(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್ಕಾಸ್ಟ್ಸ್ ಅಥವಾ ಸ್ಪಾಟಿಫೈ ಮ್ಯೂಸಿಕ್)
ಹಗಲಿರುಳೂ ದುಡಿಯುವ ರೈತ. ಆಲೆಮನೆಯ ಕೆಲಸಕ್ಕಾಗಿ ಓದು ಬಿಟ್ಟ ಶ್ರಮಜೀವಿ. ಕಣ್ಣಿಗೆ ಕಟ್ಟುವಂತೆ ಘಟನಾವಳಿಗಳನ್ನು ಹೇಳುವ ಮಾತುಗಾರ. ರಾಜಕುಮಾರ್ ಅಭಿಮಾನಿ. ಇಂತಹ ರೇವಣ್ಣ ಅವರ ಬದುಕಿನ ಕತೆ ಇಲ್ಲುಂಟು. ಕೇಳಿ… ಸಾಧ್ಯವಾದರೆ ಹೇಗನ್ನಿಸಿತು ಹೇಳಿ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಾಗೆ ಕೋಡಮಗ್ಗಿ ಎಂಬ ಊರಲ್ಲಿ ಉಳಿದಿದ್ದೆ. ಬೆಳಗ್ಗೆದ್ದು ಭರ್ಜರಿ ಸ್ನಾನ ಮುಗಿಸಿ, ಗೆಳೆಯ ಫಯಾಝ್ ಮಾಡಿಕೊಟ್ಟ ತಿಂಡಿ ಬಾರಿಸಿ ಹೊರಟಿದ್ದಾಯ್ತು.
ಪ್ಲಾನ್ ಇದ್ದದ್ದು ಹೊಳೆಹೊನ್ನೂರು ಕಡೆಗೆ ನಡೆಯಬೇಕೆಂದು. ನಡಿಗೆ ಶುರು. ಭದ್ರಾವತಿ ಹಿಂದಾಗತೊಡಗಿತು. ಕೋಡಮಗ್ಗಿಯಿಂದ ಒಂದೂವರೆ ಕಿಲೋಮೀಟರ್ ಸಾಗಿದರೆ, ಮುಖ್ಯರಸ್ತೆಯಲ್ಲೇ ತಳ್ಳಿಕಟ್ಟೆ ಎಂಬ ಹಳ್ಳಿ.
ತಳ್ಳಿಕಟ್ಟೆಯೊಳಗೆ ನಡೆಯುವಾಗ, ಸೊಸೈಟಿ ಎದುರು ಮೂವರು ಹರಟೆ ಹೊಟೆಯುತ್ತ ಕುಂತವರನ್ನು ಕಂಡೆ. ಅವರಲ್ಲೊಬ್ಬರು ನನ್ನ ಕ್ಯಾಮೆರಾ ಬ್ಯಾಗು ಕಂಡು, “ಏನ್ ಸಾರ್ ಅದು?” ಅಂತ ಕುತೂಹಲದ ಕೇಳ್ವಿ ಒಗೆದರು. ಅವರ ಬಳಿ ಹೋಗಿ ಮಾತನಾಡಿದೆ. ಕಡೆಗೆ, “ಏನ್ ಸಾರ್ ಅದು?” ಎಂದು ಕೇಳಿದ್ದವರನ್ನು ಮಾತನಾಡಿಸಿದೆ ಕೂಡ – ಅವರೇ ರೇವಣ್ಣ.
ಹಗಲಿರುಳೂ ದುಡಿಯುವ ರೈತ. ಆಲೆಮನೆಯ ಕೆಲಸಕ್ಕಾಗಿ ಓದು ಬಿಟ್ಟ ಶ್ರಮಜೀವಿ. ಕಣ್ಣಿಗೆ ಕಟ್ಟುವಂತೆ ಘಟನಾವಳಿಗಳನ್ನು ಹೇಳುವ ಮಾತುಗಾರ. ರಾಜಕುಮಾರ್ ಅಭಿಮಾನಿ. ಇಂತಹ ರೇವಣ್ಣ ಅವರ ಬದುಕಿನ ಕತೆ ಇಲ್ಲುಂಟು. ಕೇಳಿ… ಸಾಧ್ಯವಾದರೆ ಹೇಗನ್ನಿಸಿತು ಹೇಳಿ.




