ಆರ್‌ಎಸ್‌ಎಸ್‌ಗೆ ಹಣ ನೀಡುವ ಎನ್‌ಆರ್‌ಐ ಬ್ರಾಹ್ಮಣರು ಮಾಂಸ ತಿನ್ನುತ್ತಿಲ್ಲವೇ? : ‘ಅನ್ನಪೂರ್ಣಿ’ ವಿವಾದದ ಬಗ್ಗೆ ಗಾಯಕ ಟಿ.ಎಂ.ಕೃಷ್ಣ

Date:

“ನಾನು ಯಾವುದೇ ರೀತಿಯ ನಿಷೇಧವನ್ನು ನಂಬುವುದಿಲ್ಲ – ಅವುಗಳು ನಾನು ಒಪ್ಪದ ವಿಚಾರಗಳಾಗಿದ್ದರೂ ಸಹ ನಿಷೇಧ ಹೇರಬೇಕು ಎಂದು ನಾನು ಹೇಳುವುದಿಲ್ಲ” ಎಂದು ಕರ್ನಾಟಕ ಸಂಗೀತ ಗಾಯಕರಾದ ಟಿ.ಎಂ ಕೃಷ್ಣ ಹೇಳುತ್ತಾರೆ. ಇತ್ತೀಚೆಗೆ, ನಟಿ ನಯನತಾರಾ ಅಭಿನಯದ ‘ಅನ್ನಪೂರ್ಣಿ’ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಿಂದ ತೆಗೆದು ಹಾಕಿದ್ದರ ಬಗ್ಗೆ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಕೃಷ್ಣ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಇತ್ತೀಚಿನ ದಿನಗಳಲ್ಲಿ, ಕೆಲ ಸೆಲೆಬ್ರಿಟಿಗಳು ಆಡಳಿತಾರೂಢ ಸರ್ಕಾರಗಳ ಪರವಾದ ನಿಲುವು ಹೊಂದುವ ಪ್ರವೃತ್ತಿ ಕಂಡುಬರುತ್ತಿದೆ. ಅದು ಅವರ ಆನ್‌ಲೈನ್ ಅಥವಾ ಆಫ್‌ಲೈನ್ ಅಭಿವ್ಯಕ್ತಿ ಮತ್ತು ಸಂವಹನದ ಮೂಲಕ ಕಾಣಿಸಿಕೊಳ್ಳುತ್ತಿದೆ. ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಟ್ವೀಟ್‌ಗಳ ಸುರಿಮಳೆಯು ಅಂತಹ ಒಂದು ಉದಾಹರಣೆಯನ್ನು ಸೂಚಿಸುತ್ತದೆ” ಎಂದಿದ್ದಾರೆ.

“ಕೆಲವು ಕಲಾವಿದರು ನಿಜವಾಗಿಯೂ ಸರ್ಕಾರದ ಸಾಲಿಗೆ ತಾವೂ ಹೆಜ್ಜೆ ಹಾಕಬೇಕು ಎಂದು ಬಯಸುತ್ತಾರೆ. ಅವರು ಬಹುಶಃ ಈ ಸರ್ಕಾರವನ್ನು ನಂಬುತ್ತಾರೆ. ಅದು ಅವರ ಆಯ್ಕೆ. ಆದರೆ, ಇದೇ ಸಮಯದಲ್ಲಿ ಮತ್ತೊಂದೆಡೆ ಕೆಲವು ಕಲಾವಿದರು, ನಾಳೆ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವಾಗ ಘೇರಾವ್ ಆಗಬಹುದೆಂಬ ಭಯವನ್ನೂ ಹೊಂದಿದ್ದಾರೆ” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಅಗಾಧವಾದ ಜನ ಬೆಂಬಲ, ಅಪಾರ ಸಾಮಾಜಿಕ ಸ್ಥಾನಮಾನ ಹೊಂದಿರುವ ಕಲಾವಿದರೇ ತುಂಬಾ ಭಯಭೀತರಾಗಿದ್ದರೆ, ಇನ್ನು ಸಾಮಾನ್ಯ ವ್ಯಕ್ತಿ ಧ್ವನಿ ಎತ್ತಬೇಕೆಂದು ನಾವು ಹೇಗೆ ನಿರೀಕ್ಷಿಸಬಹುದು? ಜನಸಾಮಾನ್ಯರು ಬೀದಿಗೆ ಬಂದು ತಮ್ಮ ಮೂಲಭೂತ ಹಕ್ಕನ್ನು ಕೇಳುತ್ತಾರೆ ಎಂದು ನಾವು ಹೇಗೆ ನಿರೀಕ್ಷಿಸಬಹುದು? ಸರ್ಕಾರದ ಪರವಾಗಿ ಟ್ವೀಟ್‌ಗಳನ್ನು ಹಾಕುವ ಅದೇ ಪಾತ್ರಗಳು, ಸಾಮಾನ್ಯ ವ್ಯಕ್ತಿ ಹೇಗೆ ಹೋರಾಡಬೇಕು ಎಂಬುದರ ಕುರಿತು ಮಾತನಾಡುತ್ತವೆ. ಆದರೆ, ಅವರು ಹೋರಾಡುತ್ತಿಲ್ಲ! ಅವರು ತಮ್ಮ ನಷ್ಟದ ಬಗ್ಗೆ ಯೋಜಿಸುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಹೆಚ್ಚು ನಷ್ಟದ ಅಪಾಯವಿದ್ದರೆ, ನೀವು (ಕೆಲ ಸೆಲೆಬ್ರಟಿಗಳು) ಹೆಚ್ಚು ಅಂಜುಬುರುಕರಾಗಿದ್ದೀರಿ ಎಂದು ನೀವು ಹೇಳುತ್ತೀರಾ? ನೀವು ಹೆಚ್ಚು ಸಾಮಾಜಿಕ ಸ್ಥಾನಮಾನವನ್ನು ಹೊಂದಿದ್ದರೆ, ಅಂಜುಬುರುಕತೆ ಹೆಚ್ಚಾಗುತ್ತದೆ ಎಂದು ನೀವು ಹೇಳುತ್ತೀರಾ? ಹಾಗಾದರೆ, ಬಡವರು ಮತ್ತು ಅಂಚಿನಲ್ಲಿರುವವರು ಮಾತ್ರ ಯಾವಾಗಲೂ ಧ್ವನಿ ಎತ್ತಬೇಕೇ? ಅವರನ್ನು ಕೊಂದರೆ, ಬಡಿಗೆಯಿಂದ ಹೊಡೆದರೆ ಅಥವಾ ಜೈಲಿಗೆ ಹಾಕಿದರೆ, ನೀವು ಮತ್ತು ನಾನು ಅದರ ಬಗ್ಗೆ ಕಾಳಜಿ ವಹಿಸುವುದಿಲ್ಲವೇ? ಇಲ್ಲವೆಂದಾದರೆ ನಿಜವಾಗಿಯೂ, ಇದು ಕೊಳಕು ಮತ್ತು ಅಮಾನವೀಯ. ಇದು ಅತ್ಯಂತ ಕೆಟ್ಟ ಸ್ವಾರ್ಥ” ಎಂದು ಕಟುವಾಗಿ ಹೇಳಿದ್ದಾರೆ.

ಈ ವರದಿ ಓದಿದ್ದೀರಾ?: ರಾಮಮಂದಿರ ಉದ್ಘಾಟನೆ ಆಹ್ವಾನ ತಿರಸ್ಕರಿಸಿದ ನಾಲ್ವರು ಧರ್ಮ ಗುರುಗಳು; ಕಾರಣಗಳೇನು?

“ನಾನು ಹುಟ್ಟಿನಿಂದ ಬ್ರಾಹ್ಮಣ. ನನಗೆ ಗೊತ್ತು ಬ್ರಾಹ್ಮಣ ಸಮುದಾಯದ ಜನರು ಗೋಮಾಂಸ ಸೇರಿದಂತೆ ನಾನಾ ರೀತಿಯ ಮಾಂಸವನ್ನು ತಿನ್ನುತ್ತಾರೆ. ಹಾಗಾದರೆ, ಇದರಲ್ಲಿ ಏನು ಅಸಂಬದ್ಧ? ನಾನು ಯಾವುದೇ ನಿಷೇಧವನ್ನು ಒಪ್ಪುವುದಿಲ್ಲ. ನಾವು ಉದಾರವಾದಿ ಜಗತ್ತಿನ ಬಗ್ಗೆ ಯೋಚಿಸಬೇಕು. ಎಲ್ಲವನ್ನೂ ಸಂವಾದಿಸಬೇಕು ಮತ್ತು ಚರ್ಚಿಸಬೇಕು ಎಂದು ನಾನು ಭಾವಿಸುತ್ತೇನೆ. ಒಪ್ಪದಿದ್ದರೆ ಒಪ್ಪುವುದಿಲ್ಲ, ಸರಿ ಇದ್ದರೆ ಸರಿ ಎಂದು ಹೇಳಬೇಕು. ಆದರೆ, ಬೆದರಿಕೆ ಹಾಕಿ ನಿಷೇಧ ಮಾಡುವ ನಡೆ ಸರಿಯಲ್ಲ” ಎಂದಿದ್ದಾರೆ.

“ಸಾವಿರಾರು ಮೇಲ್ಜಾತಿ ಬ್ರಾಹ್ಮಣ ಎನ್‌ಆರ್‌ಐಗಳು ವಾಸಿಸುವ ಅಮೆರಿಕಾದಿಂದ ವಿಎಚ್‌ಪಿ ಮತ್ತು ಆರ್‌ಎಸ್‌ಎಸ್ ಸಾಕಷ್ಟು ಹಣವನ್ನು ಪಡೆಯುತ್ತವೆ. ಈ ಸಂಘಟನೆಗಳು ಏನು ಯೋಚಿಸುತ್ತವೆ – ಅವರು (ಬ್ರಾಹ್ಮಣ ಎನ್‌ಆರ್‌ಐಗಳು) ಸಸ್ಯಾಹಾರಿ ಆಹಾರವನ್ನು ತಿನ್ನುತ್ತಿದ್ದಾರೆ ಎಂದೇ? ಅವರು ಯಾರನ್ನು ತಮಾಷೆ ಮಾಡುತ್ತಿದ್ದಾರೆ? ಆರ್‌ಎಸ್‌ಎಸ್‌, ವಿಎಚ್‌ಪಿ ನಾಯಕರಿಗೆ ಮಾಂಸ ತಿನ್ನುವ ಕುಟುಂಬಗಳಿಂದ ಹಣ ತೆಗೆದುಕೊಳ್ಳುವುದನ್ನು ನಿಲ್ಲಿಸಲು ಹೇಳಿ. ದಯವಿಟ್ಟು ‘ವಿಎಚ್‌ಪಿ ಮತ್ತು ಆರ್‌ಎಸ್‌ಎಸ್‌ನ ಎಲ್ಲ ಹಣ ಮೂಲ ಸಂಸ್ಥೆಗಳು ಇನ್ನು ಮುಂದೆ ತಾವು ಸಸ್ಯಾಹಾರಿಗಳು ಎಂದು ಘೋಷಿಸಬೇಕು’ ಎಂದು ಹೇಳಲು ಹೇಳಿ. ನಂತರ, ನಾನು ಅವರ ವಾದವನ್ನು ಒಪ್ಪುತ್ತೇನೆ. ಆದರೆ, ಯಾವ ಭಾವನೆಗಳಿಗೆ ನೋವುಂಟುಮಾಡಿವೆ ಎಂಬ ಕಾರಣಕ್ಕಾಗಿ ಈ ನಿಷೇಧಗಳು” ಎಂದಿದ್ದಾರೆ.

“ಆಳುವ ಸರ್ಕಾರದೊಂದಿಗೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುವ ಕಲಾವಿದರು ಯಾವಾಗಲೂ ಇರುತ್ತಾರೆ. ಅಜೆಂಡಾಗಳೊಂದಿಗೆ ಬರುವ ಕಲಾವಿದರಿದ್ದಾರೆ. ನೀವು ಯಾವುದೇ ಅಜೆಂಡಾದೊಂದಿಗೆ ಬಂದ ಕ್ಷಣ, ನೀವು ಒಂದೇ ಒಂದು ವಿಷಯವನ್ನು ನೋಡುತ್ತೀರಿ. ನಿನಗೆ ಬೇರೇನೂ ಕಾಣಿಸುವುದಿಲ್ಲ. ನಾನು ಯಾರನ್ನೂ ದುಷ್ಟ ದ್ವೇಷಿ ಎಂದು ಬಣ್ಣಿಸಲು ಹೋಗುವುದಿಲ್ಲ. ಅವರಲ್ಲಿ ಕೆಲವರು ‘ಬ್ರೈನ್‌ ವಾಶ್‌’ ಆದವರು ಇರುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರು ವಾಸ್ತವವನ್ನು ನೋಡುವುದಿಲ್ಲ” ಎಂದು ಹೇಳಿದ್ದಾರೆ.

“ಪ್ರತಿಯೊಬ್ಬ ಕಲಾವಿದರು ಪ್ರಾಮಾಣಿಕತೆ, ಸಮಗ್ರತೆ ಮತ್ತು ಕೇಳುವ ಇಚ್ಛೆ ಹೊಂದಿರಬೇಕು. ಪ್ರಾಮಾಣಿಕತೆಯೂ ಅಜೆಂಡಾ ಚಾಲಿತವಲ್ಲ. ನಿಮ್ಮ ಕಾರ್ಯಗಳನ್ನು ಗಮನಿಸಲು ಪ್ರಾಮಾಣಿಕತೆ ನಿಮಗೆ ಅವಕಾಶ ನೀಡುತ್ತದೆ” ಎಂದು ಹೇಳಿದ್ದಾರೆ.

ಮೂಲ: ದಿ ಕ್ವಿಂಟ್‌

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...