‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’; ಬಿದ್ದ ಕನಸುಗಳನ್ನು ಸಿಕ್ಕಷ್ಟು ಎದೆಗೆ ಬಾಚಿಕೊಂಡಿರುವ ಸಂಗೀತಗಾರ

Date:

ಕನ್ನಡ ರಂಗಭೂಮಿಯ ಸೃಜನಶೀಲ ನಿರ್ದೇಶಕ ಕೆ. ಪಿ. ಲಕ್ಷ್ಮಣ್‌ ನಿರ್ದೇಶನದ, ʼಜಂಗಮ ಕಲೆಕ್ಟಿವ್‌ʼ ತಂಡ ಪ್ರಸ್ತುತಪಡಿಸಿದ ʼಬಾಬ್‌ ಮಾರ್ಲಿ ಫ್ರಮ್‌ ಕೋಡಿಹಳ್ಳಿʼ ನಾಟಕ ಅಪಾರ ಜನಮನ್ನಣೆ ಗಳಿಸಿದೆ. ಪಾತ್ರಧಾರಿಗಳಾದ ಚಂದ್ರು, ಶ್ವೇತ, ಭರತ್ ಒಬ್ಬರಿಗೊಬ್ಬರು ಜಿದ್ದಿಗೆ ಬಿದ್ದಂತೆ ಪಾತ್ರಗಳಿಗೆ ಜೀವ ಬಸಿದಿದ್ದಾರೆ.

“ಬಾಲ್ಯ ಎನ್ನುವುದು ಅನುಭವಗಳ ಸಂತೋಷದ ನಿಧಿ, ಗೋಲ್ಡನ್‌ ಮೆಮೊರೀಸ್” ಎಂದು‌ ಎಲ್ಲರೂ ಹೇಳುವುದನ್ನು ಕೇಳುತ್ತಲೇ ಇರುತ್ತೇವೆ. ಆದರೆ, ಅದು ನೋವಿನ ಕಣಜವಾಗಿದ್ದರೆ, ಹರೆಯದ ಮತ್ತು ನಂತರದ ಬಾಳು ಕಹಿಯಾಗಿ ಬೆಂಬಿಡದೆ ಕಾಡುತ್ತದೆ. ಅದೆಲ್ಲವನ್ನೂ ನುಂಗಿಕೊಂಡು, ಊರಿನ-ಕಹಿ ನೆನಪುಗಳ ಕಕ್ಷೆ ದಾಟಬೇಕೆಂದು ಬಯಸಿ ಹೇಗೊ ಕನಸುಗಳ ಮೂಟೆಯನ್ನ ಬೆನ್ನೇರಿಕೊಂಡು ಬರುತ್ತಾರೆ ಬೆಂಗಳೂರೆಂಬ ಮಹಾನಗರಕ್ಕೆ. ಅವರ ಮೂಲವನ್ನು ಜಾತಿಗಷ್ಟೆ ಸೀಮಿತ ಮಾಡಿ ನೋಡುವ ತುಸು ʻಲಿಬರಲ್‌ ಮಹಾನಗರʼದ ಜನರಿಂದ ಮೂಲ ಮುಚ್ಚಿಡಬೇಕಾದ ಅನಿವಾರ್ಯತೆ ಈ ಮೂವರದ್ದು. ಆದರೆ ಒಂದು ಮೂಳೆಯ ತುಂಡು ಅವರ ಮೂಲವನ್ನು ಜಗಜ್ಜಾಹೀರು ಮಾಡಿದೆ. ಈಗ ಮಾರನೇ ದಿನ ಮನೆ ಹುಡುಕಬೇಕು ಬೀದಿಗೆ ಬಿದ್ದು. ಆ ಆಕ್ರೋಶವೇ ಒಂದು ರಾತ್ರಿಯಾದರೂ ಅಷ್ಟು ದಿನ ಬಚ್ಚಿಕೊಂಡದ್ದನ್ನ ಒಬ್ಬರೆದುರೊಬ್ಬರು ಮನ ಬಿಚ್ಚಿ ಮಾತನಾಡುವಂತಾಗುತ್ತದೆ. ಈ ಸಾತ್ವಿಕ ಆಕ್ರೋಶದಲ್ಲಿ ಆವೇಶವಿಲ್ಲ, ದ್ವೇಷವಿಲ್ಲ, ಭಾವೋದ್ವೇಗವಿಲ್ಲ.

“ಮನವೆಲ್ಲ ಬಯಲಾಗಿ…” ಎಂದು ಹಾಡುತ್ತಲೇ ನಾಟಕವನ್ನ ಶುರು ಮಾಡುವ ಬಾಬ್‌ ಮಾರ್ಲಿ ಕೊನೆಗೆ “ನನ್ನ ಹಾಡು ಬೇರೆಯಲ್ಲವೇ?” ಎಂದು ಕೇಳುತ್ತಾನೆ. ಹಾಗಾದರೆ ಅವರು ಹಾಡಬೇಕಾದ ತನ್ನದೇ ಹಾಡು ಯಾವುದು? ತನ್ನದಲ್ಲದ ಹಾಡನ್ನು ಹಾಡುವ ಅನಿವಾರ್ಯತೆಯಾದರೂ ಏನು? ಇದೆಲ್ಲವನ್ನು ನಾಟಕದಲ್ಲಿಯೇ ನೋಡಿ ಅನುಭಾವಿಸಿ ತಿಳಿಯಬೇಕು. ಇವನು ಜಮೈಕಾದ ಹಾಡುಗಾರನಲ್ಲ. ಬದಲಿಗೆ ಭಾರತದಲ್ಲಿಯೇ ಜನಿಸಿ ಅಂಚಿಗೆ ದೂಡಲ್ಪಟ್ಟ, ಬಿದ್ದ ಕನಸುಗಳನ್ನ ಸಿಕ್ಕಷ್ಟು ಎದೆಗೆ ಬಾಚಿಕೊಂಡಿರುವ ಸಂಗೀತಗಾರ. ಇವನೆದೆಯ ದನಿಗೆ ಬೇಕಿರದ ರಾಗದ ಹೊರೆಯನ್ನು ಏರಿಸುತ್ತಿರುವ ಆ ಶಕ್ತಿಯ ಮೂಲ ಯಾವುದು? ಕೇಳಿಕೊಳ್ಳುವಂತೆ ಮಾಡುತ್ತಾರೆ ಈ ಬಾಬ್‌ ಮಾರ್ಲಿ ಮತ್ತು ಗೆಳೆಯರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇವರಿಗೆ ಊರಲ್ಲಿ ನೆಲೆಯಿದೆ, ಆದರೆ ಅಸ್ಮಿತೆ ಅವರದ್ದಲ್ಲವಾಗಿದೆ. ಚದುರಿದ ನದಿಗಳು ಒಂದೆಡೆ ಸೇರಿದಂತೆ, ಬಾಡಿಗೆ ಶೇರ್‌ ಮಾಡಿಕೊಂದು ಒಂದೇ ಸೂರಿನಲ್ಲಿ ಕನಸುಗಳನ್ನು ಕಾಪಿಟ್ಟುಕೊಂಡು ಬದುಕುತ್ತಿದ್ದಾರೆ. ಆದರೆ, ಎಲ್ಲಿ ಹೋದರೂ ಚಿಕ್ಕಚಿಕ್ಕ ಗೆರೆ ಕೊರೆದು ಇವರನ್ನು ಸಿಲುಕಿಸುತ್ತಿವೆ. ಗೆರೆಗಳ ಬರೆಗಳು ಮತ್ತೆ ಮತ್ತೆ ಮೂಡಿದಂತೆ, ಅದನ್ನ ಅಳಿಸಿ ಹಾಕುತ್ತಲೇ ಮರು ಹುಟ್ಟು ಪಡೆಯುತ್ತಿವೆ. ಮಿಂಚುಹುಳುವಿನೊಲವು ಹೊಂದಿರುವ ಸಾಕ್ಯನು ತನ್ನದೇ ಊರಿನಲ್ಲಿ ಮಿಂಚುಹುಳು ಹಿಡಿಯಲು ಹೋಗಿ ಸುಟ್ಟ ಗಾಯದ ನೆನಪನ್ನು ಹೊತ್ತುಕೊಂಡು ನಮ್ಮೆದುರು ನಿಂತಿದ್ದಾನೆ.

ಇವರ ಮುಂದೆ ಬೆತ್ತಲಾಗಲು ಇವರ ಮೇಲೆ ನಂಬಿಕೆಯಿಲ್ಲ ಎಂದು ಉತ್ತರಿಸುತ್ತಲೇ ಸವಾಲನ್ನು ಎಸೆಯುತ್ತಾಳೆ ನದಿ. ಕೂಡು ಸಮಾಜವೆಂದರೆ ಒಂದು ನಂಬಿಕೆಯಲ್ಲವೆ? ಹಾಗಾದರೆ ಅವಳ ನಂಬಿಕೆ ಎಲ್ಲಿ ಅಲುಗಾಡಿದೆ. ಶೋಷಣೆಯ ಪಾತ್ರವನ್ನು ಪಾತ್ರವೇ ನಿರಾಕರಿಸಿ ಬಂಡಾಯ ವ್ಯಕ್ತಪಡಿಸುವ ಸಾತ್ವಿಕ ಸಿಟ್ಟು ಇಲ್ಲಿದೆ. ಸಮಾನ ದುಃಖಿಗಳಾದ ಇವರನ್ನ ಒಂದೊಂದು ಚಿಕ್ಕ ಗೆರೆಯಲ್ಲೇ ಕೂರಿಸಿದ್ದಾರೆ. ಆ ಗೆರೆಯನ್ನ ಅಳಿಸಿ ಹಾಕುವುದರಲ್ಲೇ ಬದುಕು ಸವೆಸುತ್ತಿರುವುದು ವಿಪರ್ಯಾಸ.

Bob Marli

ಕೋಡಿಹಳ್ಳಿ ಒಂದೂರಿನ ಹೆಸರು, ನೆಲ ಮಾತ್ರ. ಅಂತಹ ಸಾವಿರಾರು ಹಳ್ಳಿಗಳು ಈ ಭಾರತದಲ್ಲಿ ಸ್ಥಾಯಿಯಾಗಿ ನಿಂತಿವೆ. ಹಳ್ಳಿ ಎಂದರೆ ಹಸಿರು, ಚಿಗುರು ಎಂದೇ ರೊಮ್ಯಾಂಟಿಸಮ್‌ನಲ್ಲಿ ಬಗೆಯುವವರಿಗೆ ಇಲ್ಲಿನ ತಣ್ಣಗಿನ ಕ್ರೌರ್ಯವನ್ನ ಈ ಮೂವರು ಮುಖಕ್ಕೆ ಹೊಡೆದಂತೆ ಹೇಳಿ ಮನವನ್ನ ತಟ್ಟಿ ನೋಡಿಕೊಳ್ಳುವಂತೆ ಮಾಡುತ್ತಾರೆ. ಜೊತೆಯಲ್ಲಿ ಅಂಬೇಡ್ಕರ್‌ ಅವರ ಅನುಭವದ ಸಾಲುಗಳು, ರೋಹಿತ್‌ ವೇಮುಲನ ಕೊನೆಯ ಮಾತುಗಳು, ಎನ್. ಕೆ. ಹನುಮಂತಯ್ಯ ಮತ್ತು ಚಂದ್ರಶೇಖರ ಕೆ. ಅವರ ಕಾವ್ಯದ ಸಾಲುಗಳು ನಮ್ಮನ್ನು ಎದುರುಗೊಂಡು ನಾಟಕದ ರಂಗು ಹೆಚ್ಚಿಸುತ್ತವೆ.

ಮೊಟ್ಟೆಯೂ ಆಹಾರದ ಒಂದು ಭಾಗವಾಗದೇ, ರಾಜಕೀಯವಾಗಿ ಮಾರ್ಪಟ್ಟಿರುವುದು, ಜಾತ್ರೆ ಅಂದರೆ ಕೇವಲ ಎಲ್ಲರನ್ನೂ ಒಗ್ಗೂಡಿಸುವ-ಸಂಬಂಧಗಳನ್ನು ಬೆಸೆಯುವ ಆಚರಣೆ ಮಾತ್ರವೇ? ನಮ್ಮದೇ ಸಾವುಗಳ ದ್ಯೋತಕವಾದ ಇವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವಲ್ಲ. ಇದು ಹಿಂಬಾಗಿಲಿನಿಂದ ನಮ್ಮನ್ನು ಬೇರ್ಪಡಿಸುವ ಸಂಸ್ಕೃತಿಯ ಆಚರಣೆಯಲ್ಲವೇ? ಈ ʻಸುವ್ಯವಸ್ಥೆʼಯನ್ನು ವಿಡಂಬನೆಯ ಮೂಲಕವೇ ಅನಾವರಣಗೊಳಿಸಿ ಪ್ರೇಕ್ಷಕರನ್ನು ರಂಜಿಸಿ ಎದುರಿಗೆ ನಿಲ್ಲಿಸಿಕೊಂಡು ಪ್ರಶ್ನಿಸುತ್ತಾರೆ. ಪ್ರಸ್ತುತ ಕಾಲಘಟ್ಟದಲ್ಲಿ ಈ ಪ್ರಶ್ನೆಯನ್ನು ಕೇಳಲು ಎದೆಗಾರಿಕೆಯೂ ಬೇಕು. ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಕೆ. ಪಿ. ಲಕ್ಷ್ಮಣ್‌ ಅವರ ತಂಡ. ಪಾತ್ರಧಾರಿಗಳಾದ ಚಂದ್ರು, ಶ್ವೇತ, ಭರತ್ ಒಬ್ಬರಿಗೊಬ್ಬರು ಜಿದ್ದಿಗೆ ಬಿದ್ದಂತೆ ಪಾತ್ರಗಳಿಗೆ ಜೀವ ಬಸಿದಿದ್ದಾರೆ.

ಶ್ರೇಷ್ಠ – ಕನಿಷ್ಠವೆಂಬ ತಕ್ಕಡಿ ಹೊಯ್ದಾಡುವಷ್ಟು ಕಾಲ ಈ ಬಾಬ್ ಮಾರ್ಲಿ, ನದಿ, ಸಾಕ್ಯರಂಥವರದ್ದು ಎಂದೂ ಮುಗಿಯದ ಯುದ್ಧ ಎಂಬ ವಾಸ್ತವವನ್ನು ವಿಡಂಬನೆ, ತೆಳು ಹಾಸ್ಯದ ಮೂಲಕ ತೆರೆದಿಡುವುದನ್ನ ರಂಗದ ಮೇಲೆಯೇ ನೋಡಬೇಕಾದ ರಂಗಚಿತ್ರ ʼಬಾಬ್‌ ಮಾರ್ಲಿ ಫ್ರಮ್‌ ಕೋಡಿಹಳ್ಳಿʼ.

WhatsApp Image 2025 11 17 at 3.26.03 PM
ಎಡೆಯೂರು ಪಲ್ಲವಿ
+ posts

ಯುವ ಲೇಖಕಿ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...