“ತಾಯಿನೇ ಎಲ್ಲಾ” ಎಂದಿದ್ದ ಪ್ರೇಮ್, ಈಗ “ಸರ್ಸೆ ನಿನ್ನ ಸೆರಗ” ಅಂತಾರೆ!; ಭಾರೀ ಟೀಕೆಗೆ ಗುರಿಯಾದ ʼಕೆಡಿ ದಿ ಡೆವಿಲ್‌ʼ ಹಾಡು

Date:

ಪ್ರೇಮ್‌ ನಿರ್ದೇಶನದ “ಕೆಡಿ ದಿ ಡೆವಿಲ್‌” ಸಿನಿಮಾ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಹೆಣ್ಣು ಮಕ್ಕಳ ಘನತೆಗೆ ಧಕ್ಕೆ ತರುವ ಈ ಚಿತ್ರದ ಹಾಡುಗಳು ಭಾರೀ ಟೀಕೆಗೆ ಗುರಿಯಾಗಿದೆ.

ಧ್ರುವ ಸರ್ಜಾ ನಟನೆಯ ಕೆಡಿ ದಿ ಡೆವಿಲ್‌ ಸಿನಿಮಾದ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಕಾರಣವಾಗಿದೆ. ʼಸರ್ಸೆ ನಿನ್ನ ಸೆರಗ ಸರಸೆʼ ಎಂಬ ಹಾಡು ಭಾರತದಲ್ಲಿ ಇದುವರೆಗೂ ಬಿಡುಗಡೆಗೊಂಡ ಹಾಡುಗಳಲ್ಲೇ ಅಸಭ್ಯ ಹಾಡು ಎಂಬ ಟೀಕೆಗೆ ಪಾತ್ರವಾಗಿದೆ. ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹಾಡಿನಲ್ಲಿ ಹೆಣ್ಣನ್ನು ಅವಮಾನಿಸುವ ಅಂಶಗಳೇ ಇದ್ದು ಹಿಂದೆ “ತಾಯಿನೇ ಎಲ್ಲಾ ಮಿಗಿಲ್ಯಾರು ಇಲ್ಲ..” ಎಂದು ಹಾಡಿದ್ದ ಪ್ರೇಮ್‌ ಈಗ ಇಂತಹ ಹಾಡಿನ ಗೀತರಚನೆ ಮಾಡಿರುವುದು ಅಭಿಮಾನಿಗಳಲ್ಲಿ ಅಸಮಧಾನ ಉಂಟುಮಾಡಿದೆ.

ಇನ್ನೂ ಚಿತ್ರ ತಂಡದಲ್ಲಿ ಸಂಜಯ್‌ ದತ್‌ , ಶಿಲ್ಪಾ ಶೆಟ್ಟಿ, ರಮೇಶ್‌ ಅರವಿಂದ್‌ , ವಿ. ರವಿಚಂದ್ರನ್‌ ನಂತಹ ಹಿರಿಯ ಪಾತ್ರವರ್ಗವಿದ್ದೂ ಸಿನಿತಂಡ ಹೀಗೊಂದು ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಸರ್ಸೆ ನಿನ್ನ ಸೆರ್ಗ ಹಾಡಿನಲ್ಲಿ ನೊರ ಫತೇಹಿ ಮತ್ತು ಸಂಜಯ್‌ ದತ್‌ ಹೆಜ್ಜೆ ಹಾಕಿದ್ದು, ಹಾಡಿನ ಉದ್ದಕ್ಕೂ ಡಬಲ್‌ ಮೀನಿಂಗ್‌ ಸಾಲುಗಳು ಹೆಣ್ಣನ್ನು ಭೋಗದ ವಸ್ತುವಾಗಿ ಬಿಂಬಿಸುವ ದೃಶ್ಯಗಳೇ ತುಂಬಿ ಹೋಗಿವೆ. ಸಾಮಾಜಿಕ ಜಾಲತಾಣದಲ್ಲಿ ಜೋಗಿ ಸಿನಿಮಾದ ಮೂಲಕ  ಹೆಣ್ಣಿನ ವಾತ್ಸಲ್ಯದ ಮಿಡಿತಗಳ ತೆರೆಯ ಮುಂದೆ ತಂದಿದ್ದ ಪ್ರೇಮ್‌, ಕೆಡಿ ಸಿನಿಮಾದಲ್ಲಿ ಈ ಬಗೆಯ ಸ್ರೀ ಸಂವೇದನೆಯನ್ನು ಸಂಪೂರ್ಣವಾಗಿ ಕಳೆದು ಕೊಂಡಿದ್ದಾರೆ.‌

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ನೊರಾ

ಇದೆ ಸಿನಿಮಾದ ʼಅಣ್ಣತಮ್ಮ ಜೋಡೆತ್ತು ಕಣ್ರೋʼ ಎನ್ನುವ ಹಾಡಿನಲ್ಲೂ ಹೆಣ್ಣನ್ನು ನಿಂದಿಸುವ ಬಯ್ಗುಳಗಳ ʼರಂಡೆ ಮುಂಡೇರ ಕಣ್ಣು ನಿಮ್ಮ ಮೇಲೆ ಬೀಳ್ದಿರ್ಲಿ ಕಂಡ್ರೋʼ ಸಾಲು ಬಳಸಿದ್ದಾರೆ ಈ ಹಾಡನ್ನು ಪ್ರೇಮ್‌ ಹಾಡಿರುವುದು ಒಬ್ಬ ಸೃಜನಶೀಲ ವ್ಯಕ್ತಿ ತನ್ನಲ್ಲಿರುವ ಕಲಾ ಅಭಿವಯಕತಿಯನ್ನು ಹೇಗೆ ಬಳಸಬಾರದು ಎಂಬುದಕ್ಕೆ ಉದಾಹರಣೆ.

ಇನ್ನು ಧ್ರುವ ಸರ್ಜಾ ಇತ್ತೀಚಿಗೆ ವಿವಾದದ ಮೂಲಕ ಸುದ್ದಿಯಾಗುವುದೇ ಹೆಚ್ಚು, ಈ ಹಿಂದೆ ಮಾರ್ಟಿನ್‌ ಸಿನಿಮಾ ಚೆನ್ನಾಗಿಲ್ಲ ಎಂದು ವಿಮರ್ಶೆ ಮಾಡಿದವರ ಮೇಲೆ ಧೃವ ಹರಿಹಾಯ್ದಿದ್ದರು. ಪೊಗರು ಸಿನಿಮಾದ ಕೆಲ ದೃಶ್ಯಗಳು ನಿರ್ದಿಷ್ಟ ಸಮುದಾಯವನ್ನು ಅವಹೇಳಣ ಮಾಡುವಂತಿದೆ ಎಂಬ ವಿವಾದವೂ ಸರ್ಜಾ ಬೆನ್ನು ಹತ್ತಿತ್ತು. ಧ್ರುವ ಸರ್ಜಾ ನಟನೆಯ ಇತ್ತೀಚಿನ ಸಿನಿಮಾಗಳಲ್ಲಿ ಚಿತ್ರದ ಸಾಹಿತ್ಯ ಮತ್ತು ಹಾಡು ಎರಡೂ ಹಿಂಸೆಯನ್ನು ವೈಭವೀಕರಿಸುವ, ಅವಾಚ್ಯ ಸಂಭಾಷಣೆಗಳನ್ನು ಬಳಸಿ ಮಾಸ್‌ ಎಂಬ ಪರಿಕಲ್ಪನೆಯ ಸುತ್ತ ಸುತ್ತುವ ಅಸೂಕ್ಷ್ಮ ವಸ್ತುಗಳನ್ನೇ ಆಧರಿಸಿವೆ ಎನ್ನಬಹುದು.

WhatsApp Image 2026 03 17 at 2.07.14 PM

ಪ್ರಸ್ತುತ ಇತರೆ ರಾಜ್ಯದ ಸಿನಿ ಪ್ರೇಕ್ಷಕರಿಂದಲೂ ಟೀಕೆಗೆ ಒಳಗಾಗಿರುವ ʼಸರ್ಸೆ ನಿನ್ನ ಸೆರಗ..ʼ ಹಾಡು ಕನ್ನಡಿಗರ ಸಿನಿ ಅಭಿರುಚಿಯನ್ನೇ ಟೀಕಿಸುವ ಹಂತಕ್ಕೆ ತಲುಪಿದೆ. ಸಾಮಾಜಿಕ ಜಾಲತಾಣದ ಎಕ್ಸ್‌ ಖಾತೆಯೊಂದರಲ್ಲಿ ಈ ಕುರಿತು ಬರೆದ ನೆಟ್ಟಿಗನೊಬ್ಬʼ ಕನ್ನಡ ಸಿನಿಮಾ ಲೈಂಗಿಕ ಗೀಳನ್ನು ಪ್ರಚೋದಿಸುತ್ತವೆʼ ಎಂದು ಬರೆದುಕೊಂಡಿದ್ದಾರೆ.

WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!

ವಲಸೆಯಂತಹ ಜ್ವಲಂತ ಸಮಸ್ಯೆಯನ್ನು ಹೇಳುವ ರಾಜಕೀಯ ಚಿತ್ರವೆನಿಸಿದರೂ; ಕ್ರಾಂತಿಕಾರಿ ಚಟುವಟಿಕೆಗಳ ಕುರಿತು...

ಆಸ್ಕರ್ 2026​ ಪ್ರಶಸ್ತಿ | ಅತ್ಯುತ್ತಮ ನಟ ಮೈಕೆಲ್ ಬಿ, ನಟಿ ಜೆಸ್ಸಿ ಬಕ್ಲಿ: ಸಂಪೂರ್ಣ ವಿಜೇತರ ಪಟ್ಟಿ

ಆಸ್ಕರ್ 2026 ಪ್ರಶಸ್ತಿ ಸಮಾರಂಭವು ಮಾರ್ಚ್ 15ರಂದು ಲಾಸ್ ಏಂಜಲಿಸ್‌ನ ಡಾಲ್ಬಿ...

ಅಂತರ್‌ ಧರ್ಮೀಯ ವಿವಾಹ ಸಮರ್ಥಿಸಿದ ʼಕುಂಭಮೇಳʼ ಖ್ಯಾತಿ ಮೊನಾಲಿಸಾ; ‘ಲವ್ ಜಿಹಾದ್’ ಆರೋಪ ತಿರಸ್ಕಾರ

ಮಹಾ ಕುಂಭಮೇಳ–2025ರಲ್ಲಿ ರಾಷ್ಟ್ರವ್ಯಾಪಿ ಖ್ಯಾತಿಗೆ ಪಾತ್ರರಾದ ಮೊನಾಲಿಸಾ ಭೋಸ್ಲೆ ಅವರು ನಟ...