ಓದುಗರ ಪತ್ರ | ನಿಷೇಧ, ದಾಳಿ – ಫ್ಯಾಶಿಸ್ಟರ ವರಸೆಯೇ ಹೊರತು ಧೀಮಂತರದ್ದಲ್ಲ

Date:

‘ಹಮಾರೆ ಬಾರಹ್’ ಎಂಬ ಹೆಸರಿನ ಹಿಂದೂಸ್ತಾನೀ ಚಲನಚಿತ್ರವನ್ನು ಕರ್ನಾಟಕ ಸರ್ಕಾರ ನಿಷೇಧಿಸಿದೆ ಎಂದು ವರದಿಯಾಗಿದೆ (ಪ್ರಜಾವಾಣಿ 8 ಜೂನ್ 2024). ಕಳೆದೊಂದು ದಶಕದಲ್ಲಿ, ಸಂಘ ಪರಿವಾರದ ‘ಸಾಂಸ್ಕೃತಿಕ’ ಕಾರ್ಖಾನೆಯು ಹಲವು ಫ್ಯಾಶಿಸ್ಟ್ ಸಿನಿಮಾ ಕೃತಿಗಳನ್ನು ಹೊರಡಿಸಿದ್ದು, ಅವುಗಳ ಗುಣಮಟ್ಟವು ಸಹಜವಾಗಿಯೇ ಎಲ್ಲ ರೀತಿಯಲ್ಲಿಯೂ ಕಳಪೆಯಾದದ್ದಿತ್ತು ಅನ್ನುವುದು ಸೂಕ್ಷ್ಮಜ್ಞರು ಬಲ್ಲ ವಿಷಯ. ಆ ಕಾರ್ಖಾನೆಯ ಸಿನಿಮಾಗಳಂತೆ ನೇರನೇರ ಫ್ಯಾಶಿಸ್ಟ್ ಪ್ರಚಾರಕ್ಕೆ ಇಳಿಯದಿದ್ದರೂ, ಸ್ಥೂಲವಾಗಿ ಅವುಗಳಂಥದೇ ಮನೋಭೂಮಿಕೆಯ ಸಿನಿಮಾಗಳು (ಮತ್ತು ಬಹಳ ದೊಡ್ಡ ಬಂಡವಾಳದ ಹಿನ್ನೆಲೆಯುಳ್ಳವು) ಕನ್ನಡ-ತೆಲುಗು ಸಿನಿಮಾ ಉದ್ಯಮಗಳವರಿಂದಲೂ ಬಂದಿವೆ; ದೊಡ್ಡ ಖ್ಯಾತಿಯನ್ನು ಗಳಿಸಿವೆ; ಹಾಗೂ  ನೂರಾರು ಕೋಟಿ ಆದಾಯ ಮಾಡಿಕೊಂಡಿವೆ.

ಆ ಬಗೆಯ ಕೃತಿಗಳನ್ನು ಕಟುವು-ಮೊನಚಾದ ವೈಚಾರಿಕ ವಿಮರ್ಶೆಯ ಮೂಲಕ, ಹಾಗೂ ಜನರ ಸಂವೇದನೆಯ ಸೂಕ್ಷ್ಮಜ್ಞತೆಯನ್ನೂ, ಅವರ ವೈಚಾರಿಕತೆಯನ್ನೂ ಬೆಳಸುವುದರ ಮೂಲಕ ಎದುರಿಸಬೇಕೇ ಹೊರತು ನಿಷೇಧಿಸುವುದರ ಮೂಲಕ ಅಲ್ಲ. ನಿಷೇಧಿಸಿವುದು, ಬೆದರಿಸುವುದು, ದಾಳಿ ಮಾಡುವುದು, ದ್ವೇಷ ಮತ್ತು ಅಸಹನೆಯನ್ನು ಹರಡುವುದು – ಇದೆಲ್ಲ ಫ್ಯಾಶಿಸ್ಟರ ವರಸೆಯೇ ಹೊರತು ಧೀಮಂತರದ್ದಲ್ಲ. ಕರ್ನಾಟಕ ಸರ್ಕಾರ ಮತ್ತು ರಾಜ್ಯದ ಸಮಾಜವು ಹಿಂದೂತ್ವದ ಫ್ಯಾಶಿಸ್ಟರು, ಇಸ್ಲಾಮೀಯ ತಾಲಿಬಾನಿಗಳು ಹಾಗೂ ಖೊಮೇನಿಗರ ಹಾದಿಯನ್ನು ತುಳಿಯದಿರಲಿ; ಧೀಮಂತಿಕೆಯನ್ನು ತೋರಲಿ, ಬೆಳೆಸಿಕೊಳ್ಳಲಿ.

ರಘುನಂದನ 2
– ರಘುನಂದನ
ಕವಿ, ರಂಗ ನಿರ್ದೇಶಕ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

 

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!

ವಲಸೆಯಂತಹ ಜ್ವಲಂತ ಸಮಸ್ಯೆಯನ್ನು ಹೇಳುವ ರಾಜಕೀಯ ಚಿತ್ರವೆನಿಸಿದರೂ; ಕ್ರಾಂತಿಕಾರಿ ಚಟುವಟಿಕೆಗಳ ಕುರಿತು...

“ತಾಯಿನೇ ಎಲ್ಲಾ” ಎಂದಿದ್ದ ಪ್ರೇಮ್, ಈಗ “ಸರ್ಸೆ ನಿನ್ನ ಸೆರಗ” ಅಂತಾರೆ!; ಭಾರೀ ಟೀಕೆಗೆ ಗುರಿಯಾದ ʼಕೆಡಿ ದಿ ಡೆವಿಲ್‌ʼ ಹಾಡು

ಪ್ರೇಮ್‌ ನಿರ್ದೇಶನದ "ಕೆಡಿ ದಿ ಡೆವಿಲ್‌" ಸಿನಿಮಾ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ...

ಆಸ್ಕರ್ 2026​ ಪ್ರಶಸ್ತಿ | ಅತ್ಯುತ್ತಮ ನಟ ಮೈಕೆಲ್ ಬಿ, ನಟಿ ಜೆಸ್ಸಿ ಬಕ್ಲಿ: ಸಂಪೂರ್ಣ ವಿಜೇತರ ಪಟ್ಟಿ

ಆಸ್ಕರ್ 2026 ಪ್ರಶಸ್ತಿ ಸಮಾರಂಭವು ಮಾರ್ಚ್ 15ರಂದು ಲಾಸ್ ಏಂಜಲಿಸ್‌ನ ಡಾಲ್ಬಿ...