ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಮನಸ್ಸುಗಳಿಂದ ಕಟ್ಟಲ್ಪಟ್ಟ ಪತ್ರಿಕೆ ಈ ದಿನ.ಕಾಮ್ ; ನಟ ಪ್ರಕಾಶ್ ರಾಜ್

Date:

ಈ ದಿನ.ಕಾಮ್ ಹಮ್ಮಿಕೊಂಡ ಸಮಾವೇಶಕ್ಕೆ ಬಂದಿರುವುದು ಸಂತಸ ತಂದಿದೆ. ‘ರಾಜಧಾನಿ ಕೇಂದ್ರಿತ ಪತ್ರಿಕೆಯಲ್ಲ, ನಮ್ಮದು ಕರ್ನಾಟಕ ಕೇಂದ್ರಿತ ಪತ್ರಿಕೆ’ ಎಂಬ ಅರ್ಥಗರ್ಭೀತವಾದ ಸ್ಲೋಗನ್ ಹಾಕಿಕೊಂಡಿದೆ. ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳನ್ನು ಕೇಳುವುದಕ್ಕೆ ಕಲಬುರಗಿಯಲ್ಲಿ ಸಮಾವೇಶ ಮಾಡಿದ್ದಾರೆ” ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದರು.

ಈ ದಿನ.ಕಾಮ್ ಕಲಬುರಗಿಯಲ್ಲಿ ಆಯೋಜಿಸಿದ್ದ ಓದುಗರ ಸಮಾವೇಶ ಹಾಗೂ ಕಲ್ಯಾಣ ಕರ್ನಾಟಕದ ಚರಿತ್ರೆ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ದಿನ,ಕಾಮ್ ಈ ರೀತಿ ಸಮಾವೇಶ ಮಾಡಿರುವುದಕ್ಕೆ ಸಂತೋಷ್ ಪಡುವುದಾ? ಅಥವಾ ಈ ಭಾಗದಲ್ಲಿರುವ ಜನರು ಹೇಳಿಕೊಳ್ಳುವ ಆತಂಕಗಳ ಬಗ್ಗೆ ಯೋಚನೆ ಮಾಡೋದಾ? ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎನ್ನುವುದು ನಿಜ” ಎಂದು ಹೇಳಿದರು.

“ಕಲ್ಯಾಣ ಕರ್ನಾಟಕ ಭಾಗದ ಜನರ ಮಾತುಗಳನ್ನು ಕೇಳುವುದಕ್ಕೆ, ಅವರ ಸಮಸ್ಯೆಗಳನ್ನು ಕೇಳುವುದಕ್ಕೆ ಕಲಬುರಗಿಯಲ್ಲಿ ಸಮಾವೇಶ ಮಾಡಿದ್ದಾರೆ. ಈ ದಿನ ಸುಮ್ಮನೆ ಒಂದು ಪತ್ರಿಕೆಯನ್ನು ಹುಟ್ಟು ಹಾಕಬೇಕು ಎಂದು ಹುಟ್ಟಿದ ಪತ್ರಿಕೆಯಲ್ಲ. ಅಥವಾ ಯಾವುದೋ ಪಕ್ಷದವರು ನಮ್ಮ ಮುಖವಾಣಿ ಇರಲಿ ಎಂದು ಆರಂಭ ಮಾಡಿದ ಪತ್ರಿಕೆಯಲ್ಲ. ಹಲವು ಸಂಘಟನೆಗಳನ್ನ, ಹಲವು ಹೋರಾಟಗಳನ್ನ, ಸಾಮಾಜಿಕ ನ್ಯಾಯಕ್ಕಾಗಿ ಮಾತನಾಡುತ್ತಿದ್ದ/ ಹೋರಾಡುತ್ತಿದ್ದ ಮನಸ್ಸುಗಳಿಂದ ಕಟ್ಟಲ್ಪಟ್ಟ ಪತ್ರಿಕೆಯೇ ಈ ದಿನ” ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಇವತ್ತಿನ ಪರಿಸ್ಥಿತಿಯಲ್ಲಿ ಪತ್ರಿಕೆಗಳು ಜನಪರವಾಗಿವೇಯೇ? ಎಂಬುದನ್ನ ನೋಡಿದರೆ, ಈತರಹದ ಒಂದು ಬೆಳವಣಿಗೆ, ಈ ಪತ್ರಿಕೆಯ ರೀಚ್, ಕೆಲವೇ ದಿನಗಳಲ್ಲಿ ಜನರಿಂದ ಗಳಿಸಿಕೊಂಡಿರುವ ನಂಬಿಕೆ ಶ್ಲಾಘನೀಯ. ಈ ದಿನ ಮುಳ್ಳಿನ ಹಾದಿಯಲ್ಲಿ ನಡೆದುಕೊಂಡು ಬರುತ್ತಿದೆ” ಎಂದರು.

“ಈ ದಿನ ಪತ್ರಿಕೆ ಮತ್ತು ಅದರ ಒಡನಾಡಿಗಳು ಕೈ ಜೋಡಿಸಿ ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಆಗುವ ಅನ್ಯಾಯಗಳನ್ನ ಪ್ರತಿಭಟಿಸುವ ನಿಟ್ಟಿನಲ್ಲಿ ಸಾಗುತ್ತದೆ ಎಂದು ನಂಬುತ್ತೇನೆ” ಎಂದು ತಿಳಿಸಿದರು.

“ಈಗಿನ ದಿನಗಳಲ್ಲಿ ಸುಳ್ಳುಗಳ ಮಹಾಪೂರವೇ ನಡೆಯುತ್ತಿದೆ. ಮಾಧ್ಯಮಗಳು ಎಂದರೆ ಸುಳ್ಳುಗಳು. ಎಂತಹ ಸುಳ್ಳರು ಹುಟ್ಟುಕೊಂಡಿದ್ದಾರೆಂದರೆ ಅವರು ಪ್ರಧಾನಿ ಕೂಡ ಆಗಿದ್ದಾರೆ. ನವೆಂಬರ್ 25ರಂದು ಮಹಾಪ್ರಭುಗಳು ಬಾವುಟವನ್ನು ಹಾರಿಸುತ್ತಿದ್ದರು. ಅವರ ಪಕ್ಕದಲ್ಲಿಯೇ ನೊಂದಣಿಯಾಗದೇ ಇರುವ ಆರ್ ಎಸ್ ಎಸ್ ಸಂಘದ ಮುಖಂಡರು ಸೇರಿಕೊಂಡು ಬಾವುಟವನ್ನು ನೋಡುತ್ತಿದ್ದರು. ನಾನು ಮತ ಹಾಕದೇ ಇದ್ದರೂ ಅವರು ನಮ್ಮ ದೇಶದ ಪ್ರಧಾನಿ. ಪ್ರಧಾನಿಗಳನ್ನ ನೋಡುವಾಗ ಅವರಿಗೆ ಧರ್ಮದ ಮೇಲಿರುವ ಭಕ್ತಿ, ಪ್ರೀತಿ ನೋಡಿದೆ. ಭಕ್ತಿಯಲ್ಲಿದ್ದ ಅವರ ಕೈಗಳು ನಡುಗುತ್ತಿದ್ದವು. ಅವರ ನಂಬಿಕೆಯ ಆಳ ಅಷ್ಟಿರಬಹುದು ಎಂದುಕೊಂಡೆ. ಆಮೇಲೆ ಯೋಚನೆ ಮಾಡಿದೆ. ಈ ವ್ಯಕ್ತಿ ಭಾರತದ ದೇಶದ ಧ್ವಜಕ್ಕೆ ಯಾವತ್ತಾದರೂ ಈ ರೀತಿ ಭಾವುಕರಾಗಿರೋದು ನೋಡಿದೀನಾ? ಸಂವಿಧಾನದ ಬಗ್ಗೆ ಹೊಗಳಿ ಮೋದಿ ಅವರು ಮಾತಾಡುತ್ತಾರೆ. ಗಾಂಧಿ, ಅಂಬೇಡ್ಕರ್ ಅವರನ್ನು ಹೊಗಳಿದ್ದಾರೆ. ಆದರೆ, ಅವರು ಮಾತಾಡೊದೊಂದು ಮಾಡೋದೊಂದು…” ಎಂದು ಟೀಕಿಸಿದರು.

“ನನಗೆ ಯಾರೋ ಒಬ್ಬರು ಸತ್ಯ ಮಾತಾಡೋಕೆ ಎಷ್ಟು ಧೈರ್ಯ ನಿಮಗೆ ಎಂದು ಕೇಳಿದರು. ನಾನು ಕೇಳಿದೆ ಆ ಮನುಷ್ಯನಿಗೆ ಸುಳ್ಳು ಮಾತಾಡೋಕೆ ಎಷ್ಟು ಧೈರ್ಯ. ಈ ದೇಶದಲ್ಲಿ ಸುಳ್ಳು ಮಾತಾಡೋಕೆ ಧೈರ್ಯ ಬೇಕು. ಸತ್ಯ ಮಾತಾಡೋಕೆ ಅಲ್ಲ” ಎಂದರು.

WhatsApp Image 2025 11 30 at 5.08.02 PM

“ಪ್ರಪಂಚದ ಯಾವ ಯುದ್ಧವನ್ನು ನೋಡಿದರೂ ಅದರ ಆರಂಭಕ್ಕೆ ಮುನ್ನ ಮಾಧ್ಯಮಗಳೇ ಪಿಠೀಕೆ ಹಾಕುತ್ತವೆ. ಮನುಷ್ಯನಿಗೆ ‘ಜೆನೋಫೋಬಿಯಾ’ ಎಂಬ ಒಂದು ಮನಸ್ಥಿತಿ ಇರುತ್ತದೆ. ಅಪರಿಚಿತ ವ್ಯಕ್ತಿ ಬಂದಾಗ ಅವರನ್ನು ಸಂಶಯದಿಂದ ನೋಡುತ್ತೇವೆ. ಅವರು ಯಾರು ಎಂದು ಗೊತ್ತಾಗುವವರೆಗೂ ಒಂದು ಸಂಶಯ ಇರುತ್ತದೆ. ಇದನ್ನ ಕಾಲಕಾಲಕ್ಕೆ ರಾಜಕಾರಣಿಗಳು ದೂರ್ತರು ಬಳಸಿಕೊಳ್ಳುತ್ತಾ ಬಂದಿದ್ದಾರೆ” ಎಂದು ವಿವರಿಸಿದರು.

“ನಮ್ಮ ವರ್ಣದವರೇ ಶ್ರೇಷ್ಠ ಎಂದು ತನ್ನ ದೇಶದವರನ್ನೇ ಹಿಟ್ಲರ್ ನಂಬಿಸಿ, ಅದನ್ನೇ ಸಾಧಿಸಿ ತಾನೇ ನಾಯಕ ಎಂದು ಬಿಂಬಿಸಿಕೊಳ್ಳುತ್ತಾನೆ. ಆಮೇಲೆ ಆದ ಮಾರಣಹೋಮ ಗೊತ್ತಿದೆ. ಆದರೆ, ನಾವು ಇತಿಹಾಸದಿಂದ ಪಾಠ ಕಲಿಯುವುದಿಲ್ಲ. ಇವರುಗಳು ಹಾಗೆನೇ, ಮೊದಲು ನಿಮ್ಮ ಧರ್ಮ, ಜಾತಿ, ಭಾಷೆ ಅಪಾಯದಲ್ಲಿದೆ ಎಂದು ಭಿನ್ನಾಭಿಪ್ರಾಯ ಹುಟ್ಟಿಸುತ್ತಾರೆ. ಈ ಭಯ ಹುಟ್ಟಿಸಿದ ತಕ್ಷಣ ಸ್ವಯಂಘೋಷಿತ ನಾಯಕರಾಗಿ ಮುನ್ನೆಲೆಗೆ ಬಡುತ್ತಾರೆ. ಒಂದು ಸಲ ಭಯ ಹುಟ್ಟಿಸಿದ ಮೇಲೆ ಅದನ್ನ ದ್ವೇಷವಾಗಿ ಬದಲಾವಣೆ ಮಾಡೋದು ತುಂಬಾ ಸುಲಭ. ಕೋಮುಗಲಭೆ, ಕೊಲೆ, ಕಿಡಿ, ಉರಿಗೌಡ – ನಂಜೇಗೌಡ ಎಂಬ ಇತ್ಯಾದಿ ಕಾರ್ಯಕ್ರಮಗಳನ್ನು ಇವರೇ ಹುಟ್ಟು ಹಾಕುತ್ತಾರೆ. ಸುಳ್ಳಿನ ಮೇಲೆ ಸುಳ್ಳನ ಕಟ್ಟುತ್ತಾ ಹೋಗುತ್ತಾರೆ” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? ಈದಿನ.ಕಾಮ್ ದುಡಿವ, ತಳ ಸಮುದಾಯಗಳ ಹಾಗೂ ಹಿಂದುಳಿದ ಪ್ರದೇಶಗಳಿಗಾಗಿ ಇರುವ ಪಕ್ಷಪಾತಿ ಮಾಧ್ಯಮ: ಡಾ. ಎಚ್.ವಿ ವಾಸು

“ಇತ್ತಿಚೆಗೆ ಇದಕ್ಕೆ ಉದಾಹರಣೆ ಎಂದರೆ, ಉಮರ್ ಖಾಲಿದ್. ನನ್ನ ದೇಶದ ಯುವಜನರ ಮೇಲೆ ನಂಬಿಕೆ ಎಂದರೆ ಅದು ಉಮರ್ ಖಾಲಿದ್. ನನಗಿಂದ ದೊಡ್ಡ ದೇಶಪ್ರೇಮಿ. ಆದರೆ, ಕಳೆದ 6 ವರ್ಷಗಳಲ್ಲಿ ಅವರನ್ನ ನೆಗೆಟಿವ್ ಆಗಿ ಬಿಂಬಿಸಿ ಜೈಲಿನಲ್ಲಿಟ್ಟಿದ್ದಾರೆ. ಅಡುಗೆಗೆ ತೆಗೆದುಕೊಂಡು ಹೋಗುವ ಅರ್ಧ ಕೆಜಿ ಮಾಂಸವನ್ನೂ ದನದ ಮಾಂಸ ಎಂದು ಸೃಷ್ಟಿಸಿ ಅಖ್ಲಾಕ್ ನಂತಹ ವ್ಯಕ್ತಿಗಳ ಹತ್ಯೆ ಮಾಡುತ್ತಾರೆ. ಸತ್ತ ಅಖ್ಲಾಕ್ ಆತ್ಮಕ್ಕೂ ಯಾಕೆ ಸತ್ತೆ ಎಂದು ಗೊತ್ತಿರುವುದಿಲ್ಲ. ಇಂತಹ ದ್ವೇಷದ ಘಟನೆಗಳನ್ನು ಸೃಷ್ಟಿಸಲಾಗುತ್ತದೆ” ಎಂದು ವಿಷಾದ ವ್ಯಕ್ತಪಡಿಸಿದರು.

WhatsApp Image 2025 11 30 at 12.48.06 PM 1

“ವದಂತಿಗಳ, ಸುಳ್ಳಿನ ರಾಜಕಾರಣ ನಡೆಸುತ್ತಿದ್ದಾರೆ. ತಾಯಿ ಮಕ್ಕಳ ರಕ್ಷಣೆಗಾಗಿ ಗುಮ್ಮ ಎಂದು ಅಮ್ಮ ಹೆದರಿಸುತ್ತಿದ್ದಳು. ಆದರೆ, ಈಗ ರಾಜಕಾರಣಿಗು ಅವರ ಸ್ವಾರ್ಥಕ್ಕಾಗಿ ಮಾಡುತ್ತಿದ್ದಾರೆ. ಇಂತಹ ಕ್ಲಿಷ್ಟವಾದ ಸಂದರ್ಭದಲ್ಲಿ ಸತ್ಯ ಹೇಳುವ ಜನಪರವಾಗಿ ನಡೆದುಕೊಳ್ಳುವ ಮಾಧ್ಯಮಗಳ ಅಗತ್ಯವಿದೆ. ಮಾರಿಕೊಂಡ ಮಾಧ್ಯಮಗಳ ಮಧ್ಯೆ ಈ ದಿನ.ಕಾಮ್ ಪ್ರಮಾಣಿಕ ಹೋರಾಟದ ದನಿಯಾಗಲಿ. ನಿಮ್ಮ ಜತೆಗೆ ನಾನಿರುತ್ತೇನೆ” ಎಂದು ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...