ಹೀರೋ ಆರಾಧನೆ ವಿರುದ್ಧ ಧ್ವನಿ ಎತ್ತಿದ ನಿತ್ಯಾ ಮೆನನ್

Date:

‘ಮಾಸ್ ಸಿನಿಮಾ’ ಎಂದು ಕರೆಯಲ್ಪಡುವ ಕೆಲ ಚಿತ್ರಗಳು ಧನಾತ್ಮಕ ಬದಲಾವಣೆ ತರಬಹುದಾದ ಎಲ್ಲಾ ವಿಚಾರಗಳನ್ನು ತಳ್ಳಿಹಾಕುತ್ತವೆ. ಇವು ಒಬ್ಬ ವ್ಯಕ್ತಿಯ ವೈಭವೀಕರಣಕ್ಕಾಗಿ ಹುಟ್ಟಿಕೊಳ್ಳುತ್ತವೆ, ಪುರುಷವಾದಿ ಮನೋಭಾವದಿಂದ ಕೂಡಿರುವ, ಅತಿ ನಂಜುಭರಿತ ಎಲಿಮೆಂಟ್ಸ್‌ಗಳನ್ನೇ ತುಂಬಿಕೊಂಡ ಇವು ಹಲವು ಆಯಾಮಗಳಲ್ಲಿ ಮನುಷ್ಯವಿರೋಧಿ ಚಿತ್ರಗಳೇ ಆಗಿರುತ್ತವೆ. ಈ ಕಹಿ ಸತ್ಯವನ್ನು ನಿಷ್ಠುರವಾಗಿ ಹೇಳಿದವರು ಬಹುಭಾಷಾ ನಟಿ ನಿತ್ಯಾ ಮೆನನ್‌.

ಭಾರತೀಯ ಸಿನೆಮಾ ಜಗತ್ತಿನಲ್ಲಿ “ಮಾಸ್” ಎಂಬ ಪದಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಜನಪ್ರಿಯ ಹೀರೋ, ಭರ್ಜರಿ ಫೈಟ್, ಭಾರೀ ಡೈಲಾಗ್, ಅಬ್ಬರದ ಹಿನ್ನೆಲೆ ಸಂಗೀತ, ಬಿಡುಗಡೆಗೂ ಮೊದಲು ಸಿಕ್ಕಾಪಟ್ಟೆ ಹೈಪ್, ಅಭಿಮಾನಿಗಳ ಕೂಗಾಟ.. ಇವೆಲ್ಲ ಸೇರಿ ನಿರ್ಮಾಣವಾಗುವ ಆ ಚಿತ್ರವನ್ನು ಸಿನಿಪ್ರಿಯರು “ಮಾಸ್ ಎಂಟರ್ಟೈನ್ಮೆಂಟ್” ಎಂಬ ಟ್ಯಾಗ್‌ ಅಂಟಿಸುತ್ತಾರೆ. ಆದರೆ ಇದೇ ಒಂದು ಮಾಸ್ ಸಿನೆಮಾದ ಒಳಹೊಕ್ಕು ನೋಡಿದರೆ, ಅದರೊಳಗೆ ಕಟ್ಟಿರುವ ಕೆಲ ಸಂಕುಚಿತ, ಸಂಪ್ರದಾಯವಾದಿ, ಗಂಡಾಳಿಕೆಯ ಗೂಡುಗಳು ಕಾಣಿಸುತ್ತವೆ.

ಸಿನಿಮಾ, ಸಾಮಾನ್ಯ ಮನುಷ್ಯನ ಜೀವನದ ಒಂದು ಭಾಗವಿದ್ದಂತೆ. ಸಿನಿಮಾ ಕನಸುಗಳನ್ನು ಬೆಳೆಸಬಲ್ಲದು, ಸಾಮಾಜಿಕ ಬದಲಾವಣೆಗಳನ್ನು ಉತ್ತೇಜಿಸಬಲ್ಲದು ಮತ್ತು ಕೆಲವೊಮ್ಮೆ ಸಮಾಜದ ಕತ್ತಲನ್ನೂ ತೊಳೆಯುವ ಶಕ್ತಿ ಅದಕ್ಕಿರುತ್ತದೆ. ಆದರೆ ‘ಮಾಸ್ ಸಿನಿಮಾ’ ಎಂದು ಕರೆಯಲ್ಪಡುವ ಕೆಲ ಚಿತ್ರಗಳು ಧನಾತ್ಮಕ ಬದಲಾವಣೆ ತರಬಹುದಾದ ಎಲ್ಲಾ ವಿಚಾರಗಳನ್ನ ತಳ್ಳಿಹಾಕುತ್ತದೆ. ಇವು ಒಬ್ಬ ವ್ಯಕ್ತಿಯ ವೈಭವೀಕರಣಕ್ಕಾಗಿ ಹುಟ್ಟಿಕೊಳ್ಳುತ್ತವೆ, ಪುರುಷವಾದಿ ಮನೋಭಾವದಿಂದ ಕೂಡಿರುವ, ಅತಿ ನಂಜುಭರಿತ ಎಲಿಮೆಂಟ್ಸ್‌ಗಳನ್ನೇ ತುಂಬಿಕೊಂಡ ಇವು ಹಲವು ಆಯಾಮಗಳಲ್ಲಿ ಮನುಷ್ಯವಿರೋಧಿ ಚಿತ್ರಗಳೇ ಆಗಿರುತ್ತವೆ. ಈ ಕಹಿ ಸತ್ಯವನ್ನು ನಿಷ್ಠುರವಾಗಿ ಹೇಳಿದವರು ಬಹುಭಾಷಾ ನಟಿ ನಿತ್ಯಾ ಮೆನನ್‌.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಮಾಸ್ ಸಿನಿಮಾ ಒಬ್ಬರಿಗಾಗಿ ಮಾತ್ರ ರಚಿಸಲ್ಪಡುತ್ತದೆ. ಅದು ಆ ವ್ಯಕ್ತಿಯನ್ನು ಹೀರೋ ಆಗಿ ಕಾಣಿಸುವುದಕ್ಕಾಗಿ ಮಾತ್ರ. ಎಲ್ಲವೂ ಅವರ ಸುತ್ತ ತಿರುಗುತ್ತದೆ. ಅದು ಅತ್ಯಂತ ವಿಷಕಾರಿ. ಪುರುಷವಾದಿ ಎನ್ನುವುದರಲ್ಲಿ ಹಲವು ತಪ್ಪುಗಳಿರುತ್ತೆ” ಎಂದು ಅವರು ಹೇಳಿದ್ದಾರೆ. ಈ ಧ್ವನಿ ಆಕೆಯ ಅಭಿಪ್ರಾಯ ಮಾತ್ರವಲ್ಲದೆ ಸಮಕಾಲೀನ ಸಿನಿಮಾ ಇಂಡಸ್ಟ್ರಿಯ ದೊಡ್ಡದೊಂದು ಸಮಸ್ಯೆಯನ್ನು ಎತ್ತಿ ತೋರುತ್ತದೆ.

ಈಗಾಗಲೇ ಜನಜನಿತನಾಗಿರುವ ಹೀರೋನನ್ನು ದೇವರಂತೆ ಚಿತ್ರಿಸುವುದೇ ಈ ಮಾಸ್ ಸಿನಿಮಾಗಳ ಮೂಲ ಲಕ್ಷಣ. ರಜನೀಕಾಂತ್, ವಿಜಯ್, ಪ್ರಭಾಸ್, ಅಜಿತ್ ಅಥವಾ ಮೈಕಲ್ ಜಾಕ್ಸನ್‌ರಂತೆಯೇ, ಈ ಹೀರೋಗಳು ಚಿತ್ರದ ಕೇಂದ್ರಬಿಂದು. ಇತರ ಪಾತ್ರಗಳು, ವಿಶೇಷವಾಗಿ ಮಹಿಳಾ ಪಾತ್ರಗಳು, ಕೇವಲ ಚಿತ್ರಕ್ಕೆ ಅಲಂಕಾರಿಕ ಅಥವಾ ಹೀರೋನನ್ನ ಉನ್ನತೀಕರಿಸುವ ಸಾಧನಗಳಾಗಿರುತ್ತವೆ. ಎಲ್ಲವೂ ಹೀರೋ ಸುತ್ತ ತಿರುಗುವುದರಿಂದ ಚಿತ್ರದ ಕಥೆಯನ್ನು, ಸಂಭಾಷಣೆಗಳನ್ನು, ಹಾಡುಗಳನ್ನು, ಫೈಟ್ ಸೀನ್ಗಳನ್ನು ಸಹ ಹೀರೋ ಸೇವೆಗೆ ಸಮರ್ಪಿಸಲಾಗುತ್ತದೆ.

ಉದಾಹರಣೆಗೆ, ‘ಬಾಹುಬಲಿ’ ಸರಣಿಯನ್ನು ತೆಗೆದುಕೊಳ್ಳಿ. ʼಬಾಹುಬಲಿʼಯಾಗಿ ಪ್ರಭಾಸ್, ಒಬ್ಬ ಮಹಾನ್ ಯೋಧನಾಗಿ, ರಾಜನಾಗಿ, ಪ್ರೇಮಿಯಾಗಿ ಎಲ್ಲ ಪಾತ್ರಗಳಲ್ಲೂ ಅಚ್ಚುಕಟ್ಟಾಗಿ ಚಿತ್ರಿಸಲ್ಪಟ್ಟಿದ್ದಾರೆ. ಆದರೆ ಅವರ ಸುತ್ತಲಿನ ಮಹಿಳಾ ಪಾತ್ರಗಳು? ಅನುಷ್ಕಾ ಅಭಿನಯಿಸಿದ ದೇವಸೇನಾ ಕೇವಲ ಬಾಹುಬಲಿಯ ಪ್ರೇಮಿಯಾಗಿ, ರಾಜನ ಗುಂಪಿನಲ್ಲಿ ಬಂಧಿಯಾಗಿ ಕಾಣಿಸುತ್ತಾಳೆ. ಇಲ್ಲಿ ಕಥೆ ಬಾಹುಬಲಿಯ ವೀರತ್ವದ ಮೇಲೆ ಕೇಂದ್ರೀಕರಿಸಿದೆಯೇ ಹೊರತು, ಸಾಮಾಜಿಕ ಸಂದರ್ಭಗಳು ಅಥವಾ ಮಹಿಳಾ ಸ್ವಾತಂತ್ರ್ಯದಂತಹ ವಿಷಯಗಳಲ್ಲಿ ಹಿಂದೆ ಬಿದ್ದಿದೆ.

ಈ ರೀತಿಯ ಸಿನೆಮಾಗಳು ಸಮಾಜದಲ್ಲಿ ‘ಸೂಪರ್‌ಮ್ಯಾನ್’ ಕಲ್ಪನೆಯನ್ನು ಬೆಳೆಸುತ್ತವೆ. ಹೀರೋ ಎಲ್ಲವನ್ನೂ ಉಳಿಸುತ್ತಾನೆ, ಏನು ಬೇಕಾದರೂ ಮಾಡುತ್ತಾನೆ ಎಂಬ ಭ್ರಮೆ ಸೃಷ್ಟಿಸುತ್ತವೆ. ಅದೇ ಭ್ರಮೆಯಲ್ಲಿ ನಾವು ಸಾಮಾಜಿಕ ಸಮಸ್ಯೆಗಳನ್ನು ಒಪ್ಪಿಕೊಳ್ಳುತ್ತೇವೆ. ಹೀರೋಗಳು ತಮ್ಮ ಚಿತ್ರಗಳಲ್ಲಿ ದೇವರು, ರಾಜ, ಯೋಧ… ಎಲ್ಲರೂ ಆಗಬಹುದು. ಇದರಿಂದ ಇತರ ಸಣ್ಣ ಪುಟ್ಟ ಕಲಾವಿದರಿಗೆ ಅವಕಾಶ ಕಡಿಮೆಯಾಗುತ್ತದೆ. ತಮ್ಮ ಪ್ರತಿಭೆ ಮೂಲಕ ಹೀರೋಯಿಸಂ ಬೇಸ್ಡ್‌ ಸಿನೆಮಾಗಳನ್ನು ಬೆಂಬಲಿಸುವುದಕ್ಕಿಂತಲೂ ಹೆಚ್ಚು ಸ್ವತಂತ್ರ ಪಾತ್ರಗಳನ್ನು ಕೆಲ ನಟಿಯರು ಹುಡುಕುತ್ತಾರೆ. ಅವರಲ್ಲಿ ನಿತ್ಯಾ ಕೂಡ ಒಬ್ಬರು.

ನಿತ್ಯಾ ಈ ಪ್ರವೃತ್ತಿಯನ್ನು ‘ಸೆಕ್ಸಿಸ್ಟ್’ ಎಂದು ಕರೆದಿದ್ದಾರೆ. ಅಂದರೆ ಪುರುಷವಾದಿ. ಮಾಸ್ ಸಿನಿಮಾಗಳು ಮಹಿಳಾ ಪಾತ್ರಗಳನ್ನು ಯಾವಾಗಲೂ ಒಂದೇ ರೀತಿಯಲ್ಲಿ ಚಿತ್ರಿಸುತ್ತವೆ. ಸೌಂದರ್ಯದ ಸಂಕೇತ, ಹೀರೋನನ್ನು ಪ್ರಶಂಸಿಸುವವಳು ಹೀಗೆ… ಇಲ್ಲೂ ಕೂಡ ಹೀರೋನ ಸುತ್ತಲೇ ಇರಬೇಕಾಗುತ್ತದೆ. ಇದು ಸಮಾಜದಲ್ಲಿನ ಪುರುಷಾಧಿಪತ್ಯವನ್ನು ಮತ್ತಷ್ಟು ಬಲಪಡಿಸುತ್ತದೆ. ಇನ್ನು ಕೆಲ ಸಿನಿಮಾಗಳು ಮಹಿಳಾ ಸ್ವಾತಂತ್ರ್ಯವನ್ನು ಬದಿಗೆ ಸರಿಸಿ ಮಹಿಳೆಯರನ್ನ ಕೆಲ ವಸ್ತುಗಳಂತೆ ಚಿತ್ರಿಸಿಬಿಡುತ್ತವೆ. ಇಲ್ಲಿ ಮಹಿಳೆಯರ ಆಯ್ಕೆಗಳು, ಆಕಾಂಕ್ಷೆಗಳು ಮುಖ್ಯವಾಗಲ್ಲ, ಅವುಗಳು ಹೀರೋಗೆ ಹೀರೋಯಿಸಂ ತೋರಿಸುವ ಸಾಧನಗಳಾಗುತ್ತವೆ. ಇದರಿಂದ ಪುರುಷ ಯುವ ಜನತೆ ನಾವು ಮಹಿಳೆಯರನ್ನು ‘ನಿಯಂತ್ರಿಸಬೇಕಾದವರು’ ಅನ್ನೋದನ್ನೇ ಕಲಿಯುತ್ತದೆ.

ಮಾಸ್ ಸಿನಿಮಾದ ಮತ್ತೊಂದು ದೊಡ್ಡ ಸಮಸ್ಯೆ ಅದರ ನಂಜು. ಒಬ್ಬ ಹೀರೋ ಹತ್ತಿಪ್ಪತ್ತು ಶತ್ರುಗಳನ್ನು ಕೊಂದುಹಾಕುತ್ತಾನೆ. ಇದನ್ನು ನೋಡುವ ಜನ ಹುಚ್ಚೆದ್ದು ಕುಣಿಯುತ್ತಾರೆ. ನಂಜನ್ನೂ ಗ್ಲಾಮರಸ್ ಆಗಿ ತೋರಿಸುವ ಈ ಕೆಟ್ಟ ಚಾಳಿ ನಿಜಜೀವನದಲ್ಲಿ ಹಿಂಸೆಯ ಸಂಸ್ಕೃತಿಯನ್ನು ಪೋಷಿಸುತ್ತದೆ. ಅದರಿಂದ ಪ್ರಭಾವಿತರಾದವರು ‘ನನ್ನ ಹಕ್ಕುಗಳಿಗಾಗಿ ಹಿಂಸೆ ಮಾಡಬೇಕು ಅಥವಾ ಹಿಂಸೆ ಕೊಡಬೇಕು’ ಎಂದು ಕಲಿಯುತ್ತಾರೆ. ಸಂಶೋಧನೆಗಳ ಪ್ರಕಾರ, ಇಂತಹ ಚಿತ್ರಗಳನ್ನು ನೋಡುವ ಯುವಕರು ಹಿಂಸಾತ್ಮಕ ವರ್ತನೆಯನ್ನು ಸ್ವೀಕಾರಾರ್ಹವೆಂದು ಭಾವಿಸುತ್ತಾರೆ. ಇದು ಮಹಿಳಾ ಹಿಂಸೆಯನ್ನು ಸಹ ಉತ್ತೇಜಿಸುತ್ತದೆ. ಏಕೆಂದರೆ ಹೀರೋ ‘ ತನ್ನ ಪ್ರೇಮಿಯನ್ನು ರಕ್ಷಿಸಲು’ ಹಿಂಸೆ ಮಾಡುತ್ತಾನೆ ಎಂಬ ಭ್ರಮೆ!

ಹಲವು ಸಿನಿಮಾಗಳು ಹಲವು ರೀತಿಯಲ್ಲಿ ಮನುಷ್ಯವಿರೋಧಿ ಅನ್ನೋದು ನಿತ್ಯಾ ಮೆನನ್ ಮಾತಿನ ಭಾವ. ಮಾಸ್ ಸಿನಿಮಾ ಮಾನವೀಯ ಮೌಲ್ಯಗಳನ್ನು ನಿರಾಕರಿಸುತ್ತದೆ. ಸಹಾನುಭೂತಿ, ಸಂವಾದ, ಸಾಮೂಹಿಕತೆ… ಇವುಗಳಿಲ್ಲದೆ, ಕೇವಲ ವೈಯಕ್ತಿಕ ವೀರತ್ವ ಮಾತ್ರ ಮಾಸ್ ಸಿನಿಮಾಗಳಲ್ಲಿ ಕಾಣಿಸುತ್ತದೆ. ನಿತ್ಯಾ ಟೀಕೆ ಮಾತ್ರ ಮಾಡಿಲ್ಲ; ಬದಲಾವಣೆಗಾಗಿ ಕೆಲಸ ಮಾಡಬೇಕು ಅಂತಲೂ ಆಶಿಸುತ್ತಿದ್ದಾರೆ.

ಮಲಯಾಳಂ ಸಿನಿಮಾದಲ್ಲಿ ‘ದೃಶ್ಯಂ’ ಅಥವಾ ‘ಮಂಜಮೇಲ್ ಬಾಯ್ಸ್’ರಂತಹ ಚಿತ್ರಗಳು ಇದಕ್ಕೆ ಉದಾಹರಣೆ. ಇಲ್ಲಿಗೆ ಹೀರೋ ಪ್ರಧಾನತೆ ಇಲ್ಲ, ಮಾನವೀಯ ಕಥೆಗಳು ಇವೆ. ಇಂತಹ ಚಿತ್ರಗಳು ಸಮಾಜವನ್ನು ಪ್ರಶ್ನಿಸುತ್ತವೆ, ಬದಲಾಯಿಸುತ್ತವೆ. ಸಿನಿಮಾ ಇಂಡಸ್ಟ್ರಿ, ನಿರ್ಮಾಪಕರು, ನಿರ್ದೇಶಕರು ಈ ಕಟು ಸತ್ಯವನ್ನು ಅಂಗೀಕರಿಸಬೇಕು. OTT ಪ್ಲಾಟ್‌ಫಾರಂಗಳು ಈ ಬದಲಾವಣೆಗೆ ಅವಕಾಶ ನೀಡುತ್ತಿವೆ. ನಿತ್ಯಾ ಮೆನನ್‌ ಅವರಂತಹ ನಟಿಯರು ಪ್ರೊಡ್ಯೂಸರ್ ಆಗಿ ಮುಂದುವರಿದರೆ, ಹೆಚ್ಚಿನ ವೈವಿಧ್ಯಮಯ ಚಿತ್ರಗಳು ಬರುತ್ತವೆ.

ನಿತ್ಯಾ ಮೆನನ್‌ ಬಗ್ಗೆ ಹೇಳಲೇಬೇಕು, ಆಕೆ ಅಪ್ಪಟ ಕನ್ನಡತಿ. ಕೇರಳ ಮೂಲದ ನಿತ್ಯಾ ಪೋಷಕರು ದಶಕಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ನಿತ್ಯಾ ಹುಟ್ಟಿ ಬೆಳೆದಿದ್ದು, ಶಿಕ್ಷಣ ಪೂರೈಸಿದ್ದು ಎಲ್ಲವೂ ಕನ್ನಡದ ನೆಲದಲ್ಲಿ. ಬೆಂಗಳೂರಿನಲ್ಲಿ ಆಡಿ ಬೆಳೆದ ಈ ಬೆಡಗಿಗೆ ಕನ್ನಡ ಓದಲು, ಬರೆಯಲು ಸುಲಲಿತ. ಹಲವು ಸಂದರ್ಶನಗಳಲ್ಲಿ ಆಕೆ ಹೆಮ್ಮೆಯಿಂದ ನಾನು ಕನ್ನಡದ ಹುಡುಗಿ ಎಂದು ಹೇಳಿಕೊಂಡಿದ್ದಾರೆ.

ಸಿನೆಮಾ ಅಂದರೆ ಒಬ್ಬ ವ್ಯಕ್ತಿಯನ್ನ ವೈಭವೀಕರಿಸುವ ವೇದಿಕೆಯಾಗಿರಬೇಕೇ? ಅಥವಾ ಮನುಷ್ಯರ ವೈವಿಧ್ಯಮಯ ಕಥೆಗಳನ್ನು ಹೇಳುವ ಕಲಾಮಾಧ್ಯಮವಾಗಿರಬೇಕೇ? ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯಾಣವೇ, ಬಹುಶಃ ಭಾರತೀಯ ಸಿನೆಮಾದ ಮುಂದಿನ ಅಧ್ಯಾಯವನ್ನು ನಿರ್ಧರಿಸಬಹುದು.

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...