ಅರಣ್ಯಜೀವಿ ಶೇಷಾದ್ರಿ ರಾಮಸ್ವಾಮಿ ಆಡಿಯೊ ಸಂದರ್ಶನ | ‘ಅರಣ್ಯ ಭವನಕ್ಕೆ ಹಸು ಕರೆಸಿ ಸಂಜೆವರೆಗೂ ಮೇಯ್ಸಿದ್ರು ನೇಗಿನಾಳ್ ಸರ್‍ರು!’

Date:

ನಮ್ಮಲ್ಲಿ ಬಹಳಷ್ಟು ಜನರಿಗೆ ಒಂದು ಮೂಢನಂಬಿಕೆ ಉಂಟು; ಅದೇನೆಂದರೆ, ಕಾಡನ್ನು ಸುತ್ತೋದು ಮತ್ತು ಕಾಡಿನ ಚಿತ್ರಗಳನ್ನು ಸೆರೆಹಿಡಿಯೋದು ಕೂಡ ಕಾಡನ್ನು ಕಾಪಾಡುವ ಕೆಲಸ ಅಂತ! ಇದು ಎಷ್ಟು ದೊಡ್ಡ ಮೌಢ್ಯ ಅಂತ ಗೊತ್ತಾಗಬೇಕು ಅಂದ್ರೆ, ನೀವು ಶೇಷಾದ್ರಿ ರಾಮಸ್ವಾಮಿ ಅವರ ಮಾತುಗಳನ್ನು ಕೇಳಬೇಕು. 

ಬೆಂಗಳೂರಿನವರಾದ ಶೇಷಾದ್ರಿ ಅವರು ಓದಿದ್ದು ಎಂಜಿನಿಯರಿಂಗ್. ಆದ್ರೆ, ಅದನ್ನು ಅನಾಮತ್ತಾಗಿ ಎತ್ತಿ ಒಗೆದು, ಅರಣ್ಯ ಸಂರಕ್ಷಣೆಯ ಚಟುವಟಿಕೆಗಳಿಗೆ ತಮ್ಮ ಬದುಕನ್ನು ಮೀಸಲಿಡ್ತಾರೆ. ಎಲ್ಲರೂ ಸಹಜವಾಗಿ ಬಯಸುವ ಆರಾಮದಾಯಕ ಮತ್ತು ಸವಲತ್ತಿನ ಬದುಕು ಕಟ್ಟಿಕೊಳ್ಳುವ ಅವಕಾಶಗಳಿದ್ರೂ, ಆ ದಾರಿ ಬಿಟ್ಟು ನಾಡಿನಿಂದ ಕಾಡಿನ ಕಡೆ ಮುಖ ಮಾಡ್ತಾರೆ.

ಕಾಡುಮರಗಳ ಬಗ್ಗೆ ಇವರಿಗಿರುವ ತಿಳಿವಳಿಕೆ, ಜ್ಞಾನ ಬೆರಗು ಮೂಡಿಸುವಂಥದ್ದು. ಮರವನ್ನು ನೋಡುತ್ತಲೇ ಅದರ ಸಂಪೂರ್ಣ ಜಾತಕ ಬಿಚ್ಚಿಡುವಲ್ಲಿ ಪರಿಣಿತರು. ಕರ್ನಾಟಕ ಕಂಡ ಅಪೂರ್ವ ಐಎಫ್‌ಎಸ್ ಅಧಿಕಾರಿ ಎಸ್ ಜಿ ನೇಗಿನಾಳ ಅವರ ಶಿಷ್ಯ ತಾವು ಅನ್ನೋದನ್ನು ಶೇಷಾದ್ರಿ ಅವರು ಬಹಳ ಅಕ್ಕರೆಯಿಂದ ಹೇಳಿಕೊಳ್ತಾರೆ.

ಇತ್ತೀಚೆಗಷ್ಟೇ ಲೋಕಸಭೆಯಲ್ಲಿ ಪಾಸಾದ ಜೀವವೈವಿಧ್ಯ ಮತ್ತು ಅರಣ್ಯ ಕಾಯ್ದೆಗಳ ತಿದ್ದುಪಡಿ ಮಸೂದೆ, ತಾವು ಕಟ್ಟಲುಹೊರಟ ಪರ್ಯಾಯ ಅರಣ್ಯ ಇಲಾಖೆ, ಎಸ್ ಜಿ ನೇಗಿನಾಳರ ಜೊತೆಗಿನ ಒಡನಾಟ, ತುಮಕೂರು ಜಿಲ್ಲೆಯ ಕೊನೇಹಳ್ಳಿ ಕಾವಲಿನ ಅವನತಿಯ ಕತೆ, ಆಗುಂಬೆಯಲ್ಲಿ ರೂಪಿಸಿದ ಕಾಡುಮರಗಳ ನರ್ಸರಿ, ಬೆಂಗಳೂರಿನಂತಹ ಮಹಾನಗರದ ಯುವಜನರಲ್ಲಿ ಮರಗಳ ಬಗ್ಗೆ ಆಸಕ್ತಿ ಮೂಡಿಸುವ ಜರೂರು... ಹೀಗೆ ಅತ್ಯಂತ ವೈವಿಧ್ಯಮಯ ವಿಷಯಗಳ ಕುರಿತು ಈ ಆಡಿಯೊ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

ಈ ಸಂದರ್ಶನ ಕೇಳಿದ್ದೀರಾ?: ನಾಟಕಕಾರ ಕೆ ವೈ ನಾರಾಯಣಸ್ವಾಮಿ ಸಂದರ್ಶನ | ‘ವಿದ್ಯಾರ್ಥಿಯೊಬ್ಬ ನಾಡಬಾಂಬ್ ತಂದು ಟೇಬಲ್ ಮೇಲೆ ಇಟ್ಟುಬಿಟ್ಟಿದ್ದ!’

ಈ ಸಂದರ್ಶನ ಕೇಳಿದ್ದೀರಾ?: ಸಿ ಎಸ್ ದ್ವಾರಕಾನಾಥ್ ಆಡಿಯೊ ಸಂದರ್ಶನ | ‘ಹೈಕೋರ್ಟ್ ನ್ಯಾಯಮೂರ್ತಿಯ ಇನ್ನೊಂದು ಮೂತಿ’ ಅಂತ ಹೆಡ್ಡಿಂಗ್ ಕೊಟ್ಟಿದ್ದರು ಲಂಕೇಶ್!

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರಳಿಗೆ ಸುತ್ತಿಕೊಂಡ ಇರಾನ್ ಯುದ್ಧ; ಅಮೆರಿಕದಲ್ಲಿ ತೈಲ ಬಿಕ್ಕಟ್ಟು – ಟ್ರಂಪ್ ಜನಪ್ರಿಯತೆಗೆ ಕುತ್ತು

ಟ್ರಂಪ್ ಸೃಷ್ಟಿಸಿದ ಈ ವಿನಾಶಕಾರಿ ಯುದ್ಧದ ಬಿಸಿ ಅಮೆರಿಕದ ಜನಸಾಮಾನ್ಯರ ಬದುಕನ್ನು...

ಮೊಜ್ತಬಾ ಖಮೇನಿ | ತೆರೆಯ ಹಿಂದಿದ್ದ ‘ಗೇಟ್‌ಕೀಪರ್’ ಈಗ ಇರಾನ್‌ನ ಪರಮೋಚ್ಚ ನಾಯಕ

ತಂದೆಯ 'ಸುಪ್ರೀಂ ಲೀಡರ್ ಕಚೇರಿ'ಯ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮೊಜ್ತಬಾ ಅವರು...

ಮಹಿಳಾ ದಿನಾಚರಣೆ ವಿಶೇಷ: ಕಳೆದೆರಡು ದಶಕಗಳಲ್ಲಿ ಕ್ರೀಡಾಂಗಣವನ್ನಾಳಿದ 10 ಭಾರತೀಯ ಮಹಿಳೆಯರು

ಒಂದು ಕಾಲದಲ್ಲಿ ಕ್ರೀಡೆಯೆಂದರೆ ಕೇವಲ ಪುರುಷರ ಸ್ವತ್ತು ಎಂಬ ಅಲಿಖಿತ ನಿಯಮವಿತ್ತು;...