ವಾರಕ್ಕೊಂದು ಕವಿತೆ – ರಮೇಶ ಅರೋಲಿ | ‘ಬುಲ್ಡೋಜರ್‌ ಎದುರು ನಿಂತ ಇರುವೆಗಳು…’

Date:

ಹರಿತ ಪದಪ್ರತಿಮೆಗಳನ್ನು ಅನಾಯಾಸವಾಗಿ ಕಟ್ಟುವ ಕವಿ ರಮೇಶ ಅರೋಲಿ. ರಾಯಚೂರು ಜಿಲ್ಲೆಯ ಅಸ್ಕಿಹಾಳದವರು. ಸದ್ಯ ದಿಲ್ಲಿಯಲ್ಲಿ ಮೇಷ್ಟ್ರು. ಕವಿತೆಗಳ ಮೂಲಕ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡ ಅರೋಲಿ ಅವರ ಇತ್ತೀಚಿನದೊಂದು ಕವಿತೆ ಇಲ್ಲಿದೆ

ಊರ ಮೇರೆಗೆ ನಿಂತ ಓ ಹನುಮ ದೇವರೆ,
ಸಾಮ್ರಾಜ್ಯದ ಸೈಜುಗಲ್ಲು ಆಕಾರ ಪಡೆಯುವ ಮುನ್ನ
ನನ್ನ ಬೆನ್ನಿಗೆ ಭೂಮಂಡಲ ಹೊರಿಸಲಾಗಿತ್ತು
ಉಳಿ, ಚೆನ್ನಿ, ಸುತ್ತಿಗೆ ಚೂಪಾಗುವ ಮುನ್ನ
ನನ್ನ ಕಣ್ಣೀರನ್ನು ಗೋರಿಯಲಿ ಹೂತಿಡಲಾಗಿತ್ತು
ಮತ್ತೀಗ ನಾಯಿ ನಾಲಗೆ ಮೇಲೆ ಮಚ್ಛೆ ಬಿಡಿಸುತ್ತಿರುವ
ನಕಲಿ ಲಿಪಿಕಾರನ ಬದನೆಕಾಯಿಯ ಪ್ರಮೇಯಕ್ಕೆ
ನನ್ನವಿಷ್ಟೇ ಸವಾಲು…

ಅಖಾಡಕ್ಕೆ ಮಣ್ಣು ಹೊತ್ತು ತಂದವರ ಗುಂಪಲ್ಲಿ
ನನ್ನ ಹೆಬ್ಬೆರಳ ನಿಶಾನೆಯನು ಅಳಿಸಿಹಾಕಿದವರಾರು?
ನನ್ನ ಹೆಜ್ಜೆ ಗುರುತಿನ ಕುರಿತು ಮೈಕಿಗಷ್ಟೇ ಕೇಳಿಸುತ್ತಿರುವವನಿಗೆ
ನನ್ನ ನಿಟ್ಟುಸಿರಿನ ಮುಟ್ಟುಗೋಲಿಗೆ ಮುಂದಾದವರ ಸುಳಿವಿಲ್ಲವೇ?
ನನ್ನ ರೆಕ್ಕೆ ಮುರಿದು ಕಿರೀಟಕ್ಕೆ ಗರಿ ಮಾಡಿಕೊಂಡವನಿಗೆ
ಇಷ್ಟಕ್ಕೂ ನಿನ್ನ ಕಟಕಟೆಯಲ್ಲಿ ವಿಚಾರಣೆ ಇದೆಯಾ?

ವಾಲಿ ದೇವನೆ, ಈ ಗರಡಿಮನೆ ಮಣ್ಣಿನ ಮೇಲಾಣೆ
ಮೈದಾನವಾದರೇನು? ರಾಮಲೀಲಾ ಮೈದಾನವಾದರೇನು?
ನಾನೊಂದು ನಿರಾಯುಧ ಕಂಬನಿ ಅಂದುಕೊಂಡವನ 
ತೊಡೆ ಹುಡಿಯಾಗುವ ಕಡೇದಿನ ಬಾರದಿದ್ದರೆ ಕೇಳು  
ನನ್ನೆರಡು ಭುಜಗಳನ್ನು ನಿನ್ನ ಮಟ್ಟಿಗೆ ಅರ್ಪಿಸುತ್ತೇನೆ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಕತೆ ಓದಿದ್ದೀರಾ?: ವಾರಕ್ಕೊಂದು ಕತೆ | ಶಿವಕುಮಾರ ಮಾವಲಿ ಅವರ ‘ಬಾಲ್ಕನಿ ಬೆಡಗಿ’

ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರಳಿಗೆ ಸುತ್ತಿಕೊಂಡ ಇರಾನ್ ಯುದ್ಧ; ಅಮೆರಿಕದಲ್ಲಿ ತೈಲ ಬಿಕ್ಕಟ್ಟು – ಟ್ರಂಪ್ ಜನಪ್ರಿಯತೆಗೆ ಕುತ್ತು

ಟ್ರಂಪ್ ಸೃಷ್ಟಿಸಿದ ಈ ವಿನಾಶಕಾರಿ ಯುದ್ಧದ ಬಿಸಿ ಅಮೆರಿಕದ ಜನಸಾಮಾನ್ಯರ ಬದುಕನ್ನು...

ಮೊಜ್ತಬಾ ಖಮೇನಿ | ತೆರೆಯ ಹಿಂದಿದ್ದ ‘ಗೇಟ್‌ಕೀಪರ್’ ಈಗ ಇರಾನ್‌ನ ಪರಮೋಚ್ಚ ನಾಯಕ

ತಂದೆಯ 'ಸುಪ್ರೀಂ ಲೀಡರ್ ಕಚೇರಿ'ಯ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮೊಜ್ತಬಾ ಅವರು...

ಮಹಿಳಾ ದಿನಾಚರಣೆ ವಿಶೇಷ: ಕಳೆದೆರಡು ದಶಕಗಳಲ್ಲಿ ಕ್ರೀಡಾಂಗಣವನ್ನಾಳಿದ 10 ಭಾರತೀಯ ಮಹಿಳೆಯರು

ಒಂದು ಕಾಲದಲ್ಲಿ ಕ್ರೀಡೆಯೆಂದರೆ ಕೇವಲ ಪುರುಷರ ಸ್ವತ್ತು ಎಂಬ ಅಲಿಖಿತ ನಿಯಮವಿತ್ತು;...