ಜನಸಾಮಾನ್ಯರ ಜೊತೆ ‘ಈದಿನ.ಕಾಮ್’ | ಮಂಡ್ಯ ಜಿಲ್ಲೆಯ ಚಿಕ್ಕತಮ್ಮನಹಳ್ಳಿಯ ಮರಿಯಮ್ಮ

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್‌)

ಮಾಧ್ಯಮದ ಮಂದಿ ಸಾಮಾನ್ಯವಾಗಿ ಯಾರನ್ನು ಮಾತಾಡಿಸ್ತಾರೆ? ಸುದ್ದಿಗಳಿಗೆ ಬೇಕಾದ ಮಾಹಿತಿ ಯಾರಿಂದ ಸಿಗುತ್ತೋ ಅವ್ರನ್ನು ಕಾದಿದ್ದು ಮಾತಾಡಿಸ್ತಾರೆ; ವಿವಾದಗಳಲ್ಲಿ ಸಿಕ್ಕಿಹಾಕಿಕೊಂಡಿರೋರನ್ನು ಬೆನ್ನತ್ತಿ ಹೋಗಿ ಮಾತಾಡಿಸ್ತಾರೆ; ಯಾರೆಲ್ಲ ಸಮಸ್ಯೆಗಳಿಗೆ ತುತ್ತಾಗಿರ್ತಾರೋ ಅಂಥವ್ರನ್ನು – ಅದೂ ತಮಗೆ ಅದು ಸಮಸ್ಯೆ ಅಂತ ಅನ್ನಿಸಿದರೆ ಮಾತ್ರ ಮಾತಾಡಿಸ್ತಾರೆ; ಇನ್ನು ಸೆಲೆಬ್ರಿಟಿಗಳನ್ನು ಎಲ್ಲಿ ಸಿಕ್ಕಿದ್ರೂ ಮಾತಾಡಿಸ್ತಾರೆ; ರಾಜಕಾರಣಿಗಳು ಎಲ್ಲೇ ಕಂಡ್ರೂ ಹಿಂದೆ ಹೋಗ್ತಾರೆ, ‘ಸಾಧಕರು’ ಅಂತ ಹಣೆಪಟ್ಟಿ ಹಚ್ಚಿಕೊಂಡವ್ರನ್ನು ಅದೊಂದೇ ಕಾರಣಕ್ಕೆ ಮಾತಾಡಿಸ್ತಾರೆ; ಎಲೆಕ್ಷನ್ ಟೈಮ್ ಬಂತು ಅಂದ್ರೆ ಅಭಿಪ್ರಾಯ ಸಂಗ್ರಹ ಮಾಡ್ಬೇಕಲ್ಲ ಅನ್ನೋ ಅನಿವಾರ್ಯತೆಯಿಂದಾಗಿ, ಅದ್ರಲ್ಲೂ ತಮಗೆ ಅನುಕೂಲ ಅನ್ನಿಸಿದ ಊರು-ಕೇರಿಗಳಲ್ಲಿ ಸಿಕ್ಕವ್ರನ್ನು ಹಿಡಿದು ಕೂರಿಸಿಕೊಂಡು ಮಾತಾಡಿಸ್ತಾರೆ…

ಇದೆಲ್ಲ ತಪ್ಪೋ ಸರಿಯೋ ಅನ್ನೋದು ಇಲ್ಲಿನ ಚರ್ಚೆ ಅಲ್ಲ. ಆದ್ರೆ, ಈಗ ನಾವು ನೆನಪಿಸಿಕೊಂಡ್ವಲ್ಲ – ಇದ್ರಲ್ಲಿ ಯಾವುದೇ ಗುಂಪಿಗೂ ಸೇರದ ಜನರೇ ಹೆಚ್ಚು ಅನ್ನೋದು ಸತ್ಯ. ಹಾಗಾದ್ರೆ, ಅವ್ರನ್ನೆಲ್ಲ ಮಾಧ್ಯಮಗಳು ಮಾತಾಡ್ಸೋದು ಬ್ಯಾಡ್ವಾ? ಬರೀ ತಮ್ಮ ಸುದ್ದಿಗೆ ಬೇಕಾದಾಗ ಮಾತ್ರ… ಅಂದ್ರೆ, ಲಾಭ ಇದ್ರಷ್ಟೇ ಮಾತಾಡ್ಸೋದಾ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಂಥದ್ದೊಂದು ಕೆಟ್ಟ ಸಂಪ್ರದಾಯಕ್ಕೆ ಬೆನ್ನು ಹಾಕ್ಬೇಕು ಅಂತಾನೇ ನಿಮ್ಮ ‘ಈದಿನ.ಕಾಮ್’ ಈ ವಿಶೇಷ ಆಡಿಯೊ ಸರಣಿ ಶುರುಮಾಡಿದೆ. ಕರ್ನಾಟಕದ ಎಲ್ಲ ಸೀಮೆಗಳ, ಎಲ್ಲ ಬಗೆಯ ಬದುಕನ್ನು ಬದುಕ್ತಿರೋ ನಿಜವಾದ ಜನಸಾಮಾನ್ಯರನ್ನು ಯಾವುದೇ ಉದ್ದೇಶ ಇಲ್ಲದೆ, ಆರಾಮ ಕುಂತು ಮಾತಾಡಿಸ್ತಾ ಹೋಗೋದು ‘ಜನಸಾಮಾನ್ಯರ ಜೊತೆ ಈದಿನ.ಕಾಮ್’ ಸರಣಿಯ ವಿಶೇಷ. ಇಲ್ಲಿ ತೆರೆದುಕೊಳ್ಳುವ ಬದುಕಿನ ಕತೆಗಳು ನಮ್ಮ ಕೇಳುಗರಿಗೆ ಒಂದಿಷ್ಟಾದರೂ ಚೈತನ್ಯ ತುಂಬಿದರೆ ನಮ್ಮ ಶ್ರಮ ಸಾರ್ಥಕ.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರಳಿಗೆ ಸುತ್ತಿಕೊಂಡ ಇರಾನ್ ಯುದ್ಧ; ಅಮೆರಿಕದಲ್ಲಿ ತೈಲ ಬಿಕ್ಕಟ್ಟು – ಟ್ರಂಪ್ ಜನಪ್ರಿಯತೆಗೆ ಕುತ್ತು

ಟ್ರಂಪ್ ಸೃಷ್ಟಿಸಿದ ಈ ವಿನಾಶಕಾರಿ ಯುದ್ಧದ ಬಿಸಿ ಅಮೆರಿಕದ ಜನಸಾಮಾನ್ಯರ ಬದುಕನ್ನು...

ಮೊಜ್ತಬಾ ಖಮೇನಿ | ತೆರೆಯ ಹಿಂದಿದ್ದ ‘ಗೇಟ್‌ಕೀಪರ್’ ಈಗ ಇರಾನ್‌ನ ಪರಮೋಚ್ಚ ನಾಯಕ

ತಂದೆಯ 'ಸುಪ್ರೀಂ ಲೀಡರ್ ಕಚೇರಿ'ಯ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮೊಜ್ತಬಾ ಅವರು...

ಮಹಿಳಾ ದಿನಾಚರಣೆ ವಿಶೇಷ: ಕಳೆದೆರಡು ದಶಕಗಳಲ್ಲಿ ಕ್ರೀಡಾಂಗಣವನ್ನಾಳಿದ 10 ಭಾರತೀಯ ಮಹಿಳೆಯರು

ಒಂದು ಕಾಲದಲ್ಲಿ ಕ್ರೀಡೆಯೆಂದರೆ ಕೇವಲ ಪುರುಷರ ಸ್ವತ್ತು ಎಂಬ ಅಲಿಖಿತ ನಿಯಮವಿತ್ತು;...