ಕಟ್ಟುಪಾಡು ದಾಟಿ ಹೃದಯ ಸ್ಪರ್ಶಿಸುವ ಬ್ರಹ್ಮಚರ್ಯದ ಗೋಳಿನ ಕತೆ ‘ರಾಘವೇಂದ್ರ ಸ್ಟೋರ್ಸ್‌’

Date:

ಚಿತ್ರ: ‘ರಾಘವೇಂದ್ರ ಸ್ಟೋರ್ಸ್‌’ | ನಿರ್ದೇಶನ: ಸಂತೋಷ್‌ ಆನಂದ್‌ರಾಮ್‌ | ತಾರಾಗಣ: ಜಗ್ಗೇಶ್‌, ಶ್ವೇತಾ ಶ್ರೀವಾತ್ಸವ್, ದತ್ತಣ್ಣ, ರವಿಶಂಕರ್‌ ಗೌಡ, ಅಚ್ಯುತ್‌ ಕುಮಾರ್‌, ಮಿತ್ರ | ಭಾಷೆ: ಕನ್ನಡ | ಸಂಗೀತ ನಿರ್ದೇಶನ: ಅಜನೀಶ್‌ ಲೋಕನಾಥ್‌ | ನಿರ್ಮಾಪಕರು: ವಿಜಯ್‌ ಕಿರಗಂದೂರು |

ಸಿನಿಮಾ ಮತ್ತು ಹೋಟೆಲ್‌ ಹೆಸರು ʼರಾಘವೇಂದ್ರ ಸ್ಟೋರ್ಸ್‌ʼ, ಕಥಾ ನಾಯಕ ಹಯವದನ, ಅದರಲ್ಲೂ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತ ಜಗ್ಗೇಶ್‌ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದನ್ನು ನೋಡಿ ಇನ್ನು ಕಥೆ ಮುಗಿಯಿತು ಎಂದುಕೊಂಡೆ. ಆದರೆ, ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಚಿತ್ರದ ಕಥೆಯನ್ನು ಹೆಣೆದಿರುವ ರೀತಿ ಸಮಾಧಾನ ನೀಡಿತು.

ಸಂಪ್ರದಾಯ, ಮಡಿವಂತಿಕೆಯೇ ತುಂಬಿ ತುಳುಕುವ ಬ್ರಾಹ್ಮಣ ಮನೆತನವೊಂದರ ಅಂಗಳದಲ್ಲಿ ಬ್ರಹ್ಮಚರ್ಯದ ದೊಂಬರಾಟವನ್ನೇ ಶುರು ಮಾಡುವ ನಿರ್ದೇಶಕರು, ಸಿನಿಮಾ ಮುಗಿಯುವ ಹೊತ್ತಿಗೆ ನೋಡುಗರನ್ನು ಕೊಂಚ ಮಟ್ಟಿಗೆ ಭಾವುಕರನ್ನಾಗಿಸುವಲ್ಲೂ ಯಶಸ್ವಿಯಾಗುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರಾಯ ನಲವತ್ತಾದರೂ ಮದುವೆಗೆ ಹೆಣ್ಣು ಸಿಗದೆ ಬ್ರಹ್ಮಚಾರಿಯಾಗಿ ಉಳಿದಿರುವ ನಾಯಕ, ಮದುವೆ ಮಾಡಿಕೊಳ್ಳಲು ಪಡುವ ಪಡಿಪಾಟಲುಗಳನ್ನು ತೆಳು ಹಾಸ್ಯದ ಮೂಲಕ ದಾಟಿಸುವ ಪ್ರಯತ್ನ ಮಾಡಿದ್ದಾರೆ ಸಂತೋಷ್‌ ಆನಂದ್‌ರಾಮ್‌. ಈ ಬ್ರಹ್ಮಚರ್ಯದ ಎಳೆಯನ್ನು ಕೊಂಚ ಎಳೆದಂತೆ ಅನ್ನಿಸಿಸುವುದಿದೆ. ರೆಸಾರ್ಟ್‌ ರಾಜಕಾರಣ, ಮಠಾಧೀಶರ ರಾಜಕೀಯ ಹಿತಾಸಕ್ತಿಗಳು ಹೀಗೆ ಹಲವು ಸೂಕ್ಷ್ಮತೆಗಳ ಸುತ್ತ ʼರಾಘವೇಂದ್ರ ಸ್ಟೋರ್ಸ್‌ʼ ಚಿತ್ರ ಚೆನ್ನಾಗಿಯೇ ಮೂಡಿಬಂದಿದೆ. ಮೊದಲಾರ್ಧ ನಕ್ಕು ನಗಿಸುವ ಬ್ರಹ್ಮಚರ್ಯದ ವ್ಯಥೆಯಾದರೆ, ಇಂಟರ್‌ವಲ್‌ ನಂತರದ ಕಥೆ ನೋಡುಗರನ್ನು ಭಾವುಕರನ್ನಾಗಿಸುವಂಥದ್ದು. ಈ ಕೌಟುಂಬಿಕ ಚಿತ್ರವನ್ನು ಕೊನೆಗೆ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಅರ್ಪಿಸಿದ ರೀತಿ ನಿಜಕ್ಕೂ ಹಿಡಿಸಿತು.

ಘಳಿಗೆ, ಜಾತಕ ಯಾವುದನ್ನೂ ನೋಡದೆ ಮಗನ ಮದುವೆ ಮಾಡಿಸುವ ದತ್ತಣ್ಣನ ಪಾತ್ರ ಗಮನ ಸೆಳೆಯುತ್ತದೆ.

ಜಾತಿಗ್ರಸ್ಥ ಮಠಾಧೀಶರಿಗೆ ಅನಾಥ ಮಗು ಹೇಳುವ ಕಿವಿಮಾತುಗಳು ಪ್ರಮುಖವಾಗಿ ಗಮನ ಸೆಳೆಯುತ್ತದೆ. ಅಡುಗೆ ಕೆಲಸ ಕೀಳು ಎಂದು ಭಾವಿಸಿದರೆ ಅಮ್ಮನ ಕೈರುಚಿಗೆ ಅರ್ಥವೇ ಇರುತ್ತಿರಲಿಲ್ಲ ಎನ್ನುವ ಸಂಭಾಷಣೆ ಹಿಡಿಸುತ್ತದೆ. ಜಗ್ಗೇಶ್‌ ಅವರ ಸಿನಿಮಾಗಳ ʼಟ್ರೇಡ್‌ ಮಾರ್ಕ್‌ʼ ʼಡಬಲ್‌ ಮೀನಿಂಗ್‌ ಡೈಲಾಗ್‌ʼಗಳು ಸಾಕಷ್ಟಿವೆ. ಮಠಾಧೀಶರುಗಳು ತಮ್ಮ ಜಾತಿಯ ರಾಜಕಾರಣಿಗಳ ಜೊತೆಗೆ ಕೈಜೋಡಿಸಿ, ಜೈ ಎನ್ನುವ ಈ ಕಾಲಘಟ್ಟದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಂತೋಷ್‌ ಆನಂದ್‌ರಾಮ್‌, ಮಠಾಧೀಶರ ಕೈಯಿಂದಲೇ ʼಎಂಎಲ್‌ಎʼ ಅಭ್ಯರ್ಥಿಗೆ ರಾಜಕೀಯ ಪಕ್ಷವೊಂದರ ಬಿ-ಫಾರಂ ಕೊಡಿಸಿ ಲೇವಡಿ ಮಾಡುತ್ತಾರೆ. ಇಷ್ಟೆಲ್ಲ ಜಾಣ್ಮೆ ತೋರುವ ನಿರ್ದೇಶಕರು ಮುಟ್ಟಿನ ಸಂದರ್ಭದಲ್ಲಿ ಮಹಿಳೆ ತನ್ನ ಕೋಣೆಯಲ್ಲೇ ಬಂಧಿಯಾಗಿರಬೇಕು, ಅಡುಗೆ ಮನೆಗೂ ಹೊಗಬಾರದು ಎಂದು ದಿಗ್ಬಂಧನ ಹಾಕಿ ಅವರ ಮೇಲಿದ್ದ ಚೂರು ಪಾರು ನಿರೀಕ್ಷೆಯನ್ನು ಹದಗೆಡಿಸುತ್ತಾರೆ.

ಈ ಸುದ್ದಿ ಓದಿದ್ದೀರಾ? ʼದಿ ಸಾಂಗ್‌ ಆಫ್‌ ಸ್ಕಾರ್ಪಿಯನ್ಸ್‌ʼ ಸೇರಿ ಈ ವಾರ 5 ಪ್ರಮುಖ ಚಿತ್ರಗಳು ತೆರೆಗೆ

ಈ ಚಿತ್ರದಲ್ಲಿ ಸಂತೋಷ್‌ ಆನಂದ್‌ರಾಮ್‌ ಸೂಕ್ಷ್ಮವಾಗಿ ಕಟ್ಟುಪಾಡುಗಳನ್ನು ಮುರಿಯುವ ಪ್ರಯತ್ನ ಮಾತನಾಡಿದ್ದಾರೆ. ಆದರೆ, ಅಸಲಿ ಸಮಸ್ಯೆಗಳ ಆಳಕ್ಕಿಳಿಯುವ ಪ್ರಯತ್ನ ಖಂಡಿತ ಮಾಡಿಲ್ಲ. ಇಡೀ ಕಥೆ ತಕ್ಕ ಮಟ್ಟಿಗೆ ಹಿಡಿಸುತ್ತದೆ. ಆದರೆ, ಮನಸ್ಸಿನಾಳಕ್ಕೆ ಇಳಿಯುವುದಿಲ್ಲ. ಜಗ್ಗೇಶ್‌ ನಟನೆಯಲ್ಲಿ ಹೊಸತನವೇನು ಕಾಣಿಸಲಿಲ್ಲ. ಶ್ವೇತಾ ಶಿವಾತ್ಸವ್‌ ನಟನೆ ಪರವಾಗಿಲ್ಲ. ದತ್ತಣ್ಣ ಮತ್ತು ಅಚ್ಯುತ್‌ ಕುಮಾರ್‌ ಬಗ್ಗೆ ಹೊಸದಾಗಿ ಹೇಳಲಿಕ್ಕೇನಿದೆ. ರವಿಶಂಕರ್‌ ಗೌಡರಿಗೆ ಜುಟ್ಟು ಇಲ್ಲದಿದ್ದರೂ ನಡೆಯುತ್ತಿತ್ತು. ಮಿತ್ರ ಅವರ ನಟನೆಯೂ ಗಮನ ಸೆಳೆಯುತ್ತದೆ.

ಅಜನೀಶ್‌ ಲೋಕನಾಥ್‌ ಅವರ ಹಿನ್ನೆಲೆ ಸಂಗೀತ ಚಿತ್ರಕಥೆಗೆ ಪೂರಕವಾಗಿದೆ. ʼಸಿಂಗಲ್‌ ಸುಂದರʼ ಹಾಡನ್ನು ಬಿಟ್ಟರೆ ಚಿತ್ರದಲ್ಲಿ ಹೇಳಿಕೊಳ್ಳುವಂಥ ಯಾವ ಹಾಡುಗಳು ಇಲ್ಲ. ಶ್ರೀಶ ಕುದುವಳ್ಳಿ ಅವರ ಛಾಯಾಗ್ರಹಣ ಹಿಡಿಸುತ್ತದೆ. ಒಟ್ಟಿನಲ್ಲಿ ʼರಾಘವೇಂದ್ರ ಸ್ಟೋರ್ಸ್‌ʼ ಒಮ್ಮೆ ನೋಡಬಹುದಾದ ಚಿತ್ರ.

f1fabf4f0e4ab96da4f5d26f3bc2b89e
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!

ವಲಸೆಯಂತಹ ಜ್ವಲಂತ ಸಮಸ್ಯೆಯನ್ನು ಹೇಳುವ ರಾಜಕೀಯ ಚಿತ್ರವೆನಿಸಿದರೂ; ಕ್ರಾಂತಿಕಾರಿ ಚಟುವಟಿಕೆಗಳ ಕುರಿತು...

“ತಾಯಿನೇ ಎಲ್ಲಾ” ಎಂದಿದ್ದ ಪ್ರೇಮ್, ಈಗ “ಸರ್ಸೆ ನಿನ್ನ ಸೆರಗ” ಅಂತಾರೆ!; ಭಾರೀ ಟೀಕೆಗೆ ಗುರಿಯಾದ ʼಕೆಡಿ ದಿ ಡೆವಿಲ್‌ʼ ಹಾಡು

ಪ್ರೇಮ್‌ ನಿರ್ದೇಶನದ "ಕೆಡಿ ದಿ ಡೆವಿಲ್‌" ಸಿನಿಮಾ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ...

ಆಸ್ಕರ್ 2026​ ಪ್ರಶಸ್ತಿ | ಅತ್ಯುತ್ತಮ ನಟ ಮೈಕೆಲ್ ಬಿ, ನಟಿ ಜೆಸ್ಸಿ ಬಕ್ಲಿ: ಸಂಪೂರ್ಣ ವಿಜೇತರ ಪಟ್ಟಿ

ಆಸ್ಕರ್ 2026 ಪ್ರಶಸ್ತಿ ಸಮಾರಂಭವು ಮಾರ್ಚ್ 15ರಂದು ಲಾಸ್ ಏಂಜಲಿಸ್‌ನ ಡಾಲ್ಬಿ...