ಣ ವಿಜೇತರ ಪಟ್ಟಿ

ಆಸ್ಕರ್ 2026 ಪ್ರಶಸ್ತಿ ಸಮಾರಂಭವು ಮಾರ್ಚ್ 15ರಂದು ಲಾಸ್ ಏಂಜಲಿಸ್‌ನ ಡಾಲ್ಬಿ...