ಮೊಡವೆ ಮುಕ್ತಗೊಳಿಸುತ್ತೇವೆಂದು ಮತ್ತಷ್ಟು ಫಜೀತಿ; ಕ್ಲಿನಿಕ್‌ಗೆ ಡಬಲ್‌ ದಂಡ

Date:

  • ಚಿಕಿತ್ಸಾ ವೆಚ್ಚ ₹30 ಸಾವಿರ ಸೇರಿದಂತೆ ಸಂತ್ರಸ್ತೆ ಪಾವತಿಸಿದ ಹಣ ಹಿಂದಿರುಗಿಸಲು ತಾಕೀತು
  • ₹1,03,633 ಹಣ ವಸೂಲಿ ಮಾಡಿದ್ದ ‘ಪ್ರಭಾಸ್ ವಿ ಕೇರ್ ಹೆಲ್ತ್‌ ಸೆಂಟರ್’ಗೆ ಭಾರೀ ದಂಡ

ಮುಖದಲ್ಲಾಗಿದ್ದ ಮೊಡವೆಗಳನ್ನು ತೆರವುಗೊಳಿಸಲು ಚಿಕಿತ್ಸೆಗೆ ಒಳಗಾಗಿದ್ದ ಯುವತಿಯೊಬ್ಬರು ಚರ್ಮ ಸೋಂಕು ಮತ್ತು ಕೂದಲು ಉದರುವಿಕೆಗೆ ತುತ್ತಾಗಿದ್ದಾರೆ. ಅವರಿಗೆ ಅವ್ಯವಸ್ಥಿತವಾದ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆ ‘ಪ್ರಭಾಸ್ ವಿ ಕೇರ್ ಹೆಲ್ತ್‌ ಸೆಂಟರ್’ ಮುಖ್ಯಸ್ಥರಿಗೆ ಕರ್ನಾಟಕ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗ ಭಾರೀ ದಂಡ ವಿಧಿಸಿದೆ.

28 ವರ್ಷದ ಸಂತ್ರಸ್ತ ಯುವತಿ 2021ರ ಡಿಸೆಂಬರ್ 24ರಂದು ವೈಟ್‌ಫೀಲ್ಡ್ ಮುಖ್ಯ ರಸ್ತೆಯಲ್ಲಿರುವ ‘ವಿ ಕೇರ್ ಹೆಲ್ತ್‌ ಸೆಂಟರ್’ನಲ್ಲಿ ತನ್ನ ಮುಖದ ಮೇಲಿನ ಮೊಡವೆ ತೆಗಿಸಲು ಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲಿನ ವೈದ್ಯರು ‘ಸ್ಟೆಮ್‌ ಸೆಲ್‌ ಚಿಕಿತ್ಸೆ’ ನೀಡುತ್ತೇವೆ, ಆಸ್ಪತ್ರೆಗೆ 10 ಭಾರಿ ಬೇಟಿ ಮಾಡಿ, ಅಷ್ಟೊರೊಳಗೆ ಚಿಕಿತ್ಸೆ ನೀಡಿ, ಮುಖ ತಿಳಿಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು ಅವರ ಮಾತಿನಂತೆ ಯುವತಿ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ವೈದ್ಯರು ನೀಡಿದ ಅವೈಜ್ಞಾನಿಕ ಚಿಕಿತ್ಸೆಯಿಂದಾಗಿ ಯುವತಿ ಚರ್ಮ ಸೋಂಕಿಗೆ ಒಳಗಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದರಿಂದ ಮನನೊಂದ ಮಹಿಳೆ, ಕಾನೂನು ಬಾಹಿರವಾದ ಚಿಕಿತ್ಸೆ ನೀಡಿದ ಕ್ಲಿನಿಕ್ ವಿರುದ್ಧ ಶಾಂತಿನಗರದ ಬಳಿ ಇರುವ ಬೆಂಗಳೂರು 1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ 2022ರ ಆಗಸ್ಟ್‌ನಲ್ಲಿ ದೂರು ನೀಡಿದ್ದರು. ವಿಚಾರಣೆ ನಡೆಸಿದ ಆಯೋಗವು ಮಹಿಳೆಗೆ ಸಂಪೂರ್ಣ ಚಿಕಿತ್ಸೆಯ ವೆಚ್ಚ ₹30 ಸಾವಿರ ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಪಾವತಿಸಿದ್ದ ಇತರ ವೆಚ್ಚವನ್ನು ಹಿಂತಿರಿಗಿಸಲು ಆಸ್ಪತ್ರೆಗೆ ತಾಕೀತು ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು | ಒಂದೇ ದಿನದಲ್ಲಿ 2,151 ಮಂದಿಗೆ ಕೋವಿಡ್ ದೃಢ

ಮೊದಲಿಗೆ ಸಂತ್ರಸ್ತೆ ಚಿಕಿತ್ಸೆಗೆ ಒಳಗಾಗುವ ಮುನ್ನವೇ ₹54,686 ಪಾವತಿಸಿದ್ದರು. ನಂತರ ಆರನೆ ಸಲದ ಭೇಟಿಯೊಳಗೆ ಚಿಕಿತ್ಸೆಗೆ ಒಟ್ಟು ₹1,03,633  ಖರ್ಚಾಗಿತ್ತು. ಅಷ್ಟರಲ್ಲಿ ಮುಖದಲ್ಲಿ ಮೊಡವೆ ಹೆಚ್ಚಳ, ಚರ್ಮ ಸೋಂಕು, ಕೂದಲು ಉದುರುವಿಕೆ ಹಾಗೂ ತಲೆನೋವು ಅಧಿಕಗೊಡಿತ್ತು. ಈ ಬಗ್ಗೆ ವೈದ್ಯರಿಗೆ ತಿಳಿಸಿದರೂ ವೈದ್ಯರು ಗಮನ ಹರಿಸಿರಲಿಲ್ಲ. ವೈದ್ಯರು ಮತ್ತು ಆಸ್ಪತ್ರೆ ಆಡಳಿತದ ವಿರುದ್ಧ ಸಿಟ್ಟಾದ ಯುವತಿ, ‘ವಿಕೇರ್ ಹೆಲ್ತ್ ಕ್ಲಿನಿಕ್‌’ನ ಸಿಇಒ ವಿರುದ್ಧ ದೂರು ನೀಡಿದ್ದರು.

ಆರುತಿಂಗಳ ಕಾಲ ವಿಚಾರಣೆ ನಡೆಸಿದ ಆಯೋಗವು, ವಿಚಾರಣೆಗೆ ಬಾರದ ‘ಪ್ರಭಾಸ್ ವಿ ಕೇರ್ ಹೆಲ್ತ್‌ ಸೆಂಟರ್’ದ ವಿರುದ್ಧ ಆಯೋಗವು ಕಿಡಿಕಾರಿತ್ತು. ಸಂತ್ರಸ್ತೆ ಖರ್ಚು ಮಾಡಿದ್ದ ಹಣ ಮತ್ತು ಮತ್ತಷ್ಟು ಚರ್ಮ ಸೋಂಕಿಗೆ ಒಳಾಗುವಂತೆ ಮಾಡಿದ್ದ ಕಾರಣ ಅದರ ವೆಚ್ಚವನ್ನು ನೀಡಲು ಫೆ.27 ರಂದು ತೀರ್ಪು ನೀಡಿದೆ. ಕರ್ನಾಟಕ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗದ ವೆಚ್ಚ ₹5 ಸಾವಿರ ಸಹ ಕ್ಲಿನಿಕ್ ಪಾವತಿಸಬೇಕಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ರಾಜೀವ್ ಗಾಂಧಿ ವಸತಿ ಪ್ರೌಢಶಾಲೆ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ

ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಬಹಿರ್ದೆಸೆಗೆ ತೆರಳಿದ್ದ 15 ವರ್ಷದ...

ಅಮುಲ್ ಹಾಲಿನಲ್ಲಿ 98 ಪಟ್ಟು, ಮೊಸರಿನಲ್ಲಿ 2,100 ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳಿವೆ: ವರದಿ

ಕನ್ನಡಿಗರ ಮೇಲೆ ಹೇರಲು ಉದ್ದೇಶಿಸಿದ್ದ ಗುಜರಾತ್‌ ಮೂಲದ 'ಅಮುಲ್‌' ಸಂಸ್ಥೆ ಉತ್ಪನ್ನಗಳ...

ದಾವಣಗೆರೆ | ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ಕೈಬಿಡಲು ಆರೋಗ್ಯ ಹಕ್ಕಿನ ಜಾಥಾ

ಸರ್ಕಾರಿ ಜಿಲ್ಲಾ ಆಸ್ಪತ್ರೆಗಳ ಖಾಸಗೀಕರಣ (PPP) ಸಂಪೂರ್ಣವಾಗಿ ಕೈಬಿಡಬೇಕು, ಎಲ್ಲಾ ಸರ್ಕಾರಿ...

ಥೈರಾಯ್ಡ್‌ ಅಂದ್ರೆ ಭಯವೇ? ವೈದ್ಯರು ಏನಂತಾರೆ ಗೊತ್ತಾ?

ದೇಹ ಎಷ್ಟು ಶಕ್ತಿ ಬಳಕೆ ಮಾಡಬೇಕು, ಹೃದಯ ಎಷ್ಟು ವೇಗವಾಗಿ ಬಡಿಯಬೇಕು,...