ಈ ದಿನ ವಿಶೇಷ | ಮುಸ್ಲಿಮರಿಲ್ಲದ ‘ಮೊಹರಂ’ ಹಿಂದೆ ಏನೇನೆಲ್ಲ ಇದೆ ಗೊತ್ತಾ?

Date:

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೈಕನವಾಡಿಯಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ ಆದರೂ ಮೊಹರಂ ಅದ್ದೂರಿಯಾಗಿ ಜರುಗುತ್ತದೆ. ಮುರಸಿದ್ದೇಶ್ವರ ಮತ್ತು ಮಹಾದೇವ ದೇವಸ್ಥಾನಗಳಲ್ಲಿ ಮೊಹರಂ ದೇವರ ಪಂಜಾಗಳನ್ನು ಕೂರಿಸುತ್ತಾರೆ. ಕೆಲವು ಹಳ್ಳಿಗಳಲ್ಲಿ ಮೊಹರಂ ದೇವರು ಕೂರಿಸುವ ಮಸೀದಿಗಳೂ ಇಲ್ಲ. ದೇವಸ್ಥಾನಗಳಲ್ಲೆ ದೇವರನ್ನು ಕೂರಿಸಲಾಗುತ್ತದೆ. ಬ್ಯಾಲಹುಣಸಿ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದ ಕಟ್ಟೆಯ ಮೇಲೆ ಮೊಹರಂ ದೇವರನ್ನು ಕೂರಿಸುತ್ತಾರೆ.

ಕರ್ನಾಟಕದ ಸಾವಿರಾರು ಊರುಗಳಲ್ಲಿ ಮುಸ್ಲಿಮರು ಇಲ್ಲದೆಯೂ ಮೊಹರಂ ಅದ್ದೂರಿಯಾಗಿ ನಡೆಯುತ್ತದೆ. ಇದನ್ನು ವಿಶಿಷ್ಟವೆಂತಲೂ, ಹಿಂದೂ ಮುಸ್ಲಿಂ ಸಾಮರಸ್ಯವೆಂತಲೂ, ಭಾವೈಕ್ಯದ ಕುರುಹು ಎಂತಲೂ ಮಾಧ್ಯಮಗಳು ಅಚ್ಚರಿಯೊಂದಿಗೆ ವರದಿ ಮಾಡುತ್ತವೆ. ಹಿಂದುಗಳೆ ಮುಸ್ಲಿಮರ ಮೊಹರಂ ಹಬ್ಬವನ್ನು ಆಚರಿಸುವ ಬಗ್ಗೆ ಕೌತುಕ ವ್ಯಕ್ತಪಡಿಸುತ್ತವೆ. ಅಂತೆಯೇ ಕರ್ನಾಟಕದಲ್ಲಿ ಮೊಹರಂ ಆಚರಣೆ ನಡೆಯದ ನೂರಾರು ಹಳ್ಳಿಗಳೂ ಇವೆ. ಇಂತಹ ಕಡೆಗಳಲ್ಲಿ ಮೊಹರಂ ಏಕೆ ಇಲ್ಲ ಎಂದು ಕೇಳಿದರೆ, ನಮ್ಮೂರಲ್ಲಿ ಮೊದಲಿನಿಂದಲೂ ಮುಸ್ಲಿಮರಿಲ್ಲ ಎನ್ನುತ್ತಾರೆ. ಹಾಗೆ ನೋಡಿದರೆ ಈ ಕೆಲವು ಹಳ್ಳಿಗಳಲ್ಲಿ ಮುಸ್ಲಿಮರು ಬೇರೆಡೆ ವಲಸೆ ಹೋದ ಕಾರಣ ಹಿಂದೂಗಳು ಮೊಹರಂ ಹಬ್ಬವನ್ನು ನಿಲ್ಲಿಸಿರಬಹುದು. ಅಥವಾ ಎರಡೂ ಧರ್ಮಗಳ ಮೂಲಭೂತವಾದಿ ಸಂಘಟನೆಗಳು ಇಂತಹ ಸಾಮರಸ್ಯದ ಆಚರಣೆ ನಡೆಯದಂತೆ ತಡೆದಿರಬಹುದು.

ಮೊಹರಂ ಚರಿತ್ರೆ ಏಳನೆ ಶತಮಾನಕ್ಕೆ ಕೊಂಡೊಯ್ಯುತ್ತದೆ. ಮಹಮದ್ ಪೈಗಂಬರನ ಮೊಮ್ಮಕ್ಕಳಾದ ಹಸನ್-ಹುಸೇನ್ ವಂಶಸ್ಥರು ಮತ್ತು ದಾಯಾದಿ ಯಾಜೀದನ ವಂಶಸ್ಥರ ನಡುವೆ ಕರ್ಬಲಾ ಮೈದಾನದಲ್ಲಿ ನಡೆದ ಯುದ್ಧದಲ್ಲಿ ಸಾವನ್ನಪ್ಪುವ ಧಾರುಣ ಘಟನೆಯನ್ನು ನೆನಪಿಸಿಕೊಳ್ಳುವ ಆಚರಣೆ. ಮುಸ್ಲಿಂ ಧರ್ಮದ ಎರಡು ಪ್ರಧಾನ ಪಂಗಡಗಳಾದ ಶಿಯಾ-ಸುನ್ನಿಗಳು ಈ ಆಚರಣೆಯನ್ನು ಭಿನ್ನವಾಗಿ ಆಚರಿಸುತ್ತಾರೆ. ಇದು ಉತ್ತರ ಕರ್ನಾಟಕದಲ್ಲಿ ಬಹಮನಿ-ಆದಿಲ್‌ಶಾಹಿಗಳ ಕಾಲದಿಂದಲೂ ನಡೆದುಕೊಂಡು ಬಂದಿದೆ. ಹೈದರಾಬಾದ ನಿಜಾಮನ ಕಾಲದಲ್ಲಿಯೂ ಮೊಹರಂ ಆಚರಣೆ ಈ ಭಾಗದಲ್ಲಿ ವ್ಯಾಪಕವಾಗಿದೆ. ಹೀಗೆ ಮುಸ್ಲಿಂ ಆಡಳಿತದ ಪರಿಣಾಮ ಉತ್ತರ ಕರ್ನಾಟಕದಲ್ಲಿ ಮೊಹರಂ ಹಲವು ಹೆಸರುಗಳಲ್ಲಿ ಊರಬ್ಬವಾಗಿ ರಂಗುರಂಗಾಗಿ ಆಚರಣೆಗೊಳ್ಳುತ್ತದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೈಕನವಾಡಿಯಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ ಆದರೂ ಮೊಹರಂ ಅದ್ದೂರಿಯಾಗಿ ಜರುಗುತ್ತದೆ. ಮುರಸಿದ್ದೇಶ್ವರ ಮತ್ತು ಮಹಾದೇವ ದೇವಸ್ಥಾನಗಳಲ್ಲಿ ಮೊಹರಂ ದೇವರ ಪಂಜಾಗಳನ್ನು ಕೂರಿಸುತ್ತಾರೆ. ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಬಳ್ಳಾಪುರ, ಜೀರಿಗನೂರು, ಕಣ್ವಿ ತಿಮ್ಮಲಾಪುರ, ಕಲಘಟಗಿ ತಾಲೂಕಿನ ಕೆ.ಹುಣಶಿಕಟ್ಟಿ, ಚಿತ್ರದುರ್ಗ ತಾಲೂಕಿನ ಬಚ್ಚಬೋರನಹಟ್ಟಿ, ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಮುಷ್ಟಗಟ್ಟೆ, ಸವದತ್ತಿ ತಾಲೂಕಿನ ಹರ್ಲಾಪುರ, ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ವಗಡಂಬಳಿ, ಹೂವಿನಹಡಗಲಿ ಸಮೀಪದ ಶಿವಪುರ, ಹಾಳ ತಿಮ್ಮಾಪುರ, ಬ್ಯಾಲಹುಣಸಿ, ಹೀಗೆ ಸುದ್ದಿಯಾದ ಮತ್ತು ನಾನು ಕ್ಷೇತ್ರಕಾರ್ಯದಲ್ಲಿ ಗುರುತಿಸಿದ ಹಳ್ಳಿಗಳ ಹೊರತಾಗಿಯೂ ಸಾವಿರಾರು ಹಳ್ಳಿಗಳಲ್ಲಿ ಮುಸ್ಲಿಮರಿಲ್ಲದ ಮೊಹರಂ ನಡೆಯುತ್ತದೆ. ಕೆಲವು ಹಳ್ಳಿಗಳಲ್ಲಿ ಮೊಹರಂ ದೇವರು ಕೂರಿಸುವ ಮಸೀದಿಗಳೂ ಇಲ್ಲ. ದೇವಸ್ಥಾನಗಳಲ್ಲೆ ದೇವರನ್ನು ಕೂರಿಸಲಾಗುತ್ತದೆ. ಬ್ಯಾಲಹುಣಸಿ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದ ಕಟ್ಟೆಯ ಮೇಲೆ ಮೊಹರಂ ದೇವರನ್ನು ಕೂರಿಸುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ನುಡಿ ನಮನ | ಮುಂಬಯಿ ಕನ್ನಡ ರಂಗಭೂಮಿಯ ಆದ್ಯ ಪ್ರವರ್ತಕರಲ್ಲೊಬ್ಬರು ಸದಾನಂದ ಸುವರ್ಣ

ಇಂತಹ ಕಡೆಗಳಲ್ಲಿ ಸೂಕ್ಷ್ಮವಾಗಿ ಪರಿಶೀಲಿಸಿದರೆ ಕೆಲವು ಹಳ್ಳಿಗಳಲ್ಲಿ ಬಹಳ ಕಾಲದ ಹಿಂದೆ ಮುಸ್ಲಿಮರು  ನೆಲೆಸಿದ್ದ ಕುರುಹು ಸಿಗುತ್ತದೆ. ಶಿಗ್ಗಾವಿ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಪ್ಲೇಗ್ ಬಂದಾಗ ಮುಸ್ಲಿಮರು ಗ್ರಾಮ ತೊರೆದಿದ್ದಾರೆ, ಅವರು ಬಿಟ್ಟು ಹೋದ ಮಸೀದಿಯಲ್ಲಿ ಈಗಲೂ ಹಿಂದೂಗಳು ಮೊಹರಂ ಆಚರಿಸುತ್ತಾರೆ. ಸವದತ್ತಿ ತಾಲೂಕಿನ ಹರ್ಲಾಪುರದಲ್ಲಿ ಬಹಳ ಹಿಂದೆ ಮುಸ್ಲಿಂ ಸಮುದಾಯದ ಸೂಫಿ ಫಕೀರನೊಬ್ಬ ವಾಸವಿದ್ದನಂತೆ, ಹಾಗಾಗಿ ಆತ ತೀರಿದ ಬಳಿಕವೂ ಈ ಊರಲ್ಲಿ ಮೊಹರಂ ಹಬ್ಬವನ್ನು ಆಚರಿಸಲಾಗುತ್ತದೆ. ಹೀಗೆ ಮುಸ್ಲಿಮರಿಲ್ಲದ ಊರುಗಳ ಮೊಹರಂ ಆಚರಣೆಗೆ ಆಯಾ ಭಾಗದ ಸೂಫಿ ಸಂತರ ಪ್ರಭಾವವೂ ಇದೆ. ಕೆಲವು ಕಡೆಗಳಲ್ಲಿ ಮೊಹರಂ ದೇವರುಗಳೆ ಮತ್ತೊಂದು ಊರುಗಳಿಗೆ ವಲಸೆ ಬಂದಿರುವುದಾಗಿಯೂ, ಬಹಳ ಊರುಗಳಲ್ಲಿ ಹಳ್ಳಗಳಲ್ಲಿ ಮೊಹರಂ ದೇವರು ಹರಿದುಬಂದು ಈ ಊರಿನಲ್ಲಿ ನೆಲೆಸಿರುವುದಾಗಿಯೂ ರಿವಾಯ್ತ್ ಪದಗಳಲ್ಲಿ ಹೇಳುತ್ತಾರೆ. ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಬಹುಪಾಲು ಮುಸ್ಲಿಮರಿಲ್ಲದ ಊರುಗಳಲ್ಲಿ ಮೊಹರಂ ನಡೆಯುತ್ತದೆ ಎಂದರೆ ಹಿಂದೆ ಈ ಊರುಗಳಲ್ಲಿ ಮುಸ್ಲಿಮರು ನೆಲೆಸಿದ್ದರು ಎನ್ನುವುದರ ಸಂಕೇತವಾಗಿದೆ. ಅಂತೆಯೆ ಮುಸ್ಲಿಮರಿಲ್ಲದ ಮೊಹರಂ ನಡೆವ ಹಳ್ಳಿಗಳ ಸುತ್ತಮುತ್ತಣ ಮುಸ್ಲಿಮರನ್ನು ಕರೆತಂದು ಹಬ್ಬ ಮಾಡಲಾಗುತ್ತದೆ. ಕೆಲವು ಕಡೆಗಳಲ್ಲಿ ಪೂರ್ವಜರ ನೆನಪಿಗೆ ಬಿಟ್ಟುಹೋದ ಮನೆತನದ ಮುಸ್ಲಿಂ ಕುಟುಂಬಗಳೆ ಮೊಹರಂ ಹಬ್ಬಕ್ಕೆ ಎರಡು ಮೂರು ದಿನದ ಮಟ್ಟಿಗೆ ಬಂದು ಆಚರಣೆ ಮುಗಿಸಿಕೊಂಡು ಹೋಗುತ್ತಾರೆ.

ಇಂತಹ ಮುಸ್ಲಿಮರ ವಲಸೆಯ ಪ್ರಮಾಣ 1992 ರ ಬಾಬರಿ ಮಸೀದಿ ಧ್ವಂಸದ ನಂತರ ಹೆಚ್ಚಾಗಿರುವುದನ್ನು ಗಮನಿಸಬಹುದು. ಮುಸ್ಲಿಮರ ದುರುಳೀಕರಣ, ಮುಸ್ಲಿಮರ ಬಗೆಗೆ ಹುಟ್ಟಿಸಿದ ಭಯದಿಂದ ಭಾರತೀಯ ಮುಸ್ಲಿಮರಲ್ಲಿ ಭಯ ಆತಂಕ ಅಭದ್ರತೆ ನೆಲೆಸಿದೆ. ಹೀಗಾಗಿ ಮುಸ್ಲಿಮರು ಒಗ್ಗಟ್ಟಾಗುವುದು, ಒಂದೆಡೆ ಬದುಕುವುದು ಅನಿವಾರ್ಯವಾಗಿದೆ. ಹಿಂದೆ ಚಿಕ್ಕಪುಟ್ಟ ವ್ಯಾಪಾರಿಗಳಾಗಿ ಊರುಗಳಿಗೆ ಪ್ರವೇಶಿಸಿ ಆಯಗಾರರಾಗಿ ಒಂದೋ ಎರಡೋ ಮುಸ್ಲಿಂ ಮನೆಗಳು ನೆಲೆಸಿದ್ದರು. ಬದಲಾದ ಕೋಮುಭಾವನೆಯ ಪರಿಣಾಮವಾಗಿ ತಮ್ಮ ವಾಸದ ಹಳ್ಳಿಗಳನ್ನು ತೊರೆದು ಎಲ್ಲಿ ಮುಸ್ಲಿಂ ಸಮುದಾಯ ಹೆಚ್ಚಾಗಿ ನೆಲೆಸಿದ್ದಾರೋ ಅಂತಹ ಕಡೆಗಳಿಗೆ ಹೆಚ್ಚಾಗಿ ನಗರಗಳಿಗೆ ವಲಸೆ ಹೋಗಿದ್ದಾರೆ. ಹಾಗಾಗಿ ಮುಸ್ಲಿಮರಿಲ್ಲದ ಮೊಹರಂ ಆಚರಣೆ, ಹಿಂದೆ ಈ ಊರುಗಳಲ್ಲಿ ಮುಸ್ಲಿಮರು ಇದ್ದರು ಎಂದು ಹೇಳುವ ಮೌಖಿಕ ಚರಿತ್ರೆಯ ಪಠ್ಯಗಳಾಗಿವೆ.

arun jolada kudligi
ಅರುಣ್‌ ಜೋಳದ ಕೂಡ್ಲಿಗಿ
+ posts

ಲೇಖಕ, ಜಾನಪದ ಸಂಶೋಧಕರು

ಪೋಸ್ಟ್ ಹಂಚಿಕೊಳ್ಳಿ:

ಅರುಣ್‌ ಜೋಳದ ಕೂಡ್ಲಿಗಿ
ಅರುಣ್‌ ಜೋಳದ ಕೂಡ್ಲಿಗಿ
ಲೇಖಕ, ಜಾನಪದ ಸಂಶೋಧಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...