ಅರವತ್ತರ ಹರೆಯದಲ್ಲಿ ಹಾರ್ಮೋನಿಯಂ ಹಿಡಿದು ಬದುಕು ಕಟ್ಟಿಕೊಳ್ಳುತ್ತಿರುವ ಕಲಾವಿದ: ನೆರವು ನೀಡಬಹುದೇ?

Date:

ಬೆಂಗಳೂರು ಮೂಲದ ಹಿರಿಯ ಸಂಗೀತ ಕಲಾವಿದರೊಬ್ಬರು, ‘ಸೌಂಡ್ ಆಫ್ ಮೆಲೋಡಿ’ ಆರ್ಕೆಸ್ಟ್ರಾದಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕೋವಿಡ್ ಕಾಲಘಟ್ಟದಲ್ಲಿ ಕಲೆಗೂ, ಕಸುವಿಗೂ ಕೆಲಸವಿಲ್ಲದಾಗ, ಇವರ ಕೆಲಸಕ್ಕೂ ಬಿಸಿ ತಟ್ಟಿತ್ತು.

ಸುಮಾರು 65 ವರ್ಷದ ಎಂ. ಬಸವರಾಜು ಎಂಬ ಹಿರಿಯ ಕಲಾವಿದರಾದ ಇವರು, ‘ಶ್ರೀ ಪಾತಾಳೇಶ್ವರ ಸಾಂಸ್ಕೃತಿಕ ಕಲಾ ಟ್ರಸ್ಟ್’ ಎಂಬ ಸಂಸ್ಥೆಯೊಂದನ್ನು ಕಟ್ಟಿದರು. ಈಗ ತಮ್ಮ ಕಲೆಯನ್ನೇ ಆಧಾರವಾಗಿಟ್ಟುಕೊಂಡು ಮನೆ ಮನೆಗೆ ತೆರಳಿ ಹಾರ್ಮೋನಿಯಂ ನುಡಿಸುತ್ತಾರೆ. ಸರ್ಕಾರದಿಂದ 5 ಲಕ್ಷದವರೆಗೆ ಪ್ರೋತ್ಸಾಹ ಧನ ಹಾಕಿಸುತ್ತೇನೆ ಎಂದು ಹೇಳಿದ ರಾಮನಗರದ ಚಕ್ಕೆರೆ ಲೋಕೇಶ್‌ ಎಂಬುವವರ ಮಾತು ನಂಬಿ ಟ್ರಸ್ಟನ್ನೇನೋ ಕಟ್ಟಿದರು. ಆದರೆ, ಹಣ ಹಾಕಿಸುವುದಿರಲಿ, ಇವರ ಫೋನ್‌ ಕರೆಗೂ ಸಿಗದೇ ನುಣುಚಿಕೊಳ್ಳುತ್ತಿದ್ದಾರೆ ಲೋಕೇಶ್. ಅಲ್ಲದೇ ಭರವಸೆ ಕೊಟ್ಟು ಅವರಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ಹಣ ಪಡೆದು ವಂಚಿಸಿದ್ದಾರೆ. ಈಗ ಹಣವೂ ಇಲ್ಲ, ಅಲ್ಲೊಂದು ಇಲ್ಲೊಂದು ಸಿಗುತ್ತಿದ್ದ ಕೆಲಸವೂ ಇಲ್ಲ ಎನ್ನುವಂತಾಗಿದೆ ಬಸವರಾಜು ಅವರ ಪರಿಸ್ಥಿತಿ.

ಅವರ ಪರಿಸ್ಥಿತಿಯನ್ನು ಅವರ ಬಾಯಿಂದಲೇ ಕೇಳುವುದಾದರೆ…

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಹೆಂಡತಿಗೆ ಹಾರ್ಟ್‌ ಸರ್ಜರಿಯಾಗಿದೆ. ಅವರ ಆರೋಗ್ಯ ನಿರ್ವಹಣೆಗಾಗಿ ಪ್ರತಿ ತಿಂಗಳು ಹಣ ಕಳಿಸಬೇಕು. ಆದರೆ ಕೈಯಲ್ಲಿ ಕೆಲಸವಿಲ್ಲ. ಲಕ್ಷಾಂತರ ರೂ ಸಾಲ ಮಾಡಿಕೊಂಡಿದ್ದೇನೆ. ಸಾಲ ಮಾಡಿಕೊಳ್ಳುವ ಅಗತ್ಯವೇನಿತ್ತು ಎಂದು ಮಗ ದೂರ ಇಟ್ಟಿದ್ದಾನೆ. ಸಂಕಷ್ಟದ ಸಮಯದಲ್ಲಿ ನನ್ನ ಬಳಿ ಇದ್ದ ಕೀಬೋರ್ಡ್‌ ಅನ್ನು ಅರ್ಧ ರೇಟಿಗೆ ಮಾರಿಬಿಟ್ಟೆ. ಯಾರ ಬಳಿಯೂ ಕೈಯೊಡ್ಡಿ ಬೇಡುವುದಿಲ್ಲ. ಮನೆ ಮನೆಗೆ ತೆರಳಿ ಹಾರ್ಮೋನಿಯಂ ನುಡಿಸುತ್ತೇನೆ. ನನ್ನ ಕಲೆಯನ್ನು ಮೆಚ್ಚಿ ಸಂಗೀತ ಪ್ರಿಯರು ಕೊಟ್ಟ ಅಷ್ಟೋ ಇಷ್ಟೋ ಹಣದಲ್ಲಿ ಜೀವನ ಸಾಗಿಸುತ್ತಿದ್ದೇನೆ. ಸಣ್ಣ ಪುಟ್ಟ ಕಾರ್ಯಕ್ರಮಗಳಿಗೆ ಕರೆಯುತ್ತಾರೆ. ಅಲ್ಲೆಲ್ಲ ಒಂದಷ್ಟು ಸಂಪಾದನೆಯಾಗುತ್ತೆ.

“ಗಣೇಶ ಉತ್ಸವ, ಆರ್ಕೆಸ್ಟ್ರಾಗಳು, ಜಯಂತಿಗಳಲ್ಲಿ ಕೂಡ ಕೆಲಸ ಮಾಡಿದ್ದೇನೆ. ಈಗ ದಿನಕ್ಕೆ ಸುಮಾರು 300 ರಿಂದ 400 ರೂ ಸಂಪಾದನೆ ಆದರೆ ಅದೇ ಹೆಚ್ಚು. ಅದರಲ್ಲೇ ಹೆಂಡತಿ ಔಷಧಿಗೆ, ಊಟ ಬಟ್ಟೆಗೆ ಸರಿ ಹೋಗುತ್ತದೆ. ಇರಲು ಮನೆಯೂ ಇಲ್ಲ. ದೇವಸ್ತಾನಗಳಲ್ಲಿ ಮಲಗಿ ದಿನ ದೂಡುತ್ತಿದ್ದೇನೆ. ಸಂಪಾದನೆಯ ಮೂರು ಕಾಸು ಜೀವನಕ್ಕೇ ಸರಿ ಹೋಗುತ್ತಿದೆ. ಸಾಲ ತೀರಿಸಲು ಆಗುತ್ತಿಲ್ಲವಲ್ಲ ಎಂಬುದಷ್ಟೇ ನೋವು” ಎನ್ನುತ್ತಾರವರು.

“ನನ್ನ ನಂಬಿ ಕೆಲವರು ಸಾಲದ ರೂಪದಲ್ಲಿ ಹಣ ಕೊಟ್ಟಿದ್ದಾರೆ. ಅದೇ ರೀತಿ ನಾನೂ ಕೂಡ ಅವರ ಹಣ ಹಿಂತಿರುಗಿಸಿ ಸಾಲ ತೀರಿಸಬೇಕೆನ್ನುವುದಷ್ಟೇ ಹಂಬಲ” ಎಂದು ಕಣ್ಣೀರು ಹಾಕುತ್ತಾರೆ ಬಸವರಾಜು.

ಹಾಗಿದ್ದರೂ, ಅವರ ಆತ್ಮಾಭಿಮಾನ ಕಡಿಮೆಯಾಗಿಲ್ಲ. ಯಾರನ್ನೂ ಬೇಡಿ ಕೇಳುವುದಿಲ್ಲ. ಮನೆ ಮನೆಗೆ ಹೋಗಿ ಹಾರ್ಮೋನಿಯಂ ನುಡಿಸುತ್ತಾರೆ. ಕೊಟ್ಟದ್ದನ್ನಷ್ಟೇ ಪಡೆದು ಹಿಂತಿರುಗುತ್ತಾರೆ. ಬಸವರಾಜು ಅವರ ಕಥೆ, ಕೇವಲ ಒಬ್ಬ ಕಲಾವಿದನ ಕಷ್ಟದ ಕತೆಯಲ್ಲ. ಇಂತಹವರ ಆತ್ಮಸ್ಥೈರ್ಯ, ಶ್ರದ್ಧೆ, ಮತ್ತು ಸ್ವಾಭಿಮಾನದ ಹೆಜ್ಜೆಗಳು ಸುಗಮವಾಗಿ ಸಾಗಬೇಕಾದರೆ ಅವರಿಗೆ ನೆರವಿನ ಅಗತ್ಯವಿದೆ.

ಮೊ.ಸಂ: 96113 45629
ಎಂ. ಬಸವರಾಜು
ಹಿರಿಯ ಹಾರ್ಮೋನಿಯಂ ಕಲಾವಿದ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...