ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಕುರಿತ ’ಸಾಕ್ಷ್ಯಚಿತ್ರ’ ಪ್ರದರ್ಶನ ಇಂದು

Date:

ಜ್ಯೋತಿ ನಿಶಾ ನಿರ್ದೇಶನದ “ಡಾ.ಬಿ.ಆರ್‌.ಅಂಬೇಡ್ಕರ್‌: ದೆನ್ ಅಂಡ್‌ ನೌ” ಸಾಕ್ಷ್ಯಚಿತ್ರ ಪ್ರದರ್ಶನವನ್ನು ಜಂಗಮ ಮತ್ತು ತಮಟೆ ಬಳಗದ ವತಿಯಿಂದ ವಸಂತನಗರದ ಚಾಮುಂಡೇಶ್ವರಿ ಸ್ಟೂಡಿಯೋದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರದರ್ಶನದ ನಂತರ ನಿರ್ದೇಶಕರೊಂದಿಗೆ ಸಂವಾದ ಏರ್ಪಡಿಸಲಾಗಿದೆ.

Ambedkar Then and Now

ಸಂಜೆ 5.30ಕ್ಕೆ ಮಿಲ್ಲರ್‌ ರಸ್ತೆಯಲ್ಲಿರುವ ಸ್ಟುಡಿಯೋದಲ್ಲಿ (m48/3) ಪ್ರದರ್ಶನ ನಡೆಯಲಿದೆ. (ಟಿಕೆಟ್ ಬುಕ್ಕಿಂಗ್‌ಗಾಗಿ ’ಇಲ್ಲಿ’ ಕ್ಲಿಕ್ ಮಾಡಬಹುದು.)

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸಾಕ್ಷ್ಯಚಿತ್ರದ ವೈಶಿಷ್ಟ್ಯವೇನು?

ಭಾರತೀಯ ಸಮಾಜದ ಅಡಿಪಾಯ ಆಗಿರುವ ಜಾತಿವ್ಯವಸ್ಥೆ ಮತ್ತು ಅದರ ಉತ್ಪನ್ನವಾಗುರುವ ಶ್ರೇಣಿಕೃತ ಅಸಮಾನತೆಯ ಕುರಿತು ಜನಪ್ರಿಯ ಸಂಸ್ಕೃತಿ, ಇತಿಹಾಸದ ಬರವಣಿಗೆ, ಮಾಧ್ಯಮಗಳು ಕುರುಡುತನ ಪ್ರದರ್ಶಿಸಿಕೊಂಡೆ ಬಂದಿವೆ. ಜಾತಿ ಅಸಮಾನತೆಯನ್ನು ಮರೆಮಾಚಿರುವ ಈ ಪ್ರಜ್ಞಾಪೂರ್ವಕ ಕುರುಡುತನದ ಹಿಂದಿರುವುದು ಮೇಲು ಜಾತಿಗಳ ಹಿಡಿತ. ಯಾಕೆಂದರೆ ಇಲ್ಲಿನ ಅಕಡೆಮಿಕ್ ವಲಯ, ಜನಪ್ರಿಯ ಸಂಸ್ಕೃತಿ, ಸಾಮಾಜಿಕ ಹೋರಾಟಗಳು, ಮಾಧ್ಯಮ ಸೇರಿದಂತೆ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಯಾವುದೇ ವಲಯವಾಗಲಿ ಮೇಲುಜಾತಿಗಳ ಹಿಡಿತದಲ್ಲಿರುವುದು. ಹಾಗಾಗಿಯೇ ಈ ಮೇಲುಜಾತಿಗಳು ಇವೆಲ್ಲವನ್ನು ತಮ್ಮ ಹಿತಾಸಕ್ತಿಗೆ ಪೂರಕಾವಾಗಿ ಬಳಸಿಕೊಂಡು ಬಂದು ದಲಿತರನ್ನು ನಿರಂತರವಾಗಿ ಅಂಚಿಗೆ ತಳ್ಳುತ್ತಿದ್ದಾರೆ. ತಮ್ಮ Caste privilege ಅನ್ನು ಕಳೆದುಕೊಳ್ಳಲು ಇಷ್ಟವಿಲ್ಲದ ಮತ್ತು ಶ್ರೇಣೀಕೃತ ಅಸಮಾನತೆಯನ್ನು ಅದು ಸಾಮಾನ್ಯ ಅಂತ ಭಾವಿಸಿರುವ ಜಾತಿ ಸಮಾಜ ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯ,‌ ಶೋಷಣೆ, ಹಿಂಸೆಯನ್ನು ಕೇವಲ ದಿನನಿತ್ಯ ನಡೆಯುವ ಸಾಮಾನ್ಯ ಘಟನೆಗಳು ಅಂತ Normalise ಮಾಡಲು ಪ್ರಯತ್ನಿಸುತ್ತದೆ. ದಲಿತರ ಮೇಲಿನ ಹಿಂಸೆಯ ಪ್ರಕರಣಗಳು ಸರ್ಕಾರಿ ಸಂಸ್ಥೆಗಳಲ್ಲಿ ಕೇವಲ ಅಪರಾಧ ಪ್ರಕರಣಗಳ ಅಂಕಿಅಂಶಗಳಾಗಿ ದಾಖಲಾಗುತ್ತಿವೆ.

ಇದು ಇಂದು ನೆನ್ನೆಯದಲ್ಲ ಇದಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ.
ಹಾಗಾದರೆ ಏನು ಆ ಇತಿಹಾಸ? ಈ ಮರೆಮಾಚುವ ರಾಜಕಾರಣದ ಹಿಂದಿರುವ ಶಕ್ತಿ ಯಾವುದು? ಬಾಬಾಸಾಹೇಬರ ಬೌದ್ಧಿಕತೆಯನ್ನು ಅಕಡೆಮಿಕ್ ವಲಯದಿಂದ ದೂರ ಇಟ್ಟಿರುವವರು ಯಾರು?

ಅದರಲ್ಲೂ ಮಹಿಳಾ ವಿಮೋಚನೆಯ ಮಾತಾಡುವ ಸವರ್ಣ ಸ್ತ್ರೀವಾದ ಹೇಗೆ ದಲಿತ ಮಹಿಳೆಯರ ಪ್ರಾತಿನಿಧ್ಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಜಾತಿವಾದವನ್ನು ಆಚರಿಸಿಕೊಂಡು ಬಂದಿದೆ?

ಈ ಎಲ್ಲ ಪ್ರಶ್ನೆಗಳನ್ನು ಜ್ಯೋತಿ ನಿಶಾ ಅವರ
“B.R. Ambedkar: Then and Now” ನಮ್ಮ ಮುಂದಿಡುತ್ತದೆ.

ದಲಿತರ ಪ್ರಶ್ನೆಯನ್ನು ಇತಿಹಾಸದ ಹಿನ್ನಲೆಯಲ್ಲಿ ಸಮಕಾಲೀನ ಸಮಾಜದ ಸಂದರ್ಭದಲ್ಲಿ ಅರ್ಥಮಾಡಿಕೊಳ್ಳಲು ಈ ಸಾಕ್ಷ್ಯಚಿತ್ರ ಮುಖ್ಯವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...