ಪ್ರಧಾನಿ ಮೋದಿ ಹೇಳಿದರೂ ಈ ಸಿನಿಮಾವನ್ನು ನೋಡುವವರೇ ಇಲ್ಲ!

Date:

ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿ ಮಾಡಿದ್ದಾರೆ. ಅದೇನೂ ಉಭಯ ಕುಶಲೋಪರಿಯ ಭೇಟಿಯಲ್ಲ; ಒಂದು ಅಜೆಂಡಾದೊಂದಿಗೆ ಅಗ್ನಿಹೋತ್ರಿ ಆದಿತ್ಯನಾಥರನ್ನು ಭೇಟಿ ಮಾಡಿರುವುದು. ಆ ಅಜೆಂಡಾ ಹೆಸರು ‘ದಿ ವ್ಯಾಕ್ಸಿನ್ ವಾರ್’

ದಿ ವ್ಯಾಕ್ಸಿನ್ ವಾರ್’ ಎಂದಾಕ್ಷಣ ಅನೇಕರಿಗೆ ನಮ್ಮ ಪ್ರಧಾನಿ ಮೋದಿ ನೆನಪಾಗುತ್ತದೆ. ಇತ್ತೀಚೆಗೆ ತಾನೇ ಪ್ರಧಾನಿ ಮೋದಿ, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಚಿತ್ರವನ್ನು ಹಾಡಿ ಹೊಗಳಿದ್ದರು. ದೇಶದ ವಿಜ್ಞಾನಿಗಳು ಕೊರೊನಾ ಕಾಲದಲ್ಲಿ ಪಟ್ಟ ಕಷ್ಟ, ಮಾಡಿದ ತ್ಯಾಗ ಇರುವ ಈ ಚಿತ್ರವನ್ನು ಎಲ್ಲರೂ ನೋಡಬೇಕೆಂದು ಕರೆ ನೀಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

‘ದಿ ವ್ಯಾಕ್ಸಿನ್ ವಾರ್’ ಬಿಡುಗಡೆಯಾಗಿದ್ದು ಸೆಪ್ಟೆಂಬರ್ 8ರಂದು. ಮೊದಲ ದಿನದಿಂದಲೂ ಚಿತ್ರ ಪ್ರೇಕ್ಷಕರ ಕೊರತೆಯನ್ನು ಎದುರಿಸುತ್ತಿದೆ. ಯಾವ ಮಟ್ಟಿಗೆ, ಎಂದರೆ, ಒಂದೇ ವಾರಕ್ಕೆ ಚಿತ್ರವು ಬಹುತೇಕ ಥಿಯೇಟರ್‌ಗಳಿಂದ ಎತ್ತಂಗಡಿಯಾಗಿದೆ.

ಅಕ್ಟೋಬರ್ 6 ರಂದು ಅದರ ದಿನದ ಕಲೆಕ್ಷನ್ ಕೇವಲ 20 ಲಕ್ಷ. ಅಧಿಕೃತ ಮಾಹಿತಿಯ ಪ್ರಕಾರವೇ ಚಿತ್ರದ ಇದುವರೆಗಿನ ಗಳಿಕೆ 8.5 ಕೋಟಿ ರೂಪಾಯಿ. ಬಹುತೇಕ ಥಿಯೇಟರ್‌ಗಳಿಂದ ಚಿತ್ರವು ಎತ್ತಂಗಡಿಯಾಗಿದೆ. ಮೋದಿಯವರು ಹೊಗಳಿದ ನಂತರವೂ, ಈ ಚಿತ್ರವನ್ನು ನೋಡಿ ಎಂದು ಕರೆ ಕೊಟ್ಟ ನಂತರವೂ ಜನ ಚಿತ್ರವನ್ನು ನೋಡಲು ಮನಸ್ಸು ಮಾಡುತ್ತಿಲ್ಲ.

ವಿವೇಕ್ ಅಗ್ನಿಹೋತ್ರಿ ಈ ಹಿಂದೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ನಿರ್ದೇಶನ ಮಾಡಿದ್ದರು. ಕಾಶ್ಮೀರಿ ಪಂಡಿತರಿಗೆ ಅನ್ಯಾಯವಾಗಿದೆ ಎನ್ನುವುದನ್ನು ಹಲವು ಸುಳ್ಳುಗಳು, ಕಲ್ಪನೆಗಳ ಸಮೇತ ಏಕಮುಖವಾಗಿ ತೋರಿಸಿ, ಇತಿಹಾಸಕ್ಕೆ ದ್ರೋಹ ಬಗೆದ ಆರೋಪಕ್ಕೆ ಅವರು ಗುರಿಯಾಗಿದ್ದರು. ಪ್ರ್ಯಾಪಗಾಂಡಾ ಸಿನಿಮಾ ಎನ್ನುವುದಕ್ಕೆ ಅದು ಅತ್ಯುತ್ತಮ ನಿದರ್ಶನವಾಗಿತ್ತು. ಅದು ಬಿಜೆಪಿಯನ್ನು ಓಲೈಸಲು, ಹಿಂದುತ್ವವಾದಿ ಚಿಂತನೆ ಹರಡಲು ಮಾಡಿದ ಚಿತ್ರವಾಗಿತ್ತು. ವಸ್ತುವಿನ ದೃಷ್ಟಿಯಿಂದ ಸಂಕುಚಿತ ಮನೋಭಾವ, ದ್ವೇಷ ಹರಡುವ ಉದ್ದೇಶದಿಂದ ಕೂಡಿದ್ದ ಚಿತ್ರ ಎನ್ನುವ ಟೀಕೆಗೆ ಒಳಗಾಗಿತ್ತು.

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೂ ಕೂಡ ಉತ್ತಮ ಎನ್ನುವಂಥ ಪ್ರತಿಕ್ರಿಯೆಯೇನೂ ಸಿಕ್ಕಿರಲಿಲ್ಲ. ಅಗ್ನಿಹೋತ್ರಿ ಬಿಜೆಪಿ ಆಡಳಿತದಲ್ಲಿದ್ದ ರಾಜ್ಯಗಳನ್ನು ಸಂಪರ್ಕಿಸಿ, ತೆರಿಗೆ ವಿನಾಯಿತಿ ಪಡೆದಿದ್ದರು. ಕರ್ನಾಟಕದಲ್ಲೂ ಆ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ತೆರಿಗೆ ವಿನಾಯಿತಿ ನೀಡಲು ನಿರಾಕರಿಸಿ, ‘ನಿಮ್ಮ ಚಿತ್ರವನ್ನು ಹೆಚ್ಚು ಜನ ನೋಡಲಿ ಎನ್ನುವ ಆಸೆಯಿದ್ದರೆ, ಯೂ ಟ್ಯೂಬ್‌ನಲ್ಲಿ ಹಾಕಿ, ಎಲ್ಲರೂ ನೋಡುತ್ತಾರೆ. ಅದು ಬಿಟ್ಟು ಹಿಂದುತ್ವದ ಹೆಸರಿನಲ್ಲಿ ವ್ಯಾವಹಾರಿಕ ಲಾಭ ಮಾಡಿಕೊಳ್ಳಲು ಪ್ರಯತ್ನಿಸಬೇಡಿ’ ಎಂದಿದ್ದು ಭಾರಿ ಸುದ್ದಿಯಾಗಿತ್ತು. ರಾಮ್‌ಗೋಪಾಲ್ ವರ್ಮಾನಂಥ ಅನೇಕ ಕಸುಬು ಬಲ್ಲ ನಿರ್ದೇಶಕರು ಕಾಶ್ಮೀರ್ ಫೈಲ್ಸ್ ಉತ್ತಮ ಚಿತ್ರ ಅಲ್ಲ ಎಂದಿದ್ದರು. ಕೇವಲ ವಸ್ತುವಿನ ದೃಷ್ಟಿಯಿಂದ ಮಾತ್ರವಲ್ಲ, ನಿರ್ದೇಶನದ ದೃಷ್ಟಿಯಿಂದಲೂ ಕಾಶ್ಮೀರ್ ಫೈಲ್ಸ್ ಒಂದು ಕಳಪೆ ಚಿತ್ರ ಎಂದಿದ್ದರು. ಆದರೆ, ಸರ್ಕಾರಗಳ ಬೆಂಬಲದಿಂದ ಅಗ್ನಿಹೋತ್ರಿ ಅದನ್ನು ಯಶಸ್ವಿ ಚಿತ್ರ ಎನ್ನುವಂತೆ ಮಾಡಿದ್ದರು.

ಈಗ ಮತ್ತೆ ಅಗ್ನಿಹೋತ್ರಿ ಅದೇ ದಾರಿ ಹಿಡಿಯಲು ಮುಂದಾಗಿದ್ದಾರೆ. ಉತ್ತರ ಪ್ರದೇಶದ ಆದಿತ್ಯನಾಥರನ್ನು ಭೇಟಿಯಾಗಿ ಶಾಲಾ ಮಕ್ಕಳಿಗೆ ಚಿತ್ರವನ್ನು ತೋರಿಸಲು ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಚಿತ್ರದಿಂದ ಮಕ್ಕಳು ಸ್ಫೂರ್ತಿ ಪಡೆಯಲಿ ಎಂದು ಎಲ್ಲ ಕಡೆಯೂ ಮಕ್ಕಳಿಗೆ ಚಿತ್ರ ತೋರಿಸುವ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಸರ್ಕಾರಗಳು ಬೆಂಬಲ ನೀಡಬೇಕೆಂದು ಪ್ರವಾಸ ಮಾಡುತ್ತಿದ್ದಾರೆ. ಆ ಮೂಲಕವಾದರೂ ಚಿತ್ರವನ್ನು ‘ಯಶಸ್ವಿ ಚಿತ್ರ’ವನ್ನಾಗಿ ಮಾಡಲು ಅಗ್ನಿಹೋತ್ರಿ ಕಸರತ್ತು ಮಾಡುತ್ತಿದ್ದಾರೆ.

ಕೊರೊನಾ ಕಾಲದಲ್ಲಿ ವೈದ್ಯಕೀಯ ಸಿಬ್ಬಂದಿ ಪಟ್ಟ ಪಾಡು ಕುರಿತು ಚಿತ್ರ ಮಾಡಿದ್ದೇನೆ ಎಂದು ಅಗ್ನಿಹೋತ್ರಿ ಹೇಳಿಕೊಂಡಿದ್ದಾರೆ. ಆದರೆ, ಅವರೇ ಇನ್ನೊಂದೆಡೆ ಹೇಳಿಕೊಂಡಂತೆ, ಕೊರೊನಾ ವ್ಯಾಕ್ಸಿನ್ ವಿಚಾರದಲ್ಲಿ ಭಾರತ ಹೇಗೆ ಸ್ವಾವಲಂಬನೆ ಸಾಧಿಸಿತು ಹಾಗೂ ಜಗತ್ತಿನ ಪಾಲಿಗೆ ಔಷಧಾಲಯವಾಗಿ ಹೇಗೆ ಕೆಲಸ ಮಾಡಿತು ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಅಂದರೆ, ಮೋದಿ ಸರ್ಕಾರವನ್ನು ಹೊಗಳುವ ಚಿತ್ರ. ಸಹಜವಾಗಿಯೇ ಆ ಚಿತ್ರವನ್ನು ಪ್ರಧಾನಿ ಮೋದಿ ಹೊಗಳಿದ್ದಾರೆ. ಅದನ್ನು ಜನರೂ ನೋಡಿ ಮೆಚ್ಚಿಕೊಂಡು ಹೊಗಳಲಿ ಎನ್ನುವುದು ಅವರಿಬ್ಬರ ಬಯಕೆ. ಆದರೆ, ಚಿತ್ರ ದೊಡ್ಡ ಡಿಸಾಸ್ಟರ್ ಎಂದು ಈಗಾಗಲೇ ಸಾಬೀತಾಗಿದೆ. ಈ ಚಿತ್ರವನ್ನು ಯಶಸ್ವಿ ಚಿತ್ರವನ್ನಾಗಿ ಮಾಡುವ ಕೊನೆಯ ಪ್ರಯತ್ನವಾಗಿ ಅಗ್ನಿಹೋತ್ರಿ ಅಕ್ಟೋಬರ್ 7ರಂದು ಉಜ್ಜಯಿನಿಯ ಮಹಾಕಾಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅದರ ಫೋಟೋ ಎಲ್ಲೆಡೆ ವೈರಲ್ ಆಗಿತ್ತು. ಇಷ್ಟೆಲ್ಲ ಆದರೂ ನಂಜು ಹರಡುವ ಚಿತ್ರವನ್ನು ಜನ ತಿರಸ್ಕರಿಸಿ ಅದಕ್ಕೆ ಸಲ್ಲಬೇಕಾದ ಮರ್ಯಾದೆಯನ್ನೇ ಕೊಟ್ಟಿದ್ದಾರೆ.

ಈ ಸುದ್ದಿ ಓದಿದ್ದೀರಾ: ಸುಬ್ರಹ್ಮಣ್ಯನ್ ಸ್ವಾಮಿ ಆರ್‌ಟಿಐ ಅರ್ಜಿಗೆ ಉತ್ತರ ನೀಡುವಂತೆ ಮೋದಿ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಆದೇಶ

ಕೊರೊನಾದಿಂದ ಜಗತ್ತಿನಲ್ಲೇ ಅತಿ ಹೆಚ್ಚು ಜನ ಸತ್ತಿದ್ದು ಭಾರತದಲ್ಲಿ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ನೀಡಿದ್ದು ಅಗ್ನಿಹೋತ್ರಿಯಂಥವರಿಗೆ ಮುಖ್ಯ ಎಂದು ಅನ್ನಿಸುವುದೇ ಇಲ್ಲ. ಕೊರೊನಾದಿಂದ ಭಾರತದಲ್ಲಿ 47 ಲಕ್ಷ ಮಂದಿ ಸತ್ತಿದ್ದರು ಎನ್ನುವ ಆಘಾತಕಾರಿ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಬಹಿರಂಗಪಡಿಸಿತ್ತು. ಇಂಥ ಸತ್ಯಗಳನ್ನು ಮುಚ್ಚಿಟ್ಟು, ತಮ್ಮ ಸಿನಿಮಾದ ಮೂಲಕ ಸುಳ್ಳುಗಳನ್ನು ಹರಡಲು ಹೊರಟಿರುವ ಅಗ್ನಿಹೋತ್ರಿ ಈಗ ಆ ಸಿನಿಮಾವನ್ನು ಮಕ್ಕಳಿಗೆ ತೋರಿಸಲು ಹೊರಟಿದ್ದಾರೆ. ಈ ಮೂಲಕ ಅವರು ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಜಟ್ಟಿಯನ್ನು ನೆನಪಿಸುತ್ತಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇರಳ ಚುನಾವಣೆ | ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ ನಾಲ್ವರ ಪೈಪೋಟಿ; ಹಿಂದೆ ಸರಿಯುವ ಮಾತೇ ಇಲ್ಲ!

ಕಾಂಗ್ರೆಸ್‌ನ ನಾಲ್ವರು ನಾಯಕರು ಒಳಗೆಷ್ಟು ಅಸಮಾಧಾನ, ಪೈಪೋಟಿ ಹೊಂದಿದ್ದರೂ ರಾಜ್ಯದ ಕಾಂಗ್ರೆಸ್...

‘ಜೋಗಿ’ಯಿಂದ ‘ಕೆಡಿ’ವರೆಗೆ: ಕಲಾತ್ಮಕ ಮೌಲ್ಯಗಳ ಕುಸಿತ?

ʼನಾನು ಎಣ್ಣೆ ಹಾಗೂ ಉಪ್ಪಿನಕಾಯಿಯ ಬಗ್ಗೆ ಬರೆದಿದ್ದೇನೆʼ. ʼಈ ಹಾಡಿನ ಸಾಹಿತ್ಯದಲ್ಲಿ...

ಟ್ರಂಪ್‌ಗೆ ಚಿತ್ತಭ್ರಮೆಯೇ?; ಅಮೆರಿಕ ಅಧ್ಯಕ್ಷರ ಮಾನಸಿಕ ಆರೋಗ್ಯದ ಸುತ್ತ ಅನುಮಾನದ ಹುತ್ತ

ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರದ ಚುಕ್ಕಾಣಿ ಹಿಡಿದಿರುವ ನಾಯಕನೊಬ್ಬನ ಮಾನಸಿಕ ಸ್ಥಿರತೆ...