ವಾರದ ಕವಿತೆ – ವಾಣಿ ಸತೀಶ್ | ಮೈ ನೆರೆದ ಆ ದಿನ

Date:

ಜಾವ ಐದರ ಗಳಿಗೆ ಸವಿಗನಸ ನಿದ್ದೆ
ಗೆಳತಿಯರ ಕೂಡಾಟ ನಿದ್ದೆಯಲೂ
ಕೇಕೆ ಕನವರಿಕೆ

ಇದ್ದಕ್ಕಿದ್ದಂತೆ ಸೊಂಟ ಹೊಟ್ಟೆಗಳಲ್ಲಿ
ಚುಳ್ಳನೇ ಚಳುಕೆದ್ದು
ನಿದ್ದೆಯಲೇ ನರಳಿದಳು
ಹದಿಮೂರರ ಪೋರಿ

ಅವ್ವನ ಎದೆ ಮೇಲೆ ಏರಿದ್ದ
ಕಾಲ ಸಂದುಗಳಿಂದ
ತಣ್ಣನೆಯ ಹರಿವು
ಬೆಚ್ಚಿ ಕಣ್ಣು ತೆರೆದಳು ಬಾಲೆ
ಒದ್ದೊದ್ದೆ ಉಡುಪು ಒಳಗೆಲ್ಲ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಓಡಿದಳು ಬಚ್ಚಲಿಗೆ
ಒಳಗೆಲ್ಲ ಕೆಂಪಾಗಿ
ಕಸಿವಿಸಿಯ ಎದೆ ಹೊತ್ತು
ಬಂದು ನಿಂತಳು ಹೆತ್ತವ್ವನೆದುರು

ತನ್ನ ಒಂಟಿ ಬದುಕಿನ ಸುತ್ತ
ಹರಿದಾಡೊ ಕಾಮುಕ ಕಣ್ಣುಗಳ
ಮೆಟ್ಟಿ ನಿಲ್ಲುವುದರಲ್ಲೇ
ಹೈರಾಣವಾಗಿದ್ದ ಅವ್ವ
ನಿದ್ದೆ ಮೆತ್ತಿದ ಕಣ್ಣ ತೆರೆದು
ದಿಂಬಿಗೆ ಮೊಗ ಒತ್ತಿ ಬಿಕ್ಕಿದಳು

ಧರ್ಮಶಾಸ್ತ್ರಕ್ಕೆ ಕೊರಳೊಡ್ಡಿ
ಕಟ್ಟಿಕೊಂಡವನು
ತನ್ನ ಒಳ-ಹೊರಗುಗಳ
ಹಕ್ಕಿನಲೇ ದೋಚಿ
ಎದೆಗೂಡ ಕನಸಿಗೆ ಕೆಂಡದ ಮಳೆ
ಸುರಿದು ಮಕರಂದವರಸಿ
ಹಾರಿಹೋದುದ ನೆನೆದು ಬಿಕ್ಕಿದಳು

ಕೊಟ್ಟವಳು ಕುಲಕೊರಗು
ಎಂದು ಹೊರಗಿಟ್ಟ
ಮನೆ ತುಂಬಿ ತುಳುಕುವ
ಅಣ್ಣ ತಮ್ಮರ ನೆನೆದು
ಬಿಕ್ಕಿದಳು

ಆಳಿಗೊಂದು ಕಲ್ಲೆಸೆದು
ಮೋಜಾಟ ಆಡುವ
ಕಾರುಣ್ಯ ಸತ್ತ ಸಮುದಾಯ
ನೆನೆದು ಬಿಕ್ಕಿದಳು

ಬಿಕ್ಕಿದಳು ಬಿಕ್ಕಿಯೇ ಬಿಕ್ಕಿದಳು
ಘಳಿಗೆಗೊಂದೊಂದು ನಿಟ್ಟುಸಿರ ಬಿಟ್ಟು

ಎಷ್ಟೋ ಸಮಯದ ಬಳಿಕ
ಅವ್ವ ಮೇಲೆದ್ದಳು
ಯುದ್ದಕ್ಕೆ ಸಜ್ಜಾದ ಯೋಧಳಂತೆ

ಬಿಟ್ಟ ನಿಟ್ಟುಸಿರನ್ನೆಲ್ಲ
ನಗುವಾಗಿ ಅರಳಿಸಿ
ಮೈ ದಡವಿ ಹೇಳಿದಳು
‘ನೀನು ದೊಡ್ಡವಳಾದೆ…’
ಹಾಲನ್ನ ನೀಡಿ ಹೂ ಮುತ್ತನಿಟ್ಟಳು

ಮನೆಯ ತುಂಬಿತ್ತು
ಋತುಮತಿಯ ಆರೈಕೆ, ಸಂಭ್ರಮ
ಕಾಸಿಗೆ ಕಾಸು ಜೋಡಿಸಿ
ತುಪ್ಪ, ಕೊಬ್ಬರಿ, ಚಿಗಳಿ, ಬೆಲ್ಲವ ತಂದು
ಹಾಲ್ಗಡಲಲ್ಲಿ ಮುಳುಗಿಸಿ
ಮೇಲೆತ್ತಿದಳು

ಮೊಗ್ಗ ಹೂವಾಗಿಸಿ
ಕಾದೇ ಕಾದಳು ಅವ್ವ
ಹೂತಿಟ್ಟ ನಿಧಿಯ
ಸರ್ಪ ಕಾದಂತೆ…

ಪೋಸ್ಟ್ ಹಂಚಿಕೊಳ್ಳಿ:

ವಾಣಿ ಸತೀಶ್
ವಾಣಿ ಸತೀಶ್
ತುಮಕೂರು ಜಿಲ್ಲೆಯ ತಿಪಟೂರಿನವರು. ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವೀಧರೆ. ನೀನಾಸಂನಿಂದ ರಂಗ ಶಿಕ್ಷಣ. ಸದ್ಯ ತಿಪಟೂರಿನ 'ಭೂಮಿ ಥಿಯೇಟರ್' ಮತ್ತು 'ಶ್ರೀ ನಟರಾಜ ನೃತ್ಯಶಾಲೆ'ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರಳಿಗೆ ಸುತ್ತಿಕೊಂಡ ಇರಾನ್ ಯುದ್ಧ; ಅಮೆರಿಕದಲ್ಲಿ ತೈಲ ಬಿಕ್ಕಟ್ಟು – ಟ್ರಂಪ್ ಜನಪ್ರಿಯತೆಗೆ ಕುತ್ತು

ಟ್ರಂಪ್ ಸೃಷ್ಟಿಸಿದ ಈ ವಿನಾಶಕಾರಿ ಯುದ್ಧದ ಬಿಸಿ ಅಮೆರಿಕದ ಜನಸಾಮಾನ್ಯರ ಬದುಕನ್ನು...

ಮೊಜ್ತಬಾ ಖಮೇನಿ | ತೆರೆಯ ಹಿಂದಿದ್ದ ‘ಗೇಟ್‌ಕೀಪರ್’ ಈಗ ಇರಾನ್‌ನ ಪರಮೋಚ್ಚ ನಾಯಕ

ತಂದೆಯ 'ಸುಪ್ರೀಂ ಲೀಡರ್ ಕಚೇರಿ'ಯ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮೊಜ್ತಬಾ ಅವರು...

ಮಹಿಳಾ ದಿನಾಚರಣೆ ವಿಶೇಷ: ಕಳೆದೆರಡು ದಶಕಗಳಲ್ಲಿ ಕ್ರೀಡಾಂಗಣವನ್ನಾಳಿದ 10 ಭಾರತೀಯ ಮಹಿಳೆಯರು

ಒಂದು ಕಾಲದಲ್ಲಿ ಕ್ರೀಡೆಯೆಂದರೆ ಕೇವಲ ಪುರುಷರ ಸ್ವತ್ತು ಎಂಬ ಅಲಿಖಿತ ನಿಯಮವಿತ್ತು;...