ಕರೂರು ದುರಂತದ ನಂತರ ತಮಿಳುನಾಡಿನ ನಟ ಹಾಗೂ ಟಿವಿಕೆ ಪಕ್ಷದ ರಾಜಕೀಯ ನಾಯಕ ವಿಜಯ್ ತಮ್ಮ ಭಾವನಾತ್ಮಕ ವಿಡಿಯೋ ಸಂದೇಶವೊಂದರಲ್ಲಿ ಜನರ ಸುರಕ್ಷತೆಗೆ ತಾವು ಎಷ್ಟು ಮಹತ್ವ ನೀಡುತ್ತೇವೆ ಎಂಬುದನ್ನು ಒತ್ತಿ ಹೇಳಿದ್ದಾರೆ. ಈ ದುರಂತದಿಂದ ತೀವ್ರವಾಗಿ ಬೇಸರಗೊಂಡಿರುವ ವಿಜಯ್, ತಮ್ಮ ಜೀವನದಲ್ಲಿ ಇಂತಹ ನೋವಿನ ಸಂದರ್ಭವನ್ನು ಎಂದಿಗೂ ಎದುರಿಸಿಲ್ಲ ಎಂದು ಹೇಳಿದ್ದಾರೆ.
“ನನ್ನ ಜೀವನದಲ್ಲಿ ಇಂತಹ ನೋವು ತುಂಬಿದ ಸಂದರ್ಭವನ್ನು ನಾನು ಮೊದಲು ಎದುರಿಸಿಲ್ಲ. ಈ ಪ್ರವಾಸದಲ್ಲಿ ಜನರು ಎಷ್ಟೋ ಸಂಖ್ಯೆಯಲ್ಲಿ ಬರುತ್ತಿರುವುದು ಅವರ ಪ್ರೀತಿ ಮತ್ತು ಮಮತೆಯಿಂದ. ಅದಕ್ಕಾಗಿ ನಾನು ಸದಾ ಅವರಿಗೆ ಋಣಿ. ಆದರೆ, ಎಲ್ಲಕ್ಕಿಂತ ಮುಖ್ಯವಾಗಿ ಜನರ ಸುರಕ್ಷತೆ ನನ್ನ ಹೃದಯಕ್ಕೆ ಹತ್ತಿರವಾಗಿತ್ತು. ಅದಕ್ಕಾಗಿ ರಾಜಕೀಯ ಕಾರಣಗಳನ್ನು ಬದಿಗಿಟ್ಟು, ಸೂಕ್ತ ಸ್ಥಳಗಳನ್ನು ಆಯ್ಕೆ ಮಾಡಿದ್ದೆ. ಆದರೂ ನಡೆಯಬಾರದದ್ದು ನಡೆಯಿತು. ಪ್ರತಿಭಟನೆಗಳಿಗಾಗಿ 5 ಸ್ಥಳಗಳನ್ನು ಆಯ್ಕೆ ಮಾಡಿದ್ದೆ, ಕರೂರಿನಲ್ಲೇ ಏಕೆ ದುರಂತ ನಡೆಯಿತು” ಎಂದು ವಿಜಯ್ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಹಿಂದುಳಿದ ವರ್ಗಗಳ ಹಿತಕ್ಕೆ ಕೊಳ್ಳಿ ಇಡಲು ಹೊರಟ ಬಿಜೆಪಿ
“ಈ ಸಂದರ್ಭದಲ್ಲಿ ನಾನು ಸಹ ಮಾನವನಾಗಿದ್ದೇನೆ. ಜನರಿಗೆ ನೋವು ತಾಗಿದಾಗ ನಾನು ಹಿಂದಕ್ಕೆ ಸರಿಯಲು ಸಾಧ್ಯವಿಲ್ಲ. ಆಸ್ಪತ್ರೆಗೆ ದಾಖಲಾದವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಶೀಘ್ರದಲ್ಲೇ ನಿಮ್ಮೆಲ್ಲರನ್ನು ಭೇಟಿ ಮಾಡುತ್ತೇನೆ. ನಮ್ಮ ನೋವನ್ನು ಅರ್ಥಮಾಡಿಕೊಂಡ ಎಲ್ಲ ರಾಜಕೀಯ ಪಕ್ಷಗಳಿಗೆ, ನಾಯಕರಿಗೆ, ಸ್ನೇಹಿತರಿಗೆ ಧನ್ಯವಾದಗಳು. ನಾವು ನಿಗದಿಪಡಿಸಿದ ಸ್ಥಳದಲ್ಲೇ ಸಮಾವೇಶ ನಡೆಸಿದ್ದೇವೆ. ಅದಕ್ಕಿಂತ ಹೆಚ್ಚೇನೂ ಮಾಡಿಲ್ಲ. ಜನರು ಸತ್ಯವನ್ನು ನೋಡುತ್ತಿದ್ದಾರೆ. ದೇವರೇ ಬಂದು ಸತ್ಯವನ್ನು ಬಿಚ್ಚಿಟ್ಟಂತೆ ನನಗನಿಸಿತು. ಸತ್ಯವು ಶೀಘ್ರದಲ್ಲೇ ಹೊರಬರುತ್ತದೆ,” ಎಂದಿದ್ದಾರೆ.
ಮುಖ್ಯಮಂತ್ರಿಗೆ ಉದ್ದೇಶಿಸಿ ಮಾತನಾಡಿರುವ ವಿಜಯ್, “ನನ್ನ ಮೇಲೆ ಪ್ರತೀಕಾರ ತೀರಿಸಬೇಕೆಂದಿದ್ದರೆ ಮಾಡಿ, ಆದರೆ ನನ್ನ ಪಕ್ಷದ ಜನರನ್ನು ಮುಟ್ಟಬೇಡಿ. ನಾನು ಮನೆಯಲ್ಲಿ ಇರಲಿ, ಕಚೇರಿಯಲ್ಲಿ ಇರಲಿ, ನಿಮ್ಮಿಂದ ಸಾಧ್ಯವಾದುದನ್ನು ಮಾಡಿ. ನಮ್ಮ ರಾಜಕೀಯ ಪಯಣ ಇನ್ನಷ್ಟು ಧೈರ್ಯದಿಂದ, ಇನ್ನಷ್ಟು ಶಕ್ತಿಯಿಂದ ಮುಂದುವರಿಯಲಿದೆ,” ಎಂದು ಹೇಳಿದ್ದಾರೆ.
ಮೂರು ದಿನಗಳ ಹಿಂದೆ ನಡೆದ ತಮಿಳುನಾಡಿನ ಕರೂರಿನಲ್ಲಿ ವಿಜಯ್ ಹಮ್ಮಿಕೊಂಡಿದ್ದ ಟಿವಿಕೆ ರ್ಯಾಲಿಯಲ್ಲಿ ಕಾಲ್ತುಳಿತದಿಂದಾಗಿ 41 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.
VIDEO: Tamilaga Vettri Kazgham's (TVK) X handle (@TVKPartyHQ) posts Actor Vijay's video message on Karur Stampede.
— Press Trust of India (@PTI_News) September 30, 2025
He said: "Namaste to everyone. I have never faced such a painful situation in my life. The only pain in my heart is pain itself. The reason so many people come to… pic.twitter.com/qIFgbV4gQv





