ಪುರುಷನು ಯಾವಾಗ ಅತ್ಯಾಚಾರ ಮಾಡುತ್ತಾನೊ? ಯಾವಾಗ ಕೊಲೆ ಮಾಡುತ್ತಾನೊ ಗೊತ್ತಿಲ್ಲ! ಹಾಗಾಗಿ, ಎಲ್ಲ ಪುರುಷರನ್ನು ಜೈಲಿಗೆ ಹಾಕಲು ಸಾಧ್ಯವೇ? ಎಂದು ರಮ್ಯಾ ಪ್ರಶ್ನಿಸಿದ್ದಾರೆ.
ಬೀದಿನಾಯಿಗಳ ವಿಚಾರದಲ್ಲಿ ಸುಪ್ರೀಂಕೋರ್ಟ್ ಇತ್ತೀಚಿಗೆ ನೀಡಿದ ತೀರ್ಪಿಗೆ ನಟಿ ರಮ್ಯಾ ಸಾಮಾಜಿಕ ಮಾಧ್ಯಮದ ಮೂಲಕ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ʼಪುರುಷರ ಮನಸ್ಸೂ ಯಾರಿಗೂ ಅರ್ಥ ಆಗಲ್ಲ. ಪುರುಷ ಯಾವಾಗ ಅತ್ಯಾಚಾರ ಮಾಡುತ್ತಾನೆ, ಯಾವಾಗ ಕೊಲೆ ಮಾಡುತ್ತಾನೆ ಎನ್ನುವುದು ತಿಳಿಯುವುದಿಲ್ಲ. ಹಾಗಾದರೆ ಎಲ್ಲ ಪುರುಷರನ್ನು ಜೈಲಿಗೆ ಹಾಕಬೇಕಾ?’ ಎಂದಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಹಾಲುಗಲ್ಲದ ಹುಡುಗ ವೈಭವ್ ಮತ್ತು ಕ್ರಿಕೆಟ್ ಕಲಾತ್ಮಕತೆ
ಸದ್ಯ ಈ ಪೋಸ್ಟ್ ವೈರಲ್ ಆಗಿದೆ. ಪರ-ವಿರೋಧದ ಚರ್ಚೆಗಳು ನಡೆಯುತ್ತಿದ್ದು, ಕೆಲವರು ರಮ್ಯಾ ಅಭಿಪ್ರಾಯವನ್ನು ಸ್ವಾಗತಿಸಿದರೆ, ಒಂದಷ್ಟು ಮಂದಿ ವಿರೋಧಿಸಿದ್ದಾರೆ.
ಬೀದಿ ನಾಯಿಗಳ ಮನಸ್ಸನ್ನು ಓದಲು ಯಾರಿಂದಲೂ ಸಾಧ್ಯವಿಲ್ಲ. ಯಾವ ನಾಯಿ ಕಚ್ಚುತ್ತದೆ ಅಥವಾ ಕಚ್ಚುವುದಿಲ್ಲ ಎಂದು ತಿಳಿಯುವುದು ಅಸಾಧ್ಯ. ಆದ್ದರಿಂದ ಎಲ್ಲ ನಾಯಿಗಳನ್ನು ಆಶ್ರಯ ತಾಣಗಳಲ್ಲಿರಿಸುವುದು ಸೂಕ್ತ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.





