ತಂಗಳಾನ್‌ ಸಿನಿಮಾ ಮತ್ತು ತಿರುಕುಲದ ಹೊಲೆಯರು

Date:

ರಾಮಾನುಜರಿಂದ ಮತಾಂತರಗೊಂಡ ತಿರುಕುಲದ ಹೊಲೆಯರು, ಸ್ಥಳೀಯ ಹೊಲೆಯರೊಂದಿಗೆ ಬೆರೆಯಲಾಗದೇ, ಬ್ರಾಹ್ಮಣರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲೂ ಸಾಧ್ಯವಾಗದೇ, ತಮಿಳುನಾಡು, ಆಂಧ್ರಪ್ರದೇಶ, ಮುಂಬೈನಂತಹ ಶಹರಗಳಿಗೆ ವಲಸೆ ಹೋಗಬೇಕಾಯಿತು.

ನೀವು ಕಮಲ ಹಾಸನ್ ಅವರ ದಶಾವತಾರಂ ಸಿನಿಮಾ ನೋಡಿರಬಹುದು. ʼಓಂ ನಮಃ ಶಿವಾಯʼ ಎಂದು ಹೇಳುವಂತೆ ವೈಷ್ಣವರನ್ನು ಒತ್ತಾಯ ಮಾಡಲಾಗುತ್ತದೆ. ಅವನು ʼಓಂ ನಮೋ, ನಾರಾಯಣಾಯʼ ಎನ್ನುತ್ತಾನೆ. ಅವನನ್ನು ವಿಷ್ಣುವಿನ ವಿಗ್ರಹಕ್ಕೆ ಕಟ್ಟಿ ಸಮುದ್ರಕ್ಕೆ ಎಸೆಯಲಾಗುತ್ತದೆ. ಅದರಲ್ಲಿ ಶೈವರಿಗೂ, ವೈಷ್ಣವರಿಗೂ ನಡೆದ ಸಾಂಸ್ಕೃತಿಕ (ಯುದ್ಧ) ಹಿಂಸೆಯನ್ನು ನಿರೂಪಿಸಲಾಗಿದೆ.

ವಿಜಯನಗರ ಸಾಮ್ರಾಜ್ಯ ಹಾಳಾಗಿದ್ದು ಶೈವ – ವೈಷ್ಣವರ ವೈಷಮ್ಯದಿಂದ ಎನ್ನುವುದನ್ನು ಇತಿಹಾಸ ತಜ್ಞರು ಸಾಬೀತು ಮಾಡಿರುವ ವಿಚಾರ. ನಂತರದಲ್ಲಿ ಹರಿಯ ಹಾಗೂ ಹರನ ಭಕ್ತರನ್ನು ಒಂದುಗೂಡಿಸುವ ಸಲುವಾಗಿ ಹರಿಹರನ ವಿಗ್ರಹವನ್ನು ಸೃಷ್ಟಿಸಿ ಅದರ ಪೂರಕವಾಗಿ ಹರಿಹರರ ಪುರಾಣವನ್ನು ರಚಿಸಲಾಯಿತು. ಈ ಪುರಾಣದಲ್ಲಿ ವರ್ಣವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದ ಮನುಷ್ಯ ಅಯ್ಯಪ್ಪನನ್ನು ತಂದು ತುರುಕಲಾಯಿತು. ಹರಿ-ಹರನ ಅವತಾರ, ಅಯ್ಯಪ್ಪ ಸ್ವಾಮಿ, ಇವೆಲ್ಲಾ ಕ್ರಿ.ಶ. 15ನೇ ಶತಮಾನದ ಆಸುಪಾಸಿನಲ್ಲಿ ಸೃಷ್ಟಿಯಾದ ಕಥೆಗಳು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದಕ್ಷಿಣ ಭಾರತದಲ್ಲಿ ವೈಷ್ಣವರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದರು. ಇಲ್ಲಿ ಆಳರಸರೂ ಸೇರಿದಂತೆ ಶಿವನ ಆರಾಧಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ರಾಮಾಯಣದಲ್ಲಿ ಬರುವ ರಾವಣನೂ ಸೇರಿದಂತೆ ರಾಜ ಕರಿಕಾಳ ಚೋಳನೂ ಶಿವನ ಆರಾಧಕರೇ ಆಗಿದ್ದರು ಎಂದರೆ ನೀವೇ ಊಹಿಸಿಕೊಳ್ಳಿ.

ಇದು ತಮಿಳುನಾಡಿನ ರಾಜ ಕರಿಕಾಳ ಚೋಳನ ಕಾಲದಲ್ಲಿ ನಡೆದ ಘಟನೆ. ಇದೇ ಕಾಲಘಟ್ಟದಲ್ಲಿ ಜೀವಿಸಿದ್ದ ರಾಮಾನುಜಾಚಾರ್ಯರು, ವೈಷ್ಣವ ಪಂಥದ ಜನಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುವ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿದ್ದ ಅಸ್ಪೃಶ್ಯರಿಗೆ ದೀಕ್ಷೆ ನೀಡಲು ಮುಂದಾದರು. ಆಗಿನ ಕಾಲದ ಬಹುತೇಕ ಕೆಳಜಾತಿಯ ಜನ ಶಿವನ ಆರಾಧಕರಾಗಿದ್ದರು (ಶೈವರು) ಎನ್ನುವುದನ್ನು ಮರೆಯಬಾರದು. ದೀಕ್ಷೆ ಕೊಟ್ಟು ಕೆಳಜಾತಿಯ ಜನರನ್ನು ಅವರ ಪೂರ್ವಜರ ವಿರುದ್ಧ ಗುರಾಣಿಯಾಗಿ ಬಳಸುವ ಉದ್ದೇಶವಿತ್ತೆ ಹೊರತು, ಈ ಅಸ್ಪೃಶ್ಯತೆಗೆ ತಳ್ಳಲ್ಪಟ್ಟ ಜನರನ್ನು ಕೆಳಜಾತಿಯಿಂದ ವಿಮೋಚನೆ ಗೊಳಿಸುವ ಉದ್ದೇಶದಿಂದ ಕೂಡಿರಲಿಲ್ಲ, ಇದು ಸಾಧ್ಯವೂ ಇಲ್ಲ ಎನ್ನುವುದು ಐತಿಹಾಸಿಕವಾಗಿ ಸಾಬೀತಾಗಿರುವ ಸತ್ಯ.

ರಾಮಾನುಜರ ಈ ಕೆಲಸಕ್ಕೂ ಕರ್ಮಠ ಬ್ರಾಹ್ಮಣರ ತೀವ್ರವಾದ ವಿರೋಧವಿತ್ತು. ಕಾರಣ, ಸಣ್ಣ-ಪುಟ್ಟ ಬದಲಾವಣೆಗಳನ್ನೂ ಕರ್ಮಠ ಮನಸ್ಥಿತಿಗಳು ಒಪ್ಪಲಾರವು ಎನ್ನುವುದು ಬೇರೆ ಮಾತು. ರಾಮಾನುಜಾಚಾರ್ಯರು ಮಾಡುತ್ತಿದ್ದ ಈ ತಂತ್ರಗಾರಿಕೆಯ ಅರಿವಿದ್ದ ರಾಜ ಕರಿಕಾಳ ಚೋಳ, ರಾಮಾನುಜಾಚಾರ್ಯರನ್ನು ಬಂಧಿಸುವಂತೆ ಆಜ್ಞೆ ಹೊರಡಿಸಿದ. ಈ ಅಪಾಯದ ಜಾಡನ್ನು ಅರಿತ ರಾಮಾನುಜರು, ತಲೆ ತಪ್ಪಿಸಿಕೊಂಡು ಕೊಯಮತ್ತೂರು, ಸೇಲಂ ಮಾರ್ಗವಾಗಿ ಕಾವೇರಿ ನದಿಯನ್ನು ದಾಟಿ ಚಾಮರಾಜನಗರ, ಕೊಳ್ಳೆಗಾಲದ ಮೂಲಕ ಮಂಡ್ಯದ ಹಳ್ಳಿಗೆ ಬಂದು, ಗಡಿ ಭಾಗದಲ್ಲಿದ್ದ ಮಂಡ್ಯದ ಹಳ್ಳಿಯ ಹೊಲೆಯರ ಹಟ್ಟಿಯಲ್ಲಿ ಆಶ್ರಯ ಪಡೆದರು. ಇವರನ್ನು ಹುಡುಕಿಕೊಂಡು ಬಂದ ಕರಿಕಾಳ ಚೋಳ ರಾಜನ ಸೈನಿಕರು, ಇಂತಹ ಹೆಸರಾಂತ ಗುರುಗಳು ಹೊಲೆಯರ ಹಟ್ಟಿಯಲ್ಲಿ ಆಶ್ರಯ ಪಡೆದಿರಬಹುದು ಎನ್ನುವ ಅಂದಾಜನ್ನು ಸಹ ಮಾಡಲು ಸಾಧ್ಯವಾಗಲಿಲ್ಲ.

ರಾಮಾನುಜರನ್ನು ಬೆನ್ನಟ್ಟಿ ಬಂದ ಸೈನಿಕರು, ಅಗ್ರಹಾರ ಹಾಗೂ ಪ್ರಮುಖ ಪಟ್ಟಣಗಳಲ್ಲಿ ಹುಡುಕಿದರು. ಆದರೆ ರಾಮಾನುಜರು ಸೈನಿಕರ ಕೈಗೆ ಸಿಗಲಿಲ್ಲ. ಒಂದು ವೇಳೆ ರಾಮಾನುಜರು ಸೈನಿಕರ ಕೈಗೆ ಸಿಕ್ಕಿದ್ದರೆ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾರಂತಹ ಹೆಸರಾಂತ ರಾಜಕಾರಣಿ, ವೈಜಯಂತಿ ಮಾಲಾ ಅವರಂತಹ ಚಿತ್ರ ತಾರೆ, ರಾಮಾನುಜಂ ಅವರಂತಹ ಮೇರು ವಿಜ್ಞಾನಿ ಹುಟ್ಟುತ್ತಲೇ ಇರಲಿಲ್ಲ.

ಈ ಮಂಡ್ಯದ ಹಳ್ಳಿ ಆ ಕಾಲಘಟ್ಟದಲ್ಲಿ ವಿಜಯನಗರದ ಅರಸರ ಅಧೀನದಲ್ಲಿದ್ದ ಸಾಮಂತರ ಆಳ್ವಿಕೆಗೆ ಸೇರಿದ್ದ ಗಡಿ ಭಾಗದ ಪ್ರದೇಶವಾಗಿತ್ತು. ಹಾಗೆ ಹೊಲೆಯರ ಹಟ್ಟಿಯಲ್ಲಿ ಕೆಲವು ದಿನಗಳ ಕಾಲ ತಲೆ ಮರೆಸಿಕೊಂಡು ಆಶ್ರಯ ಪಡೆದಿದ್ದ ರಾಮಾನುಜಾ ಚಾರ್ಯರನ್ನು ಅಲ್ಲಿನ ಹಿರಿಯರ ಆಣತಿಯ ಮೇರೆಗೆ, ಮೇನೆಯಲ್ಲಿ ಕೂರಿಸಿಕೊಂಡು, ಮೇಲುಕೋಟೆಗೆ ತಲುಪಿಸಿದರು. ತಮ್ಮ ಜೀವ ಉಳಿಸಿದ್ದು ಅಸ್ಪೃಶ್ಯರು ಎನ್ನುವ ಕಳಂಕ, ಇತಿಹಾಸದ ಪುಟಗಳಲ್ಲಿ ಉಳಿದು ಬಿಡಬಾರದು ಎನ್ನುವ ದೃಷ್ಟಿಯಿಂದ ಹೊಲೆಯರಿಗೆ ತಿರುಕುಲದ ಹೊಲೆಯರು ಎಂದು ದೀಕ್ಷೆ ನೀಡಲಾಯಿತು.

ಈಗಲೂ ಮಂಡ್ಯ ಸುತ್ತ ಮುತ್ತಲಿನ ಭಾಗದಲ್ಲಿರುವ ಅಯ್ಯಂಗಾರಿ ಬ್ರಾಹ್ಮಣರನ್ನು ತಿರುಕುಲದ ಹೊಲೇರು ಎಂದು ಹೆಸರಿಸುತ್ತಾರೆ. ಹೀಗೆ ದೀಕ್ಷೆ ಪಡೆದ ಹೊಲೆಯರು, ನಿಜವಾಗಿಯೂ ಬ್ರಾಹ್ಮಣ್ಯದ ಎತ್ತರಕ್ಕೆ ಏರಲು ಸಾಧ್ಯವಾಯಿತೇ?. ಹಿಂದೂ ಧರ್ಮ ರೂಪಿಸಿರುವ ಈ ಕೆಟ್ಟ ವರ್ಣ ವ್ಯವಸ್ಥೆಯಲ್ಲಿ ಇಂತಹ ಎಷ್ಟೇ ಪ್ರಯತ್ನಗಳು ನಡೆದರೂ ಕಿಂಚಿತ್ತೂ ಬದಲಾವಣೆಯೂ ಸಾಧ್ಯವಿಲ್ಲ ಎನ್ನುವುದು ನಮ್ಮ ಕಣ್ಣ ಮುಂದೆ ಇರುವ ಐತಿಹಾಸಿಕ ಸತ್ಯ.

ಹೀಗೆ ರಾಮಾನುಜರಿಂದ ಮತಾಂತರಗೊಂಡ ಈ ತಿರುಕುಲದ ಹೊಲೆಯರು, ಸ್ಥಳೀಯ ಹೊಲೆಯರೊಂದಿಗೆ ಬೆರೆಯಲಾಗದೇ, ಬ್ರಾಹ್ಮಣರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗದೇ, ತಮಿಳುನಾಡು, ಆಂಧ್ರಪ್ರದೇಶ, ಮುಂಬೈನಂತಹ ಶಹರಗಳಿಗೆ ವಲಸೆ ಹೋಗಬೇಕಾಯಿತು. ನಿಜವಾಗಿಯೂ ಜಾತಿ ವಿನಾಶವಾಗಬೇಕಾದರೆ, ಜಾತಿವಾದವನ್ನು ಅನುಸರಿಸುವ, ಅದನ್ನು ಜಾರಿ ಮಾಡುವ ಗುಂಪಿನಲ್ಲಿ ಬದಲಾವಣೆ ಬರಬೇಕು. ದೀಕ್ಷೆ ಪಡೆದ ಒಂದು ಸಣ್ಣ ಗುಂಪಿನ ತುಣುಕನ್ನು ತಂಗಳಾನ್‌ ತಮಿಳು ಸಿನಿಮಾದಲ್ಲಿ ತೋರಿಸಲಾಗಿದೆ. ಇದನ್ನೇ ದೊಡ್ಡ ಬದಲಾವಣೆ ಎನ್ನುವುದು ಸೂಕ್ತವಲ್ಲ. ʼವಸಂತ ಕಾಲದ ಮೇಘ, ಮಳೆ ಮೋಡವಲ್ಲʼ ಎನ್ನುವ ಮಾತಿಗೆ ಇಂಬು ಕೊಡುತ್ತದೆ.

WhatsApp Image 2025 11 17 at 5.15.42 PM
ರಮೇಶ್‌ ಸಂಕ್ರಾಂತಿ
+ posts

ಲೇಖಕರು

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...