‘ತೀರ್ಥರೂಪ ತಂದೆಯವರಿಗೆ’ ಚಿತ್ರ ವಿಮರ್ಶೆ | ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ…!

Date:

ಮದರ್ ಸೆಂಟಿಮೆಂಟ್ ಚಿತ್ರಗಳು ಸಾಮಾನ್ಯ. ಆದರೆ ಈ ಚಿತ್ರದಲ್ಲಿ ನಿರ್ದೇಶಕ ಜಗನ್ನಾಥ್‌ ತಂದೆಯ ಕತೆ ಹೇಳಿದ್ದಾರೆ. ಎಲ್ಲಿಯೂ ವಾಚ್ಯ ಎನಿಸದ ಕತೆ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ...

‘ಹೊಂದಿಸಿ ಬರೆಯಿರಿ’ ಚೊಚ್ಚಲ ಸಿನಿಮಾದಲ್ಲೇ ಸಾಕಷ್ಟು ಭರವಸೆ ಮೂಡಿಸಿದ್ದವರು ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್‌. ಈಗ 2026ರ ವರ್ಷಾರಂಭದ ಮೊದಲ ದಿನ ‘ತೀರ್ಥರೂಪ ತಂದೆಯವರಿಗೆ’ ಚಿತ್ರದೊಂದಿಗೆ ತೆರೆಗೆ ಮರಳಿದ್ದಾರೆ. ಇಲ್ಲಿ ಕೂಡ ಅವರು ಮೊದಲ ಸಿನಿಮಾದ ಹದವಿದೆ. ಗಟ್ಟಿಯಾದ ಚಿತ್ರಕಥೆ ಇದೆ. ಕಲಾವಿದರು ಹಾಗೂ ತಂತ್ರಜ್ಞರನ್ನು ಸೊಗಸಾಗಿ ದುಡಿಸಿಕೊಂಡಿದ್ದಾರೆ. ಒಂದೊಳ್ಳೆಯ ಫ್ಯಾಮಿಲಿ ಎಮೋಷನಲ್‌ ಡ್ರಾಮಾ ಆಗಿ ‘ತೀರ್ಥರೂಪ ತಂದೆಯವರಿಗೆ’ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತದೆ.

ಚಿತ್ರದ ಕಥಾನಾಯಕ ಪೃಥ್ವಿ ಸಂಚಾರಿ ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್. ಅವನ ತಾಯಿ ಜಾನಕಿ. ಇವರ ಬದುಕಿಗೊಂದು ವಿಷಾದದ ಛಾಯೆಯಿದೆ. ಅಮ್ಮನ ಕುರಿತ ಪೃಥ್ವಿಯ ಅಸಮಾಧಾನದ ಭೂಮಿಕೆಯೊಂದಿಗೆ ಶುರುವಾಗುವ ಕತೆಯ ಬಗ್ಗೆ ಸಹಜವಾಗಿಯೇ ಪ್ರೇಕ್ಷಕರಲ್ಲಿ ಕುತೂಹಲ ಮೂಡುತ್ತದೆ. ಅಲ್ಲಿಂದ ಮುಂದೆ ಒಂದೊಂದೇ ಪಾತ್ರಗಳು ಪರಿಚಯವಾಗುತ್ತಾ ಹೋಗುತ್ತವೆ. ಪ್ರತೀ ಪಾತ್ರಗಳ ಜೊತೆಜೊತೆಗೆ ಕತೆಯೂ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ. ನಿರ್ದೇಶಕ ಜಗನ್ನಾಥ್‌ ಸಮಾಧಾನದಿಂದ ಕತೆಯನ್ನು ನಿರೂಪಿಸುತ್ತಾ ಹೋಗುತ್ತಾರೆ. ತಂದೆಯ ಹುಡುಕಾಟದ ಅವಸರದಲ್ಲಿಯೂ ಇಲ್ಲೊಂದು ಸಾವಧಾನದ ನಡೆ!

ಮೂಡಿಗೆರೆಯಿಂದ ಶುರುವಾಗುವ ಕತೆ ಮೈಸೂರು, ಕೊಚ್ಚಿ, ಮೇಘಾಲಯ ಹಾದು ಅಮೆರಿಕಾದವರೆಗೂ ಕರೆದೊಯ್ಯುತ್ತದೆ. ಆಯಾ ಪ್ರದೇಶಗಳ ಜೊತೆ ಅಲ್ಲಿನ ನೇಟಿವಿಟಿಯನ್ನೂ ಕತೆಗೆ ಬೆಸೆದಿರುವುದು ನಿರ್ದೇಶಕರ ಜಾಣ್ಮೆ. ಅದೇ ರೀತಿ ಅವರ ಸಾಹಿತ್ಯ ಪ್ರೀತಿಯೂ ಅಲ್ಲಲ್ಲಿ ಗೋಚರಿಸುತ್ತದೆ. ಚಿತ್ರದ ಹಾಡುಗಳಿಗೆ ಭಾವಗೀತೆಯ ಲಯವಿದೆ. ಕೆಲವೆಡೆ ಸಾಹಿತಿಗಳ ಕೋಟ್‌ಗಳನ್ನು ಬಳಕೆ ಮಾಡಿದ್ದಾರೆ. ಇವು ಕೂಡ ಪ್ರತ್ಯೇಕವಾಗಿ ಕಾಣಿಸದೆ, ಚಿತ್ರಕಥೆಗೆ ಬೆಸೆದುಕೊಂಡಂತಿವೆ ಎನ್ನುವುದು ವಿಶೇಷ. ಮದರ್ ಸೆಂಟಿಮೆಂಟ್‌ನ ಚಿತ್ರಗಳು ಆಗಿಂದಾಗ್ಗೆ ಬರುತ್ತಲೇ ಇರುತ್ತವೆ. ಇವುಗಳ ಪೈಕಿ ಹೆಚ್ಚಿನ ಪಾಲು ಮಚ್ಚು – ಲಾಂಗ್‌ಗಳ ಗಲಾಟೆಯಲ್ಲೇ ಕಳೆದುಹೋಗುತ್ತವೆ. ಈ ಚಿತ್ರದಲ್ಲಿ ಜಗನ್ನಾಥ್‌ ತಂದೆಯ ಕತೆ ಹೇಳಿದ್ದಾರೆ. ಎಲ್ಲಿಯೂ ವಾಚ್ಯ ಎನಿಸದ ಈ ಕತೆ ಭಾವನಾತ್ಮಕವಾಗಿ ತಟ್ಟುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಗಡಿ ವಿವಾದದ ಗರಿಗೆದರಿದ ಗಾಯ: ಸಲ್ಮಾನ್ ಖಾನ್ ಟೀಸರ್‌ಗೆ ಡ್ರ್ಯಾಗನ್ ಗರ್ಜನೆ

ನಿರ್ದೇಶಕರು ಸಾಕಷ್ಟು ಹೋಂವರ್ಕ್‌ ಮಾಡಿಕೊಂಡು ಚಿತ್ರಕಥೆ ಹೆಣೆದಿರುವುದು ಸಿನಿಮಾದಲ್ಲಿ ಕಾಣಿಸುತ್ತದೆ. ಕಲಾವಿದರ ಆಯ್ಕೆಯಲ್ಲೂ ಅವರು ಅಷ್ಟೇ ಹೋಂವರ್ಕ್‌ ಮಾಡಿದ್ದಾರೆ. ಹಾಗಾಗಿ ಪಾತ್ರಗಳು ಪ್ರೇಕ್ಷಕರಿಗೆ ಕನ್ವಿನ್ಸ್‌ ಆಗುತ್ತವೆ. ಬಹುದಿನಗಳ ನಂತರ ತೆರೆಗೆ ಮರಳಿರುವ ಸಿತಾರಾ, ‘ಜಾನಕಿ’ಯಾಗಿ ಇಷ್ಟವಾಗುತ್ತಾರೆ. ರಂಗಭೂಮಿ ಹಿನ್ನೆಲೆಯ ಕಲಾವಿದರಾದ ರವೀಂದ್ರ ವಿಜಯ್‌, ಅಜಿತ್‌ ಹಂದೆ, ರಾಜೇಶ್‌ ನಟರಂಗ ತಮ್ಮ ಪಾತ್ರಗಳನ್ನು ಜೀವಿಸಿದ್ದಾರೆ. ನಾಯಕನಟನಾಗಿ ಬೆಳ್ಳಿತೆರೆಗೆ ಪರಿಚಯವಾಗಿರುವ ನಿಹಾರ್‌ ಮುಖೇಶ್‌ ಭರವಸೆ ಮೂಡಿಸಿದರೆ, ನಾಯಕನಟಿ ರಚನಾ ಇಂದರ್‌ ಅವರ ವೃತ್ತಿಬದುಕಿಗೆ ಇದೊಂದು ಪ್ರಮುಖ ಸಿನಿಮಾ. ನಟಿ ರಚನಾ ಇಂದರ್‌ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ನಿರ್ದೇಶಕರ ಕತೆ ಹೇಳುವಿಕೆಗೆ ಜೋ ಕೋಸ್ಟಾ(ಸಂಗೀತ) ಮತ್ತು ದೀಪಕ್‌(ಛಾಯಾಗ್ರಹಣ) ಅವರು ಸೂಕ್ತ ಸಾಥ್‌ ಕೊಟ್ಟಿದ್ದಾರೆ. ‌2026ರ ಮೊದಲ ದಿನ ತೆರೆಕಂಡಿರುವ ‘ತೀರ್ಥರೂಪ ತಂದೆಯವರಿಗೆ’, ನೋಡುಗರಿಗೆ ಒಂದೊಳ್ಳೆಯ ಸದಭಿರುಚಿಯ ಸಿನಿಮಾ.

-ಶಶಿಧರ ಚಿತ್ರದುರ್ಗ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...