ಈ ಸಿನಿಮಾ | ಸಪ್ತ ಸಾಗರದಾಚೆ ಎಲ್ಲೋ ಮನಕಲಕುವ ಕತೆ ಅಡಗಿದೆ

Date:

ಚಿತ್ರ: ಸಪ್ತ ಸಾಗರದಾಚೆ ಎಲ್ಲೋ | ನಿರ್ದೇಶನ: ಹೇಮಂತ್‌ ರಾವ್‌ | ತಾರಾಗಣ: ರಕ್ಷಿತ್‌ ಶೆಟ್ಟಿ, ರುಕ್ಮಿಣಿ ವಸಂತ್‌,  ಅವಿನಾಶ್‌, ಶರತ್‌ ಲೋಹಿತಾಶ್ವ, ಅಚ್ಯುತ್‌ ಕುಮಾರ್‌, ಪವಿತ್ರಾ ಲೋಕೇಶ್‌, ರಮೇಶ್‌ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ | ಭಾಷೆ: ಕನ್ನಡ | ಸಂಗೀತ ನಿರ್ದೇಶನ: ಚರಣ್‌ ರಾಜ್‌ | ನಿರ್ಮಾಪಕರು: ರಕ್ಷಿತ್‌ ಶೆಟ್ಟಿ |

ಈ ಹಿಂದೆ ʼಗೋಧಿಬಣ್ಣ ಸಾಧಾರಣ ಮೈಕಟ್ಟುʼ ಸಿನಿಮಾ ಮೂಲಕ ಕನ್ನಡದ ಸಿನಿ ಪ್ರೇಕ್ಷಕರ ಗಮನ ಸೆಳೆದಿದ್ದ ರಕ್ಷಿತ್‌ ಶೆಟ್ಟಿ ಮತ್ತು ಹೇಮಂತ್‌ ರಾವ್‌ ಜೋಡಿ ಇದೀಗ ʼಸಪ್ತ ಸಾಗರದಾಚೆ ಎಲ್ಲೋʼ ಸಿನಿಮಾದ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ಎದುರುಗೊಂಡಿದೆ.

ಅಮಾಯಕ ಕಾರು ಚಾಲಕ ಮನು ಮತ್ತವನ ಮುಗ್ಧ ಪ್ರೀತಿಯ ಸುತ್ತ ಇಡೀ ಚಿತ್ರದ ಕತೆಯನ್ನು ಭಾವನಾತ್ಮಕವಾಗಿ ಹೆಣೆಯಲಾಗಿದೆ. ನಾಯಕನ ಮುಗ್ದತೆಯೇ ಈ ಚಿತ್ರದ ಜೀವಾಳ. ಕಡಲ ತೀರದಲ್ಲೊಂದು ಚೆಂದದ ಮನೆ ಕಟ್ಟಿಕೊಂಡು ತನ್ನ ಪ್ರೇಯಸಿಯ ಜೊತೆ ಸರಳವಾಗಿ ಬದುಕಬೇಕು ಎಂದುಕೊಂಡಿದ್ದ ಹುಡುಗ ಹುಂಬುತನಕ್ಕೆ ಬಿದ್ದು ಜೈಲು ಸೇರಿದಾಗ ಏನಾಗುತ್ತದೆ ಎಂಬುದರ ಸುತ್ತ ಚಿತ್ರದ ಕಥೆ ಸಾಗುತ್ತದೆ.

ಚಿತ್ರದ ಮೊದಲಾರ್ಧ ಪ್ರೇಕ್ಷಕರ ತಾಳ್ಮೆಯನ್ನು ಬೇಡುತ್ತದೆ. ಇಂಟರ್‌ವಲ್‌ ಬಳಿಕ ಇಡೀ ಚಿತ್ರದ ಕಥೆ ಆಪ್ತವಾಗುತ್ತಾ ಸಾಗುತ್ತದೆ. ಕೊನೆಯ 20 ನಿಮಿಷಗಳಂತೂ ನೋಡುಗರನ್ನು ಭಾವನೆಗಳ ಅಲೆಯಲ್ಲಿ ತೇಲಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸಿನಿಮಾದ ಕಥೆ ಬಡ ಮತ್ತು ಮಧ್ಯಮ ವರ್ಗದ ಜನರ ಆಸೆಕಂಗಳ ಬದುಕಿಗೆ ಹಿಡಿದ ವಾಸ್ತವದ ಕನ್ನಡಿ ಎಂದರೆ ತಪ್ಪಾಗಲಾರದು. ಅಸಹಾಯಕ ಮಂದಿಯ ಒಂದೇ ಒಂದು ಎಡವಟ್ಟು ಅವರ ಇಡೀ ಬದುಕಿನ ದಿಕ್ಕನ್ನೇ ಬದಲಿಸಿ ಪ್ರಪಾತಕ್ಕೆ ನೂಕಬಲ್ಲದು ಎಂಬ ಸಂದೇಶವನ್ನು ನಿರ್ದೇಶಕರು ಭಾವುಕತೆಯೊಂದಿಗೆ ತೆರೆಗೆ ಅಳವಡಿಸಿದ್ದಾರೆ. ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವ ಸಾಹಸ, ಸೆಂಟ್ರಲ್‌ ಜೈಲುಗಳ ಕರಾಳತೆ ಎಲ್ಲವೂ ಕಣ್ಣಿಗೆ ರಾಚುವಂತಿದೆ.

ನಿಧಾನಗತಿಯ ನಿರೂಪಣೆ ಈ ಚಿತ್ರದ ದೌರ್ಬಲ್ಯ. ತಲೆ ಮೇಲೆ ನಮ್ಮದೇ ಆದ ಸೂರು ಬೇಕು ನಿಜ. ಆದರೆ, ಆ ಸೂರಿಗಾಗಿ ಚೆಂದದ ಬದುಕನ್ನೇ ಬಲಿಕೊಡುವ ಕಲ್ಪನೆ, ಅದಕ್ಕೆ ನಾಯಕನ ಹುಂಬುತನವನ್ನೇ ಹೊಣೆಯಾಗಿಸಿ ಕಟಕಟೆಯಲ್ಲಿ ನಿಲ್ಲಿಸುವ ಪರಿಯನ್ನು ಒಪ್ಪಲಾಗದು. ಮನುಷ್ಯನಿಗೆ ಬದುಕು ಮುಖ್ಯವಾಗಬೇಕು. ಸ್ವಂತದ ಮನೆ, ಮಠಗಳ ಮಾತೆಲ್ಲವೂ ಆನಂತರದ್ದು.

ಈ ಸುದ್ದಿ ಓದಿದ್ದೀರಾ? ನೂರರ ನೆನಪು | ಸ್ಮರಿಸಲೇಬೇಕಾದ ಶೈಲೇಂದ್ರ ಎಂಬ ಜೀವಪರ ದನಿ

ಮನು ಪಾತ್ರದಲ್ಲಿ ರಕ್ಷಿತ್‌ ಶೆಟ್ಟಿ ಜೀವಿಸಿದ್ದಾರೆ. ಅವರ ವೃತ್ತಿ ಬದುಕಿನ ಅತ್ಯುತ್ತಮ ಪಾತ್ರ ನಿರ್ವಹಣೆಯಲ್ಲಿ ಇದು ಕೂಡ ಒಂದು. ತನ್ನ ಮುಗ್ದ ಪ್ರೀತಿಯ ಉಳಿವಿಗಾಗಿ ಹೋರಾಡುವ ಅಸಹಾಯಕ ಪ್ರಿಯಾಳ ಪಾತ್ರದಲ್ಲಿ ರುಕ್ಮಿಣಿ ಗಮನ ಸೆಳೆಯುತ್ತಾರೆ. ಅವಿನಾಶ್‌, ಅಚ್ಯುತ್‌ ಕುಮಾರ್‌, ಶರತ್‌ ಲೋಹಿತಾಶ್ವ, ಪವಿತ್ರಾ ಲೋಕೇಶ್‌ ಅವರುಗಳ ಬಗ್ಗೆ ಹೆಚ್ಚು ಹೇಳುವ ಅಗತ್ಯವೇ ಇಲ್ಲ. ರಮೇಶ್‌ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ ಅವರ ಪಾತ್ರಗಳು ಹಿಡಿಸುತ್ತವೆ.

ಚಿತ್ರದ ʼಟೈಟಲ್‌ ಟ್ರ್ಯಾಕ್‌ʼ ಗುನುಗುವಂತಿದೆ. ಚರಣ್‌ ರಾಜ್‌ ಅವರ ಸಂಗೀತ ಮತ್ತು ಅದ್ವೈತ್‌ ಗುರುಮೂರ್ತಿ ಅವರ ಛಾಯಾಗ್ರಹಣ ಚಿತ್ರಕಥೆಗೆ ಪೂರಕವಾಗಿದೆ. ನಿರೂಪಣೆ ನಿಧಾನ ಎನ್ನುವುದನ್ನು ಬಿಟ್ಟರೆ ʼಸಪ್ತ ಸಾಗರದಾಚೆ ಎಲ್ಲೋʼ ಒಮ್ಮೆ ನೋಡಬಹುದಾದ ಸಿನಿಮಾ.

f1fabf4f0e4ab96da4f5d26f3bc2b89e
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!

ವಲಸೆಯಂತಹ ಜ್ವಲಂತ ಸಮಸ್ಯೆಯನ್ನು ಹೇಳುವ ರಾಜಕೀಯ ಚಿತ್ರವೆನಿಸಿದರೂ; ಕ್ರಾಂತಿಕಾರಿ ಚಟುವಟಿಕೆಗಳ ಕುರಿತು...

“ತಾಯಿನೇ ಎಲ್ಲಾ” ಎಂದಿದ್ದ ಪ್ರೇಮ್, ಈಗ “ಸರ್ಸೆ ನಿನ್ನ ಸೆರಗ” ಅಂತಾರೆ!; ಭಾರೀ ಟೀಕೆಗೆ ಗುರಿಯಾದ ʼಕೆಡಿ ದಿ ಡೆವಿಲ್‌ʼ ಹಾಡು

ಪ್ರೇಮ್‌ ನಿರ್ದೇಶನದ "ಕೆಡಿ ದಿ ಡೆವಿಲ್‌" ಸಿನಿಮಾ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ...

ಆಸ್ಕರ್ 2026​ ಪ್ರಶಸ್ತಿ | ಅತ್ಯುತ್ತಮ ನಟ ಮೈಕೆಲ್ ಬಿ, ನಟಿ ಜೆಸ್ಸಿ ಬಕ್ಲಿ: ಸಂಪೂರ್ಣ ವಿಜೇತರ ಪಟ್ಟಿ

ಆಸ್ಕರ್ 2026 ಪ್ರಶಸ್ತಿ ಸಮಾರಂಭವು ಮಾರ್ಚ್ 15ರಂದು ಲಾಸ್ ಏಂಜಲಿಸ್‌ನ ಡಾಲ್ಬಿ...