ಸುದ್ದಿವಿವರ | ಸೊಳ್ಳೆಬತ್ತಿಯ ಹೊಗೆ ತಂಬಾಕಿನಷ್ಟೇ ಹಾನಿಕಾರಕ!

Date:

ಅಕಾಲಿಕವಾಗಿ ಸುರಿದ ಮಳೆಯಿಂದ ಸೊಳ್ಳೆಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಅವುಗಳ ಕಾಟವೂ ಹೆಚ್ಚಾಗಿದೆ. ನಿದ್ದೆ ಮಾಡಲು ಬಿಡುತ್ತಿಲ್ಲ. ಡೆಂಗ್ಯೂ, ಮಲೇರಿಯಾದಿಂದ ದೂರ ಉಳಿಯಲು, ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಲು ಜನರು ಸೊಳ್ಳೆ ಬತ್ತಿ, 'ನೋ ಸ್ಮೋಕ್ ಕಾಯಿಲ್'ಗಳನ್ನು ಬಳಸುತ್ತಿದ್ದಾರೆ. ಆದರೆ, ಅವೆಷ್ಟು ಮಾರಕ ಗೊತ್ತೇ? ಇಲ್ಲಿದೆ ವಿವರ...

ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಬೇಕು. ಸೊಳ್ಳೆ ಕಾಯಿಲ್ ತರಬೇಕು. ಅದೋ ಒಂದು ವಾರಕ್ಕೆ ಮುಕ್ತಾಯ ಆಗುತ್ತೆ. ಹಾಗೆಯೇ ಅದರ ಬೆಲೆ ಬಲು ದುಬಾರಿ ಕೂಡ. ಹೀಗಾಗಿ, ಒಂದು ಡಬ್ಬಿಯಲ್ಲಿ ಐದಾರು ಸುರುಳಿ ಮತ್ತು ಒಂದೆರಡು ವಾರ ಮತ್ತೆ ಮತ್ತೆ ಬಳಸಬಹುದಾದ ಸೊಳ್ಳೆ ಬತ್ತಿ ಬಳಕೆದಾರರು ಹೆಚ್ಚು. ಪ್ರತಿ ನಿತ್ಯ ಸೊಳ್ಳೆ ಬತ್ತಿ ಹೊಗೆ ಉಸಿರಾಡುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುವುದು ಮಾತ್ರ ಖಂಡಿತ. ಅದಲ್ಲದೆ ಇವುಗಳಿಂದ ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (ಸಿಒಪಿಡಿ) ಎದುರಾಗಬಹುದು.

ಸೊಳ್ಳೆ ಬತ್ತಿ ಹೊಗೆ ಎಷ್ಟು ಸಿಗರೇಟ್‌ಗೆ ಸಮ

ಸೊಳ್ಳೆಗಳ ನಾಶಕ್ಕೆ ಬಳಸುವ ಸೊಳ್ಳೆ ಬತ್ತಿಯ ಹೊಗೆಯು ಸಿಗರೇಟ್ ಹೊಗೆಯಷ್ಟೇ ಅಪಾಯಕಾರಿ. ಒಂದು ಸೊಳ್ಳೆ ಸುರುಳಿಯನ್ನು ಸುಡುವುದರಿಂದ ಉತ್ಪತ್ತಿಯಾಗುವ ಕಣಗಳು 75 ರಿಂದ 137 ಸಿಗರೇಟ್‌ಗಳಿಗೆ ಸಮ. ಸೊಳ್ಳೆ ನಿವಾರಕ ಸುರುಳಿಗಳು ಮತ್ತು ಅಗರಬತ್ತಿಗಳಲ್ಲಿ ಕ್ಯಾನ್ಸರ್ ಕಾರಕ ಪದಾರ್ಥಗಳಿವೆ. ಸೊಳ್ಳೆ ಬತ್ತಿಯಹೊಗೆಯು ಸಿಗರೇಟ್‌ಗಳನ್ನು ಉಸಿರಾಡುವುದಕ್ಕೆ ಸಮಾನವಾಗಿರುತ್ತದೆ. ಕ್ವಿಲ್‌ನಲ್ಲಿ ಕಂಡುಬರುವ ಪೈರೆಥ್ರಿನ್ ಒಂದು ಕೀಟನಾಶಕವಾಗಿದ್ದು ಅದು ಶ್ವಾಸಕೋಶವನ್ನು ಹಾನಿಗೊಳಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಒಳಾಂಗಣ ಮಾಲಿನ್ಯ ಅಂದರೇನು?

‘ಬ್ರಿಟಿಷ್ ಜನರಲ್ ಮೆಡಿಕಲ್’ ನಡೆಸಿದ ಅಧ್ಯಯನದ ಪ್ರಕಾರ, 2019ರಲ್ಲಿ ಒಂದು ಲಕ್ಷ ಜನರು ಸಿಒಪಿಡಿಗೆ ಬಲಿಯಾಗಿದ್ದಾರೆ. ಒಳಾಂಗಣ ವಾಯು ಮಾಲಿನ್ಯ ಅಂದರೆ, ಧೂಳು, ಹೊಗೆ, ತಲೆಹೊಟ್ಟು, ಬ್ಯಾಕ್ಟೀರಿಯಾ, ಸೂಕ್ಷ್ಮಜೀವಿಗಳು, ವೈರಸ್‌ಗಳು, ಸೊಳ್ಳೆ ಬತ್ತಿ ಹೊಗೆಯಂತಹ ಹಾನಿಕಾರಕ ಮಾಲಿನ್ಯದಿಂದಾಗಿ ವಿಶ್ವದಾದ್ಯಂತ 4.3 ದಶ ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳುತ್ತದೆ.

ಒಳಾಂಗಣ ಮಾಲಿನ್ಯವು ಮನೆಕೆಲಸ ಮತ್ತು ಮನೆಯಲ್ಲೆ ಹೆಚ್ಚಾಗಿ ತಂಗುವ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಉಸಿರಾಟದ ಕಾಯಿಲೆ ಮತ್ತು ಮರಣದ ಹೆಚ್ಚಳಕ್ಕೂ ಕಾರಣವಾಗುತ್ತದೆ.

ಸೊಳ್ಳೆಬತ್ತಿ ಹೊಗೆ ತಂದೊಡ್ಡುವ ಕಾಯಿಲೆಗಳು?

ಶ್ವಾಸಕೋಶದ ಕ್ಯಾನ್ಸರ್, ವಾಕರಿಕೆ ಮತ್ತು ವಾಂತಿ, ಕೆಮ್ಮುವಿಕೆ, ಅಸ್ತಮಾ, ಶ್ವಾಸಕೋಶದ ಕಾಯಿಲೆ (ಸಿಒಪಿಡಿ), ಪ್ರತಿನಿತ್ಯ ತಲೆನೋವಿಗೆ ಕಾರವಾಗುತ್ತದೆ. ಅಲ್ಲದೆ, ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಸೊಳ್ಳೆಬತ್ತಿಗಳಿಂದ ಗರ್ಭಿಣಿಯರು ದೂರ ಉಳಿಯುವುದು ಅತ್ಯಗತ್ಯ.

ಈ ಸುದ್ದಿ ಓದಿದ್ದೀರಾ?: ತಾಯಿ, ಮಗು ಸಾವು ಸೂಚ್ಯಂಕ; 10 ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ

ಮಸ್ಕಿಟೋ ಕಾಯಿಲ್‌’ ಎಷ್ಟು ಅಪಾಯಕಾರಿ?

‘ನೋ ಸ್ಮೋಕ್ ಕಾಯಿಲ್’ಗಳೂ ಮಾರುಕಟ್ಟೆಗೆ ಬಂದಿವೆ. ಅವುಗಳಲ್ಲಿ ಯಾವುದೇ ಹೊಗೆ ಇಲ್ಲ. ಆದರೆ, ಬಹಳಷ್ಟು ಕಾರ್ಬನ್ ಮಾನಾಕ್ಸೈಡ್ ಬಿಡುಗಡೆಯಾಗುತ್ತದೆ. ಇದು ಶ್ವಾಸಕೋಶವನ್ನು ಹಾನಿಗೊಳಿಸುತ್ತದೆ. ಅಷ್ಟೇ ಅಲ್ಲ, ಮಾರುಕಟ್ಟೆಯಲ್ಲಿ ಸಿಗುವ ಸೊಳ್ಳೆ ನಿವಾರಕ ಯಂತ್ರಗಳು ಆರೋಗ್ಯಕ್ಕೆ ಹಾನಿಕಾರಕ. ಮುಚ್ಚಿದ ಕೋಣೆಯಲ್ಲಿ ಕಾಯಿಲ್‌ಗಳಿಂದ ಹೊರಬರುವ ಹೊಗೆಯನ್ನು ಉಸಿರಾಡುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ.

ಹಾಗಿದ್ದರೆ ಸೊಳ್ಳೆಗಳಿಂದ ಮುಕ್ತಿ ಹೇಗೆ?

ಪ್ರತಿನಿತ್ಯ ಮಲಗುವ ಮುನ್ನ ಬೇವಿನ ಎಣ್ಣೆ ಹಚ್ಚಿ ಮಲಗುವುದು ಉತ್ತಮ. ಇದರಿಂದ ಯಾವುದೇ ಹಾನಿಕಾರಕ ಸಮಸ್ಯೆ ಎದುರಾಗುವುದಿಲ್ಲ. ಹಾಸಿಗೆ ಮೇಲೆ, ಕಿಟಕಿಗಳಿಗೆ ಸೊಳ್ಳೆ ಪರದೆ ಬಳಸುವುದು. ಮನೆ ಮುಂದೆ, ಕುಂಡಗಳಲ್ಲಿ, ಟಬ್‌ಗಳಲ್ಲಿ ಮೂರು ದಿನಕ್ಕಿಂತ ಹೆಚ್ಚಿನ ದಿನ ನೀರು ಸಂಗ್ರಹವಾಗಿರದಂತೆ ಕಾಪಾಡಿಕೊಳ್ಳುವುದು. ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸುವುದು ಅಗತ್ಯವಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ರಾಜೀವ್ ಗಾಂಧಿ ವಸತಿ ಪ್ರೌಢಶಾಲೆ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ

ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಬಹಿರ್ದೆಸೆಗೆ ತೆರಳಿದ್ದ 15 ವರ್ಷದ...

ಅಮುಲ್ ಹಾಲಿನಲ್ಲಿ 98 ಪಟ್ಟು, ಮೊಸರಿನಲ್ಲಿ 2,100 ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳಿವೆ: ವರದಿ

ಕನ್ನಡಿಗರ ಮೇಲೆ ಹೇರಲು ಉದ್ದೇಶಿಸಿದ್ದ ಗುಜರಾತ್‌ ಮೂಲದ 'ಅಮುಲ್‌' ಸಂಸ್ಥೆ ಉತ್ಪನ್ನಗಳ...

ದಾವಣಗೆರೆ | ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ಕೈಬಿಡಲು ಆರೋಗ್ಯ ಹಕ್ಕಿನ ಜಾಥಾ

ಸರ್ಕಾರಿ ಜಿಲ್ಲಾ ಆಸ್ಪತ್ರೆಗಳ ಖಾಸಗೀಕರಣ (PPP) ಸಂಪೂರ್ಣವಾಗಿ ಕೈಬಿಡಬೇಕು, ಎಲ್ಲಾ ಸರ್ಕಾರಿ...

ಥೈರಾಯ್ಡ್‌ ಅಂದ್ರೆ ಭಯವೇ? ವೈದ್ಯರು ಏನಂತಾರೆ ಗೊತ್ತಾ?

ದೇಹ ಎಷ್ಟು ಶಕ್ತಿ ಬಳಕೆ ಮಾಡಬೇಕು, ಹೃದಯ ಎಷ್ಟು ವೇಗವಾಗಿ ಬಡಿಯಬೇಕು,...