ಧರ್ಮ ಮೀರಿ ದೇಶ ಕಟ್ಟಿದ ಆಜಾದ್‌ ಅವರ ಚಿಂತನೆ ಇಂದಿಗೂ ಪ್ರಸ್ತುತ: ಡಾ. ಎ ನಾರಾಯಣ

Date:

“ಮೌಲಾನಾ ಆಜಾದ್‌ ಧರ್ಮನಿರಪೇಕ್ಷ ಭಾರತ ನಿರ್ಮಾಣದಲ್ಲಿ ಬದ್ಧರಾಗಿದ್ದರು. ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಆಗಬಾರದು ಎಂದು ಅವರು ತೀವ್ರವಾಗಿ ವಿರೋಧಿಸಿದರು. ಮುಸ್ಲಿಮರು ಈ ದೇಶದ ಅವಿಭಾಜ್ಯ ಅಂಗವೆಂದು ಬೋಧಿಸಿದರು. ವಿಭಜನೆಯಿಂದ ಎರಡೂ ದೇಶಗಳ ಅಲ್ಪಸಂಖ್ಯಾತರು ಶಾಶ್ವತ ಅಸುರಕ್ಷತೆ ಅನುಭವಿಸುತ್ತಾರೆ ಎಂದು ಅವರು ಮುಂಚಿತವಾಗಿಯೇ ಎಚ್ಚರಿಸಿದ್ದರು”ಎಂದು ಅಜಿತ್ ಪ್ರೇಮ್‌ಜೀ ಫೌಂಡೇಶನ್‌ನ ಪ್ರಾಧ್ಯಾಪಕ, ರಾಜಕೀಯ ವಿಶ್ಲೇಷಕ ಮತ್ತು ಅಂಕಣಕಾರ ಡಾ ಎ ನಾರಾಯಣ ಅಭಿಪ್ರಾಯಪಟ್ಟರು.

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ಇಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ದಿನದಲ್ಲಿ ಮಾತನಾಡಿದ ಅವರು, “ಆಜಾದ್‌ ಅವರು ಭಾರತದ ಮೊದಲ ಶಿಕ್ಷಣ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ತಾಂತ್ರಿಕ ಮತ್ತು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಐಐಟಿಗಳು, ಯೂನಿವರ್ಸಿಟಿ ಗ್ರಾಂಟ್ ಕಮಿಷನ್ (UGC), ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ICCR), ಕೇಂದ್ರ ಸಾಹಿತ್ಯ, ಸಂಗೀತ ನಾಟಕ ಮತ್ತು ಲಲಿತಕಲಾ ಅಕಾಡೆಮಿಗಳ ಸ್ಥಾಪನೆಯಲ್ಲಿ ಅವರು ಮುಂಚೂಣಿಯಲ್ಲಿದ್ದರು. ಇಂದಿನ ತಾಂತ್ರಿಕ ಭಾರತಕ್ಕೆ ಅಂದಿನ ಕಾಲದಲ್ಲೇ ಬುನಾದಿ ಹಾಕಿದವರು ಮೌಲಾನಾ ಆಜಾದ್‌” ಎಂದರು.

“ಜಾತಿ, ಧರ್ಮಗಳ ಎಲ್ಲೆ ಮೀರಿ ಈ ದೇಶದ ಶಿಕ್ಷಣ ವ್ಯವಸ್ಥೆ ಕಟ್ಟಿದ ಮಹಾನ್‌ ನಾಯಕ ಮೌಲಾನಾ ಅಬುಲ್‌ ಕಲಾಂ ಆಜಾದ್‌ ಅವರ ಚಿಂತನೆಗಳು ಇಂದಿಗೂ ಪ್ರಸ್ತುತ. ಮೌಲಾನಾ ಅಬುಲ್ ಕಲಾಂ ಆಜಾದ್‌ ಅವರ ಕತೆ ಈ ದೇಶದ ಸ್ವಾತಂತ್ರ್ಯ ಹೋರಾಟದ ಕಥೆಯೇ ಆಗಿದೆ. ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಭಾರತದ ಶಿಕ್ಷಣ ವ್ಯವಸ್ಥೆಯ ಶಿಲ್ಪಿ ಅವರು. ಆಜಾದ್‌ ಅವರ ಜೀವನ ಗಾಥೆಯನ್ನು ಎರಡು ಆಯಾಮಗಳಿಂದ ಓದಬಹುದು. ಒಂದು- ಸ್ವಾತಂತ್ರ್ಯ ಹೋರಾಟದ ನಾಯಕತ್ವ; ಇನ್ನೊಂದು- ಸ್ವಾತಂತ್ರ್ಯಾನಂತರ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಅವರ ಕೌಶಲ್ಯ. ʼಗಾಂಧಿʼ ಸಿನಿಮಾದಲ್ಲಿ ಗಾಂಧಿ, ನೆಹರು, ಪಟೇಲ್ ಹಾಗೂ ಆಜಾದ್‌ ಅವರ ಪಾತ್ರ ಕಾಣಸಿಗುವುದು ಸಾಂಕೇತಿಕವಲ್ಲ. ಅದು ಸ್ವಾತಂತ್ರ್ಯ ಸಂಗ್ರಾಮದ ನಾಲ್ಕು ಗಾಲಿಗಳಲ್ಲಿ ಒಬ್ಬರಾಗಿದ್ದ ಆಜಾದ್‌ ಅವರ ಇತಿಹಾಸಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ” ಎಂದು ವಿಶ್ಲೇಷಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2025 11 11 at 4.43.05 PM
ಮೌಲಾನಾ ಅಬುಲ್‌ ಕಲಾಂ ಆಜಾದ್

“1889ರಲ್ಲಿ ಜನಿಸಿದ ಆಜಾದ್‌ ಕೇವಲ 17ನೇ ವಯಸ್ಸಿನಲ್ಲಿ ಬಂಗಾಳ ವಿಭಜನೆ ವಿರುದ್ಧ ಸಿಡಿದಿದ್ದರು. 1905ರಲ್ಲಿ ಅಲ್-ಹಿಲಾಲ್ ಪತ್ರಿಕೆಯನ್ನು ಆರಂಭಿಸಿ ಬ್ರಿಟಿಷರ ವಿರುದ್ಧ ತೀಕ್ಷ್ಣವಾಗಿ ಬರೆಯಲಾರಂಭಿಸಿದರು. ಮುಂದೆ ಬ್ರಿಟಿಷರು ಆ ಪತ್ರಿಕೆಯನ್ನೇ ನಿಷೇಧಿಸುವ ಮಟ್ಟಿಗೆ ಅವರ ಬರಹಗಳು ಪರಿಣಾಮಕಾರಿಯಾಗಿದ್ದವು. ನಂತರ ಮತ್ತೊಂದು ಪತ್ರಿಕೆ ಪ್ರಾರಂಭಿಸಿ ಹೋರಾಟ ಮುಂದುವರೆಸಿದರು. 1916ರಲ್ಲಿ ಬಂಧನಕ್ಕೊಳಗಾಗಿ ನಾಲ್ಕು ವರ್ಷ ಜೈಲಿನಲ್ಲಿದ್ದರೂ, ಬರವಣಿಗೆ ಮತ್ತು ಚಿಂತನೆ ಮುಂದುವರೆಸಿದರು. 1920ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಚಳವಳಿಗೆ ಸೇರ್ಪಡೆಯಾದ ಆಜಾದ್‌ ಅವರನ್ನು 35ನೇ ವಯಸ್ಸಿನಲ್ಲಿ ಗಾಂಧೀಜಿ ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿದರು. ಅಸಹಕಾರ ಚಳವಳಿಯ ನಂತರ ಉಂಟಾದ ಸಂಘರ್ಷದ ಸಮಯದಲ್ಲಿ ಪಕ್ಷವನ್ನು ಒಗ್ಗೂಡಿಸಿ ನಯವಾಗಿ ಮುನ್ನಡೆಸಿದ ಅವರ ಸಾಮರ್ಥ್ಯವೇ ಅವರಿಗೆ ನಾಯಕತ್ವದ ಸ್ಥಾನ ಮಾನ ತಂದುಕೊಟ್ಟಿತ್ತು. 1940–44ರ ಅವಧಿಯಲ್ಲಿ ಕಾಂಗ್ರೆಸ್‌ನ ಅಧ್ಯಕ್ಷರಾಗಿ, ಅತ್ಯಂತ ಉಗ್ರ ಪರಿಸ್ಥಿತಿಯಲ್ಲೂ ದೇಶವನ್ನು ಏಕತೆಯೊಂದಿಗೆ ಮುನ್ನಡೆಸಲು ಸತತ ಪ್ರಯತ್ನಪಟ್ಟರು. ʼವಿಷಮ, ಗೊಂದಲ ಪರಿಸ್ಥಿತಿಯಲ್ಲೂ ದೃಢ ಸಂಕಲ್ಪದಿಂದ, ಸ್ಪಷ್ಟ ಆಲೋಚನೆಗಳಿಂದ ಪರ-ವಿರೋಧದ ಎರಡೂ ಗುಂಪುಗಳನ್ನು ಒಟ್ಟಿಗೆ ಮುನ್ನಡೆಸಬಲ್ಲ ಸಾಮರ್ಥ್ಯವೇ ನಿಜವಾದ ನಾಯಕತ್ವʼ ಅದು ಆಜಾದ್‌ ಅವರಿಗೆ ಒಲಿದುಬಂದಿತ್ತು ಎಂದು ನಿಸ್ಸಂಶಯವಾಗಿ ಹೇಳಬಹುದು” ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರು | ಬೈಕಿನಲ್ಲಿ ಡ್ರಾಪ್ ಕೊಡದ ನೆಪ: ಮಂಗಳೂರು ಮೂಲದ ನೌಕರ ಸಹಿತ ಇಬ್ಬರಿಗೆ ಹಲ್ಲೆ; ಓರ್ವನ ಬಂಧನ

“ನಾನು ಇಂಗ್ಲೆಂಡಿನಲ್ಲಿ ಉನ್ನತ ಶಿಕ್ಷಣ ಪಡೆಯುವ ವೇಳೆ ಗಮನಿಸಿದ ಪ್ರಮುಖ ಅಂಶವೆಂದರೆ, ಅಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ನಡುವೆ ಅಂತರವಿಲ್ಲ. ಶ್ರೀಮಂತರು, ಬಡವರು ಎಲ್ಲರೂ ಸರ್ಕಾರಿ ಶಾಲೆಗಳಲ್ಲೇ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ. ಎಲ್ಲ ವರ್ಗದ ಮಕ್ಕಳು ಒಂದೇ ತರಗತಿಯಲ್ಲಿ ಕಲಿಯುತ್ತಾರೆ. ಇದನ್ನೇ ‘ಕಾಮನ್‌ ಸ್ಕೂಲಿಂಗ್‌ ಸಿಸ್ಟಮ್‌’ ಎನ್ನುತ್ತಾರೆ. ಈ ವ್ಯವಸ್ಥೆಯನ್ನು ಭಾರತದಲ್ಲೂ ಅಳವಡಿಸಬೇಕು ಎನ್ನುವುದು ಮೌಲಾನಾಆಜಾದ್‌ ಅವರ ಕನಸಾಗಿತ್ತು. ಶಿಕ್ಷಣ ಯಾರಿಗಾದರೂ ಸಿಗುವ ಸೌಲಭ್ಯವಲ್ಲ, ಅದು ಪ್ರತಿಯೊಬ್ಬರ ಹಕ್ಕು ಎಂಬ ನಂಬಿಕೆಯನ್ನೇ ಆಜಾದ್‌ ಅವರು ಬಿತ್ತಿದ್ದರು. ಅಬುಲ್ ಕಲಾಂ ಆಜಾದ್‌ ಅವರ ಬದುಕು ಮತ್ತು ಚಿಂತನೆಗಳು ಭಾರತದ ಶಿಕ್ಷಣ ಮತ್ತು ರಾಷ್ಟ್ರದ ಏಕತೆಯ ಪಾಠವಾಗಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಕ್ಫ್ ಮತ್ತು ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಿವಾಜಿನಗರ ಶಾಸಕ ರಿಜ್ವಾನ್‌ ಅರ್ಷದ್‌, ಮುಖ್ಯಮಂತ್ರಿಗಳ ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕ ನಸೀರ್‌ ಅಹಮದ್‌, ಮೈನಾರಿಟಿ ಕಮಿಷನ್‌ ಅಧ್ಯಕ್ಷ ನಿಸಾರ್‌ ಅಹಮದ್‌, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಮೆಹರೋಜ್‌ ಖಾನ್‌ ಸೇರಿದಂತೆ ಇಲಾಖೆಯ ಮುಖಂಡರು, ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...