ನಿರ್ದೇಶಕ ಪ್ರೇಮ್ ‘ಮಿಡ್ಲ್ ಕ್ಲಾಸ್ ಡಾರ್ಲಿಂಗ್’ ರಮೇಶ್ ಅರವಿಂದ್ ಕೈಗೆ ಲಾಂಗ್ ಕೊಟ್ಟಿದ್ದೇಕೆ?

Date:

ನಟ, ನಿರ್ದೇಶಕ ‘ಜೋಗಿ’ ಪ್ರೇಮ್ ಸಿನಿಮಾ ಮಾಡುತ್ತಾರೆ ಅಂದರೆ, ಸುದ್ದಿ ಹಾಗೂ ಸದ್ದು ತುಸು ಹೆಚ್ಚೇ ಇರುತ್ತೆ. ಸುದ್ದಿಯಾಗಲಿ ಎಂದೇ ಅವರು ಸಿನಿಮಾ ಮಾಡುವಾಗ ಗಿಮಿಕ್ ಮಾಡುತ್ತಾರೆ. ಈಗಲೂ ಅಂಥದ್ದೊಂದು ಗಿಮಿಕ್ ಮಾಡಿದ್ದಾರೆ. ತಮ್ಮ ನಿರ್ದೇಶನದ ‘ಕೆಡಿ’ ಚಿತ್ರದಲ್ಲಿ ರಮೇಶ್ ಅರವಿಂದ್ ಕೈಗೆ ಲಾಂಗ್ ಕೊಟ್ಟಿದ್ದಾರೆ.

ಕನ್ನಡ ಸಿನಿಮಾ ಹೀರೋಗಳು ಲಾಂಗ್ ಹಿಡಿಯುವುದು ಹೊಸ ವಿಷಯವೇ ಅಲ್ಲ. ಅದಕ್ಕೆ ದಶಕಗಳ ಇತಿಹಾಸವಿದೆ. ಒಂದು ಕಾಲದಲ್ಲಿ ಬಿಡುಗಡೆಯಾಗುತ್ತಿದ್ದ ಪ್ರತಿ ಚಿತ್ರದಲ್ಲೂ ಹೀರೋಗಳು ಲಾಂಗ್ ಹಿಡಿದಿರುತ್ತಿದ್ದರು. ಚಿತ್ರದ ನಾಯಕ ಹಳ್ಳಿಯಿಂದ ನಗರಕ್ಕೆ ಬರುವುದು, ಪರಿಸ್ಥಿತಿಗಳ ಒತ್ತಡಕ್ಕೆ ಸಿಲುಕಿ ರೌಡಿಯಾಗುವುದು ಕಾಮನ್ ಆಗಿಬಿಟ್ಟಿತ್ತು. ಹಳ್ಳಿಯಿಂದ ಬಂದವರನ್ನೆಲ್ಲ ಚಿತ್ರರಂಗದವರು ಹೀಗ್ಯಾಕೆ ರೌಡಿಗಳನ್ನಾಗಿ ಮಾಡುತ್ತಿದ್ದಾರೆ ಎಂದು ಜನ ಜಿಗುಪ್ಸೆ ವ್ಯಕ್ತಪಡಿಸುವ ಮಟ್ಟಕ್ಕೆ ಈ ಟ್ರೆಂಡ್ ಬೆಳೆಯಿತು. ಹಾಗೇ ಅದು ಅವಸಾನ ಕಂಡಿತು. ಸತತ ಸಿನಿಮಾಗಳ ಸೋಲಿನಿಂದ ಕಂಗೆಟ್ಟಂತೆ ಕಾಣುವ ನಿರ್ದೇಶಕ ಪ್ರೇಮ್, ಈಗ ಮತ್ತೆ ಆ ಟ್ರೆಂಡ್‌ ಅನ್ನು ಜನರಿಗೆ ನೆನಪಿಸಲೋ ಎಂಬಂತೆ ರಮೇಶ್ ಅರವಿಂದ್ ಕೈಗೆ ಲಾಂಗ್ ಕೊಟ್ಟಿದ್ದಾರೆ.

ರಮೇಶ್ ಅರವಿಂದ್ ಲಾಂಗ್ ಹಿಡಿದಿರುವುದು ಪ್ರೇಮ್ ನಿರ್ದೇಶನದ ‘ಕೆಡಿ’ ಚಿತ್ರಕ್ಕಾಗಿ. ಆಕ್ಷನ್ ಚಿತ್ರಗಳಿಗೆ ಹೆಸರಾದ ಧ್ರುವ ಸರ್ಜಾ ಅದರ ಹೀರೋ. ಅದರಲ್ಲಿ ರಮೇಶ್ ಅರವಿಂದ್ ಕೂಡ ನಟಿಸುತ್ತಿದ್ದಾರೆ. ಪ್ರೇಮ್ ನಿರ್ದೇಶನ ಮಾಡುತ್ತಿರುವ ಸಿನಿಮಾಗಳನ್ನು ನೋಡಿದರೆ, ಅವರಿನ್ನೂ ಯಾವ ಕಾಲದಲ್ಲಿದ್ದಾರೆ ಎನ್ನಿಸುತ್ತದೆ. ಚಿತ್ರಗಳ ಮೌಲ್ಯ, ಗುಣಮಟ್ಟದ ಮಾತು ಒತ್ತಟ್ಟಿಗಿರಲಿ, ಅವರು ನಿರ್ದೇಶಿಸಿದ ಮೊದಲ ಮೂರು ಚಿತ್ರಗಳು- ಕರಿಯ, ಎಕ್ಸ್‌ಕ್ಯೂಸ್ ಮಿ, ಜೋಗಿ- ಬಿಟ್ಟರೆ, ಮತ್ಯಾವ ಚಿತ್ರವೂ ಯಶಸ್ಸು ಕಂಡಿಲ್ಲ. ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗುವುದು, ಒಳ್ಳೆಯ ಕಥೆ ಮಾಡುವುದು ಬಿಟ್ಟು ಕೇವಲ ಗಿಮಿಕ್ ಮಾಡುವ ಕಡೆ, ಪ್ರಚಾರ ಗಿಟ್ಟಿಸಿಕೊಳ್ಳುವ ಕಡೆ ಗಮನ ಕೊಡುತ್ತಿರುವುದೇ ಅವರ ಚಿತ್ರಗಳು ಸೋಲಲು ಕಾರಣ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಗಿಮಿಕ್ ಮಾಡಿ ಹೇಗೆ ಪ್ರಚಾರ ಪಡೆದುಕೊಳ್ಳಬೇಕು ಎಂಬ ವಿಚಾರದಲ್ಲಿ ಪ್ರೇಮ್‌ಗೆ ಉಪೇಂದ್ರ ಆದರ್ಶ. ಉಪೇಂದ್ರ ರೀತಿಯಲ್ಲೇ ನಿರ್ದೇಶಕರಾಗಿದ್ದ ಪ್ರೇಮ್, ಹೀರೋ ಕೂಡ ಆದರು. ಆದರೆ, ಅವರು ನಾಯಕ ನಟನಾದ ಯಾವ ಚಿತ್ರವೂ ಸಾಧಾರಣ ಮಟ್ಟದ ಯಶಸ್ಸನ್ನೂ ಕಾಣಲಿಲ್ಲ. ಸುದೀಪ್ ಹಾಗೂ ಶಿವರಾಜ್‌ಕುಮಾರ್ ಅವರಂಥ ಸ್ಟಾರ್‌ಗಳನ್ನು ಹಾಕಿಕೊಂಡು ‌ʼವಿಲನ್ʼ ಎನ್ನುವ ಸಿನಿಮಾ ನಿರ್ದೇಶಿಸಿದರೂ ಪ್ರೇಮ್‌ಗೆ ಸಕ್ಸಸ್ ಅನ್ನುವುದು ಕನಸಾಗಿಯೇ ಉಳಿಯಿತು. ನಿರ್ದೇಶನದಲ್ಲೂ ನಟನೆಯಲ್ಲೂ ಎರಡೂ ಕಡೆ ವಿಫಲರಾಗಿರುವ ಪ್ರೇಮ್, ಯಾವ ರೀತಿಯಲ್ಲಾದರೂ ಯಶಸ್ಸು ಕಾಣಲೇಬೇಕು ಎನ್ನವು ತಹತಹದಲ್ಲಿದ್ದಾರೆ. ಬೇಡಿಕೆಯಲ್ಲಿರುವ ಧ್ರುವ ಸರ್ಜಾ ಅವರನ್ನು ಹಾಕಿಕೊಂಡಾದರೂ ಯಶಸ್ಸು ಕಾಣಬೇಕೆನ್ನುವ ಹಂಬಲದಲ್ಲಿರುವ ಪ್ರೇಮ್ ‘ಕೆಡಿ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಅದನ್ನು ಪ್ಯಾನ್ ಇಂಡಿಯಾ ಸಿನಿಮಾ ಎಂದು ಬೇರೆ ಘೋಷಿಸಿದ್ದಾರೆ.

ಈಗ ‘ಕೆಡಿ’ ಎನ್ನುವ ಹೆಸರಿನ ಸಿನಿಮಾ ಮಾಡುತ್ತಿರುವ ಪ್ರೇಮ್ ಈ ಹಿಂದೆ ‘ಡಿಕೆ’ ಎನ್ನುವ ಸಿನಿಮಾ ಮಾಡಿ ಅದರಲ್ಲಿ ತಾವೇ ಹೀರೋ ಆಗಿದ್ದರು. ಅದರ ನಿರ್ಮಾಪಕರೂ ಕೂಡ ಅವರೇ ಆಗಿದ್ದರು. ಅದರಲ್ಲಿ ‘ಸೇಸಮ್ಮ’ ಎನ್ನುವ ಅಭಿರುಚಿಹೀನ ಹಾಡನ್ನು ಒಂದಷ್ಟು ದಿನ ಪಡ್ಡೆಗಳು ಮೆಲುಕು ಹಾಕುತ್ತಿದ್ದರು. ಸಿನಿಮಾ ಥಿಯೇಟರ್‌ಗಳಿಂದ ಎತ್ತಂಗಡಿಯಾದ ನಂತರ ಆ ಹಾಡು ಯಾರಿಗೂ ನೆನಪಿಲ್ಲ. ಆ ಸಿನಿಮಾವಂತೂ ನೆನಪಿಟ್ಟುಕೊಳ್ಳಲು ಕಾರಣಗಳೇ ಇಲ್ಲ. ಅಂಥ ಪ್ರೇಮ್ ಈಗ ಹೊಸ ಪ್ರಚಾರ ತಂತ್ರ ಹುಡುಕಿದ್ದಾರೆ. ಅದುವೇ ರಮೇಶ್ ಅರವಿಂದ್ ಕೈಗೆ ಲಾಂಗ್ ಕೊಟ್ಟಿರುವುದು.

ಈ ಸುದ್ದಿ ಓದಿದ್ದೀರಾ: ಪಾಪ, ನವರಸ ನಾಯಕ ಜಗ್ಗೇಶಿ ತಮ್ಮ ನವರಸಗಳನ್ನೆಲ್ಲ ಹುಲಿ ಉಗುರಿನ ಲಾಕೆಟ್‌ನಲ್ಲಿ ಇಟ್ಟಿದ್ದರಂತೆ!

ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರಮೇಶ್ ಅರವಿಂದ್ ಕನ್ನಡ ಚಿತ್ರರಂಗದಲ್ಲಿ ಮಿಡ್ಲ್ ಕ್ಲಾಸ್ ಡಾರ್ಲಿಂಗ್ ಎಂದೇ ಹೆಸರಾದವರು. ಶಿವರಾಜ್‌ಕುಮಾರ್ ಸಮವಯಸ್ಕರಾದ ರಮೇಶ್ ಅರವಿಂದ್ ಅವರನ್ನು ಒಂದು ಕಾಲದಲ್ಲಿ ಶಿವರಾಜ್‌ಕುಮಾರ್ ಅವರಿಗೆ ಪ್ರಬಲ ಪ್ರತಿಸ್ಪರ್ಧಿ ಎಂದೇ ಭಾವಿಸಲಾಗಿತ್ತು. ಆದರೆ, ಆಕ್ಷನ್, ಗ್ರಾಮೀಣ ಕಥೆಗಳು, ಕಾದಂಬರಿ ಆಧಾರಿತ- ಹೀಗೆ ಎಲ್ಲ ರೀತಿಯ ಚಿತ್ರಗಳಲ್ಲಿ ನಟಿಸಿದ ಶಿವರಾಜ್‌ಕುಮಾರ್ ಎಲ್ಲ ವರ್ಗದ ಪ್ರೇಕ್ಷಕರನ್ನು ತಲುಪಿದರು. ಆದರೆ, ರಮೇಶ್ ಅರವಿಂದ್ ಒಂದೇ ರೀತಿಯ ಚಿತ್ರಗಳಲ್ಲಿ ನಟಿಸುವ ಮೂಲಕ ನಗರಕೇಂದ್ರಿತ ಪ್ರೇಕ್ಷಕರನ್ನು ಮೀರಿ ಹೋಗಲಾಗಲಿಲ್ಲ. ಇತ್ತೀಚೆಗೆ ‘ಶಿವಾಜಿ ಸುರತ್ಕಲ್‌’ನಂಥ ಸಸ್ಪೆನ್ಸ್ ಚಿತ್ರದಲ್ಲಿ ನಟಿಸಿದರೂ ಅವರು ಮಿಡ್ಲ್ ಕ್ಲಾಸ್ ಪ್ರೇಕ್ಷಕರ ಪಾಲಿಗೆ ಡಾರ್ಲಿಂಗ್ ಆಗಿಯೇ ಉಳಿದಿದ್ದಾರೆ. ಆದರೆ, ವಿದ್ಯಾವಂತರೂ ಬುದ್ಧಿವಂತರೂ ಆಗಿರುವ ರಮೇಶ್ ಅರವಿಂದ್, ತಮ್ಮ ಮಾತಿನ ಜಾಣ್ಮೆಯಿಂದ ಟಿವಿ ಶೋಗಳ ಮೂಲಕ ಸಿನಿಮಾಗಳಿಗಿಂತ ಹೆಚ್ಚಿನ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

ಅಂಥ ರಮೇಶ್ ಅರವಿಂದ್ ಕೈಗೆ ಪ್ರೇಮ್ ಲಾಂಗ್ ಕೊಟ್ಟಿದ್ದಾರೆ. ಅದೇನು ಸಿನಿಮಾದಲ್ಲಿಯೂ ಅವರು ಲಾಂಗ್ ಹಿಡಿದು ಶತ್ರುಗಳ ರುಂಡ ಮುಂಡಗಳನ್ನು ಚೆಂಡಾಡುತ್ತಾರೋ ಇಲ್ಲಾ ಕೇವಲ ಪೋಸ್ಟರ್‌ನಲ್ಲಿ ಮಾತ್ರ ಜನರ ಕುತೂಹಲ ಕೆರಳಿಸಲು ಪ್ರೇಮ್ ಹಾಗೆ ಮಾಡಿದ್ದಾರೋ.. ಅಂತೂ ‘ಕೆಡಿ’ ಚಿತ್ರದ ಆ ಪೋಸ್ಟರ್ ಈಗ ಗಾಂಧಿನಗರದಲ್ಲಿ ಚರ್ಚೆಯ ವಸ್ತುವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!

ವಲಸೆಯಂತಹ ಜ್ವಲಂತ ಸಮಸ್ಯೆಯನ್ನು ಹೇಳುವ ರಾಜಕೀಯ ಚಿತ್ರವೆನಿಸಿದರೂ; ಕ್ರಾಂತಿಕಾರಿ ಚಟುವಟಿಕೆಗಳ ಕುರಿತು...

“ತಾಯಿನೇ ಎಲ್ಲಾ” ಎಂದಿದ್ದ ಪ್ರೇಮ್, ಈಗ “ಸರ್ಸೆ ನಿನ್ನ ಸೆರಗ” ಅಂತಾರೆ!; ಭಾರೀ ಟೀಕೆಗೆ ಗುರಿಯಾದ ʼಕೆಡಿ ದಿ ಡೆವಿಲ್‌ʼ ಹಾಡು

ಪ್ರೇಮ್‌ ನಿರ್ದೇಶನದ "ಕೆಡಿ ದಿ ಡೆವಿಲ್‌" ಸಿನಿಮಾ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ...

ಆಸ್ಕರ್ 2026​ ಪ್ರಶಸ್ತಿ | ಅತ್ಯುತ್ತಮ ನಟ ಮೈಕೆಲ್ ಬಿ, ನಟಿ ಜೆಸ್ಸಿ ಬಕ್ಲಿ: ಸಂಪೂರ್ಣ ವಿಜೇತರ ಪಟ್ಟಿ

ಆಸ್ಕರ್ 2026 ಪ್ರಶಸ್ತಿ ಸಮಾರಂಭವು ಮಾರ್ಚ್ 15ರಂದು ಲಾಸ್ ಏಂಜಲಿಸ್‌ನ ಡಾಲ್ಬಿ...