ಚಳಿಗಾಲದಲ್ಲಿ ಆರೋಗ್ಯ ಕಾಪಾಡುವ ಸವಾಲು; ಮುನ್ನೆಚ್ಚರಿಕೆಯೇ ಮದ್ದು

Date:

ತಾಪಮಾನ ಕುಸಿತದ ಜೊತೆಗೆ ಆರೋಗ್ಯದ ಸವಾಲನ್ನೂ ಹೊತ್ತು ತರುವ ಋತು ಚಳಿಗಾಲ. ಸಾಮಾನ್ಯವಾಗಿ ಚಳಿಗಾಲ ನವೆಂಬರ್‌ ಮಾಹೆಯಿಂದ ಶುರುವಾಗಿ ಫೆಬ್ರವರಿ ಅಂತ್ಯದವರೆಗೂ ಇರುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಾನವನ ಅತಿಯಾದ ಚಟುವಟಿಕೆಯಿಂದ ಕಾಲಗಳಲ್ಲಿ ಅನಿಯಮಿತತೆ ಕಂಡುಬರುತ್ತಿದೆ. ಬಂದರೆ ಮಳೆ, ಚಳಿ, ಬಿಸಿಲೂ ಎಲ್ಲವೂ ಅತಿಯಾಗಿ ಬರುತ್ತದೆ. ಈ ವರ್ಷ ಚಳಿ ಹೆಚ್ಚಿರಬಹುದು ಎನ್ನುವ ತಜ್ಞರ ಅಭಿಪ್ರಾಯಗಳೂ ವ್ಯಕ್ತವಾಗಿವೆ. ಚಳಿಗಾಲದಲ್ಲಿ ಕಾಡುವ ಶೀತ, ಜ್ವರ, ಒಣ ತ್ವಚೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಮುನ್ನೆಚ್ಚರಿಕೆ ಹೇಗಿರಬೇಕು? ಚಿಕಿತ್ಸೆ ಹೇಗೆ? ತಜ್ಞರ ಸಲಹೆಗಳೇನು? ಎನ್ನುವುದನ್ನು ತಿಳಿದುಕೊಳ್ಳುವುದು ಸೂಕ್ತ.

ಚಳಿಗಾಲದ ಸಾಮಾನ್ಯ ಆರೋಗ್ಯ ಸಮಸ್ಯೆಗಳು

ಗಂಟಲು ನೋವು: ಗಂಟಲಿನ ಹಿಂಭಾಗದಲ್ಲಿರುವ ಅಂಡಾಕಾರದ ಅಂಗಾಂಶ (ಟಾನ್ಸಿಲ್) ಸೋಂಕಿಗೆ ಒಳಗಾಗಿ ಉರಿಯುವ ಸ್ಥಿತಿ. ಸಾಮಾನ್ಯವಾಗಿ, ವೈರಸ್‌ಗಳಿಂದ ಉಂಟಾಗುವ ಸೋಂಕುಗಳು ಇದಕ್ಕೆ ಕಾರಣವಾಗುತ್ತವೆ.
ನೆಗಡಿ: ಇದು ರೈನೋವೈರಸ್‌ನಿಂದ ಉಂಟಾಗುತ್ತದೆ. ಶೀತ ಗಾಳಿಯಿಂದ ಉಂಟಾಗುವ ಶುಷ್ಕತೆಯಿಂದಾಗಿ ದೇಹದಲ್ಲಿ ಈ ವೈರಸ್ ಅಭಿವೃದ್ಧಿ ಹೊಂದುತ್ತದೆ.
ಬ್ರಾಂಕೈಟಿಸ್/ಶ್ವಾಸನಾಳದ ಉರಿಯೂತ: ತಂಪಾದ ಗಾಳಿಯು ಶ್ವಾಸನಾಳದ ಕೊಳವೆಗಳನ್ನು ಒಣಗಿಸುತ್ತದೆ. ಅವು ಸೂಕ್ಷ್ಮಜೀವಿಗಳ ದಾಳಿಗೆ ಗುರಿಯಾಗುವಂತೆ ಮಾಡುತ್ತದೆ. ಈ ಸೂಕ್ಷ್ಮಜೀವಿಗಳು ನಾಳಗಳನ್ನು ಉಬ್ಬಿಸುತ್ತವೆ, ಇದರಿಂದಾಗಿ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ. ಸೂಕ್ಷ್ಮಜೀವಿಗಳ ಹೊರತಾಗಿ, ಧೂಳು, ಹೊಗೆ ಮತ್ತು ರಾಸಾಯನಿಕ ಹೊಗೆ (ವಿಶೇಷವಾಗಿ ಬಣ್ಣ ಮತ್ತು ವಾರ್ನಿಷ್‌ಗಳಿಂದ) ಯಂತಹ ಕೆಲವು ಅಲರ್ಜಿಗಳು ಸಹ ಶ್ವಾಸನಾಳದ ಕೊಳವೆಗಳಲ್ಲಿ ಉರಿಯೂತವನ್ನು ಉಂಟುಮಾಡುತ್ತವೆ.
ನ್ಯುಮೋನಿಯಾ: ಇದೊಂದು ಶ್ವಾಸಕೋಶದ ಗಂಭೀರ ಸಮಸ್ಯೆ. ಇದು ಸಾಮಾನ್ಯವಾಗಿ ಎದೆ ನೋವು, ಜ್ವರ, ಬೆವರು, ಉಸಿರಾಟದ ತೊಂದರೆ, ಅತಿಸಾರದೊಂದಿಗೆ ತೀವ್ರವಾದ ಕೆಮ್ಮಿಗೂ ಕಾರಣವಾಗಬಹುದು. ಕೆಲವು ಬಾರಿ ಉಸಿರಾಟದ ವೈಫಲ್ಯಕ್ಕೆ ಕಾರಣವಾಗಬಹುದು.
ಕೀಲು ನೋವು: ಮಧ್ಯವಯಸ್ಸಿನಿಂದ ವೃದ್ಧಾಪ್ಯದವರಲ್ಲಿ ಈ ಸಮಸ್ಯೆ ಹೆಚ್ಚು. ಬಿಗಿತ ಮತ್ತು ಸಂಧಿವಾತದ ರೂಪದಲ್ಲಿ ಕಾಣಿಸುತ್ತದೆ.
ಶುಷ್ಕ ತ್ವಚೆ: ಹಿಮ ತುಂಬಿದ ಗಾಳಿಯಿಂದ ತ್ವಚೆಯಲ್ಲಿನ ತೇವಾಂಶ ನಾಶವಾಗಿ ಚರ್ಮ ಒಣಗುತ್ತದೆ. ಹಿಮ್ಮಡಿ, ತುಟಿ ಒಡೆದು ನೋವು, ರಕ್ತಸ್ರಾವವೂ ಆಗಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತಡೆಗಟ್ಟುವ/ ಚಿಕಿತ್ಸೆ, ಆಹಾರ ಕ್ರಮ ಹೀಗಿರಲಿ…

ಚಳಿಗಾಲದಲ್ಲಿ ದೇಹದ ಉಷ್ಣತೆ ಸಹಜವಾಗಿ ಕಡಿಮೆಯಾಗುವುದರಿಂದ ಆಹಾರದಿಂದ ಹಿಡಿದು ದೈನಂದಿನ ಚಟುವಟಿಕೆಗಳವರೆಗೆ ಕೆಲವು ಬದಲಾವಣೆಗಳ ಅಗತ್ಯವಿರುತ್ತದೆ. ಈ ಋತುವಿನಲ್ಲಿ ಎಳ್ಳು-ಬೆಲ್ಲ, ಬಿಸಿ ಸೂಪುಗಳು, ತುಪ್ಪವಿರುವ ಉಷ್ಣ ಆಹಾರಗಳ ಸೇವನೆ ಉತ್ತಮ. ಅದರಿಂದ ದೇಹಕ್ಕೆ ಬೇಕಾದಷ್ಟು ಶಕ್ತಿ ಮತ್ತು ಬೆಚ್ಚಗಿನ ಅನುಭವ ಸಿಗುತ್ತದೆ. ದಾಹ ಕಡಿಮೆಯಿದ್ದರೂ ರೂಢಿಯಿರುವಷ್ಟು ನೀರು, ಸೀಸನ್‌ನಲ್ಲಿ ಸಿಗುವ ಹಣ್ಣು, ತರಕಾರಿಗಳ ಸೇವನೆ ಉತ್ತಮ. ನಿಂಬೆ, ಕಿತ್ತಳೆ, ಸೀತಾಫಲಗಳಲ್ಲಿ ವಿಟಮಿನ್ C ಹೇರಳವಾಗಿದ್ದು, ಶೀತ ಜ್ವರ ತಡೆಯುತ್ತದೆ. ಬಾದಾಮಿ, ಗೋಡಂಬಿ ಸೇರಿದಂತೆ ಡ್ರೈ ಹಣ್ಣು ಹಾಗೂ ಬೀಜಗಳು ದೇಹಕ್ಕೆ ಉತ್ತಮ ಕೊಬ್ಬು ಮತ್ತು ಶಕ್ತಿ ನೀಡುತ್ತವೆ. ಇದು ದೇಹವನ್ನು ಹೈಡ್ರೇಟ್‌ ಆಗಿಡಲು ಸಹಕಾರಿಯಾಗುತ್ತದೆ. ಚಯಾಪಚಯ ಕ್ರಿಯೆಗೂ ಪೂರಕ. ಚರ್ಮದ ಆರೈಕೆಗೆ ಎಳ್ಳೆಣ್ಣೆ ಸ್ನಾನ, ಉತ್ತಮ ಗುಣಮಟ್ಟದ ಸಾಬೂನು ಬಳಕೆ, ನೈಸರ್ಗಿಕ ಲೇಪ ಇವು ಚರ್ಮ ಒಣಗುವಿಕೆ ಮತ್ತು ಬಿರುಕುಗಳನ್ನು ತಡೆಯಲು ಸಹಕಾರಿಯಾಗುತ್ತವೆ. ಜೊತೆಗೆ ಸಂಪೂರ್ಣ ಮೈ ಮುಚ್ಚುವ ಬೆಚ್ಚಗಿನ ಬಟ್ಟೆ, ಕಿವಿ ರಕ್ಷಣೆ, ಬೂಟು ಮತ್ತು ಸ್ವಚ್ಛ ಸಾಕ್ಸ್ ಬಳಸುವುದು ತಂಪಿನಿಂದ ಉಂಟಾಗುವ ಉಸಿರಾಟ ಮತ್ತು ನರಸಂಬಂಧಿ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಅನಾರೋಗ್ಯ ತಡೆಗಟ್ಟುವ ದೃಷ್ಟಿಯಿಂದ ಯೋಗ, ಸೂರ್ಯನಮಸ್ಕಾರ ಮತ್ತು ಧ್ಯಾನ ಚಳಿಗಾಲದ ಉತ್ತಮ ವ್ಯಾಯಾಮಗಳಾಗಿವೆ. ಇವು ರಕ್ತಸಂಚಾರ ಸುಧಾರಿಸಿ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ದಿನಕ್ಕೆ ಕನಿಷ್ಠ 15 ನಿಮಿಷ ಸೂರ್ಯನ ಬೆಳಕಿನಲ್ಲಿ ಕಳೆಯುವುದರಿಂದ ವಿಟಮಿನ್ D ದೊರೆಯುತ್ತದೆ. ಇದು ಎಲುಬು–ಸಂಧಿಗಳ ಆರೋಗ್ಯಕ್ಕೆ ಅಗತ್ಯ. ಯಾವುದೇ ಆಹಾರ, ಉತ್ಪನ್ನ ಅಥವಾ ಮನೆಮದ್ದುಗಳ ಬಳಕೆಯಲ್ಲಿ ಇತಿಮಿತಿ ಕಾಪಾಡುವುದು ಮುಖ್ಯ. ಚಳಿಗಾಲದ ಪದ್ಧತಿಗಳನ್ನು ಬೇಸಿಗೆಯಲ್ಲೂ ಅದೇ ರೀತಿಯಲ್ಲಿ ಮುಂದುವರಿಸುವುದು ದೇಹಕ್ಕೆ ತೊಂದರೆ ಉಂಟುಮಾಡಬಹುದು. ಉತ್ಪನ್ನಗಳನ್ನು ಖರೀದಿಸುವಾಗ ಜಾಹೀರಾತುಗಳ ಸುಳ್ಳು ಭರವಸೆಗಳಿಗೆ ಮಾರುಹೋಗದೇ ಇರುವುದೂ ಕೂಡ ಸುರಕ್ಷಿತ ಜೀವನಶೈಲಿಯ ಒಂದು ಭಾಗ. ಚಳಿಗಾಲದ ಈ ಸರಳ ಕ್ರಮಗಳು ದೊಡ್ಡ ಸಮಸ್ಯೆಗಳನ್ನು ತಡೆಯಲು ಸಾಕಷ್ಟು ಪರಿಣಾಮಕಾರಿ. ಈ ಮಾಹಿತಿ ಮಾರ್ಗದರ್ಶನಕ್ಕಾಗಿ ಇದ್ದರೂ ಯಾವುದೇ ಕ್ರಮ ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಕಡ್ಡಾಯ.

ಈದಿನಕ್ಕೆ ಪ್ರತಿಕ್ರಿಯಿಸಿದ ಫಿಸಿಷಿಯನ್‌ ಡಾ. ಮಹೇಶ್‌, “ಚಳಿಗಾಲದ ತೀವ್ರತೆ ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದಲ್ಲಿ ಹೆಚ್ಚಿರುತ್ತದೆ. ಹೋಲಿಕೆಯಲ್ಲಿ ಕರ್ನಾಟಕದಲ್ಲಿ ಚಳಿ ಕಡಿಮೆ. ಆದರೂ ಋತುಮಾನಕ್ಕೆ ತಕ್ಕ ಮುಂಜಾಗ್ರತೆಗಳು ಅವಶ್ಯಕ. ವಯಸ್ಸಾದವರಲ್ಲಿ ಚಳಿಗಾಲದ ಸಮಸ್ಯೆಗಳು ಬಾಧಿಸುವುದು ಹೆಚ್ಚು. ಹಾಗಾಗಿ ಚಳಿಗಾಲಕ್ಕೂ ಮೊದಲೇ ಅವರಿಗೆ ಫ್ಲೂ ವ್ಯಾಕ್ಸಿನ್‌ ಕೊಡಿಸುವುದು ಸೂಕ್ತ. ಮಕ್ಕಳನ್ನು ಹಾಗೂ ವೃದ್ಧರನ್ನು ಸೀಸನಲ್ ಫ್ಲೂ (ಇನ್‌ಫ್ಲುಯೆಂಜಾ) ನಿಂದ ರಕ್ಷಿಸಲು ಬೆಚ್ಚಗಿನ ಕೊಠಡಿಗಳಲ್ಲಿ ಮಲಗುವುದು, ಬೆಚ್ಚಗಿನ ತುಂಬು ಬಟ್ಟೆಗಳನ್ನು ತೊಡುವುದು, ಹೆಚ್ಚು ನೀರು ಕುಡಿಯುವುದು, ಶೀತ ಗಾಳಿಗೆ ಮೈಯೊಡ್ಡುವುದನ್ನು ನಿಯಂತ್ರಿಸುವ ಅಭ್ಯಾಸ ಮಾಡಿಕೊಳ್ಳಬೇಕು” ಎಂದರು.

ಇದನ್ನೂ ಓದಿ ಮದುವೆ-ಉದ್ಯೋಗ: ಯುವಜನತೆಯ ಗೊಂದಲ, ಆಶಯಗಳೇನು?

ಮಾನವನ ದೇಹಕ್ಕೆ, ಜೀವನಶೈಲಿಗೆ ಚಳಿಗಾಲ ಒಂದು ಸವಾಲಿನ ಋತುವಾದರೂ ಇದು ಪ್ರಕೃತಿಯ ನಿತ್ಯಚಕ್ರ. ದೇಹದ ಉಷ್ಣತೆ ಕುಸಿಯುತ್ತಿದ್ದಂತೆ ದೇಹದಲ್ಲಿನ ರೋಗನಿರೋಧಕ ಶಕ್ತಿ ಕುಂದುವುದು ಸಹಜ. ಸರಿಯಾದ ಆಹಾರ ಸೇವನೆ, ವ್ಯಾಯಾಮ, ಉಣ್ಣೆ ಬಟ್ಟೆಗಳ ಬಳಕೆ, ಸ್ವಚ್ಛತೆ ಮತ್ತು ಸೂರ್ಯನ ಬೆಳಕಿನ ಸರಿಯಾದ ಬಳಕೆ. ಇವೆಲ್ಲವೂ ಸೇರಿ ಚಳಿಗಾಲವನ್ನು ಆರಾಮದಾಯಕ ಮತ್ತು ಆರೋಗ್ಯಕರವಾಗಿಸಬಹುದು. ಆಗ ಯಾವ ಆತಂಕ ಭಯವಿಲ್ಲದೆ ಚಳಿಯನ್ನೂ ಆಹ್ಲಾದಿಸಬಹುದು. ತಜ್ಞರ ಸಲಹೆಗಳ ಪ್ರಕಾರ ಮೊದಲೇ ಸಣ್ಣ ಸಣ್ಣ ಮುಂಜಾಗ್ರತೆಗಳನ್ನು ಅನುಸರಿಸುವುದರಿಂದ ಸಮಸ್ಯೆ ಬಂದಾಗ ಒದ್ದಾಡುವುದನ್ನು ತಪ್ಪಿಸಬಹುದು.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...