ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಮೈಸೂರು ಮೂಲದ ಮಹಿಳೆ ಮಾಡಿದ ಆರೋಪವನ್ನು ಸುಪ್ರೀಂ ತಿರಸ್ಕರಿಸಿದೆ. ಸುಷ್ಮಾ ಎಸ್ ಆರಾಧ್ಯ ಎಂಬ ಮಹಿಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಆಸ್ತಿ ಕಬಳಿಸಲು ಯತ್ನಿಸಿದ್ದು, ಜೀವ ಬೆದರಿಕೆ ಹಾಕಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರ ಪೀಠವು ಮಾರ್ಚ್ 20ರಂದು ಅರ್ಜಿ ವಿಚಾರಣೆ ಮಾಡಲು ನಿರಾಕರಿಸಿದೆ.
ಸಿದ್ದರಾಯ್ಯನವರು ತನ್ನ ಆಸ್ತಿಯನ್ನು ವಶಪಡಿಸುವ ಉದ್ದೇಶದಿಂದ ನನಗೆ ನಿರಂತರ ಜೀವ ಬೆದರಿಕೆಗಳನ್ನು ಹಾಕುತ್ತಿದ್ದು. ಕರ್ನಾಟಕದಲ್ಲಿ ವಾಸಿಸಲು ಬಿಡುತ್ತಿಲ್ಲ ಆದರಿಂದ ನಾನು ದೆಹಲಿಯಲ್ಲಿ ನೆಲೆಸಿದ್ದೇನೆ ಎಂದು ದೂರಿದ್ದಾರೆ.
ಜನವರಿಯಲ್ಲಿ ಕರ್ನಾಟಕದಲ್ಲಿನ ನನ್ನ ಮನೆಗೆ ಗೂಂಡಾಗಳನ್ನು ಬಿಟ್ಟು ದಾಳಿ ಮಾಡಿಸಿದ್ದು. ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮನೆ ಲೂಟಿ ಮಾಡಿ ನನ್ನ ಆಸ್ತಿಯನ್ನು ಹೆದರಿಸಿ ಬೆದರಿಸಿ ನನ್ನ ಆಸ್ತಿಯನ್ನು ವಶಪಡಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ದೂರುದಾರೆ ಆರೋಪ ಮಾಡಿದ್ದರು. ಈ ಎಲ್ಲಾ ಕೃತ್ಯಗಳನ್ನು ಸಿದ್ದರಾಮಯ್ಯನವರೇ ಮಾಡಿಸಿದ್ದಾರೆ ಕರ್ನಾಟಕಕ್ಕೆ ಬರದಂತೆ ದೆಹಲಿಯಲ್ಲೇ ಇರುವಂತೆ ಬೆದರಿಸುತ್ತಿದ್ದಾರೆ. ನನಗೆ ಕರ್ನಾಟಕದ ನನ್ನ ನಿವಾಸದಲ್ಲಿ ಇರಲು ಸುರಕ್ಷತೆಯ ಭಯವಿದೆ ಎಂದು ದೂರಿದ್ದಾರೆ.
ಅರ್ಜಿದಾರರ ಪರ ವಕೀಲರು ವಾದವನ್ನು ಮಂಡಿಸಿದ ನಂತರ ಪ್ರತಿಕ್ರಿಯಿಸಿದ ಪೀಠವು ರಾಜಕೀಯ ಜಗಳಗಳನ್ನು ನ್ಯಾಯಾಲಯಕ್ಕೆ ತರುವುದು ಸಮಂಜಸವಲ್ಲ ಎಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರು ಕರ್ನಾಟಕ ಹೈಕೋರ್ಟಿನ ಮೊರೆ ಹೋಗಬಹುದು. ರಾಜ್ಯಕ್ಕೆ ಪ್ರವೇಶಿಸಲು ಸುರಕ್ಷತೆ ಕೋರುವುದಾದರೆ ಇ ಫೈಲ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.





